ಕರ್ನಾಟಕ ಸರಕಾರ ಇದೀಗ ಮಧ್ಯದಂಗಡಿಗಳಿಗೆ ಪರಾವಣಿಗೆ ನೀಡಿದ ಬಗ್ಗೆ ಯೋಚನೆ ನಡೆಸುತ್ತಿದೆ. ವಿರೋಧ ಪಕ್ಷಗಳಿಂದ ಲಿಕ್ಕರ್ ಭಾಗ್ಯ ಎಂದು ಮೂದಲಿಸಲ್ಪಟ್ಟ, ಈ ಯೋಜನೆ ರಾಜ್ಯದ್ಯoತ ವಿರೋಧಕ್ಕೆ ಒಳಗಾಗಿದೆ.
ಕಹಿ ಯಾದರೂ ಸತ್ಯ ಎನ್ನುವಂತೆ ಎಣ್ಣೆಯೊಂದಿದ್ದರೆ ಸರಕಾರ ತನ್ನ ಖಜಾನೆಯನ್ನು ಆರಾಮವಾಗಿ ತುಂಬಿಕೊಳ್ಳಬಹುದು ಎಂಬ ಅಸಹ್ಯ ಸತ್ಯ ಕೊರೋಣ ಸಂದರ್ಭದಲ್ಲೂ ಸಾಬೀತಾಗಿತ್ತು. ದೇಶವೇ ಸ್ತಬ್ದವಾಗಿದ್ದ ಸಂದರ್ಭ, ಮೊದಲು ಸಡಿಲವಾದ ಜನರ ಒಡನಾಟ ಮಧ್ಯದಂಗಡಿಯತ್ತವಾಗಿತ್ತು. ಕೊರೋನಾದಂತಹ ಮಾರಕ ಕಾಯಿಲೆಯ ಸಂದರ್ಭವೂ ಸರಕಾರ ಮಧ್ಯದಂಡಗಿ ತೆರೆಯಲು ಹಸಿರು ನಿಷಾನೆ ತೋರಿಸಿತ್ತು.
ಗಾಂಧೀಜಿ ಹುಟ್ಟಿದ ದಿನವನ್ನು ಅಹಿಂಸೆಯ ಪ್ರತೀಕವಾಗಿ ಆಚರಿಸುತ್ತಿರುವ ಸರಕಾರ ಗಾಂಧೀಜಿ ತತ್ವವಾದ ‘ಮಧ್ಯ ವಿರೋಧ ನೀತಿ ಯನ್ನು’ ಎತ್ತಿ ಹಿಡಿಯ ಬೇಕಿಲ್ಲವೇ? ಗಾಂಧಿಜಯಂತಿ ಆಚರಿಸುತ್ತಾ, ಗಾಂಧಿ ವಿರೋಧಿ ತತ್ವಗಳಿಗೆ ಬೆಂಬಲ ನೀಡಿದರೆ ಆಚರಿಸುವ ಜಯಂತಿಯ ಉದ್ದೇಶವಾದರೂ ಏನು?
ಇನ್ನೊಂದೆಡೆ, ರಾಜ್ಯ ಸರಕಾರ ಮಹಿಳಾ ಸ್ವಾವಲಂಭನೆ ಮತ್ತು ಶಕ್ತಿಯನ್ನು ಉತ್ತೇಜಸುವ ಉದ್ದೇಶದಿಂದ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಆದರೆ, ಇದೀಗ ಮಧ್ಯದಂಗಡಿಯ ಪರಾವಣಿಗೆ ಹೆಚ್ಚಿಸಿ, ಮಹಿಳೆಯ ಕುಟುಂಬ ಮತ್ತು ಸ್ವಾಸ್ತ್ಯವನ್ನು ಹದಗೆಡಿಸುವಲ್ಲಿ ವೇದಿಕೆ ಸೃಷ್ಟಿಸುವುದಲ್ಲವೇ ಎಂದು ಮತ್ತಷ್ಟು ಸರಕಾರ ಚಿಂತಿಸಬೇಕಿದೆ. ಕಳ್ಳ ಭಟ್ಟಿಯಿಂದ ಜನರ ಆರೋಗ್ಯ ಹಾಳಾಗುತ್ತಿರುವ ಕಾರಣ, ಅಧಿಕೃತ ಮಧ್ಯ ದಂಗಡಿಗೆ ಪರಾವನಿಗೆ ನೀಡುತ್ತಿದ್ದೇವೆ ಎಂದು ತಮ್ಮ ನಿಲುವಿನ ಬಗ್ಗೆ ಸಮರ್ಥಿಸುತ್ತಿರುವ ಸರಕಾರ, ತಾವು ಜನರನ್ನು ಬೆಂಕಿ ಯಿಂದ ಬಾಣಲೆಗೆ ದೂಡುತ್ತಿದ್ದೇವೆ, ಚಿಕಿತ್ಸೆಗಾಗಿ ಆಸ್ಪತ್ರೆಗಲ್ಲ ಎಂಬ ವಿಷಯವನ್ನು ಮನದಟ್ಟು ಮಾಡಿಕೊಳ್ಳಬೇಕಿದೆ.