ಗುವಾಹಟಿ: ರಾಜ್ಯದಲ್ಲಿ ಬಹುಪತ್ನಿತ್ವ ಮತ್ತು ಇತರ ಸಂಬಂಧಿತ ಸಮಸ್ಯೆಗಳನ್ನು ನಿಷೇಧಿಸಲು ಸೂಕ್ತವಾದ ಶಾಸನವನ್ನು ರಚಿಸಲು ಅಸ್ಸಾಂ ರಾಜ್ಯಪಾಲರು ಸಮಿತಿಯನ್ನು ರಚಿಸಿದರು. ಬಹುಪತ್ನಿತ್ವವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರವನ್ನು ಅಸ್ಸಾಂ ಸರ್ಕಾರ ಹೊರಡಿಸಿದ ಅಧಿಕೃತ ಅಧಿಸೂಚನೆಯ ಮೂಲಕ ತಿಳಿಸಲಾಗಿದೆ.
ಅಸ್ಸಾಂ ರಾಜ್ಯಪಾಲರು ರಾಜ್ಯದಲ್ಲಿ ಬಹುಪತ್ನಿತ್ವವನ್ನು ಕೊನೆಗೊಳಿಸಲು ಕಾಯ್ದೆಯನ್ನು ರಚಿಸಲು ಈ ಸಮಿತಿಯನ್ನು ನೇಮಿಸಿದ್ದಾರೆ. ಸಮಿತಿಯು ತನ್ನ ಪ್ರಸ್ತಾವಿತ ಕಾನೂನನ್ನು 45 ದಿನಗಳ ಅವಧಿಯಲ್ಲಿ ರಚಿಸಲಿದೆ. ಅರ್ಕಾರದ ಅಧಿಸೂಚನೆಯ ಪ್ರಕಾರ ಬಹುಪತ್ನಿತ್ವದ ಹೊರತಾಗಿ, ಸಮಿತಿಯು ಸುಳ್ಳು ಗುರುತಿನ ಮೂಲಕ ಅಂತರ್-ಧರ್ಮೀಯ ವಿವಾಹ ಆಗುವುದು ಮತ್ತು ಬಾಲ್ಯ ವಿವಾಹ ಪಿಡುಗನ್ನು ತೊಡೆದುಹಾಕಲು ಶಾಸನಗಳನ್ನು ರಚಿಸುತ್ತದೆ.
“ಬಹುಪತ್ನಿತ್ವವನ್ನು ನಿಷೇಧಿಸಲು ಮತ್ತು ಸುಳ್ಳು ಗುರುತಿನ ಮೂಲಕ ಅಂತರ್-ಧರ್ಮೀಯ ವಿವಾಹವನ್ನು ತಡೆಯಲು , ಬಾಲ್ಯ ವಿವಾಹದ ವಿಷಯದಲ್ಲಿ ಖಾಜಿಯ ಪಾತ್ರದಂತಹ ಇತರ ಸಂಬಂಧಿತ ಪಿಡುಗನ್ನು ನಿಷೇಧಿಸಲು ಸೂಕ್ತವಾದ ಶಾಸನವನ್ನು ರಚಿಸಲು ಸಮಿತಿಯನ್ನು ಈ ಕೆಳಗಿನ ಸದಸ್ಯರೊಂದಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ರಚಿಸಲಾಗಿದೆ ಎಂದು ಗೆಜೆಟ್ ನೋಟಿಫಿಕೇಷನ್ ತಿಳಿಸಿದೆ.
ಸಮಿತಿಯ ನೇತೃತ್ವವನ್ನು ಅಸ್ಸಾಂನ ಅಡ್ವೊಕೇಟ್ ಜನರಲ್ ಆಗಿರುವ ದೇವಜಿತ್ ಸೈಕಿಯಾ ವಹಿಸಿದ್ದು . ಪೋಲೀಸ್ ಮಹಾನಿರ್ದೇಶಕ ಜಿ.ಪಂ. ಸಿಂಗ್ , ನಳಿನ್ ಕೊಹ್ಲಿ – ಹಿರಿಯ ಹೆಚ್ಚುವರಿ ಅಡ್ವೊಕೇಟ್ ಜನರಲ್, . ರೋಮೆನ್ ಬರುವಾ – ಕಾನೂನು ಇಲಾಖೆ ಕಾರ್ಯದರ್ಶಿ, ಇವರು ಸಮಿತಿ ಸದಸ್ಯರಾಗಿದ್ದು . ಗೃಹ ಇಲಾಖೆಯ ಕಾರ್ಯದರ್ಶಿ ಬಿಸ್ವಜಿತ್ ಪೆಗು ಅವರು ಸಮಿತಿಯ ಕಾರ್ಯದರ್ಶಿ ಆಗಿದ್ದಾರೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 ರ ಪ್ರಕಾರ, ಅಸ್ಸಾಂನಲ್ಲಿ ಸುಮಾರು 2.4% ವಿವಾಹಗಳು ಬಹುಪತ್ನಿತ್ವವನ್ನು ಹೊಂದಿವೆ. ಇಂತಹ ಮದುವೆಯನ್ನು ಒಪ್ಪಿಕೊಳ್ಳುವಲ್ಲಿ ರಾಜ್ಯವು ಹಿಂದೂ ಮತ್ತು ಮುಸ್ಲಿಂ ಮಹಿಳೆಯರ ನಡುವೆ ಗಣನೀಯ ಅಂತರವನ್ನು ಹೊಂದಿದೆ,
ಈ ಹಿಂದೆ, ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಡಿಸೆಂಬರ್ 2023 ರ ವೇಳೆಗೆ ರಾಜ್ಯವು ಬಹುಪತ್ನಿತ್ವದ ಅಂತ್ಯಕ್ಕೆ ಸಾಕ್ಷಿಯಾಗಲಿದೆ ಎಂದು ಘೋಷಿಸಿದ್ದರು. ಸಿಲ್ಚಾರ್ನಲ್ಲಿ ಮಾಧ್ಯಮಗಳೊಂದಿಗೆ ಸಂವಾದದ ಸಂದರ್ಭದಲ್ಲಿ, ಸಿಎಂ ಶರ್ಮಾ ಅವರು , “ಕರಡು ಸಿದ್ಧಪಡಿಸುತ್ತಿದೆ, ಮತ್ತು ಡಿಸೆಂಬರ್ ವೇಳೆಗೆ ಅಸ್ಸಾಂನಲ್ಲಿ ಬಹುಪತ್ನಿತ್ವದ ಅಂತ್ಯ ಮತ್ತು ಬಾಲ್ಯ ವಿವಾಹಗಳ ಕುರಿತು ಸೆಪ್ಟೆಂಬರ್ 15 ರ ನಂತರ ರಾಜ್ಯವು ಮತ್ತೊಂದು ಸುತ್ತಿನ ಬೆಳವಣಿಗೆ ಆಗಲಿದೆ ಎಂದು ಹೇಳಿದರು.
ಅವರ ಘೋಷಣೆಗೆ ಅನುಗುಣವಾಗಿ, ರಾಜ್ಯ ಸರ್ಕಾರವು ಈ ವಿಷಯವನ್ನು ಪರಿಶೀಲಿಸಲು ತಜ್ಞರ ಸಮಿತಿಯನ್ನು ರಚಿಸಿದೆ. ಸಮಿತಿಯು ತನ್ನ ವರದಿಯಲ್ಲಿ, ರಾಜ್ಯದಲ್ಲಿ ಬಹುಪತ್ನಿತ್ವವನ್ನು ನಿಷೇಧಿಸುವ ಕಾನೂನನ್ನು ಜಾರಿಗೊಳಿಸಲು ರಾಜ್ಯ ವಿಧಾನಸಭೆಯು ಶಾಸಕಾಂಗ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದೆ. ಈ ಹಿಂದೆ ಇದೇ ವಿಷಯಕ್ಕೆ ಸಂಬಂದಿಸಿದಂತೆ ನ್ಯಾಯಮೂರ್ತಿ (ನಿವೃತ್ತ) ರೂಮಿ ಫೂಕನ್ ನೇತೃತ್ವದ ನಾಲ್ಕು ಸದಸ್ಯರ ಸಮಿತಿಯು ವರದಿಯನ್ನು ಅವರಿಗೆ ಹಸ್ತಾಂತರಿಸಿದ ನಂತರ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಈ ವಿಷಯವನ್ನು ತಿಳಿಸಿದರು.
ಮುಂಬರುವ ಸೆಪ್ಟೆಂಬರ್ನಲ್ಲಿ ನಡೆಯಲಿರುವ ಶರತ್ಕಾಲದ ಅಧಿವೇಶನದಲ್ಲಿ ಅಥವಾ ಮುಂದಿನ ವರ್ಷದ ಬಜೆಟ್ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸುವ ಕುರಿತು ತಮ್ಮ ಸರ್ಕಾರ ಚಿಂತಿಸುತ್ತಿದೆ ಎಂದು ಹೇಳಿದ್ದರೂ, ಈ ವರ್ಷವೇ ಮಸೂದೆಯನ್ನು ಅಂತಿಮಗೊಳಿಸಲಾಗುವುದು ಎಂದು ಬಿಸ್ವಾ ಶರ್ಮ ಅವರು ಖಚಿತಪಡಿಸಿದರು.