ಕಾಂಗ್ರೆಸ್ ಸರ್ಕಾರ ನೀಡಿರುವ ಭಾಗ್ಯಕ್ಕೆ ಹೇಳಬಹುದಾದ ಸೂಕ್ತವಾದ ಡಿವಿಜಿ ಯವರ ಕಗ್ಗಇದಾಗಿದೆ. ಜನರ ಮತಕ್ಕಾಗಿ ಅವರು ನೀಡಿರುವ ಆಶ್ವಾಸನೆಗಳು ಮತ್ತು ಮತದಾರ ಇವರನ್ನು ನಂಬಿ ನೀಡಿದ ಮತ ಯಾವುದು ಲೆಕ್ಕಕ್ಕೆ ಬಾರದಂತಾಗಿದೆ. ಜೂನ 1 ರಿಂದ ಗ್ಯಾರೆಂಟಿ ಕಾರ್ಡಿನಲ್ಲಿ ನೀಡಿರುವ ಆಶ್ವಾಸನೆಗಳು ಬೇಷರತ್ ಆಗಿ ಜಾರಿಗೆ ತರುತ್ತವೆ ಎಂದು ಹೇಳಿದ ಕಾಂಗ್ರೇಸ್ ಈಗ ಹನುಮಂತನ ಬಾಲದಂತೆ ಒಂದೊಂದೆ ಷರತ್ತುಗಳನ್ನು ವಿದಿಸುತ್ತಿದೆ.
ಕಾಂಗ್ರೇಸ್ಸನ್ನು ವಿರೋಧಿಸುವ ಭರದಲ್ಲಿ ಎಲ್ಲರೂ ಗ್ಯಾರಂಟಿ ಜಾರಿಗೆ ಒತ್ತಾಯಿಸುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯ ಉದ್ದೇಶದಿಂದ ಕಾಂಗ್ರೇಸ್ ಸಹ ಇವುಗಳನ್ನು ಜಾರಿ ಮಾಡುತ್ತದೆ. ಕಾಂಗ್ರೆಸ್ಸಿಗೇನು ಅದು ಅಧಿಕಾರದಲ್ಲಿ ಇರಬೇಕಷ್ಟೇ. ರಾಜ್ಯದ-ರಾಷ್ಟ್ರದ ಭವಿಷ್ಯ ಅದಕ್ಕೆ ಮುಖ್ಯವಲ್ಲ. ಕಳೆದ 10 ವರ್ಷಗಳಲ್ಲಿ ಮೋದಿ ಅಭಿವೃದ್ಧಿಯ ಹೆಸರಲ್ಲಿ ಚುನಾವಣೆಗೆ ಹೋಗುವುದನ್ನು ಶುರು ಮಾಡಿದ್ದರು. ಅದೇ ಕಾಂಗ್ರೇಸ್ಗೆ ಮುಳುವಾದದ್ದು. ಹಾಗಾಗಿ ಈಗ ಕಾಂಗ್ರೇಸ್ ಮತ್ತೆ ತನ್ನ ಹಳೆಯ ಚಾಳಿಯನ್ನು ಶುರುಮಾಡಿದೆ. ಜನರಿಗೆ ‘ಉಚಿತ’ ದ ಆಮಿಷ ತೋರಿಸಿ ಅಧಿಕಾರಕ್ಕೆ ಬರುವ ಅಭಿವೃದ್ಧಿಯನ್ನು ಮರೆಸುವ ಆಘಾತಕಾರಿ ಪ್ರಯತ್ನಕ್ಕೆ ಕೈ ಹಾಕಿದೆ. ಉಚಿತವಾಗಿ ನೀಡಿ ಗೆಲ್ಲುತ್ತಾರೆ ಎಂಬ ಸಂದೇಶ ಖಾತ್ರಿಯಾದರೆ ಎಲ್ಲ ರಾಜ್ಯಗಳೂ ಅದನ್ನೇ ಮಾಡುತ್ತವೆ (ಈಗಾಗಲೇ ಆರಂಭಿಸಿವೆ).
ಇದೇ ಮುಂದುವರಿದರೆ ದೇಶದ ಆರ್ಥಿಕ ಪರಿಸ್ಥಿತಿ? ಅದರ ಬಗ್ಗೆ ವಿಶ್ಲೇಷಣೆ ಮಾಡುವವರಾರು ? ಸೌಲಭ್ಯಗಳಿಗೆ ಇರುವ ನಿಯಮಗಳೇನು ?
• ಅನ್ನಭಾಗ್ಯ ಪ್ರತಿ ತಿಂಗಳು 10 ಕೆಜಿ ಅಕ್ಕಿ ಮತ್ತು ಮನೆ ಯಜಮಾನತಿಗೆ ೨೦೦೦ ರೂಪಾಯಿ ಕೊಡುವ ಗೃಹಲಕ್ಷ್ಮೀ ಯೋಜನೆ ಕೇವಲ ಬಿಪಿಎಲ್ ಕಾರ್ಡ ಹೊಂದಿದವರಿಗೆ ಮಾತ್ರ ಎಂದು ನಿಗದಿ ಮಾಡಲಾಗಿದೆ.
• ಮಹಿಳೆಯರಿಗೆ ಉಚಿತ ಬಸ್ ಪಾಸ ನೀಡುತ್ತಿದೆ. ಅದು ಎಲ್ಲರಿಗೂ ಅನ್ವಯಿಸುತ್ತದೆ ಆದರೆ ಇದು ಎಸಿ ಮತ್ತು ಸ್ಲಿಪರ್ ಬಸ್ಗಳಿಗೆ ಅನ್ವಯಿಸುವುದಿಲ್ಲ.
• ಪ್ರತಿ ಕುಟುಂಬಕ್ಕೆ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುತ್ತದೆ. ಆದರೆ ಆ ತಿಂಗಳ ಕರೆಂಟ್ ಬಿಲ್ಲ ಎಲ್ಲರೂ ಮೊದಲಿನಂತೆ ಭರಿಸಲೇಬೇಕು ನಂತರ ಅದು ನಿಮ್ಮ ಅಕೌಂಟಿಗೆ ಪುನಃ ವಾಪಸ್ ನೀಡಲಾಗುತ್ತದೆ. ಮತ್ತು 200 ಯುನಿಟ್ಗಿಂತ ಹೆಚ್ಚಾದರೆ ಸಂಪೂರ್ಣ ಬಿಲ್ಲನ್ನೇ ಭರಿಸಿಕೊಳ್ಳಲಾಗುತ್ತದೆ ಆಗ ಉಚಿತ ವಿದ್ಯುತ್ ನೀಡಿದಂತಾಗುವುದಲ್ಲ.
• ನಿರುದ್ಯೋಗ ಭತ್ಯೆ ನೀಡುವ ಯೋಜನೆ ಈ ಯೋಜನೆ ಕೇವಲ ಈ ವರ್ಷಫಲಿತಾಂಶವನ್ನು ಪಡೆದಉ ಮೂರು ತಿಂಗಳಿಂದ ಕೆಲಸ ಸಿಗದವರಿಗೆ ಮಾತ್ರ ಈ ಯೋಜನೆಯ ಲಾಭವಿದೆ.
ಇಷ್ಟೆಲ್ಲ ಭಾಗ್ಯವನ್ನು ಕರುಣಿಸಲು ಸರ್ಕಾರಕ್ಕೆ ಬೇಕಾಗುವ ಅಂದಾಜು ಹಣ ಎಷ್ಟು ಗೊತ್ತೇ?
• ಈ ಐದು ಯೋಜನೆ ಅನುಷ್ಠಾನಕ್ಕೆ ತರಲು ಅಂದಾಜು 50 ಸಾವಿರ ಕೋಟಿ ರೂಪಾಯಿಯ ಅವಶ್ಯಕತೆಯಿದೆ ಎಂದು ಅಂದಾಜಿಸಲಾಗಿದೆ.
• ಗೃಹಜ್ಯೋತಿ ಭಾಗ್ಯವನ್ನು ಜಾರಿಗೆತರಲು 10ಸಾವಿರ ಕೋಟಿ ರೂಪಾಯಿಯ ಅವಶ್ಯಕತೆಯಿದೆ.
• ಗೃಹ ಲಕ್ಷ್ಮಿ ಯೋಜನೆಗೆ 24 ಕೋಟಿ ರೂಪಾಯಿಯ ಅವಶ್ಯಕತೆಯಿದೆ.
• 10ಕೆಜಿ ಅಕ್ಕಿಯನ್ನು ನೀಡುವ ಅನ್ನಭಾಗ್ಯ ಯೋಜನೆ ಜಾರಿಗೆ ತರಲು 9 ಸಾವಿರ ಕೋಟಿ ರೂಪಾಯಿಯ ಅವಶ್ಯಕತೆಯಿದೆ. ಮತ್ತೊಂದು ಗಮನಾರ್ಹ ಸಂಗತಿಯೆಂದರೆ ಈ 10 ಕೆಜಿ ಅಕ್ಕಿಯಲ್ಲಿ 5 ಕೆಜಿ ಅಕ್ಕಿಯನ್ನು ಈಗಾಗಲೇ ಕೇಂದ್ರ ಸರ್ಕಾರವು ನೀಡುತ್ತಿದೆ. ಅಂದರೆ ರಾಜ್ಯ ಸರ್ಕಾರ ನೀಡುತ್ತಿರುವುದು ಕೇವಲ 5 ಕೆ.ಜಿ ಮಾತ್ರ ಅದರಲ್ಲೂ ಮಾನ್ಯ ಮಂತ್ರಿಗಳು ಬಾಕಿ 5 ಕೆಜಿಯನ್ನು ನೀಡಲು ಕೇಂದ್ರಕ್ಕೆ ಮನವಿ ಮಾಡುವುದಾಗಿ ಹೇಳಿದ್ದಾರೆ.
• ಸಾರಿಗೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ 3 ಸಾವಿರ ಕೋಟಿ ರೂಪಾಯಿ ಹಣ ವ್ಯಯವಾಗುತ್ತದೆ.
• ನಿರುದ್ಯೋಗ ಭತ್ಯೆಗೆ ಸುಮಾರು 2 ಸಾವಿರ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಇಷ್ಟೆಲ್ಲ ಹಣ ನಮ್ಮ ಸರ್ಕಾರದ ಕಡೆಗೆ ಬರುವುದಾರು ಎಲ್ಲಿಂದ ? ಒಂದು ಕೇಂದ್ರ ಸರ್ಕಾರದ ಕಡೆಯಿಂದ ಪಡೆಯುವುದು ಅಥವಾ ಟ್ಯಾಕ್ಸ ಪ್ರಮಾಣದಲ್ಲಿ ಹೆಚ್ಚಳ ಮಾಡುವುದು. ಇದನ್ನು ಬಿಟ್ಟು ಸರ್ಕಾರದ ಮುಂದೆ ಮತ್ತೊಂದು ಉಪಾಯವಿಲ್ಲ. ಸುಲಭವಾಗಿ ಹೇಳುದಾದರೆ ಕೆರೆಯ ನೀರನು ಕೆರೆಗೆ ಚೆಲ್ಲಿ ಅಂದರೆ ನಮ್ಮ ಹಣದಿಂದಲೇ ನಮಗೆ ಈ ಸೌಲಭ್ಯವನ್ನು ಒದಗಿಸುವುದಾರೆ ಈ ಸರ್ಕಾರದ ಕೊಡುಗೆಯಾದರೂ ಎನು? ಬಿಪಿಲ್ ಕಾರ್ಡ ಹೊಂದಿದವರಗೆ ಎಲ್ಲ ಸೌಲಭ್ಯಗಳು ಎಂತಾದರೆ ಮಧ್ಯಮ ವರ್ಗ ಮತ್ತು ಕೆಳ ಮಧ್ಯಮ ವರ್ಗದ ಪಾಡೇನು ? ಎಂದು ಮತ ನೀಡಿದ ಮಹಾಪ್ರಭು ವಿಚಾರ ಮಾಡಬೇಕು. ಅದಕ್ಕೆ ಡಿ.ವಿ. ಗುಂಡಪ್ಪನವರ ಸಾಲುಗಳು ನೆನಪಾಗುತ್ತದೆ. ಇವರ ಭಾಗ್ಯವ ನೆನೆದು ಬಾರನೆಂಬುದ ಬಿಡು ಹರ್ಷಕ್ಕಿದೆ ದಾರಿ.