“ಮಾತಿಗಿಂತ ಕೃತಿ ಹರಿತವಾಗಿರಬೇಕು” ಎಂಬ ಗಾದೆ ನಾವೆಲ್ಲರೂ ಕೇಳಿದ್ದೇವೆ. ಈ ಮಾತು ಎಲ್ಲಾ ವರ್ಗಗಳ ಬ್ಯುಸಿನೆಸ್ ಹಾಗೂ ಎಲ್ಲಾ ವೃತ್ತಿಪರರಿಗೂ ಅನ್ವಯವಾಗಲಿದೆ.
ಕರ್ನಾಟಕ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಹಲವಾರು ದಿಗ್ಗಜರು ಹಾಗೂ ಧೀಮಂತ ನಾಯಕರನ್ನು ಹೊಂದಿದ್ದು, ಬಹುಮತದೊಂದಿಗೆ ಸರ್ಕಾರ ರಚನೆ ಮಾಡಿದೆ. ಆದರೆ ಈಗ ಕಾಂಗ್ರೆಸ್ ನಾಯಕತ್ವದ ಕೆಲಸಕ್ಕಿಂತ ನಾಯಕರ ಜೊತೆಗಿನ ಗೊಂದಲಗಳಲ್ಲಿಯೇ ಸಿಲುಕಿಕೊಂಡಿದೆ.
ಇನ್ನು ರಾಜ್ಯದಲ್ಲಿ ನಾಯಕತ್ವದ ಪ್ರಶ್ನೆ ಎದುರಾದಾಗ ನಾಯಕತ್ವಕ್ಕಾಗಿ ಪಕ್ಷದಲ್ಲಿ ಹಗ್ಗಜಗ್ಗಾಟ ವಾರಗಟ್ಟಲೆ ನಡೆದಿತ್ತು. ಕೊನೆಗೆ ಸಿದ್ದರಾಮಯ್ಯ ಅವರಿಗೆ ನಾಯಕತ್ವ ನೀಡಲಾಗಿದೆ ಅಥವಾ ನಾಯಕತ್ವ ತೆಗೆದುಕೊಂಡಿದ್ದಾರೆ ಎನ್ನಬಹುದು.
ಈಗ ನೋಡಿ ಅಸಲಿ ಆಟ ಶುರು.
ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿರುವ ಕಾಂಗ್ರೆಸ್ ನ ಯುವ ನಾಯಕರ ಮಾತುಗಳ ಹಿಂದೆ ದೆಹಲಿಯ ಮಾಸ್ಟರ್ ಕೀ ಕೆಲಸ ಮಾಡುತ್ತಿರುವಂತೆ ಕಾಣಿಸುತ್ತದೆ. ಕಾಂಗ್ರೆಸ್ ನ ಉಚಿತ ಯೋಜನೆಗಳ ನಿಯಮಗಳು ಸಂಪೂರ್ಣ ಗೊಂದಲಮಯವಾಗಿವೆ. ಹೌದು, ಮನವರಿಕೆ ಮಾಡಲು ಸಾಧ್ಯವಾಗದಿದ್ದರೆ, ಗೊಂದಲಕ್ಕೀಡು ಮಾಡು ಅಂತ ಗಾದೆ ಇದೆ ಅಲ್ವಾ.
ಈಗಿನ ಸರ್ಕಾರ ಒಂದೆಡೆ ಇಂತಹ ಸಮಸ್ಯೆಗಳಿಗೆ ಉತ್ತಮ ಕಾರ್ಯತಂತ್ರಗಳನ್ನು ತರುತ್ತಿದ್ದರೆ, ಮತ್ತೊಂದೆಡೆ ಅತಿಯಾದ ಆತ್ಮವಿಶ್ವಾಸದಿಂದ ಸೋತ ಬಿಜೆಪಿ ತನ್ನ ವಿಪಕ್ಷ ಸ್ಥಾನಕ್ಕೆ ಉತ್ತಮ ನಾಯಕನನ್ನು ಹುಡುಕುತ್ತಾ ಗೊಂದಲದಲ್ಲೇ ಇದೆ.
ನಾಯಕತ್ವ ಕೊರತೆ ನಡುವೆಯೂ ಪ್ರಧಾನಿ ಮೋದಿ ಅವರಿಂದ ರಾಜ್ಯ ಬಿಜೆಪಿ ಕನಿಷ್ಠ ವಿರೋಧ ಪಕ್ಷವಾಗಿಯಾದರೂ ಕಾಣಿಸಿಕೊಳ್ಳಲು ಸಾಧ್ಯವಾಗಿದೆ.
ʼನನ್ನ ತಾಳ್ಮೆ ನನ್ನ ಒಳ್ಳೆಯ ಗುಣವಾಗಿದೆ ಅದು ನನ್ನ ದೌರ್ಬಲ್ಯವಲ್ಲʼ ಎಂಬ ಮಾತು ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಶಕ್ತಿಶಾಲಿ ಪಕ್ಷವನ್ನಾಗಿ ಮಾಡಿದ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪನವರಿಗೆ ಸೂಕ್ತವಾಗಲಿದೆ. ಇನ್ನು ಪಕ್ಷದಲ್ಲೇ ಇರುವ ಮಾತು, ತರ್ಕಬದ್ಧವಲ್ಲದ ನಡವಳಿಕೆ ಇರುವ ನಾಯಕರಿಗೆ ಈ ಮಾತು ತೂಕ ಹೊಂದಿರುವಂತಹದಲ್ಲ.
ಈಗ ಸಮರ್ಥ ನಾಯಕತ್ವದ ಬಗ್ಗೆ ಮಾತನಾಡಬೇಕೆಂದರೆ ಮಳೆಗಾಲಕ್ಕೂ ಮುನ್ನ ಯಾವ ನಾಯಕರು ರಾಜ್ಯದಲ್ಲಿ ಸಂಭವಿಸಬಹುದಾದ ವಿಪತ್ತು, ಬರ ಪರಿಸ್ಥಿತಿ ಅಥವಾ ಪ್ರವಾಹ ಪರಿಸ್ಥಿತಿಗಳನ್ನು ನಿಭಾಯಿಸಲು ಸಿದ್ದರಾಗಿದ್ದಾರೆ? ಯಾರಾದರು ಸಿದ್ದವಾಗಿದ್ದರೆ ಇನ್ನು ಮುಂದೆ ಅವರಿಗೆ ಪರೀಕ್ಷೆ ಶುರು.
ಮಳೆ ನೀರು ಅತ್ಯಮೂಲ್ಯವಾದ್ದು, ಕಾರ್ಖಾನೆಗಳಲ್ಲಿ ಮಳೆ ನೀರು ಕೊಯ್ಲು ಮಾಡಲಾಗುವುದಿಲ್ಲ. ಮಳೆ ನೀರು ಕೊಯ್ಲು ಮಾಡುವುದು ಕೇವಲ ಪುರಸಭೆಗೆ ಇರುವ ಕಾನೂನು ಅಲ್ಲ. ಆದರೆ ಇದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ನೀರಿನ ಕೊರತೆಯಾದರೆ ಸ್ಥಳೀಯ ಆಡಳಿತವನ್ನು ದೂಷಿಸಲು ಸಾಧ್ಯವಿಲ್ಲ.
ನಾಗರೀಕತೆ ನೀರಿನ ದಡದಲ್ಲೇ ಹುಟ್ಟಿದ್ದು, ಆದರೆ ನೀರು ಕಾಣದೆ ಇದ್ದಾಗ ನಾಗರೀಕತೆ ಅನ್ನೋದು ಕೂಡ ಕಣ್ಮರೆಯಾಯಿತು.
ಉತ್ತಮ ನಾಗರೀಕರಾದ ನಾವು ನಾಯಕತ್ವ ವಹಿಸಿ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಜಲ ಜಾಗೃತಿ ಮೂಡಿಸಬೇಕು. ಈ ಮೂಲಕ ಹೆಮ್ಮೆಯ ನಾಗರೀಕರಾಗಬೇಕು.
ಸಮರ್ಥ ನಾಯಕತ್ವವಿಲ್ಲದೆ SHIP ಮುಳುಗಲು ಬಿಡಬೇಡಿ. ಈ ಸಾಲುಗಳನ್ನು ನೆನಪಿಟ್ಟುಕೊಂಡು ಮುಂದೆ ಹೆಜ್ಜೆ ಇಡೋಣ.