ನಗುವೊಂದು ರಸಪಾಕ, ಅಳುವೊಂದು ರಸಪಾಕ’ ಎಂಬುದು ಡಿವಿಜಿಯವರ ಉಕ್ತ. ಭಾರತ ತನ್ನ ಚಂದ್ರಯಾನ ಪಯಣವನ್ನು ಯಶಸ್ವಿಯಾಗಿ ತಲುಪಿದಾಗ ಇಡೀ ದೇಶ ಸಂಭ್ರಮಿಸಿತು. ಸಾಮಾಜಿಕ ಜಾಲತಾಣಗಳಲ್ಲಿ ರಸವತ್ತಾಗಿ ನಡೆದ ಕೆಲವು ಚರ್ಚೆಗಳು ಹೀಗಿವೆ.
ಚಂದ್ರನನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಲು ಚಂದ್ರಯಾನ -3ರ ಲ್ಯಾಂಡಿಂಗ್ ಸ್ಪಾಟ್ ನ್ನು ಅದರ ರಾಜಧಾನಿಯನ್ನಾಗಿ ಮಾಡುವಂತೆ ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ ಸಾಮಾಜಿಕ ಜಾಲತಾಣದ ಮೂಲಕ ಹೇಳಿಕೊಂಡಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಒಬ್ಬರು, “ಈದ್ ದಿನ ಒಂದು ಮುಸಲ್ಮಾನ ರಿಗೆ ಬಿಟ್ಟು ಕೊಡಿ ಬೇರೆ ದಿನ ನೀವೇ ಇಟ್ಟುಕೊಳ್ಳಿ ಎಂದಿದ್ದಾರೆ”. ಇನ್ನು ಚಂದ್ರನನ್ನು ಚಕ್ರ ಪಾಣಿಯವರ ವಿನಂತಿಯನ್ನು ಕೇಳಿದ ನಂತರ, ಚಂದ್ರನನ್ನು ದುಷ್ಕರ್ಮಿಗಳು ಅಪಹರಿಸಿ ಕೊಂಡುಹೋಗುತ್ತಿದ್ದಾರೆ ಎಂಬ ಶೀರ್ಷಿಕೆ ಮೂಲಕ ಒಂದು ಅದ್ಭುತ ಛಾಯಾಚಿತ್ರ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ದ್ವೇಷವೇ ಮನೆ ಮಾಡುತ್ತಿರುವ ಈ ಸಂದರ್ಭದಲ್ಲಿ, ಡಿವಿಜಿ ಯವರ ನಗುವೆಂಬ ರಸಪಾಕದ ಮೂಲಕ ಬೀಗಡಾಯಿಸಬಹುದಾದ ಯಾವ ಸಂದರ್ಭವೂ ತಿಳಿ ಯಾಗುತ್ತದೆ, ಎಂಬುದಕ್ಕೆ ಉದಾಹರಣೆ.