ಇಂದಿನ ದಿನಗಳಲ್ಲಿ ಹಿಂದೂ ದೇವಾಲಯಗಳ ಡಿಜಿಟಲೀಕರಣವು ಬೆಳೆಯುತ್ತಿರುವ ಪ್ರವೃತ್ತಿಯಾಗಿದೆ, ಇದು ಜನರ ಧಾರ್ಮಿಕ ಆಚರಣೆಗಳು ಮತ್ತು ನಂಬಿಕೆ ವಿಶ್ವಾಸಕ್ಕೆ ಹೆಚ್ಚು ಮಹತ್ವ ನೀಡುವಲ್ಲಿ ಸಹಕಾರಿಯಾಗಿದೆ.ಡಿಜಿಟಲ್ ರೂಪದಲ್ಲಿ ಲೈವ್ ದರ್ಶನಗಳು, ಆನ್ಲೈನ್ ಪೂಜಾ ಮತ್ತು ಸೇವಾ ಬುಕಿಂಗ್, ಇ-ಮಾರ್ಕೆಟಿಂಗ್ ಮತ್ತು ಇತ್ಯಾದಿ. ವಿಶೇಷವಾಗಿ ಕೋವಿಡ್ -19 ಸಾಂಕ್ರಾಮಿಕ ರೋಗದಂತಹ ಅನಿವಾರ್ಯ ಸಂದರ್ಭದಲ್ಲಿ ಹೆಚ್ಚು ಉಪಯುಕ್ತವಾಗಿ ಕಂಡು ಬಂದಿತ್ತು.
ಕೆಲವೊಂದು ಪ್ರಸಿದ್ಧ ಮಠ ಮಂದಿರಗಳಿಗೆ ಹೋಲಿಸಿದರೆ ದೇವಾಸ್ಥಾನಗಳು ಕೊಂಚ ನಿಧಾನಕ್ಕೆ ಡಿಜಿಟಲ್ ರೂಪಕ್ಕೆ ಕಾಲಿಟ್ಟಿದ್ದೆ. ಈ ಸರದಿಯಲ್ಲಿ ಈಗ ಆನ್ ಲೈನ್ ಡಿಜಿಟಲ್ ಪೇಮೆಂಟ್ ಸಂಸ್ಥೆಗಳು ಕೂಡ ತನ್ನ ವ್ಯವಹಾರವನ್ನು ವಿಸ್ತಾರಿಸುತ್ತಿದೆ.
ಇದೀಗ ಸರ್ಕಾರದ ಸಾಮ್ಯದಲ್ಲಿರುವ ಪುರಿ ಜಗನ್ನಾಥ ದೇವಸ್ಥಾನ ಡಿಜಿಟಲ್ ಆಗುತ್ತಿದೆ. ರಥಯಾತ್ರೆಯ ಸಂದರ್ಭದಲ್ಲಿ ಪುರಿ ಜಗನ್ನಾಥ ದೇವಸ್ಥಾನದಲ್ಲಿ ಡಿಜಿಟಲ್ ದೇಣಿಗೆಗಾಗಿ ಭಕ್ತರಿಗೆ ಪೇಟಿಎಂ ಸಂಸ್ಥೆಯು ಅವಕಾಶ ಮಾಡಿಕೊಡುತ್ತಿದೆ.
ರಥಯಾತ್ರೆಯ ಸಂದರ್ಭದಲ್ಲಿ, ಕಂಪನಿಯು ಜೂನ್ 25 ರವರೆಗೆ ಪೇಟಿಎಂ ಅಪ್ಲಿಕೇಶನ್ ಮೂಲಕ ದೇಣಿಗೆ ನೀಡುವ ಆಯ್ದ ಭಕ್ತರಿಗೆ ವಿಐಪಿ ದರ್ಶನವನ್ನು ನೀಡುತ್ತಿದೆ. ಜೂನ್ 25 ರಂದು ಘೋಷಿಸಲಾಗುವ ಅದೃಷ್ಟಶಾಳಿ ಬಳಕೆದಾರರಿಗೆ ಜೂನ್ 28ರ ವಿಐಪಿ ದರ್ಶನ ಭಾಗ್ಯವನ್ನು ಒದಗಿಸಲಿದೆ.
ಪೇಟಿಎಂ ಬ್ರಾಂಡ್ನ ಮಾಲೀಕತ್ವ ಹೊಂದಿರುವ ಒನ್ 97 ಕಮ್ಯುನಿಕೇಷನ್ಸ್ ಲಿಮಿಟೆಡ್ (ಒಸಿಎಲ್) ಮಂಗಳವಾರ ಪುರಿ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಪೇಟಿಎಂ ಯುಪಿಐ ಮತ್ತು ಪೇಟಿಎಂ ಯುಪಿಐ ಲೈಟ್ ಬಳಸಿ ಅದರ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ದೇಣಿಗೆ ನೀಡಲು ಅನುವು ಮಾಡಿಕೊಡುತ್ತಿದೆ ಎಂದು ಹೇಳಿದೆ.
ಡಿಜಿಟಲ್ ದೇಣಿಗೆಗಳನ್ನು ಸುಲಭ ಮತ್ತು ಅನುಕೂಲಕರವಾಗಿಸುವಲ್ಲಿ ಪೇಟಿಎಂ ಪ್ರಮುಖ ಮತ್ತು ಮಹತ್ವದ ಪಾತ್ರ ವಹಿಸಿದೆ. ಪೇಟಿಎಂ ಸೂಪರ್ ಆಪ್ ನ ‘ಭಕ್ತಿ’ ವಿಭಾಗದಿಂದ ಭಾರತದಾದ್ಯಂತದ ಭಕ್ತರು ಪುರಿಯ ಶ್ರೀ ಜಗನ್ನಾಥ ದೇವಸ್ಥಾನಕ್ಕೆ ದೇಣಿಗೆ ನೀಡಬಹುದು.
ಡಿಜಿಟಲೀಕರಣದ ಹಾದಿಯಲ್ಲಿ ಒಂದು ಹೆಜ್ಜೆ ಮುಂದಿಟ್ಟ ಭಾರತೀಯ ದೇವಸ್ಥಾನಗಳು ಭಕ್ತರಿಗೆ ಸುಲಭ ಹಾಗೂ ಸುಗಮ ದರ್ಶನದ ಹಾದಿಯೊಂದನ್ನು ನೀಡಿದೆ. ವಿಐಪಿ ದರ್ಶನಕ್ಕೆ ಅವಕಾಶ ಪಡೆಯಲಿರುವ ಭಕ್ತರು ತಮ್ಮೊಂದಿಗೆ ಮೂರು ಜನ ಸದಸ್ಯರನ್ನು ಕರೆದುಕೊಂಡು ಹೋಗಬಹುದಾಗಿದೆ. ಧಾರ್ಮಿಕ ನೆಲೆಯಲ್ಲಿ ವಿಶೇಷತೆಯನ್ನು ಹೊಂದಿರು ಪುರಿ ಜಗನ್ನಾಥ ದೇವಸ್ಥಾನ ದಲ್ಲಿ ಈ ಹೊಸ ಪ್ರಯೋಗವು ಭಕ್ತರಿಗೆ ಸಾರ್ಥಕತೆಯನ್ನು ನೀಡಲಿ.