ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಮತ್ತು ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಘೋಸ್ಟ್’ ಚಿತ್ರೀಕರಣವನ್ನು ಮಂಗಳವಾರ ಪೂರ್ಣಗೊಳಿಸಿದ್ದು, ದಸರಾಗೆ ಈ ಸಿನಿಮಾ ತೆರೆಯ ಮೇಲೆ ಬರಲಿದೆ ಎಂದು ನಿರ್ದೇಶಕ ಶ್ರೀನಿ ಅವರು ತಿಳಿಸಿದ್ದಾರೆ.
‘ಘೋಸ್ಟ್’ ಚಿತ್ರದ ಚಿತ್ರೀಕರಣ ಮುಗಿಸಿದ ಶ್ರೀನಿ, ತಮ್ಮ ಮುಂದಿನ ಥ್ರಿಲ್ಲರ್ ಸಿನಿಮಾ ಬೀರ್ಬಲ್ 2 ನ ಕೆಲವು ಭಾಗಗಳನ್ನು ಸಹ ಚಿತ್ರೀಕರಿಸುತ್ತಿದ್ದಾರೆ ಅಂತೆ. ಅಲ್ಲದೇ ಘೋಸ್ಟ್ ಚಿತ್ರದಲ್ಲಿ ಬೀರ್ಬಲ್ ಚಿತ್ರದ ಪಾರ್ಟ್-2 ಹಿಂಟ್ ಕೂಡ ಬಿಟ್ಟುಕೊಡಲಿದ್ದೇವೆ ಎಂದು ನಿರ್ದೇಶಕರು ಈ ಸಮಯದಲ್ಲಿ ತಿಳಿಸಿದ್ದಾರೆ. ಬೀರ್ಬಲ್ ಸೀಕ್ವೆಲ್ನ ಸೆಟ್ಗಳಿಂದ ಫಸ್ಟ್ ಲುಕ್ ಅನ್ನು ಹಂಚಿಕೊಂಡ ತಯಾರಕರು, ಮೇಕಿಂಗ್ನಲ್ಲಿ ಸಿನಿಮಾದ ಮಲ್ಟಿವರ್ಸ್ನ ಬಗ್ಗೆ ಸುಳಿವು ನೀಡಿದ್ದಾರೆ. ಚಿತ್ರದಲ್ಲಿ ಹಾಲಿವುಡ್ನ ಸಿನಿಮ್ಯಾಟಿಕ್ ಯುನಿವರ್ಸ್ ಟೆಕ್ನಿಕ್ನ್ ನ್ನು ಬಳಸುತ್ತಿದ್ದಾರೆ. ಬಾಲಿವುಡ್ ಮಂದಿಗೆ ಈ ಒಂದು ಟೆಕ್ನಿಕ್ ಹೊಸದಲ್ಲ. ಆದರೆ ಕನ್ನಡಿಗರಿಗೆ ಈ ಮೂಲಕ ಹೊಸದೊಂದು ವಿಷಯ ತಿಳಿಸಲು ಶ್ರೀನಿ ಮುಂದಾಗಿದ್ದಾರೆ.
ನಾನು ಘೋಸ್ಟ್ ಚಿತ್ರವನ್ನು ಬೀರ್ಬಲ್ ನ ಸೀಕ್ವೆಲ್ನೊಂದಿಗೆ ಲಿಂಕ್ ಮಾಡುತ್ತಿದ್ದೇನೆ. ಅದು ಪ್ರತಿಯಾಗಿ, ಘೋಸ್ಟ್ 2 ನೊಂದಿಗೆ ನಂಟು ಹೊಂದಿರಲಿದೆ. ಹಾಗಾಗಿ, ಮಂಗಳವಾರ, ನಾನು ಘೋಸ್ಟ್ಗಾಗಿ ಬಾಕಿ ಉಳಿದಿರುವ ಪ್ಯಾಚ್ವರ್ಕ್ನೊಂದಿಗೆ ಸಂಪೂರ್ಣ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇನೆ. ಬೀರ್ಬಲ್ ಸೀಕ್ವೆಲ್ಗಾಗಿ ನಾನು ಕೆಲವು ಶಾಟ್ಗಳನ್ನು ಸಹ ಚಿತ್ರೀಕರಿಸಿದ್ದೇನೆ ಎಂದು ಶ್ರೀನಿ ತಮ್ಮೆಲ್ಲ ಮಾತುಗಳನ್ನು ಪ್ರೇಕ್ಷಕರ ಮುಂದೆ ಬಿಚ್ಚಿಟ್ಟರು.
ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಘೋಸ್ಟ್ ಚಿತ್ರದ ಆಡಿಯೋ ಮತ್ತು ವಿಡಿಯೋ ಹಕ್ಕನ್ನ T-Series ಸಂಸ್ಥೆ ಖರೀದಿಸಿದ್ದು, ಇದನ್ನ ಹೇಳಲಿಕ್ಕೆ ತುಂಬಾ ಸಂತೋಷ ಎನಿಸುತ್ತದೆ ಅಂತ ಡೈರೆಕ್ಟರ್ ಶ್ರೀನಿ ಸೋಷಿಯಲ್ ಮೀಡಿಯಾದಲ್ಲೂ ಸಂತಸ ಹಂಚಿಕೊಂಡಿದ್ದಾರೆ.
ಅರ್ಜುನ್ ಜನ್ಯ ಅವರದ್ದು ಸಂಗೀತದಲ್ಲಿ ಒಂದು ಮ್ಯಾಜಿಕ್ ಇದ್ದೇ ಇರುತ್ತದೆ. ಅದರಲ್ಲೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಸಿನಿಮಾ ಅಂದ್ಮೇಲೆ ಅಲ್ಲೊಂದು ವಿಶೇಷ ಪ್ರೀತಿ ಇದ್ದೇ ಇರುತ್ತದೆ. ಅದೇ ರೀತಿ ಅರ್ಜುನ್ ಜನ್ಯ ಇಲ್ಲೂ ಒಳ್ಳೆ ಹಾಡುಗಳನ್ನ ಕೊಟ್ಟಿರುತ್ತಾರೆ ಅನ್ನುವ ನಂಬಿಕೆ ಈಗಲೇ ಮೂಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.