ಪ್ರತಿವರ್ಷ ಅಗಸ್ಟ್ 12ರಂದು ‘ಗ್ರಂಥಪಾಲಕರ ದಿನ’ ಆಚರಿಸಲಾಗುತ್ತದೆ, ಅಂದು ಎಂಬ ಗೌರವಕ್ಕೆ ಪಾತ್ರರಾಗಿರುವ ಎಸ್.ಆರ್.ರಂಗನಾಥ್ ಅವರ ಜನ್ಮದಿನ, `ಭಾರತದಲ್ಲಿ ಗ್ರಂಥಾಲಯಗಳ ಸ್ಥಾಪನೆ ಮತ್ತು ಅವುಗಳ ಅಭಿವೃದ್ಧಿಗೆ ಚಳವಳಿಯ ಸ್ವರೂಪ ನೀಡಿದವರು ರಂಗನಾಥರವರು.
ರಂಗನಾಥನ್ ಅವರು ಗ್ರಂಥಾಲಯ ವಿಜ್ಞಾನದಲ್ಲಿ ಶಿಕ್ಷಣ ಪಡೆದವರಲ್ಲ. ಅಂದು ಗ್ರಂಥಾಲಯ ಎನ್ನುವುದು ಶಾಸ್ತ್ರೀಯವಾಗಿ ಅಧ್ಯಯನ ಮಾಡುವ ವಿಷಯವೂ ಆಗಿರಲಿಲ್ಲ. ಗಣಿತದಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದ ಅವರು, ಮದ್ರಾಸ್ ವಿಶ್ವವಿದ್ಯಾಲಯದಲ್ಲಿ 1924ರಲ್ಲಿ ಗ್ರಂಥಪಾಲಕರಾಗಿ ನಿಯುಕ್ತಿಗೊಳ್ಳುವುದರೊಂದಿಗೆ ಗ್ರಂಥಾಲಯ ಕ್ಷೇತ್ರವನ್ನು ಪ್ರವೇಶಿಸಿದರು. ಪರಿಣಾಮವಾಗಿ, ಆ ವರ್ಷವನ್ನು ಗ್ರಂಥಾಲಯ ಕ್ಷೇತ್ರದಲ್ಲಿ ಒಂದು ಚಾರಿತ್ರಿಕ ಘಟನೆಗೆ ಕಾರಣವಾದ ವರ್ಷವೆಂದು ಉಲ್ಲೇಖಿಸಲಾಗಿದೆ.
ಅರೆಕಾಲಿಕ ಉಪನ್ಯಾಸಕರಾಗಿದ್ದಾಗ ವಿದ್ಯಾರ್ಥಿಗಳ ಅದರ ಮತ್ತು ಗೌರವಕ್ಕೆ ಪಾತ್ರರಾಗಿದ್ದ ರಂಗರಾಜನ್ ಅವರಿಗೆ, ಆರಂಭದಲ್ಲಿ ಗ್ರಂಥಪಾಲಕ ಹುದ್ದೆ ನೀರಸ ಎನಿಸಿತ್ತು, ತಾವು ಮೊದಲು ಬೋಧಿಸುತ್ತಿದ್ದ ಕಾಲೇಜಿನ ಪ್ರಾಚಾರ್ಯರಲ್ಲಿ ಬೇಸರವನ್ನು ಹೇಳಿ ಇಂದು, ಕಾಯಂ ಹುದ್ದೆಗೆ ರಾಜೀನಾಮೆ ನೀಡಿ ಹಿಂದಿನ ಹುದ್ದೆಗೇ ಹಿಂದಿರುಗಲು ಬಯಸಿದರು. ಪ್ರಾಚಾರ್ಯರಾದ ಮಡಂಕನ್ ಅವರು ವಿಶ್ವವಿದ್ಯಾಲಯದ ಮೂಲಕ ರಂಗನಾಥನ್ ಅವರನ್ನು ತರಬೇತಿಗೆಂದು ಇಂಗ್ಲೆಂಡಿಗೆ ಕಳುಹಿಸಿ, ಭಾರತಕ್ಕೊಬ್ಬ ಗ್ರಂಥಾಲಯ ಚಳವಳಿಯ ರೂವಾರಿ ದೊರೆಯುವಂತೆ ಮಾಡಿದರು.
ಲಂಡನ್ನ ಸ್ಕೂಲ್ ಆಫ್ ಲೈಬ್ರರಿಯನ್ಫ್ ನಲ್ಲಿ ರ೦ಗನಾಥ ತರಬೇತಿ ಪಡೆದರು. ಇಂಗ್ಲೆಂಡ ನಲ್ಲಿ ನೂರಾರು ಗ್ರಂಥಾಲಯಗಳನ್ನುನೋಡಿದ ಅವರಿಗೆ ಭಾರತ ಮತ್ತು ವಿದೇಶದಲ್ಲಿನ ಗ್ರಂಥಾಲಯ ಗಳ ನಡುವಿನ ವ್ಯತ್ಯಾಸದ ಅರಿವಾಯಿತು, ಅಲ್ಲಿನ ಓದುಗ ಸ್ನೇಹಿ ಕಟ್ಟಡಗಳು, ಗ್ರಂಥಪಾಲಕರ ಸೇವೆ ಪುಸ್ತಕಗಳು ಎಲ್ಲವನ್ನೂ ವೀಕ್ಷಿಸಿದ ಅವರು, ಭಾರತದಲ್ಲಿ ತಾವು ಮಾಡಬೇಕಾದ ಯೋಜನೆಗಳ ನೀಲನಕ್ಷೆಯನ್ನ ಲಂಡನ್ನಲ್ಲಿ ಇರುವಾಗಲೇ ಸಿದ್ಧಪಡಿಸಿಕೊಂಡರು. ಭಾರತಕ್ಕೆ ಮರಳಿ ಮುಂದಿನ ನಾಲ್ಕೂವರೆ ದಶಕಗಳ ಕಾಲ ಗ್ರಂಥಾಲಯಗಳ ಸ್ಥಾಪನೆ ಮತ್ತು ಬೆಳವಣಿಗೆಯನ್ನೇ ತಮ್ಮ ಬದುಕಿನ ಧೈಯವಾಗಿಸಿಕೊಂಡರು. ಗ್ರಂಥಾಲಯದ ಆಡಳಿತಕ್ಕೆ ವೈಜ್ಞಾನಿಕ ತಳಹದಿ ಕಟ್ಟಿಕೊಡಲು ರಂಗನಾಥನ್ ಐದು ಸೂತ್ರಗಳನ್ನು ರಚಿಸಿದರು. 1931ರಲ್ಲಿ ರಚನೆಯಾದ ಈ ಸೂತ್ರಗಳು ಸಾರ್ವಕಾಲಿಕ ಮಹತ್ವ ಪಡೆದಿವೆ. ಅವು ಹೀಗಿವೆ: ಗ್ರಂಥಗಳು ಉಪಯೋಗಕ್ಕಾಗಿ ಇವೆ. ಪ್ರತಿಯೊಬ್ಬ ಓದುಗನಿಗೆ ಅವನದೇ ಗ್ರಂಥ. ಪ್ರತಿಯೊಂದು ಗ್ರಂಥಾಲಯ ಬೆಳೆಯುತ್ತಿರುವ ಸಂಸ್ಥೆ ‘ಮಾಹಿತಿಯು ಉಪಯೋಗಕ್ಕಾಗಿ ಇದೆ” ಎಂದು ಹೇಳರಿವುದರ ಮೂಲಕ ರಂಗ ಅವರ ಐದು ಸೂತ್ರಗಳನ್ನು ಪ್ರಸ್ತುತ ದಿನಗಳಲ್ಲೂ ಉಪಯೋಗಿಸಲಾಗಿ ಗ್ರಂಥಾಲಯಯಗಳ ಸೇವೆ ಲಭ್ಯವಾಗುವಂತೆ ಮಾಡಿದ ಪಿತಾಮಹ’ನ ಪಾತ್ರ ಹಿರಿದಾದುದು
ಅವರ ನಿರಂತರ ಪ್ರಯತ್ನದ ಪರಿಣಾಮವಾಗಿ ದೇಶದಲ್ಲಿಗ್ರಂಥಾಲಯಗಳು ಸ್ಥಾಪನೆಯಾದವು. ಗುಣಮಟ್ಟದ ಸುಧಾರಣೆಗಾಗಿ ಅವುಗಳ ಆರ್ಥಿಕ ನೆಲೆಯನ್ನು ಸುಭದ್ರ ಗೊಳಿಸಲು 1949ರಲ್ಲಿ ಪ್ರಥಮ ಬಾರಿಗೆ ಅಂದಿನ ಮದ್ರಾಸ್ ಸರ್ಕಾರಕ್ಕೆ ಸಾರ್ವಜನಿಕ ಗ್ರಂಥಾಲಯ ಕಾಯ್ದೆಯನ್ನು ರಂಗನಾಥನ್ ರೂಪಿಸಿಕೊಟ್ಟರು. ಸರ್ಕಾರವು ಸಾರ್ವಜನಿಕ ತೆರಿಗೆಯಿಂದ ವಸೂಲಾಗುವ ಹಣದಲ್ಲಿ ಇಂತಿಷ್ಟು ಪ್ರಮಾಣದ ಹಣವನ್ನು ಸಾರ್ವಜನಿಕ ಗ್ರಂಥಾಲಯಗಳ ಅಭಿವೃದ್ಧಿಗಾಗಿ ವಿನಿಯೋಗಿಸಿಕೊಳ್ಳಬೇಕೆಂದು ಈ ಕಾಯ್ದೆಯಲ್ಲಿ ಹೇಳಲಾಗಿದೆ. ಇಂದು ದೇಶದ ಅನೇಕ ರಾಜ್ಯಗಳಲ್ಲಿ ಸಾರ್ವಜನಿಕ ಗ್ರಂಥಾಲಯ ಕಾಯ್ದೆ ಜಾರಿಯಲ್ಲಿದೆ.
ಒಟ್ಟಿನಲ್ಲಿ, ನಿರ್ಲಕ್ಷಕ್ಕೆ ಒಳಗಾಗಿದ್ದ. ಒಂದು ಕ್ಷೇತ್ರವನ್ನು ರಂಗನಾಥನ್ ತಮ್ಮ ಸೇವಾ ಮನೋಭಾವ ಹಾಗೂ ಸಂಶೋಧನಾತ್ಮಕ ಗುಣದಿಂದ ಸಮಾಜದ ಮುಖ್ಯವಾಹಿನಿಗೆ ತಂದು ನಿಲ್ಲಿಸಿದರು. ಜನಸಾಮಾನ್ಯ ರಿಗೂ ಪುಸ್ತಕಗಳು ಓದಲು ದೊರೆಯುವಂತೆ ಮಾಡಿ ಆ ಮೂಲಕ ಸ್ವಪ್ನ ಮತ್ತು ಸಾಂಸ್ಕೃತಿಕ ಸಮಾಜದ ನಿರ್ಮಾಣಕ್ಕೆ ಕಾರಣರಾದರು.