ಇತ್ತೀಚೆಗೆ ಆಪರೇಷನ್ ಬ್ಲೂಸ್ಟಾರ್ ವಿರುದ್ಧವಾಗಿ ಖಲಿಸ್ತಾನಿ ಬಂಡುಕೋರರು ಕೆನಡಾದಲ್ಲಿ ನಡೆಸಿದ ಮೆರವಣಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯನ್ನು ಸಂಭ್ರಮಿಸುವ ಟ್ಯಾಬ್ಲೋ ಒಂದು ಪ್ರದರ್ಶನಗೊಂಡಿತ್ತು. ಕೆನಡಾದಲ್ಲಿ ಖಲಿಸ್ತಾನ ಪರ ಚಟುವಟಿಕೆಗಳು ನಡೆಯುತ್ತಿರುವ ಇದೇ ಮೊದಲಲ್ಲ. ಇದಕ್ಕಿಂತಲೂ ಮುಂಚೆ ಹಲವು ಬಾರಿ ಇಂತಹ ಘಟನೆಗಳು ನಡೆದಿದ್ದವು. ಇಷ್ಟೇಲ್ಲ ಭಾರತ ವಿರೋಧಿ ಚಟುವಟಿಕೆಗಳು ನಡೆದಿದ್ದರು ಕೂಡ ಅಲ್ಲಿನ ಅಧ್ಯಕ್ಷ ಜಸ್ಟಿನ್ ಟ್ರುಡೊ ಇದುವರೆಗೂ ಧ್ವನಿ ಎತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಕೆನಡಾದ ಆಂತರಿಕ ರಾಜಕೀಯ
2019ರಲ್ಲಿ ನಡೆದ ಚುನಾವಣೆಯಲ್ಲಿ ಟ್ರುಡೋ ಲಿಬರಲ್ ಪಾರ್ಟಿ 157 ಸೀಟುಗಳನ್ನು ಪಡೆದುಕೊಂಡಿತಾದರೂ ಸಂಪೂರ್ಣ ಬಹುಮತ ಪಡೆಯಲಾಗಲಿಲ್ಲ. ಆದರಿಂದ ಟ್ರುಡೊ ಮ್ಯಾಜಿಕ್ ನಂಬರ್ 170 ತಲುಪಲು ಕನಿಷ್ಠ 13 ಶಾಸಕರ ಬೆಂಬಲ ಬೇಕಾಗಿತ್ತು ಆ ಸಮಯದಲ್ಲಿ ಜಗ್ಮೀತ್ ಸಿಂಗ್ ನೇತೃತ್ವದ ನ್ಯೂ ಡೆಮಾಕ್ರಟಿಕ್ ಪಾರ್ಟಿಯು ತನ್ನ 24 ಸೀಟುಗಳ ಬೆಂಬಲದೊಂದಿಗೆ ಟ್ರುಡೊ ಸರ್ಕಾರವನ್ನು ರಕ್ಷಿಸಿತ್ತು.
ಚುನಾವಣೆಯ ನಂತರ ಟ್ರುಡೊ ಮತ್ತು ಜಗ್ಮೀತ್ ಸಿಂಗ್ ಒಂದು ಒಪ್ಪಂದಕ್ಕೆ ಸಹಿ ಹಾಕಿದ್ದು, ಇದು 2025ರವರೆಗೆ ಜಾರಿಯಲ್ಲಿರುತ್ತದೆ. ಈ ಒಪ್ಪಂದವು ಇವರ ಸಂಬಂಧವನ್ನು ಗಟ್ಟಿಗೊಳಿಸಿದೆ. ಟ್ರುಡೊ ವಿರುದ್ದ ವಿಪಕ್ಷಗಳು ಟೀಕೆಗಳು ಮಾಡಿದ್ದ ಸಂದರ್ಭಗಳಲ್ಲಿ ಸಿಂಗ್ ಟ್ರುಡೊ ಪರ ಬೆಂಬಲಕ್ಕೆ ನಿಂತಿದ್ದರು ಮಾತ್ರವಲ್ಲದೇ ಅನೇಕ ಸಂದರ್ಭದಲ್ಲಿ ಸರ್ಕಾರ ಮುಜುಗರಕ್ಕೆ ಒಳಗಾಗುವ ಸರ್ಕಾರವನ್ನು ರಕ್ಷಿಸಿದ್ದರು. ಹೀಗೆ ಟ್ರುಡೋ ಮತ್ತು ಜಗ್ಮೀತ್ ಸಿಂಗ್ ಸಂಬಂಧ ಉತ್ತಮವಾಗಿರುವುದರಿಂದ ಜಗ್ಮೀತ್ ಸಿಂಗ್ ಭಾರತ ವಿರುದ್ಧ ಖಲಿಸ್ತಾನ ಪರ ಚಟುವಟಿಕೆಗಳನ್ನು ತೀವ್ರಗೊಳಿಸಿದ್ದಾನೆ. ಇತ್ತೀಚೆಗೆ ನಡೆದ ಅಮೃತ್ಪಾಲ್ ಪ್ರಕರಣದಲ್ಲೂ ಜಗ್ಮೀತ್ಸಿಂಗ್ ಅಮೃತ್ಪಾಲ್ಪರ ನಿಂತಿದ್ದ. ಅಷ್ಟು ಮಾತ್ರವಲ್ಲದೇ ಇತನ ತಮ್ಮ ಗುರ್ರತನ್ ಸಿಂಗ್ಗೆ ಖಲಿಸ್ತಾನ ಬೆಂಬಲಿಗರು ಮತ್ತು ಕಾಶ್ಮೀರ ಪ್ರತ್ಯೇಕತವಾದಿಗಳ ಜೊತೆ ನಂಟಿರುವುದಾಗಿ ಮಾಧ್ಯಮಗಳು ವರದಿ ಮಾಡಿದ್ದವು.
ಜಗ್ಮೀತ್ ಸಿಂಗ್ ಬೆಂಬಲದೊಂದಿಗೆ ನಿಂತಿರುವ ಸರ್ಕಾರವನ್ನು ರಕ್ಷಿಸಿಕೊಳ್ಳುವ ಸಲುವಾಗಿ ಟ್ರುಡೊ ಖಲಿಸ್ತಾನ ಬಂಡುಕೋರರು ಭಾರತದ ವಿರುದ್ಧ ಕೆನಡಾದಲ್ಲಿ ನಡೆಸುತ್ತಿರುವ ಯಾವುದೇ ಚಟುವಟಿಕೆಗಳಿಗೆ ಟ್ರುಡೊ ಧ್ವನಿ ಎತ್ತುತ್ತಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಇತ್ತೀಚಿಗೆ ಈ ಸಂಬಂಧ ಪ್ರತಿಕ್ರಿಯಿಸಿರುವ ನೀಡುವ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಸಿಖ್ ಸಮುದಾಯದ ಮತಗಳನ್ನು ಅವಲಂಬಿಸಿರುವ ಕಾರಣ ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಲು ಅವರು ಸಿದ್ಧರಿಲ್ಲಎಂದು ಹೇಳುತ್ತಿರುವುದು ತಪ್ಪು. ಕೆನಡಾ ಯಾವಾಗಲೂ ಹಿಂಸಾಚಾರ ಮತ್ತು ಹಿಂಸಾಚಾರದ ಬೆದರಿಕೆಗಳನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದೆ. ನಾವು ಯಾವಾಗಲೂ ಭಯೋತ್ಪಾದನೆಯ ವಿರುದ್ಧ ಗಂಭೀರ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಸ್ಪಷ್ಟನೆ ಕೊಡುವ ಪ್ರಯತ್ನವನ್ನು ಟ್ರುಡೊ ಮಾಡಿದ್ದಾರೆ.