ಜೆರುಸಲೇಮ್ ; ಸುಮ್ಮನಿದ್ದ ಇಸ್ರೆಲ್ ನ್ನು ಕೆಣಕಿ ತನ್ನ ಅವಸಾನವನ್ನು ತಾನೇ ಆಹ್ವಾನಿಸಿಕೊಂಡ ಹಾಮಾಸ್ ಉಗ್ರರು ಇದೀಗ ತಮ್ಮ ತಪ್ಪಿಗೆ ತಕ್ಕ ಬೆಲೆ ತೆರುತಿದ್ದಾರೆ. ಕಳೆದ ಶನಿವಾರದಂದು ಇಸ್ರೆಲ್ ವಿರುದ್ದ ಮುಂಬೈ 26/11 ಮಾದರಿಯ ಧಾಳಿಯನ್ನೇ ನಡೆಸಿ ಮೀಸೆ ತಿರುವಿಕೊಂಡಿದ್ದ ಹಾಮಾಸ್ ಉಗ್ರರು ಇದೀಗ ಕಂಗಾಲಾಗಿ ಜೀವಭಿಕ್ಷೆ ಬೇಡುತಿದ್ದಾರೆ. ತಮ್ಮ ಧಾಳಿಯ ವೀಡಿಯೋಗಳನ್ನು ಮಾಡಿ ಅದನ್ನು ಸಾಮಾಜಿಕ ತಾಣದಲ್ಲಿ ಹರಿ ಬಿಟ್ಟು ಇಸ್ರೇಲ್ ನ್ನೇ ಮಣಿಸಿದೆವು ಎಂದು ಬೀಗುತಿದ್ದ ಉಗ್ರರ ಹೆಡೆಮುರಿಯನ್ನು ಇಸ್ರೆಲೀ ಯೋಧರು ಕಟ್ಟುತಿದ್ದಾರೆ.
ತನ್ನ ಮೈಮರೆವಿನಿಂದಲೇ ಶನಿವಾರದ ಧಾಳಿ ನಡೆಯಿತೆಂದು ಅರಿತಿರುವ ಇಸ್ರೇಲ್ ಹಾಮಾಸ್ ಉಗ್ರ ನೆಲೆಗಳ ಮೇಲೆ ಧಾಳಿಯನ್ನು ತೀವ್ರಗೊಳಿಸಿದೆ. ಸುಮಾರು ಮೂರು ಲಕ್ಷ ಯೋಧರ ಸೇನೆಯನ್ನೇ ಗಡಿಯಲ್ಲಿ ನಿಯೋಜಿಸಿರುವ ಸಿರೇಲ್ ಈ ಸೇಡಿಗಾಗಿಯೇ ತನ್ನ ವಿದೇಶೀ ಮೀಸಲು ನಿಧಿಯಿಂದ 2.5 ಲಕ್ಷ ಕೋಟಿ ರೂಪಾಯಿಗಳನ್ನೇ ವ್ಯಯಿಸುತ್ತಿದೆ. ಇದಲ್ಲದೆ ಸಿರೆಲ್ ಸೇಡಿಗೆ ಸಾಥ್ ನೀಡಿರುವ ಅಮೇರಿಕ ಇಸ್ರೆಲ್ ಗೆ ಹಚ್ಚಿನ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಗಳನ್ನು ಸರಬರಾಜು ಮಾಡುತ್ತಿದೆ.
ವಾರಾಂತ್ಯದ ಹಮಾಸ್ ದಾಳಿಯಲ್ಲಿ ಇಸ್ರೆಲ್ ನಲ್ಲಿ ಸಾವನ್ನಪ್ಪಿದವರ ಸಂಖ್ಯೆ 1,200 ಮೀರಿದೆ ಎಂದು ವಾಷಿಂಗ್ಟನ್ನಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ಮಂಗಳವಾರ ತಿಳಿಸಿದೆ. ಮೃತಪಟ್ಟವರು ಅಮಾಯಕ ನಾಗರಿಕರಾಗಿದ್ದರು, ಮನೆಗಳಲ್ಲಿ, ಬೀದಿಗಳಲ್ಲಿ ಅಥವಾ ಹೊರಾಂಗಣ ನೃತ್ಯ ಪಾರ್ಟಿಯಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟರು ಎಂದು ಅದು ತಿಳಿಸಿದೆ.
ಇಸ್ರೇಲ್ ಗೆ ನುಗ್ಗಿ ಸೈನಿಕರು ನಾಗರಿಕರು ಮತ್ತು ಮಹಿಳೆಯರನ್ನು ಅಪಹರಿಸಿಕೊಂಡು ಹೋಗಿ ಒತ್ತೆಯಾಳಾಗಿ ಇರಿಸಿಕೊಂಡಿರುವ ಹಾಮಾಸ್ ಉಗ್ರರು ಗಾಜಾ ಮೇಲೆ ಧಾಳಿ ನಡೆಸಿದರೆ ಬಂಧಿತರನ್ನೆಲ್ಲ ಕೊಲ್ಲುವುದಾಗಿ ಬೆದರಿಕೆ ಒಡ್ಡಿತ್ತು. ಆದರೆ ಈ ಗೊಡ್ಡು ಬೆದರಿಕೆಗೆ ಕ್ಯಾರೇ ಎನ್ನದ ಇಸ್ರೆಲ್ ತನ್ನ ನಾಗರಿಕರ ಜೀವಕ್ಕಿಂತ ಉಗ್ರರ ನಿರ್ನಾಮ ಮುಖ್ಯ ಎಂದು ನಿರ್ದರಿಸಿ ಉಗ್ರರನ್ನು ನಿರ್ದಾಕ್ಷಿಣ್ಯವಾಗಿ ನಿರ್ನಾಮ ಮಾಡುವಲ್ಲಿ ತೊಡಗಿದೆ. ಅಂದಾಜಿನ ಪ್ರಕಾರ ಪ್ಯಾಲೆಸ್ತೀನ ನಲ್ಲಿ ಸುಮಾರು 2000 ಕ್ಕೂ ಹೆಚ್ಚು ಜನರು ಮರಣವನ್ನಪ್ಪಿದ್ದಾರೆ. ಅಲ್ಲದೆ 5000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ವಿಶ್ವಸಂಸ್ಥೆ ಸ್ಥಾಪಿಸಿರುವ ನಿರಾಶ್ರಿತ ಕೇಂದ್ರಗಳ ಮೇಲೂ ದಾಳಿ ನಡೆದಿದೆ. ಹೀಗಾಗಿ ಈ ದಾಳಿಗಳಿಂದ ತಪ್ಪಿಸಿಕೊಳ್ಳಲು ಸೂಕ್ತ ಸ್ಥಳ ದೊರಕದ ಪರಿಸ್ಥಿತಿ ಇಲ್ಲಿನ ಜನರಿಗೆ ಎದುರಾಗಿದೆ. ಈ ಕುರಿತಾಗಿ ಮಹಿಳೆಯೊಬ್ಬರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ‘ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹತ್ತಿರದಲ್ಲೇ ರಾಕೆಟ್ವೊಂದು ಸ್ಫೋಟಿಸಿತು. ಆದರೆ ರಕ್ಷಣೆಗಾಗಿ ಅಡಗಿಕೊಳ್ಳಲು ಸಹ ನಮ್ಮಲ್ಲಿ ಸೂಕ್ತ ಸ್ಥಳಗಳಿಲ್ಲ. 3 ದಿನಗಳಿಂದ ನಿರಂತರವಾಗಿ ಮಕ್ಕಳನ್ನು ಎತ್ತಿಕೊಂಡು ಅಲೆಯುತ್ತಿದ್ದೇನೆ. ಅವರಿಗಾಗಿಯಾದರೂ ನಾನು ಬದುಕುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.
ತನ್ನ ದೇಶದ ವ್ಯಾಪ್ತಿಯೊಳಗೆ 1500 ಹಮಾಸ್ ಉಗ್ರರ ಶವ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದೆ. ಗಾಜಾಪಟ್ಟಿಯೊಂದಿಗಿನ ಗಡಿ ಭಾಗವಾದ ಇಸ್ರೇಲ್ಗೆ ಸೇರಿದ ಪ್ರದೇಶದಲ್ಲಿ ಹಮಾಸ್ ಉಗ್ರರ ಶವ ಪತ್ತೆಯಾಗಿದೆ ಎಂದು ಸೇನೆ ಹೇಳಿದೆ. ಇದೇ ವೇಳೆ ಕಳೆದ ರಾತ್ರಿಯಿಂದೀಚೆಗೆ ಯಾವುದೇ ಪ್ಯಾಲೆಸ್ತೀನಿಗಳು ನಮ್ಮ ಗಡಿ ದಾಟಿ ಬಂದಿಲ್ಲ. ನಾವು ನಮ್ಮ ಗಡಿಯನ್ನು ಸಂಪೂರ್ಣವಾಗಿ ರಕ್ಷಿಸಿಕೊಂಡಿದ್ದೇವೆ. ಗಡಿಯ ಸುತ್ತಲಿನ ಎಲ್ಲಾ ಸಮುದಾಯಗಳ ಸ್ಥಳಾಂತರಿಸುವಿಕೆಯನ್ನು ಸೇನೆಯು ಬಹುತೇಕ ಪೂರ್ಣಗೊಳಿಸಿದೆ ಎಂದು ಸ್ಪಷ್ಟಪಡಿಸಿದೆ. ಆದರೆ ಪ್ಯಾಲೆಸ್ತೀನ್ ಮಾತ್ರ ಈವರೆಗೆ ಇಸ್ರೇಲ್ ದಾಳಿಯಲ್ಲಿ ತನ್ನ 700 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ
ಇಸ್ರೇಲ್ ಹಮಾಸ್ ನಡುವಣ ಯುದ್ಧ ಜಗತ್ತನ್ನೇ ಎರಡಾಗಿ ವಿಭಜಿಸುತ್ತಿದೆ. ಅಮೆರಿಕಾ, ಬ್ರಿಟನ್, ಮುಂತಾದ ಪಾಶ್ಚಾತ್ಯ ರಾಷ್ಟ್ರಗಳ ಜೊತೆಗೆ ಈ ಬಾರಿ ಭಾರತವೂ ಇಸ್ರೇಲ್ ಅನ್ನು ಬೆಂಬಲಿಸುತ್ತಿದ್ದರೆ, ಇತ್ತ ಚೀನಾ, ಪಾಕಿಸ್ತಾನ, ಇರಾನ್, ಟರ್ಕಿ, ಈಜಿಪ್ಟ್ ಮುಂತಾದ ರಾಷ್ಟ್ರಗಳು ಹಮಾಸ್ ಉಗ್ರರನ್ನು ಬೆಂಬಲಿಸುತ್ತಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಅವರ ಜೊತೆ ಮಾತನಾಡಿ ಭಾರತ ಇಸ್ರೇಲ್ ಜೊತೆ ಇರುವುದಾಗಿ ಹೇಳಿದ್ದಾರೆ.