ಭುವನೇಶ್ವರ: ಕಳೆದ ಜೂನ್ ೬ ರಂದು ಓಡಿಸಾ ದ ಬಾಲಸೋರ್ ನಲ್ಲಿ ನಡೆದಿದ್ದ ತ್ರಿವಳಿ ರೈಲು ದುರಂತದಲ್ಲಿ290 ಕ್ಕೂ ಅಧಿಕ ಮಂದಿ ಮೃತರಾಗಿದ್ದು ಇದರ ತನಿಖೆಯನ್ನು ಸಿಬಿಐ ಚುರುಕುಗೊಳಿಸಿದೆ.
ಈ ಪ್ರಕರಣದ ತನಿಖೆಯಲ್ಲಿ ಮಹತ್ವದ ಪ್ರಗತಿ ಸಾಧಿಸಿರುವ ಸಿಬಿಐ ಸೊರೊ ಸೆಕ್ಷನ್ ಸಿಗ್ನಲ್ ಜೂನಿಯರ್ ಇಂಜಿನಿಯರ್ ಅಮೀರ್ ಖಾನ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿತ್ತು. ಪುನಃ ವಿಚಾರಣೆಗೆ ಒಳಪಡಿಸಲು ಸೋಮವಾರ ಸಿಬಿಐ ಅಧಿಕಾರಿಗಳು ಅವರ ಮನೆಗೆ ತೆರಳಿದಾಗ ಬಾಡಿಗೆ ಮನೆಗೆ ಬೀಗ ಜಡಿದು ಅವರ ಇಡೀ ಕುಟುಂಬ ನಾಪತ್ತೆಯಾಗಿರುವುದು , ಕಂಡುಬಂದಿದೆ. ಅವರು ಜೆಇ ಅಮೀರ್ ಖಾನ್ ಅವರ ಮನೆಗೆ ಸೀಲ್ ಮಾಡಿದ್ದಾರೆ.
ಸಿಗ್ನಲ್ ಜೂನಿಯರ್ ಇಂಜಿನಿಯರ್ ಸಿಗ್ನಲಿಂಗ್ ಉಪಕರಣಗಳನ್ನು ಸ್ಥಾಪಿಸುವ, ನಿರ್ವಹಿಸುವ ಮತ್ತು ದುರಸ್ತಿ ಮಾಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ವರದಿಗಳು ಹೇಳುತ್ತವೆ. ಸಿಗ್ನಲ್ಗಳು, ಟ್ರ್ಯಾಕ್ ಸರ್ಕ್ಯೂಟ್ಗಳು, ಪಾಯಿಂಟ್ ಯಂತ್ರಗಳು ಮತ್ತು ಇಂಟರ್ಲಾಕಿಂಗ್ ಸಿಸ್ಟಮ್ಗಳು ಸಿಗ್ನಲಿಂಗ್ ಉಪಕರಣದ ಭಾಗವಾಗಿದೆ. ಜೂನಿಯರ್ ಎಂಜಿನಿಯರ್ ತನ್ನ ವ್ಯಾಪ್ತಿಯಲ್ಲಿ ಪ್ರಯಾಣದ ಉದ್ದಕ್ಕೂ ಸುಗಮ ಮತ್ತು ಸುರಕ್ಷಿತ ಕಾರ್ಯಾಚರಣೆಗಾಗಿ ರೈಲಿನ ಸಂಪೂರ್ಣ ಸಿಗ್ನಲಿಂಗ್ ಅನ್ನು ಪರಿಶೀಲಿಸುವ ಜವಾಬ್ದಾರಿ ಹೊಂದಿರುತ್ತಾನೆ.
290 ಜನರ ಪ್ರಾಣ ಕಳೆದುಕೊಂಡ ಈ ರೈಲು ದುರಂತದ ಹಿಂದೆ ಎಲೆಕ್ಟ್ರಿಕ್ ಇಂಟರ್ಲಾಕಿಂಗ್ ವ್ಯವಸ್ಥೆಯಲ್ಲಿ ಉದ್ದೇಶಪೂರ್ವಕ ಹಸ್ತಕ್ಷೇಪ ಕಾರಣವಾಗಿರಬಹುದು ಎಂದು ರೈಲ್ವೆ ಅಧಿಕಾರಿಗಳು ಶಂಕಿಸಿದ್ದಾರೆ.
ಖುರ್ದದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್ಎಂ) ರಿಂಕೇಶ್ ರಾಯ್ ಮಾಧ್ಯಮಗಳೊಂದಿಗೆ ಮಾತನಾಡಿ “ಮಾರ್ಗವನ್ನು ಹೊಂದಿಸಲಾಗಿದೆಯೇ ಮತ್ತು ಎಲ್ಲವೂ ಸರಿಯಾಗಿದೆಯೇ ಎಂಬ ಎಲ್ಲಾ ಪೂರ್ವ ಷರತ್ತುಗಳನ್ನು ಪೂರೈಸಿದ ನಂತರವೇ ರೈಲುಗಳಿಗೆ ಗ್ರೀನ್ ಸಿಗ್ನಲ್ ಸಿಗುತ್ತದೆ. ಸಣ್ಣ ಸಮಸ್ಯೆ ಇದ್ದರೂ, ತಾಂತ್ರಿಕವಾಗಿ. , ಯಾವುದೇ ಸಂದರ್ಭದಲ್ಲೂ ಹಸಿರು ಸಿಗ್ನಲ್ ಇರುವುದಿಲ್ಲ ಆಗ ಸ್ವಯಂಚಾಲಿತವಾಗಿ ಕೆಂಪು ದೀಪ ಹೊತ್ತಿಕೊಳ್ಳುತ್ತದೆ. ಯಾರಾದರೂ ಅದನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡದ ಹೊರತು ಹಸಿರು ಬಣ್ಣದ ದೀಪ ಹೊತ್ತಿಕೊಳ್ಳುವುದಿಲ್ಲ ಎಂದಿದ್ದಾರೆ.
ಜೂನ್ 6 ರಂದು ರೈಲು ಅಪಘಾತ ಸಂಭವಿಸಿದ 4 ದಿನಗಳ ನಂತರ ಸಿಬಿಐ ತನಿಖೆಯನ್ನು ಪ್ರಾರಂಭಿಸಿತು. ಅಪಘಾತದ ಬಗ್ಗೆ ಸಿಬಿಐ ಎಫ್ಐಆರ್ ಅನ್ನು ದಾಖಲಿಸಿಕೊಂಡಿದೆ. ಮತ್ತು ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಸಿಸ್ಟಮ್ ಟ್ಯಾಂಪರಿಂಗ್ ಆರೋಪಗಳು ಬಂದಾಗ ಸಿಬಿಐ ಈ ವಿಷಯವನ್ನು ಪರಿಶೀಲಿಸುವ ಅಗತ್ಯತೆ ಬಂದಿತು. .
ವಿದ್ಯುನ್ಮಾನ ಇಂಟರ್ಲಾಕಿಂಗ್ ವ್ಯವಸ್ಥೆಯ ಮೂಲಕ ರೈಲಿನ ಸ್ಥಿತಿಯನ್ನು ತಿಳಿಯಬಹುದು, ಇದು ಕಾರ್ಯಾಚರಣೆ ಮತ್ತು ಸುರಕ್ಷತೆಯ ಪ್ರಮುಖ ಭಾಗವಾಗಿದೆ. ಈ ಕಾರ್ಯಾಚರಣೆಯೊಂದಿಗೆ ಉದ್ದೇಶಪೂರ್ವಕ ವಿಧ್ವಂಸಕ ಕೃತ್ಯದ ಬಗ್ಗೆ ರೈಲ್ವೆ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಈ ಅಪಘಾತಕ್ಕೆ ಸಂಬಂಧಪಟ್ಟಂತೆ ರೈಲ್ವೇ ಭದ್ರತೆ ಮತ್ತು ಫೋರೆನ್ಸಿಕ್ ತಜ್ಞರು ಸಿಬಿಐ ಗೆ ತಾಂತ್ರಿಕ ನೆರವು ನೀಡುತಿದ್ದಾರೆ. ಏಕೆಂದರೆ ಸಿಬಿಐ ಈ ಪ್ರಕರಣದಲ್ಲಿ ಆಳವಾಗಿ ತನಿಖೆ ನಡೆಸಲು ತಾಂತ್ರಿಕ ತಜ್ಞರನ್ನು ಹೊಂದಿಲ್ಲ ಎನ್ನಲಾಗಿದೆ.
ವರದಿಗಳ ಪ್ರಕಾರ, ಅಪಘಾತದಲ್ಲಿ ಐವರು ಉದ್ಯೋಗಿಗಳು ಭಾಗಿಯಾಗಿರುವ ಸಾಧ್ಯತೆಯನ್ನು ಸಿಬಿಐ ತನಿಖೆ ನಡೆಸುತ್ತಿದೆ. ಅವರಲ್ಲಿ ಒಬ್ಬರು ಬಹಂಗಾ ಬಜಾರ್ನಲ್ಲಿರುವ ಸ್ಟೇಷನ್ ಮಾಸ್ಟರ್ ಆಗಿದ್ದು ಇತರ ನಾಲ್ವರು ಉದ್ಯೋಗಿಗಳು ಸಿಗ್ನಲ್ ಕರ್ತವ್ಯದ ಜವಾಬ್ದಾರಿಯನ್ನು ಹೊಂದಿದ್ದರು ಮತ್ತು ಅಪಘಾತದ ದಿನದಂದು ಹಾಜರಿದ್ದರು.