ಕಳೆದ ವರ್ಷ ಟ್ವಿಟರ್ಗೆ ಕೆಲವು ಟ್ವೀಟ್ಗಳನ್ನು, ಪೋಸ್ಟ್ಗಳನ್ನು ಡಿಲೀಟ್ ಮಾಡುವಂತೆ ಕೇಂದ್ರ ಸರ್ಕಾರ ಟ್ವಿಟರ್ ಸಂಸ್ಥೆಗೆ ಆದೇಶ ಹೊರಡಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಟ್ವಿಟರ್ ಮತ್ತೆ ಹೈಕೋರ್ಟ್ಗೆ ಮನವಿಯನ್ನೂ ಸಲ್ಲಿಸಿತ್ತು. ಆದರೆ ಈ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದಲ್ಲದೆ, 45 ದಿನಗಳೊಳಗೆ 50 ಲಕ್ಷ ರೂಪಾಯಿ ದಂಡವನ್ನು ಕಟ್ಟುವಂತೆ ಆದೇಶ ಹೊರಡಿಸಿದೆ.
ಇನ್ನು ಈ ದಂಡವನ್ನು ಒಂದು ವೇಳೆ ಪಾವತಿಸದೇ ಇದ್ದರೆ ನಂತರದ ದಿನದಗಳಲ್ಲಿ ಪ್ರತಿದಿನ 5 ಸಾವಿರ ರೂಪಾಯಿ ದಂಡ ವಿಧಿಸುವುದಾಗಿ ನ್ಯಾಯಾಲಯ ಎಚ್ಚರಿಕೆ ನೀಡಿದೆ. ಕೋಮು, ಸೌಹಾರ್ದತೆಗೆ ಸಂಬಂಧಿಸಿದಂತೆ ಟ್ವಿಟರ್ ಪೋಸ್ಟ್ಗಳನ್ನು ಡಿಲೀಟ್ ಮಾಡುವಂತೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದಾಗ, ಟ್ವಿಟರ್ ಪರ ವಕೀಲರು ಪ್ರತಿಯೊಬ್ಬ ಟ್ವಿಟರ್ ಬಳಕೆದಾರರು ಅವರಿಗೆ ಬೇಕಾದಂತೆ ಪೋಸ್ಟ್ಗಳನ್ನು ಹಾಕುತ್ತಾರೆ. ಅದನ್ನು ನಿರ್ಬಂಧಿಸಿದ್ರೆ ಅವರ ಸ್ವಾತಂತ್ರ್ಯಕ್ಕೆ ಧಕ್ಕೆ ಮಾಡಿದಂತಾಗುತ್ತದೆ ಎಂದು ಪ್ರತಿವಾದ ನಡೆಸಿದ್ದರು. ಹಾಗೇನಾದರೂ ಇದ್ದರೆ ಬಳಕೆದಾರರನಿಗೆಯೇ ಆದೇಶ ಹೊರಡಿಸಿ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ವಾದವನ್ನು ಮಂಡಿಸಿದ್ದರು.
ಅಲ್ಲದೇ ಇದನ್ನು ವಿರೋಧಿಸಿ ಕೇಂದ್ರ ಸರ್ಕಾರದ ಕುರಿತು ಟ್ವಿಟರ್ ಸಂಸ್ಥೆ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿತ್ತು. ಆದರೆ ನ್ಯಾಯಾಲಯದಲ್ಲಿ ಟ್ವಿಟರ್ ಪರ ವಾದವನ್ನು ಕೇಳಿದ ನಂತರ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ರವರು ಕೇಂದ್ರ ಸರ್ಕಾರದ ಆದೇಶವನ್ನು ಪಾಲಿಸದೆ ಹೋದರೆ ಟ್ವಿಟರ್ಗೆ 7 ವರ್ಷ ಶಿಕ್ಷೆ ಮತ್ತು ದಂಡವಿದೆ. ಇಷ್ಟೆಲ್ಲಾ ಗೊತ್ತಿದ್ರೂ ಟ್ವಿಟರ್ ಸೂಚನೆಯನ್ನು ಪಾಲಿಸಿಲ್ಲ, ನೀವೇನು ರೈತರಲ್ಲ, ಬಿಲಿಯನ್ ಡಾಲರ್ ಕಂಪನಿ ಎಂದು ಟ್ವಿಟರ್ ಸಂಸ್ಥೆಯ ವಿರುದ್ಧ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ರವರು ಹೇಳಿಕೆ ನೀಡಿದ್ದಾರೆ.
ಮಾಹಿತಿ ತಂತ್ರಜ್ಞಾನ ಸೆ.69 A ಕಾಯ್ದೆಯಡಿ ಆನ್ಲೈನ್, ಸೋಶಿಯಲ್ ಮೀಡಿಯಾಗಳಲ್ಲಿ ಮಾಹಿತಿ ನೀಡುವ ಕಂಪನಿಗಳ ವಿರುದ್ಧ ನಿರ್ಬಂಧ ವಿಧಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದ್ದು, ಇದರಿಂದಲ್ಲೆ ಕೇಂದ್ರ ಸರ್ಕಾರ ಟ್ವಿಟರ್ ಅಕೌಂಟ್ಗಳನ್ನು ಬ್ಲಾಕ್ ಮಾಡುವಂತೆ ಆದೇಶ ಹೊರಡಿಸಿದೆ. ಈ ಆದೇಶದ ವಿರುದ್ಧ ಟ್ವಿಟರ್ ಮರು ಪ್ರಶ್ನಿಸಿತ್ತು. ಆದರೆ ಈ ಪ್ರಶ್ನೆಯನ್ನು ವಿರೋಧಿಸಿ ಹೈಕೋರ್ಟ್, 45 ದಿನಗಳೊಳಗೆ 50 ಲಕ್ಷ ರೂಪಾಯಿ ಪಾತಿಸಬೇಕು. ಒಂದು ವೇಳೆ ಈ ದಿನದೊಳಗೆ ಪಾವತಿಸಿದಿದ್ದರೆ ನಂತರ ಪ್ರತಿದಿನವೂ 5 ಸಾವಿರದಂತೆ ದಂಡ ಬೀಳುತ್ತದೆ ಎಂದು ಟ್ವಿಟರ್ ಸಂಸ್ಥೆಗೆ ಎಚ್ಚರಿಕೆ ನೀಡಿದೆ.