ಬಾಗಲಕೋಟೆ: ಮಹಾರಾಷ್ಟç ಮತ್ತು ಬೆಳಗಾವಿ ಭಾಗದಲ್ಲಿ ಆಗುತ್ತಿರುವ ಕುಂಭದ್ರೋಣ ಮಳೆಗೆ ಜಿಲ್ಲೆಯ ಘಟಪ್ರಭಾ, ಕೃಷ್ಣಾ ನದಿಗೆ ಜೀವಕಳೆ ಬಂದಿವೆ. ಎರಡು ವಾರಗಳ ಹಿಂದೆ ಖಾಲಿ ಖಾಲಿಯಾಗಿದ್ದ ನದಿ ಒಡಲು ಇದೀಗ ಗಂಗಾಮಾತೆಯ ಕೃಪೆಯಿಂದ ಮೈದುಂಬಿಕೊಳ್ಳುತ್ತೀವೆ. ಕಳೆದ ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ಅನ್ನದಾತರಲ್ಲಿ ಮಂದಹಾಸ ಮೂಡಿಸಿದೆ. ಬಿಸಿಲ ನಾಡು ಮಲೆನಾಡಿನಂತೆ ಕಂಗೂಳಿಸುತ್ತಿದೆ.!!
ಕೈಕೊಟ್ಟಿತ್ತು ಮುಂಗಾರು…?
ಬರದ ನಾಡು ಎಂದೇ ಬಿಂಬಿತವಾಗಿರುವ ಕೋಟೆನಾಡಲ್ಲಿ ಪ್ರಸಕ್ತ ವರ್ಷ ಪೂರ್ವ ಮುಂಗಾರು, ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗದೇ ತೇವಾಂಶ ಕೊರತೆ ಎದುರಾಗಿತ್ತು. ಭಿತ್ತನೆಗೂ ಭಾರಿ ಪ್ರಮಾಣದಲ್ಲಿ ಕುಸಿತವಾಗಿದೆ. ಈ ಸಾರಿಯು ಕೂಡಾ ಪೂರ್ವ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದರಿಂದ ಕೃಷಿಕರಲ್ಲಿ ಆತಂಕ ಮನೆ ಮಾಡಿತ್ತು. ಬಿತ್ತನೆ ಮಾಡಬೇಕಾ, ಬೇಡವಾ? ಎನ್ನುವ ಜಿಜ್ಞಾಸೆ ಕಾಡತೊಡಗಿತ್ತು.
ಜುಲೈ 10 ಬಳಿಕ ಧರೆಯತ್ತ ಮುಖ ಮಾಡಿದ್ದ ವರುಣ ದೇವ ಕೃಷಿ ಚಟುವಟಿಕೆ ಗರಿಗೆದರುವಂತೆ ಮಾಡಿದ್ದಾನೆ. ಆದರೇ ಪರಿರ್ಯಾ ಬೆಳೆ ಬೆಳೆಯುವುದು ರೈತರಲ್ಲಿ ಅನಿವಾರ್ಯವಾಗಿದೆ. ಜೂನ್, ಜುಲೈ ಮಾಹೆಯಲ್ಲಿ ವಾಡಿಕೆಯ ಆಸು,ಪಾಸು ಮಳೆಯಾದರು ಬಿತ್ತನೆ ಮಾಡಿದ್ದ ಬೆಳೆಗಳಿಗೆ ಹೇಳಿಕೊಳ್ಳುವಂತಹ ಪುಷ್ಠಿ ನೀಡಿರಲಿಲ್ಲ. ಸದ್ಯ ಜುಲೈ ಎರಡನೇ ವಾರದಲ್ಲಿ ವರುಣ ದೇವನ ಕೃಪೆಯಿಂದ ಬಿತ್ತನೆಯಾಗಿರುವ ಹೆಸರು, ಗೋವಿನ ಜೋಳ, ಸಜ್ಜೆ, ಸೂರ್ಯಕಾಂತಿ, ಈರುಳ್ಳಿ, ಮೆಣಸಿನಕಾಯಿ ಸೇರಿದಂತೆ ನಾನಾ ಬೆಳೆಗಳು ಹಚ್ಚ ಹಸಿರಿನಿಂದ ನಳನಳಿಸುತ್ತಿವೆ.
ಇನ್ನು ಮಹಾರಾಷ್ಟç, ಬೆಳಗಾವಿ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಘಟಪ್ರಭಾ ನದಿಯಿಂದ ಮುಧೋಳ ತಾಲೂಕಿನಲ್ಲಿ, ಕೃಷ್ಣಾ ನದಿಯಿಂದ ಜಮಖಂಡಿ, ರಬಕವಿ-ಬನಹಟ್ಟಿ, ತೇರದಾಳ, ಬೀಳಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಹಳ್ಳ-ಕೊಳ್ಳಗಳಿಗೆ ಜೀವಕಳೆ:
ಸಂಪೂರ್ಣ ಬರಿದ್ದಾಗಿದ್ದ ಹಳ್ಳ-ಕೊಳ್ಳಗಳಲ್ಲಿ ಜೀವ ಸೆಲೆಗಳು ಮರುಜೀವ ಪಡೆದುಕೊಂಡಿವೆ. ಹಿನ್ನೀರು ದಿನದಿಂದ ಏರಿಕೆ ಕಾಣುತ್ತಿದ್ದು ಕುಡಿಯುವ ಸಮಸ್ಯೆ ತಾತ್ವಾರಕ್ಕೆ ಬ್ರೇಕ್ ಬಿದ್ದಿದೆ. ಹುಲಿಗೆಮ್ಮಕೊಳ್ಳದಲ್ಲಿ ಜಲಪಾತ ಸೃಷ್ಟಿಯಾಗಿದ್ದು ಪ್ರವಾಸಿಗರು ಭೇಟಿ ನೀಡಿ ಪ್ರಕೃತಿಯ ಸೊಬಗನ್ನು ಸವಿಯುತ್ತಿದ್ದಾರೆ. ಬರದ ಛಾಯೆ ಆವರಿಸಿದ್ದ ಜಿಲ್ಲೆಗೆ ಮಳೆಯಿಂದಾಗಿ ಪ್ರಾಣಿ, ಪಕ್ಷಿಗಳು ಕೂಡಾ ನಿಟ್ಟುಸಿರುವ ಬಿಟ್ಟಿವೆ.
ನಗರ ಪ್ರದೇಶ ಜೀವನ ಅಸ್ತವ್ಯಸ್ತ:
ನಿರಂತರವಾಗಿ ಜಿಲ್ಲೆಯಾದ್ಯಂತ ಮಳೆಯಾಗಿದ್ದರಿಂದ ಕೋಟೆನಾಡು ಮಲೆನಾಡಿನಂತೆ ಭಾಸವಾಗುತ್ತಿದೆ. ಇನ್ನೊಂದೆಡೆ ನಗರ ಜೀವನ ಅಸ್ತವ್ಯಸ್ತಗೊಂಡಿದೆ. ತುಂತುರು ಮಳೆ ನಡುವೆ ಮಕ್ಕಳು ಶಾಲೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಸಾರ್ವಜನಿಕರು ಛತ್ರಿ ಹಿಡಿದುಕೊಂಡೇ ಮನೆಯಿಂದ ಹೊರ ಬರುವ ಅನಿವಾರ್ಯತೆ ಎದರುರಾಗಿದೆ. ನಗರದ ಪ್ರದೇಶದಲ್ಲಿ ವಾಸಿಸುವ ಜನರಿಗಂತು ಸಾಕಪ್ಪ ಸಾಕು ಈ ಮಳೆ ಅಂತ ಜಪಿಸುತ್ತಿದ್ದಾರೆ. ಇನ್ನು ಜಿಲ್ಲೆಯ ವಿವಿಧೆಡೆ ಹಿನ್ನೀರ ಸೊಬಗು ಅನಾವರಣಗೊಂಡಿದ್ದು, ಸಾರ್ವಜನಿಕರು ಅಚ್ಚರಿಯಿಂದ ವೀಕ್ಷಿಸುತ್ತಿದ್ದಾರೆ. ಬಿಸಿಲಿನ ತಾಪಕ್ಕೆ ಕುದಿಯುತ್ತಿದ್ದ ಜಿಲ್ಲೆಯೂ ಈ ಸಾರಿ ಮಲೆನಾಡಿನ ಅನುಭವ ಮುದ ನೀಡುತ್ತಿದೆ. ತಂಪು ವಾತಾವರಣಕ್ಕೆ ಬೆಚ್ಚನೆ ಹೊದಿಕೆ, ಬಟ್ಟೆಗಳಿಗೆ ವೃದ್ಧರು, ಮಕ್ಕಳು ಮೊರೆ ಹೋಗಿದ್ದಾರೆ.
ಜುಲೈನಲ್ಲಿ ಸುರಿಯುತ್ತಿರುವ ಮಳೆ ಕೃಷಿಗೆ ಪೂರಕವಾಗಿದೆ. ಎಲ್ಲ ಬೆಳೆಗಳಿಗೆ ಉತ್ತಮವಾಗಿ ಮಳೆ ಸಾಥ ಕೊಡಲಿದೆ. ಪುನರ್ವಸು, ಪುಷ್ಯ ಮಳೆಗಳು ಕೈಕೊಡುವದಿಲ್ಲ ಎನ್ನುವುದು ಸಾಬೀತಾಗಿದೆ. ಮೃಗಶಿರ ತಡವಾಗಿದ್ದರಿಂದ ಆತಂಕ ಇತ್ತು. ಇದೀಗ ನಿವಾರಣೆ ಆಗಿದೆ. ಆಗಸ್ಟ್ ಆಶ್ಲೇಷಾ, ಮಗಿ, ಹುಬ್ಬಾ, ಸಪ್ಟೆಂಬರ್ನಲ್ಲಿ ಉತ್ತರಿ ಮಳೆಗಳು ಉತ್ತಮವಾಗಿ ಸುರಿಯುವ ನಿರೀಕ್ಷೆ ಇದೆ. ಪ್ರತಿ ವರ್ಷ ಬಯಲು ಸೀಮೆ ಪ್ರವೇಶ ಮಾಡುವ ಮುಂಗಾರು ಮಳೆ ಮೋಡಗಳು ಅಥಿ ಎತ್ತರ ಪ್ರದೇಶವಾದ ಉತ್ತರ ಭಾರತದ ಕಡೆ ತನ್ನ ಪಥ ಚಲಾಯಿಸುತ್ತಿತ್ತು. ಆದರೇ ಪ್ರಸಕ್ತ ವರ್ಷ ಬಿ-Àರ ಜ್ವಾಯಿ ಚಂಡಮಾರುತದ ಪರಿಣಾಮದ ಪ್ರಭಾವಕ್ಕೆ ಒಳಗಾಗಿ ಉತ್ತರ ಭಾರತದ ಭೂಮಿಯ ತಾಪಮಾನ ಕಡಿಮೆಯಾಗಿದ್ದರಿಂದ ಮುಂದೆ ಬರುವ ದಿನಗಳಲ್ಲಿ ದಕ್ಷಿಣಾ ಭಾರತದಲ್ಲಿ ನಿರ್ಮಾಣವಾಗುವ ಮೋಡಗಳು ಉತ್ತರ ಭಾರತದತ್ತ ಸೆಳೆಯುವ ಸಂಭವನೆ ಕಡಿಮೆ ಇದೆ. ಹೀಗಾಗಿ ಇನ್ನು ಹೆಚ್ಚಿನ ಮಳೆ ಈ ಭಾಗದಲ್ಲಿ ಆಗುವ ನಿರೀಕ್ಷೆ ಇದೆ ಎಂದು ಹವಾಮಾನ ತಜ್ಞ ಪ್ರವೀಣ ಗುಳೇದ ಹೇಳಿದರು.