ನೀರಿನ ಸುಳಿಯಲ್ಲಿ ಸಿಲುಕಿದರೆ ಈಜಾಡಿ ಬದುಕುಳಿಯಬಹುದು, ಆದರೆ ಸಾಲದ ಸುಳಿಯಲ್ಲಿ ಸಿಲುಕಿದವರು ಹೆಚ್ಚಾಗಿ ದುರಂತ ಅಂತ್ಯ ಕಾಣುತ್ತಾರೆ.
ಹೆಚ್ಚಾಗಿ ನಾವು ರೈತರ ಆತ್ಮಹತ್ಯೆ ಸುದ್ದಿಗಳನ್ನು ಓದಿರುತ್ತೇವೆ. ಮಳೆ ಇಲ್ಲದೆ ಇತ್ತ ಸರಿಯಾದ ಬೆಳೆ ಇಲ್ಲದೆ ಬ್ಯಾಂಕುಗಳಿಂದ ಪಡೆದ ಸಾಲವನ್ನು ಹಿಂದುರಿಗಿಸಲು ಸಾಧ್ಯವಾಗದೆ ನೇಣಿ ಶರಣಾದ ಸಂಗತಿಗಳು ಪದೇ ಪದೇ ನಡೆದಿರುವುದನ್ನು ಸ್ಮರಿಸಬಹುದು.
ಈ ಸಾಲ ಅನ್ನುದು ಮನುಷ್ಯನ ಬದುಕನ್ನು ಕಸಿದುಕೋಳ್ಳುತಿದೆ. ಯಾರು ಕೂಡ ಶೋಕಿಗಾಗಿ ಬ್ಯಾಂಕ್ ಲೋನ್ ತಗೆದುಕೊಳ್ಳುವುದಿಲ್ಲ. ಬದಲಾಗಿ ತಮ್ಮ ಅವಶ್ಯಕತೆಗಾಗಿ ತಗೆದುಕೊಳ್ಳುತ್ತಾರೆ. ರೈತರ ಬೆಳೆ ಬಿತ್ತನೆಯಿಂದ ಹಿಡಿದು ಸಾಮನ್ಯ ಜನರ ಮನೆ, ಮದುವೆ, ಗಾಡಿ,ವಿದ್ಯಾಭ್ಯಾಸ, ಜಮೀನು ತಗೆದು ಕೊಳ್ಳುವಂತಹ ಕನಸಿಗೆ ಜನರು ಹೆಚ್ಚಾಗಿ ಬ್ಯಾಂಕುಗಳ ಸಾಲದ ಮೋರೆ ಹೊಗುತ್ತಾರೆ.
ಇತಿಚೇಗೆಷ್ಟೆ ಮಂಗಳೂರಿನ ಅಶ್ವಿನಿ ಬಂಗೇರ ಎಂಬ ಯುವತಿ ತನ್ನ ಹೊಸ ಮನೆಯಲ್ಲಿ ನೇಣಿಗೆ ಶರಣಾದ ಘಟಣೆ ನಡೆದಿದೆ. 24 ಪುಟದ ಡೆತ್ ನೋಟ್ ಬರೆದು ತಮ್ಮ ಸಾವಿಗೆ ಮುಖ್ಯ ಕಾರಣವನ್ನು ಬರೆದಿದ್ದಾರೆ. ತಾನು ಮನೆ ಖರೀದಿಸಿ ಮೋಸ ಹೋಗಿದ್ದು ಬ್ಯಾಂಕ್ ಅಧಿಕಾರಿಗಳು ಬಂದು ಪೀಡಿಸುತ್ತಿರುವ ಬಗ್ಗೆ ಬರೆದು ಕೊಂಡಿದ್ದಾರೆ.
ಜೂನ್ 3 ರಂದು ಗೃಹ ಪ್ರವೇಶ ಮಾಡಿರುವ ಅಶ್ವಿನಿ ಐದೇ ದಿನಕ್ಕೆ ನೇಣಿಗೆ ಶರಣಾಗಿದ್ದಾರೆ. ಈ ಒಂದು ತಪ್ಪು ನಿರ್ಧಾರದ ಹಿಂದೆ ಆ ಜೀವ ಎಷ್ಟು ನೊಂದಿದೆ ಎಂದು ಊಹಿಸಿಕೊಳ್ಳ ಬಹುದು.
ಸಾಲ ನೀಡುವಾಗ ಆತ್ಮೀಯತೆಯಿಂದ ಮಾತಾನಾಡುವವರು ಪಾವತಿ ಸಂದರ್ಭದಲ್ಲಿ ಮಾತು, ವರ್ತನೆಗಳು ಬೇರೆ ರೀತಿಯಲ್ಲಿರುತ್ತದೆ.
ಸಾಲ ಮಾಡುವವರು ತಮಗೆ ಮರು ಪಾವತಿಗೆ ಸಾಧ್ಯವಾದಷ್ಟೆ ಸಾಲ ಪಡೆಯುವುದು ಉತ್ತಮ. ಜೊತೆಗೆ ಆರ್ಬಿಐ ನಿಯಮಗಳಿಗೆ ಬದ್ಧವಾಗಿ ಸಾಲವನ್ನು ಪಡೆಯುವುದು. ಟೆಲಿಕಾಲರ್ ಮೂಲಕ ಸಂಪರ್ಕಿಸಿ ಸಾಲದ ಆಫರ್ ನೀಡುವವರಿಂದ ದೂರ ಇರುವುದೇ ವಾಸಿ.