ಡ್ರೈ ಫ್ರೂಟ್ಸ್ ಗಳಲ್ಲಿ ಅತ್ಯಂತ ಪ್ರಮುಖವಾದದ್ದು ಈ ಒಣದ್ರಾಕ್ಷಿ. ಒಣದ್ರಾಕ್ಷಿ ಎಂದಾಗ ನಮಗೆ ನೆನಪಾಗುವುದು ಸಿಹಿಪದಾರ್ಥಗಳ ರುಚಿ ಹೆಚ್ಚಿಸಲು ಬಳಸಲ್ಪಡುವ ಒಣಫಲ ಎಂದೇ ನಮ್ಮಲ್ಲಿ ಹೆಚ್ಚಿನವರು ಪರಿಗಣಿಸಿದ್ದಾರೆ. ಆದರೆ ಆರೋಗ್ಯ ತಜ್ಞರ ಪ್ರಕಾರ ಒಣ ದ್ರಾಕ್ಷಿಯಲ್ಲಿ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ.
ಒಣದ್ರಾಕ್ಷಿ ಹಣ್ಣುಗಳು ನೋಡಲು ತುಂಬಾ ಸಣ್ಣದಾಗಿದ್ದರೂ ಅದರಲ್ಲಿ ಇರುವಂತಹ ಪೋಷಕಾಂಶಗಳು ಅತ್ಯಧಿಕ ಮಟ್ಟದ್ದಾಗಿರುತ್ತದೆ. ಒಣದ್ರಾಕ್ಷಿಯಲ್ಲಿ ಉನ್ನತ ಮಟ್ಟದ ನಾರಿನಾಂಶ, ಕಬ್ಬಿನಾಂಶ, ಕ್ಯಾಲ್ಸಿಯಂ ಮತ್ತು ಇತರ ಕೆಲವೊಂದು ಪೋಷಕಾಂಶಗಳು ಇವೆ. ಮತ್ತು ಕೂದಲು ಹಾಗೂ ಚರ್ಮದ ಕಾಂತಿ ವೃದ್ಧಿಸುವಲ್ಲಿಯು ಪ್ರಮುಖ ಪಾತ್ರ ವಹಿಸುವುದು ಈ ಒಣದ್ರಾಕ್ಷಿ.
ಅದರಲ್ಲೂ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಪ್ರಥಮ ಆಹಾರವಾಗಿ ಒಣದ್ರಾಕ್ಷಿ ನೆನೆಸಿಟ್ಟ ನೀರನ್ನು ಸೇವಿಸುವುದರಿಂದ ಆರೋಗ್ಯಕ್ಕೆ ದುಪ್ಪಟ್ಟು ಲಾಭಗಳಿವೆ ಅವುಗಳು ಯಾವುದೆಂದರೆ:
* ಕರುಳುಗಳ ಸ್ವಚ್ಛಕಾರಕವಾಗುತ್ತದೆ.
ಆರೋಗ್ಯ ತಜ್ಷರ ಪ್ರಕಾರ ಒಣದ್ರಾಕ್ಷಿ ನೆನೆಸಿಟ್ಟ ನೀರನ್ನು ಸತತವಾಗಿ ದಿನ ನಿತ್ಯ ಸೇವಿಸಿದರೆ ಕರುಳುಗಳ ಸ್ವಚ್ಛವಾಗುತ್ತದೆ.
*ಹೃದಯ ಮತ್ತು ಯಕೃತ್ನ ಸಮಸ್ಯೆಗೆ ರಾಮಬಾಣ.
ಒಣದ್ರಾಕ್ಷಿ ನೆನೆಸಿಟ್ಟ ನೀರನ್ನು ನಾಲ್ಕು ದಿನಗಳ ಕಾಲ ಸೇವಿಸಿದರೆ ಹೃದಯ ಮತ್ತು ಯಕೃತ್ ನ ತೊಂದರೆಗಳು ಇಲ್ಲವಾಗುತ್ತವೆ.
*ಜೀರ್ಣಕ್ರಿಯೆಗೆ ಒಳ್ಳೆಯದು.
ದಿನನಿತ್ಯ ಖಾಲಿ ಹೊಟ್ಟೆಗೆ ಒಣ ದ್ರಾಕ್ಷಿ ನೆನೆಸಿಟ್ಟ ನೀರಿನ ಸೇವನೆಯಿಂದ ರಕ್ತ ಶುದ್ದೀಕರಣಗೊಳ್ಳುವ ಜೊತೆಗೇ ಯಕೃತ್ನ ಕಾರ್ಯ ಕ್ಷಮತೆಯೂ ಉತ್ತಮಗೊಳ್ಳುವ ಮೂಲಕ ಜೀರ್ಣಶಕ್ತಿಯೂ ಉತ್ತಮಗೊಳ್ಳುತ್ತದೆ ಎಂದು ಹೇಳಲಾಗುತ್ತದೆ.
*ಹಿಮೋಗ್ಲೋಬಿನ್ ಮಟ್ಟ ಹೆಚ್ಚುತ್ತದೆ.
ಪ್ರತಿದಿನ ಖಾಲಿ ಹೊಟ್ಟೆಗೆ ನೆನೆಸಿಟ್ಟ ಒಣದ್ರಾಕ್ಷಿ ನೀರಿನ ಸೇವನೆಯಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚುವುದರ ಜೊತೆಗೆ ರಕ್ತದ ಶುದ್ಧೀಕರಣ ಸಾಧ್ಯವಾಗುತ್ತದೆ.