ಭಾರತವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಲೆ, ಆಚರಣೆಗಳಲ್ಲಿ ಪ್ರಖ್ಯಾತಿ ಪಡೆದುಕೊಂಡಿರುವ ದೇಶ ಇಲ್ಲಿ ಎಲ್ಲ ರಾಜ್ಯಗಳು ತಮ್ಮದೆ ಆದ ಸಂಸ್ಕೃತಿ ಹೊಂದಿವೆ, ಅದರಲ್ಲೂ ಕರ್ನಾಟಕ ಸಾಂಸ್ಕೃತಿಕ, ಧಾರ್ಮಿಕವಾಗಿ ಹೆಸರುವಾಸಿಯಾಗಿದೆ, ಕರ್ನಾಟಕದಲ್ಲಿ ಅತೀ ಹೆಚ್ಹು ಧಾರ್ಮಿಕ ಕ್ಷೇತ್ರಗಳನ್ನು ನೋಡಬಹುದು. ಒಂದು ರಾಜ್ಯ ಹಲವು ಜಗತ್ತು ಹೇಳಬಹುದು ಕಾರಣ ಈ ನಾಡಿನ ಪ್ರತಿಯೊಂದು ಜಿಲ್ಲೆಯು ತನ್ನದೇ ಆದ ಪರಂಪರೆಯ ಸಂಸ್ಕೃತಿ ಹೊಂದಿದೆ.
ಉತ್ತರ ಕನ್ನಡ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿಂದು ಈ ಜಿಲ್ಲೆ ಬಹುತೇಕ ಅರಣ್ಯಪ್ರದೇಶದಿಂದ ಕೂಡಿತ್ತದೆ ಉತ್ತರಕನ್ನಡ ಜಿಲ್ಲೆ ತನ್ನ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಅನೇಕ ಸುಂದರ ಜಲಪಾತಗಳಿವೆ ಕರ್ನಾಟಕದ ಪ್ರಖ್ಯಾತ ಜಾನಪದ ಕಲೆ ಯಕ್ಷಗಾನ ಕ್ಷೇತ್ರದಲ್ಲಿ ಉತ್ತರ ಕನ್ನಡ ಜಿಲ್ಲೆ ಸಾಕಷ್ಟು ಹೆಸರು ಮಾಡಿದೆ. ಅದಲ್ಲದೇ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಸಿದ ಸ್ಥಳವಾಗಿದೆ.
ಈ ಉತ್ತರ ಕನ್ನಡದಲ್ಲಿ ಶಿರಸಿ ಕೂಡಾ ಒಂದು ಪ್ರಮುವಾದ ಸಂಸ್ಕೃತಿಯ ಊರು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದ ಘಟ್ಟದ ಮೇಲಿನ ಒಂದು ಸುಂದರ ನಗರ. ಇದು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಇರುವುದರಿಂದ ಇದು ತನ್ನ ಸುತ್ತಲೂ ಅದೆಷ್ಟೋ ಜಲಪಾತಗಳಿಂದ ಹೊಂದಿವೆ. ದಟ್ಟ ಅರಣ್ಯ ಅಡಿಕೆ ತೋಟ ಹಚ್ಚು ಹಸುರಿನಿಂದ ಕೊಡಿದ ಪ್ರಕೃತಿಯ ಮದ್ಯ ಇರುವ ಶಿರಸಿ ಎಂದ ತಕ್ಷಣ ಎಲ್ಲರಿಗೂ ನೆನಪು ಬರುವುದು ಜಗನ್ಮಾತೆ ಶ್ರೀ ಶಿರಸಿ ಮಾರಿಕಾಂಬೆ.
ಶ್ರೀ ಶಿರಸಿ ಮಾರಿಕಾಂಬಾ ದೇವಾಲಯ ಕರ್ನಾಟಕದ ಪ್ರಸಿದ್ಧ ಹಿಂದೂ ದೇವಾಲಯಗಳಲ್ಲಿ ಒಂದು. ಈ ದೇವಾಲಯು ಕರ್ನಾಟಕದ ಅತ್ಯಂತ ಪ್ರಖ್ಯಾತವಾದ ದೇವಾಲಯ. ಇಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಶಿರಸಿ ಮಾರಿಕಾಂಬಾ ಜಾತ್ರೆ ಉತ್ತರ ಕರ್ಣಾಟಕದಲ್ಲಿ ಅತೀ ದೊಡ್ಡ ಜಾತ್ರೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ಶಿರಸಿಯ ಮಾರಿಕಾಂಬಾ ದೇವಾಲಯ ಕರ್ನಾಟಕದ ಪುರಾತನ ದೇವಾಲಯಗಳಲ್ಲಿ ಒಂದು. ಈ ದೇವಾಲಯದ ವಿಷೇಶತೆ ಗೋಡೆಗಳಲ್ಲಿ ಪುರಾತನವಾದ ಕಥೆಗಳನ್ನು ಬಹಳ ಸುಂದರವಾಗಿ ಕೆಂಪು ಬಣ್ಣಗಳಿಂದ ಬಣ್ಣಿಸಲಾಗಿದೆ.
ಈ ಶಿರಸಿ ದೇವಾಲಯಕ್ಕೆ ಪ್ರಯಾಣಿಸಲು ಮಾರ್ಗ ಧಾರವಾಡ ಇಂದ 124 ಕಿ.ಮೀ ಹಾಗೂ ಹುಬ್ಬಳ್ಳಿ ಇಂದ 104 ಕಿ.ಮೀ ಹತ್ತಿರವಿದೆ.