ಬಾಗಲಕೋಟೆ: ರಾಜಕೀಯ ಕ್ಷೇತ್ರದಲ್ಲಿ ಯಾರು ಉಳಿತಾರೋ, ಬೀಡುತ್ತಾರೋ ಎಲ್ಲವು ಕಾಲ ನಿರ್ಧಾರ. ಆದರೇ ಜನಪ್ರತಿನಿಧಿಗಳಾಗಿ ಸಲ್ಲಿಸಿದ ಸೇವೆ ಮಾತ್ರ ಅಜರಾಮರವಾಗಿ ಉಳಿಯುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಅತ್ಯುನ್ನತ ಹುದ್ದೆ ಅಲಂಕರಿಸಿದ ಜಿಲ್ಲೆಯ ಮೇರು ವ್ಯಕ್ತಿಯೊಬ್ಬರ ನೆನಪಿನ ಬುತ್ತಿ ಉಳಿಸಲು ಮರಿಮೊಮ್ಮಗ ಮುಂದಾಗಿದ್ದಾರೆ..!!
ಹೌದು, ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ಬಸಪ್ಪ ದಾನಪ್ಪ ಜತ್ತಿ ರಾಜ್ಯದ ಮುಖ್ಯಮಂತ್ರಿ, ವಿವಿಧ ರಾಜ್ಯಗಳಲ್ಲಿ ರಾಜ್ಯಪಾಲರಾಗಿ, ಹಂಗಾಮಿ ರಾಷ್ಟçಪತಿಯಾಗಿ ಸೇವೆ ಸಲ್ಲಿಸಿದ್ದರು. ಜಮಖಂಡಿ ಹಾಗೂ ಅಖಂಡ ವಿಜಯಪುರ ಜಿಲ್ಲೆಯ ಇಂದಿಗೂ ಅವರನ್ನು ಮರೆತಿಲ್ಲ. ಆದರೇ ಮುಂದಿನ ಪೀಳಿಗೆಗೆ ಪರಿಚಯಿಸಲು ಕೆಲಸ ಮಾತ್ರ ಯಾವ ನಾಯಕರು, ಸರ್ಕಾರ ಮಾಡಿಲ್ಲ. ಇದೀಗ ಮರಿಮೊಮ್ಮಗ ದೃವ ಜತ್ತಿ ಹೊಸ ಹೆಜ್ಜೆ ಇಡಲು ಮುಂದಾಗಿದ್ದಾರೆ.
ಹಳೇ ಮನೆಯಲ್ಲಿ ಹೊಸ ಕಳೆ:
ಸಾವಳಗಿಯಲ್ಲಿ ಬಿ.ಡಿ.ಜತ್ತಿ ಅವರ ಮನೆಯಿದೆ. 1980 ದಶಕದ ಬಳಿಕ ಅವರ ಕುಟುಂಬ ಬೆಂಗಳೂರಿಗೆ ವಲಸೆ ಹೋಯಿತು. ಬಳಿಕ ಅವರ ಕುಟುಂಬಸ್ಥರು ಈ ಕಡೆ ಗಮನ ಹರಿಸಿಲ್ಲ. ಪರಿಣಾಮ ಮನೆ ಸಂಪೂರ್ಣ ಪಾಳು ಬಿದ್ದಿದೆ. ಅಲ್ಲಿಯೇ ಜತ್ತಿ ಅವರ ನೆನಪು ಸ್ಥಾಪಿಸಲು ಮ್ಯೂಜಿಯಂ ಮಾಡಲು ಉದ್ದೇಶಿಸಲಾಗಿದೆ. ಬಸವ ತತ್ವದ ಪಾಲಕರಾಗಿದ್ದ ಬಿ.ಡಿ.ಜತ್ತಿ ಓದಿನ ಹವ್ಯಾಸ ಇಟ್ಟುಕೊಂಡಿದ್ದರು. ವಕೀಲರಾಗಿದ್ದ ಅವರು ತಮ್ಮ ಕೊನೆಯ ಉಸಿರು ಇರುವವರೆಗೂ ಪುಸ್ತಕ ಓದುವ ಗೀಳು ಬಿಟ್ಟಿರಲಿಲ್ಲ. ಆ ಎಲ್ಲ ಪುಸ್ತಕ, ವಾಕಿಂಗ್ ಸ್ಟೀಕ್, ತಮ್ಮದೆಯಾದ ವಿವಿಧ ವಸ್ತುಗಳನ್ನು ಇಡಲು ಬಳಸುತ್ತಿದ್ದ ಕಿಟ್ ಇಂದಿಗೂ ಇದೆ. ಅವರ ಬಳಕೆ ಮಾಡುತ್ತಿದ್ದ ವಸ್ತುಗಳನ್ನು ಇರಿಸಿ, ಬಸವ ತತ್ವ ಆಧಾರಿತ ಜತ್ತಿ ನೆನಪು ಬಿಚ್ಚಿಡುವ ಪ್ರಯತ್ನದಲ್ಲಿದೆ ಕುಟುಂಬ.
ಬಿ.ಡಿ.ಜತ್ತಿ ಇತಿಹಾಸ
ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ಬಿ.ಡಿ.ಜತ್ತಿ ಅವರು 1958 ರಿಂದ 1962 ರ ವರೆಗೆ ಮುಖ್ಯಮಂತ್ರಿ ಆಗಿದ್ದರು. ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನದಿಂದ ಶಾಸಕ, ಸಚಿವ, ಮುಖ್ಯಮಂತ್ರಿ, ಗೌರ್ನರ, ಉಪರಾಷ್ಟçಪತಿ, ಹಾಗೂ ಹಂಗಾಮಿ ರಾಷ್ಟçಪತಿ ಹುದ್ದೆಯವರೆಗೂ ಸ್ಥಾನ ಅಲಂಕರಿಸಿದ ಹೆಗ್ಗಳಿಕೆ ಅವರz್ದÁಗಿದೆ. 2002ರಲ್ಲಿ ಅವರು ನಿಧನರಾದರು. ಬಿ.ಡಿ.ಜತ್ತಿ ಅವರಿಗೆ ಮೂವರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ. ಅವರ ಪುತ್ರ ದಾನಪ್ಪ ಜತ್ತಿ ಅವರು 1983 ರಲ್ಲಿ ಜಮಖಂಡಿ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ್ದರಾದರೂ ಸೋಲು ಕಂಡರು. ಆ ಬಳಿಕ ಅವರು ಮತ್ತೆ ಚುನಾವಣೆಗೆ ನಿಂತಿಲ್ಲ.
ಬಿ.ಡಿ.ಜತ್ತಿ ಅವರ ಇನ್ನೊಬ್ಬ ಪುತ್ರ ಅರವಿಂದ ಜತ್ತಿ ಅವರು ಬಸವ ಸಮಿತಿ ಅಧ್ಯಕ್ಷರಾಗಿದ್ದಾರೆ. ಇನ್ನೊಬ್ಬ ಪುತ್ರ ಶಿವಾನಂದ ಜತ್ತಿ ದೆಹಲಿಯಲ್ಲಿ ವಾಸವಾಗಿದ್ದಾರೆ. ಬಿ.ಡಿ.ಜತ್ತಿ ಅವರ ಮೊಮ್ಮಗ 23 ವರ್ಷದ ದೃವ ಜತ್ತಿ (ದಾನಪ್ಪ ಜತ್ತಿ ಅವರ ಪುತ್ರ)ಸದ್ಯ ಕಾಂಗ್ರೆಸ್ ಪಕ್ಷದ ವಕ್ತಾರ, ಎನ್ಐಸಿಯು ಪ್ರಧಾನ ಕಾರ್ಯದರ್ಶಿ. ಪಕ್ಷದ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಆಗಿದ್ದಾರೆ.
ಇವರೆಲ್ಲ ಬೆಂಗಳೂರಲ್ಲಿ ವಾಸ ಇದ್ದಾರೆ. ಬಿ.ಡಿ.ಜತ್ತಿ ಅವರ ಪುತ್ರಿ ವಿಲಾಸ್ವತಿ ಅವರನ್ನು ಕಲಬುರಗಿಯ ಖೂಬಾ ಕುಟುಂಬಕ್ಕೆ ಮದುವೆ ಮಾಡಿ ಕೊಡಲಾಗಿದೆ. ಸಾವಳಗಿ ಗ್ರಾಮದಲ್ಲಿ ಬಿ.ಡಿ.ಜತ್ತಿ ಅವರ ಹಳೇ ಮನೆ ಇದ್ದು, ಅದನ್ನು, ಅದನ್ನು ದುರಸ್ಥಿಗೊಳಿಸಿ, ಅವರ ನೆನಪಿನಲ್ಲಿ ಗ್ರಂಥಾಲಯ, ಮ್ಯೂಜಿಯಂ ಮಾಡುವ ಉದ್ದೇಶ ಹೊಂದಿದ್ದಾಗಿ ದೃವ ಜತ್ತಿ ತಿಳಿಸಿದ್ದಾರೆ.
ತಂದೆ, ತಾತ, ಚಿಕ್ಕಪ್ಪ ರಾಜಕೀಯ ಆಸಕ್ತಿ ಇರಲಿಲ್ಲ. ದಾನಪ್ಪ ಚುನಾವಣೆಗೆ ಸ್ಪರ್ಧೆ ಮಾಡಿ ಸೋಲು ಕಂಡ ಬಳಿಕ ಯಾರು ರಾಜಕೀಯಕ್ಕೆ ಪಾದಾರ್ಪಣೆ ಮಾಡಲಿಲ್ಲ. ಇದೀಗ ದಾನಪ್ಪ ಅವರ ಮೊಮ್ಮಗ(ಚನ್ನಬಸವ ಪುತ್ರ) ದೃವ ಅಂತರಾಷ್ಟಿçÃಯ ರಾಜನೀತಿ ಅಧ್ಯಯನ ಮಾಡಿ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ತಮ್ಮದೆಯಾದ -ಫೌಂಡೇಶನ ಮೂಲಕ ಸಾಮಾಜಿಕ ಸೇವೆ ಸಲ್ಲಿಸುತ್ತಿದ್ದಾರೆ. ಕೋವಿಡ್, ಪ್ರವಾಹ ಸಂದರ್ಭದಲ್ಲಿ ಸಾವಳಗಿ ಗ್ರಾಮಕ್ಕೆ ಭೇಟಿ ನೀಡಿ ಸಹಾಯ ಹಸ್ತ ಚಾಚಿದ್ದಾರೆ. ಮುಖ್ಯವಾಗಿ ಜಮಖಂಡಿ, ತೇರದಾಳ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಸಾಮಾಜಿಕ ಸೇವೆ ಮಾಡುತ್ತಿದ್ದಾರೆ.
ನಮ್ಮ ಮುತ್ತಜ್ಜ ಬಿ.ಡಿ.ಜತ್ತಿ ಉನ್ನತ ಹುದ್ದೆಗೆ ಏರಿದ್ದರು. 1980 ಬಳಿಕ ಬೆಂಗಳೂರಿನಲ್ಲಿ ವಾಸವಾಗಿದ್ದರು. ನಮ್ಮ ಕುಟುಂಬ ಸಾವಳಗಿ ಜೊತೆಗೆ ನಂಟು ಕಳೆದುಕೊಂಡಿತ್ತು, ಇದೀಗ ಮರು ಸ್ಥಾಪಿಸಲಾಗುತ್ತಿದೆ. ನಮ್ಮದೆಯಾದ ಉದ್ಯಮ ಇದೆ. ಅಜ್ಜ ದೊಡ್ಡ ಸ್ಥಾನಕ್ಕೆ ಏರಿದರು ಅಪಾರ ಪ್ರಮಾಣದ ಆಸ್ತಿ ಮಾಡಿಲ್ಲ. ಅವರ ಸೇವೆ ಜನ ಮರೆತಿಲ್ಲ. ಸರಳವಾಗಿ ಬದುಕಿದ್ದರು. ನಾನು ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದೇನೆ. ತೇರದಾಳ, ಜಮಖಂಡಿ ಭಾಗದಲ್ಲಿ ಸಾಮಾಜಿಕ ಸೇವೆ ಮಾಡುತ್ತಿದ್ದೇನೆ. ಕುಟುಂಬ ಬೆಂಗಳೂರಿನಲ್ಲಿ ವಾಸವಾಗಿದೆ. ಜನ ಬಯಸಿದರೇ ಮಾತ್ರ ಚುನಾವಣೆ ರಾಜಕೀಯಕ್ಕೆ ಬರುತ್ತೇನೆ. ಸದ್ಯ ಕಾಂಗ್ರೆಸ್ ಪಕ್ಷದ ಅತ್ಯಂತ ಕಿರಿಯ ವಕ್ತಾರನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಬಿ.ಡಿ.ಜತ್ತಿ ನೆನಪು ಉಳಿಸಲು ಸಾವಳಗಿಯಲ್ಲಿರುವ ಮನೆಗೆ ಹೊಸ ರೂಪ ನೀಡಿ ಮ್ಯೂಜಿಯಂ ಮಾಡಲಾಗುವುದು ಎಂದು ದೃವ ಜತ್ತಿ (ಬಿ.ಡಿ.ಜತ್ತಿ ಮರಿಮೊಮ್ಮಗ) ಹೇಳಿದರು.