ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಜನ, ಬರೆಯುತ್ತಿದ್ದಾರೆ. ಅನೇಕರು ತಮ್ಮ ಶಾಲಾ ಕಾಲೇಜು ದಿನಗಳ ನೆನಪುಗಳನ್ನು ತಾಜಾ ಮಾಡಿಕೊಂಡು ಆವಾಗಲೂ ಬಸ್ ಪಾಸ್ ಇದ್ದಿದ್ದರಿಂದಲೇ ಓದಲು ಸಾಧ್ಯವಾದದನ್ನು ವರ್ಣಿಸಿದ್ದಾರೆ. ಅದು ನಮ್ಮೆಲ್ಲರ ವಿಷಯದಲ್ಲಿ ನಿಜವೇ, ಸುಳ್ಳಲ್ಲ. ಆದರೆ ಆ ಕಾಲದ ಪಠ್ಯಪುಸ್ತಕ ಮತ್ತು ಈ ಕಾಲದ ಪಠ್ಯಪುಸ್ತಕಕ್ಕೆ ತುಂಬಾ ವ್ಯತ್ಯಾಸವಿದೆ ಆ ಕಾಲದ ಪಠ್ಯಪುಸ್ತಕಗಳು ನೈತಿಕ ಮತ್ತು ಸಾಮಾಜಿಕ ವಿಕಸನವನ್ನು ಮಾಡುವಂತಹ ಪಠ್ಯಗಳನ್ನು ಮಂಡಳಿಯವರು ನಿರ್ಮಿಸುತ್ತಿದ್ದರು. ಆದರೆ ಈ ಕಾಲದ ಪರಿಷ್ಕರಣ ಮಂಡಳಿ ಇಸಂ ಗಳ ಮಧ್ಯೆ ಮಕ್ಕಳನ್ನು ತಂದಿಟ್ಟು ತಮ್ಮ ಬೆಳೆಯನ್ನು ಬೇಯಿಸಿಕೊಳ್ಳುತ್ತಿದ್ದಾರೆ ಹಿಂದಿನ ಸರ್ಕಾರ ಮಾಡಿದಂತಹ ಎಲ್ಲಾ ಕಾರ್ಯಗಳನ್ನು ಸ್ಥಗಿತಗೊಳಿಸದೆ ಮುಂದಿನ ಸರಕಾರವು ಅಸ್ತಿತ್ವಕ್ಕೆ ಬರುತ್ತದೆ ಎಂದರೆ ತಪ್ಪಾಗುವುದಿಲ್ಲ ಮೊದಲು ಸರಿಯಾದ ಸಮಯಕ್ಕೆ ಎಲ್ಲ ಶಾಲೆಗಳಲ್ಲಿ ಪಠ್ಯಪುಸ್ತಕ ವಿತರಣೆ ಆಗಲಿ ಅನಂತರ ಅದನ್ನು ಬದಲಾಯಿಸುವ ಬಗ್ಗೆ ವಿಚಾರ ಮಾಡೋಣ ಅದನ್ನು ಬಿಟ್ಟು ಇಂದಿನ ಸರ್ಕಾರ ಮಾಡಿದಂತಹ ಪಠ್ಯಕ್ರಮವನ್ನು ಬದಲಾಯಿಸಿ ತಮಗೆ ಬೇಕಾದ ಪಠ್ಯಗಳನ್ನು ಸೇರ್ಪಡಿಸುವುದು ಎಷ್ಟರಮಟ್ಟಿಗೆ ಸರಿ ?
ಮಹಿಳೆಯರ ಫ್ರೀ ಬಸ್ ಸೌಲಭ್ಯದ ಬಗ್ಗೆ ಆದರೆ ಅದರ ಇನ್ನೊಂದು ಪಾರ್ಶವೂ ಇದೆ ಎನ್ನುವುದನ್ನು ನಾವು ಗಮನಿಸಬೇಕು. ನಮ್ಮ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯು ಯಾವತ್ತೂ ಹೇಳಿಕೊಳ್ಳುವಂಥ ಲಾಭವನ್ನು ಮಾಡಿಲ್ಲ. ಆದರೆ ಸಾರಿಗೆ ಸೌಲಭ್ಯ ಚೆನ್ನಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಉತ್ತಮ ಸ್ಥಿತಿಯಲ್ಲಿರುವ ಬಸ್ಸಗಳಿವೆ. ಈಗ ಸುಮಾರು ಐವತ್ತು ಪ್ರತಿಶತ ಸೀಟುಗಳನ್ನು ಉಚಿತವಾಗಿ ತೆಗೆದುಕೊಂಡು ಹೋಗುವುದರಿಂದ ಸಂಸ್ಥೆಯ ಆದಾಯದಲ್ಲಿ ಗಣನೀಯವಾಗಿ ಇಳಿಕೆಯಾಗುತ್ತದೆ. ನೌಕರರ ಸಂಬಳವನ್ನು ಕೊಡಲು ಕರೋನಾ ಸಮಯದಲ್ಲಿ ಸಾಕಷ್ಟು ಕಷ್ಟಪಟ್ಟಿರುವ ಸಾರಿಗೆ ಸಂಸ್ಥೆ ಈಗ ಇನ್ನೂ ಹೆಚ್ಚು ಕಷ್ಟಕ್ಕೊಳಗಾಗುತ್ತೆ. ಬಸ್ಸುಗಳ ಡಿಸೇಲ್, ಸರಿಯಾದ ನಿರ್ವಹಣೆ, ಮತ್ತು ಸಂಬಳ ಎಲ್ಲವನ್ನೂ ಸರಿದೂಗಿಸಿಕೊಂಡು ಸಂಸ್ಥೆಯನ್ನು ನಡೆಸುವುದು ಸುಲಭವಲ್ಲ. ಸಂಬಳ ಬರದಿದ್ದಲ್ಲಿ ನೌಕರರಿಗೆ ಉಚಿತವಾಗಿ ತಿರುಗಾಡುವ ಮಹಿಳೆಯರ ಮೇಲೆ ಕ್ರೋಧವುಂಟಾಗುವುದೂ ಸಾಧ್ಯ.
ಇನ್ನು ವಿದ್ಯಾರ್ಥಿಗಳಿಗೆ ಮೊದಲಿನಿಂದಲೂ ತೀರಾ ಕಡಿಮೆ ಮೊತ್ತಕ್ಕೆ ಹತ್ತು ತಿಂಗಳ ಬಸ್ ಪಾಸ್ ಸಿಗುತ್ತಿತ್ತು. ಬೇಕಿದ್ದರೆ ಅವರಿಗೆ ಸಂಪೂರ್ಣ ಉಚಿತ ಸೇವೆ ಒದಗಿಸಬಹುದಿತ್ತು. ದಿನಾಲೂ ಕೆಲಸಕ್ಕೆ ಹೋಗುವ ಕಾರ್ಮಿಕ ಹೆಣ್ಣುಮಕ್ಕಳಿಗೆ ಕೂಡ ಉಚಿತ ಪ್ರಯಾಣದ ಸೌಲಭ್ಯ ನೀಡಬಹುದಿತ್ತು. ಉಳಿದಂತೆ ಮಹಿಳೆಯರಿಗೆ ದರದಲ್ಲಿ ೨೫ % ರಿಯಾಯಿತಿ ಕೊಡಬಹುದಾಗಿತ್ತು. ಎಲ್ಲರಿಗೂ ಸಂಪೂರ್ಣ ಉಚಿತ ಪ್ರಯಾಣ ಮಾಡುವ ಔಚಿತ್ಯವಾದರೂ ಏನು? ಅದರಿಂದ ರಾಜ್ಯಕ್ಕೆ, ರಾಜ್ಯದ ಅಭಿವೃದ್ಧಿಗೆ ಏನಾದರೂ ಉಪಯೋಗ ಆಗುತ್ತದೆಯೇ?
ಇದೇ ಸ್ಥಿತಿ ವಿದ್ಯುತ್ ನಿಗಮದ್ದೂ ಆಗುತ್ತದೆ. ಹೆಸ್ಕಾಂ, ಮೆಸ್ಕಾಂ, ಬೆಸ್ಕಾಂಗಳು ಉಚಿತ ವಿದ್ಯುತ್ ಕೊಟ್ಟರೆ ವಿದ್ಯುತ್ ತಯಾರಿಕಾ ಘಟಕಗಳಿಗೆ ನೀಡಲು ಎಲ್ಲಿಂದ ದುಡ್ಡು ಹೊಂದಿಸಬೇಕು? ಸಂಬಳ, ಸಾರಿಗೆ ಭತ್ಯೆಗಳನ್ನು ಹೇಗೆ ನಿಭಾಯಿಸಬೇಕು? ಸರಿಯಾದ ಸಮಯಕ್ಕೆ ಸಂಬಳ ಆಗದೇ ಹೋದಲ್ಲಿ ನೌಕರರು ಫ್ರಸ್ಟರೇಟ್ ಆಗುತ್ತಾರೆ.
ಖಂಡಿತ ಗಂಭೀರವಾಗಿ ವಿಚಾರ ಮಾಡಬೇಕಿದೆ.