‘ನೆಪೋಟಿಸಂ’ ಎಂಬ ಪದವು ಚರ್ಚಿಸಲು ವ್ಯಾಪಕವಾದ ವಿಷಯವಾಗಿರುವಾಗ ಸಿನಿಮಾ ಹಿನ್ನೆಲೆ ಇಲ್ಲದ ನಟರು ಅಥವಾ ಹೀರೋಗಳಿಗೆ ಬೆಂಬಲವಾಗಿರುವಂತೆ ಎಲ್ಲಾ ಸ್ಟಾರ್ ಕಿಡ್ಗಳಿಗೆ ಸವಾಲೆಸೆಯುವಂತೆ, ಚಿತ್ರರಂಗದಲ್ಲಿ ಯಾವುದೇ ಗಾಡ್ಫಾದರ್ ಇಲ್ಲದೆ ತಮ್ಮ ಕ್ಷೇತ್ರದಲ್ಲಿ ದೊಡ್ಡದಾಗಿ ಸಾಧನೆ ಮಾಡಿದ 5 ಕನ್ನಡದ ಹೀರೋಗಳನ್ನು ನೋಡೋಣ.
ಉಪೇಂದ್ರ
ಉಪೇಂದ್ರ ಅವರು ಕಾಶಿನಾಥ್ ಅವರ ಮಾರ್ಗದರ್ಶನದಲ್ಲಿ ಅವರೊಂದಿಗೆ ಸಹಾಯಕ ನಿರ್ದೇಶಕರಾಗಿ ಉದ್ಯಮಕ್ಕೆ ಪ್ರವೇಶಿಸಿದರು, ತಮ್ಮ ಕೌಶಲ್ಯಗಳನ್ನು ಬೆಳೆಸಿಕೊಂಡರು ಮತ್ತು ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ನಂತರ ನಿರ್ದೇಶಕರಾಗಿ ಸಂಚಲನ ಮೂಡಿಸುವುದರ ಜೊತೆಗೆ ‘ಎ’ ಚಿತ್ರದ ಮೂಲಕ ನಟರಾಗಿ ತಮ್ಮ ಪ್ರತಿಭೆಯನ್ನು ತೋರಿ ನಟರಾಗಿ ಕೂಡ ಬದಲಾದರು. ಅಂದಿನಿಂದ ಕನ್ನಡ ಚಿತ್ರರಂಗದಲ್ಲಿ ಪ್ರಮುಖ ಸ್ಟಾರ್ ಹೀರೋ ಮತ್ತು ನಿರ್ದೇಶಕನಾಗಿ ನೆಲೆಯೂರಿದ ಉಪೇಂದ್ರ ಅವರು ನಂತರ ಹಿಂತಿರುಗಿ ನೋಡಲೇ ಇಲ್ಲ.
ಸುದೀಪ್
ಉತ್ತಮ ಮೈಕಟ್ಟು, ಘನ ವ್ಯಕ್ತಿತ್ವವನ್ನು ಹೊಂದಿದ, ನೋಡಲೂ ಆಕರ್ಷವಾಗಿರುವ ಸುದೀಪ್ಗೆ ಆರಂಭದಲ್ಲಿ ಅದೃಷ್ಟ ಅಷ್ಟರ ಮಟ್ಟಿಗಿನ ಒಲವು ತೋರಲಿಲ್ಲ. ಐರನ್ ಲೆಗ್ ಎಂದು ಕರೆಸಿಕೊಳ್ಳುವ ಸುದೀಪ್ ಅಡೆತಡೆಗಳನ್ನು ಎದುರಿಸಬೇಕಾಯಿತು. ‘ಹುಚ್ಚ’ ನಂತರ, ಸುದೀಪ್ ಸ್ಟಾರ್ಗಿರಿ ಬದಲಾಯಿತು ಮತ್ತು ಸುದೀಪ್ ಇಂದು ಭಾರತದಾದ್ಯಂತ ಸಿನಿಮಾರಂಗದಲ್ಲಿ ತಮ್ಮ ಅಸ್ತಿತ್ವವನ್ನು ಗಟ್ಟಿಯಾಗಿಸಿಕೊಳ್ಳುವ ಮಟ್ಟಕ್ಕೆ ಹೊಸ ಎತ್ತರಕ್ಕೆ ಏರಿದರು.
ಗಣೇಶ್
ಸಿನಿಮಾ ಅವಕಾಶಗಳು ಬರುವ ಮೊದಲು ಗಣೇಶ್ ಅವರು ಸಾಧಾರಣ ಆರಂಭವನ್ನು ಹೊಂದಿದ್ದರು. ಗಣೇಶ್ ಸಿನಿಮಾದಲ್ಲಿ ಸಣ್ಣ ಪಾತ್ರಗಳಲ್ಲಿ ಅಭಿನಯಿಸಲು ಪ್ರಾರಂಭಿಸಿದರು. ನಂತರ ಟಿವಿಯಲ್ಲಿ ವಿಜೆ ಆಗಿ ಆ ಮೂಲಕ ಅವರು ದೊಡ್ಡ ಮಟ್ಟದಲ್ಲಿ ಮನೆಮಾತಾದರು ಮತ್ತು ನಾಯಕನಾಗಿ ಚಿತ್ರರಂಗಕ್ಕೆ ಪ್ರವೇಶ ಪಡೆದುಕೊಂಡರು. ‘ಚೆಲ್ಲಾಟ’ದ ಮೂಲಕ ಶುಭಾರಂಭ ಮಾಡಿದ್ದರೂ ‘ಮುಂಗಾರು ಮಳೆ’ ಅವರ ಹಣೆಬರಹವನ್ನೇ ಬದಲಿಸಿತು. ಆ ಗೆಲುವಿನಿಂದ ಅವರು ಗೋಲ್ಡನ್ ಸ್ಟಾರ್ ಎನಿಸಿಕೊಂಡರು.
ಧನಂಜಯ್
ಧನಂಜಯ್ ಅವರ ಜೀವನ ಕಥೆ ಕೂಡ ಪ್ರೇರಣಾದಾಯಕ. ತನ್ನನ್ನು ತಾನು ಸ್ಥಾಪಿಸಿಕೊಳ್ಳುವ ಭರವಸೆಯೊಂದಿಗೆ ಉದ್ಯಮಕ್ಕೆ ಬಂದ ಇತರ ವ್ಯಕ್ತಿಗಳಂತೆ ಧನಂಜಯ್ ಕೂಡ ಸಣ್ಣ ಪಾತ್ರಗಳಲ್ಲಿ, ಆಫ್-ಬೀಟ್ ಪಾತ್ರಗಳಲ್ಲಿ ನಟಿಸಲು ಪ್ರಾರಂಭಿಸಿದರು. ‘ಟಗರು’ ವೃತ್ತಿಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿ ತಮ್ಮೊಳಗಿನ ಶಕ್ತಿಯುತ ನಟನನ್ನು ಹೊರ ಪ್ರಪಂಚಕ್ಕೆ ಪರಿಚಯಿಸುವಂತಾಯಿತು. ಇಂದು, ಧನಂಜಯ್ ಅವರು ತನಗೆ ಬೇಕಾದ ಪಾತ್ರಗಳನ್ನು ಮತ್ತು ಸಿನಿಮಾವನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವ ಹಂತವನ್ನು ತಲುಪಿದ್ದಾರೆ ಮತ್ತು ಇಂದು ಇತರರಿಗೆ ಬಹಳ ಸ್ಪೂರ್ತಿದಾಯಕ ನಟರಾಗಿದ್ದಾರೆ.
ಯಶ್
ಸಣ್ಣ ಆರಂಭದಿಂದ ಇಂದು ಜಾಗತಿಕ ತಾರೆಯಾಗಿ ಬೆಳೆದ ಮತ್ತೊಬ್ಬ ನಟ. ದೊಡ್ಡ ಸ್ಟಾರ್ ಆಗಬೇಕೆಂಬ ದೊಡ್ಡ ಮಹತ್ವಾಕಾಂಕ್ಷೆಯನ್ನು ಹೊಂದಿದ್ದ ಯಶ್ ಟಿವಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ನಂತರ ಸರಿಯಾದ ಸಮಯದಲ್ಲಿ ಚಲನಚಿತ್ರ ಅವಕಾಶಗಳನ್ನು ಪಡೆದರು ಮತ್ತು ಕೆಜಿಎಫ್ 2 ಯಶಸ್ಸಿನೊಂದಿಗೆ ಉತ್ತುಂಗ ಹಂತವನ್ನು ತಲುಪುವ ಮೂಲಕ ಹೊಸ ಎತ್ತರವನ್ನು ಏರುತ್ತಲೇ ಹೋದರು. ಯಶ್ ಅವರ ಜೀವನ ಪಯಣ ಎಲ್ಲರಿಗೂ ದೊಡ್ಡ ಸ್ಫೂರ್ತಿಯಾಗಿದೆ.