ಬಾಗಲಕೋಟೆ: ಪೊಲೀಸರು ಎಂದರೆ ದರ್ಪದ ಮಾತುಗಳು. 24/7 ಕೆಲಸದ ಒತ್ತಡದಲ್ಲಿ ಮುಳುಗಿ ಬೇರೆ ಯಾವುದರ ಕಡೆಗೂ ಅವರಿಗೆ ಲಕ್ಷ್ಯ ಇರಲ್ಲ. ಹಾಗೆ ಹೀಗೆ ಎಂದು ಜನರು ಮಾತನಾಡಿಕೊಳ್ಳುವುದು ಸಹಜ. ಆದರೆ, ಬಾಗಲಕೋಟೆ ಪೊಲೀಸರು ಕರ್ತವ್ಯದಾಚೆ ಎಷ್ಟು ಪರಿಸರ ಕಾಳಜಿ ಉಳ್ಳವರು ಎಂದು ತಿಳಿದುಕೊಳ್ಳಬೇಕಿದ್ದರೆ ನೀವೊಂದು ಸಹ ಡಿಎ ಆರ್ ಠಾಣೆ ಹತ್ತಿರದಲ್ಲಿ ಬೆಳೆದು ನಿಂತಿರುವ ದಟ್ಟ ಅರಣ್ಯದಂತೆ ಗೋಚರಿಸುವ ಆ ಪ್ರದೇಶಕ್ಕೊಮ್ಮೆ ಭೇಟಿ ನೀಡಲೇಬೇಕು.
ಹೌದು, ಇದನ್ನು ಖಾಕಿ ಪಡೆದ ಅರಣ್ಯ ಕ್ರಾಂತಿ ಎಂದರೂ ಅಡ್ಡಿಯಿಲ್ಲ. ಅಷ್ಟರ ಮಟ್ಟಿಗೆ ಆ ಪರಿಸರ ನಿಮ್ಮನ್ನು ಬರದೆಳೆದುಕೊಳ್ಳುತ್ತದೆ. ಒಂದಲ್ಲ, ಎರಡಲ್ಲ ಅಂದಾಜು ಮೂರ್ನಾಲ್ಕು ಎಕರೆ ಜಾಗಗದಲ್ಲಿ ತಲೆ ಎತ್ತಿ ನಿಂತು ಜನರನ್ನು ಕೈಬೀಸಿ ಕರೆಯುವ ಸುಮಾರು 15 ಸಾವಿರಕ್ಕೂ ಅಧಿಕ ಗಿಡಗಳನ್ನು ನೋಡಿದಾಗ ನಮಗೆ ಗೊತ್ತಿಲ್ಲದೇ ಪೊಲೀಸರ ಈ ಕಾರ್ಯಕ್ಕೆ ಮೆಚ್ಚುಗೆಯ ಒಂದು ಸೆಲ್ಯೂಟ್ ತಾನಾಗಿಯೇ ಬರುವುದಂತೂ ಸತ್ಯ!
ಬಾಗಲಕೋಟೆಯ ನವನಗರದಲ್ಲಿ ಇರುವ ಡಿಎಆರ್ ಪೊಲೀಸ್ ಹೆಡ್ ಕ್ವಾರ್ಟಸ್ ಎದುರಿನ ಮೂರು ಎಕರೆ ಜಾಗದಲ್ಲಿ ಮೂರು ವರ್ಷಗಳ ಹಿಂದೆ ಪೊಲೀಸರು ಗಿಡಗಳನ್ನು ನೆಟ್ಟಿದ್ದು ಇವತ್ತು ಅವರು ಆ ಇಡೀ ಪ್ರದೇಶಕ್ಕೆ ಹಂದರವಾಗಿದೆ.
ಹಾಳು ಕೊಂಪೆಯ ಜಾಗವೀಗ ಮಿನಿ ಅರಣ್ಯವಾಗಿ ಮಾರ್ಪಾಡು:
ಈಗ ದಟ್ಟ ಕಾಡಿನಂತೆ ಗೋಚರಿಸುತ್ತಿರುವ ಈ ಪ್ರದೇಶ ನಾಲ್ಕು ವರ್ಷಗಳ ಹಿಂದೆ ಭಣಭಣ ಎನ್ನುವ ಹಾಳು ಕೊಂಪೆಯಾಗಿತ್ತು. ಕಣ್ಣಾಯಿಸಿದ ಕಡೆಗೆಲ್ಲ ಕಲ್ಲು ನೆಲ ಅಗೆದರೆ ಮುಷ್ಟಿ ಮಣ್ಣು ಬರುತ್ತಿರಲಿಲ್ಲ. ಅಂತಹ ಜಾಗಕ್ಕೆ ಖಾಕಿ ಪಡೆ ಕಾಲಿಟ್ಟಿ ದ್ದೆ ಬಂತು, ಅಲ್ಲಿನ ವಾತಾವರಣವೇ ಬದಲಾಗಿ ಹೋಗಿದ್ದು, ನಾಲ್ಕೈದು ವರ್ಷಗಳ ಹಿಂದೆ ಆ ಪ್ರದೇಶವನ್ನು ನೋಡಿದವರು ಈಗ ಅಲ್ಲಿಗೆ ಬಂದು ನೋಡಿದರೆ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವದಂತೂ ಖಚಿತ. ಅಷ್ಟರ ಮಟ್ಟಿಗೆ ಅದು ಹಸಿರು ಸೀರೆಯನ್ನು ಹೊದ್ದುಕೊಂಡು ದಾರಿಹೋಕರನ್ನು ಕೈಬೀಸಿ ಕರೆಯುತ್ತಿದೆ. ನೋಡಿದ ತಕ್ಷಣ ಅದೊಂದು ಮಿನಿ ಅರಣ್ಯದಂತೆ ಭಾಸವಾಗುವುದರಲ್ಲಿ ಯಾವುದೇ ಅನುಮಾನುಗಳು ಇಲ್ಲ.
ಬಗೆ ಬಗೆಯ ಹಣ್ಣಿನ ಗಿಡಗಳು ಉಂಟು !
ಸದ್ಯ ಈ ಗುಡ್ಡಗಾಡು ಪ್ರದೇಶದಲ್ಲಿ 15000 ಮರಗಳನ್ನು ತಲೆ ಎತ್ತಿ ನಿಂತಿವೆ. ಇದರಲ್ಲಿ 60 ಬಗೆಯ ವಿವಿಧ ಮರಗಳಾದ ತೆಂಗು, ಬೇವು, ಅರಳಿಮರ, ಶಿಂಧೆ, ಹೊಂಗೆ, ರುದ್ರಾಕ್ಷಿ, ರಬ್ಬರ ಮರ, ಬಿದಿರು, ತಾಳೆ, ಮಹಾಗಣಿ, ಅಡಕೆ, ಬಸವನಪಾದ, ಬನ್ನಿಗಿಡ, ಹೆಬ್ಬೇವು, ಸಿಂಗಾಪೂರ ಚೆರ್ರಿ, ಅಶ್ವಥ ಮರ, ಅಶೋಕ ಮರಗಳನ್ನು ಬೆಳೆಸಲಾಗಿದೆ. ಇದಲ್ಲದೇ 20ಕ್ಕೂ ಹೆಚ್ಚು ಬಗೆಯ ಹಣ್ಣಿನ ಗಿಡಗಳಾದ ಲೀಚಿ, ಆ್ಯಪಲ ಬೋರೆ, ಕಾಶಿ ಬೊರೆ, ಪೇರಲ, , ಹಲಸು, ನೇರಲೆ, ಮಾವು, ಕರ್ಜೂರು, ಅಂಜೂರು, ಬಾಳೆ ಸೇರಿ ಹಲವು ಬಗೆಯ ಹಣ್ಣಿನ ಗಿಡಗಳನ್ನು ಬೆಳೆಸಿದ್ದು, ಇದರಲ್ಲಿ ಅನೇಕ ಗಿಡಗಳು ಈಗಾಗಲೇ ಫಲಗಳನ್ನು ಕೊಡುತ್ತಿದ್ದು, ಈ ಪ್ರದೇಶವನ್ನು ವೀಕ್ಷಿಸಲು ಬರುವ ಜನರು, ಪೊಲೀಸ್ ಸಿಬ್ಬಂದಿ ಕುಟುಂಬದವರಿಗೆ ಹೊಟ್ಟೆ ತುಂಬಿಸುತ್ತಿವೆ. ಇನ್ನು ಗುಡ್ಡಗಾಡು ಜಾಗ ಸದ್ಯ ಪಾರ್ಕ ನಂತೆ ಮಾರ್ಪಟ್ಟಿದ್ದು, ಪೊಲೀಸ್ ಸಿಬ್ಬಂದಿ ಸೇರಿದಂತೆ ಅಕ್ಕಪಕ್ಕದ ಜನರು ವಾಯು ವಿಹಾರಕ್ಕಾಗಿ ಬರುತ್ತಿದ್ದಾರೆ. ಹಾಗೆಯೇ ಇದೀಗ ವಿಶ್ವ ಪರಿಸರ ದಿನಾಚರಣೆ ಹಿನ್ನಲೆಯಲ್ಲಿ ಮೂರು ದಿನಗಳ ಕಾಲ ಸಾರ್ವಜನಿರ ವೀಕ್ಷಣೆಗೆ ಮುಕ್ತ ಪ್ರವೇಶವನ್ನು ಕಲ್ಪಿಸಿದ್ದು, ಜನರು ಕುಟುಂಬ ಸಮೇತರಾಗಿ ಪಿಕ್ ನಿಕ್ ಗೆ ಬರಬಹುದು. ಹಾಗೆಯೇ ತಾವು ಸಹ ಇದೇ ರೀತಿ ಅವಕಾಶ ಇರುವ ಕಡೆಗೆಲ್ಲ ಗಿಡಗಳನ್ನು ಬೆಳೆಸಲು ಮುಂದಾಗಬೇಕು ಎಂದು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಜಯಪ್ರಕಾಶ ಅವರು ಹೇಳುತ್ತಾರೆ.
ಬಾಗಲಕೋಟೆ ನಗರದ ಡಿಎಆರ್ ಆವರಣದಲ್ಲಿ ಮೂರು ಎಕರೆ ಜಾಗದಲ್ಲಿ ಪಶ್ಚಿಮ ಘಟ್ಟದ ಮಾದರಿಯಲ್ಲಿ ರೇನ ಫಾರೆಸ್ಟ ಬೆಳೆಸಲಾಗಿದೆ. ನಮ್ಮ ಪೊಲೀಸï ಸಿಬ್ಬಂದಿ ಶ್ರಮದಾನದಿಂದ ಬೆಳೆಸಿದ್ದು, ಅದನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿz್ದÁರೆ. ಇದಕ್ಕೆ ನಮ್ಮ ಡಿಎಆರï ಸಿಬ್ಬಂದಿ ಹಾಗೂ ಹಿಂದಿನ ಎಸ್ಪಿ ಲೊಕೇಶ ಜಗಲಾಸರ ಕಾಳಜಿ ವಹಿಸಿ, ಇದನ್ನು ಬೆಳೆಸಿದ್ದಾರೆ. ನಾವು ಇದನ್ನು ಮುಂದುವರೆಸಿಕೊAಡು ಹೋಗುತ್ತಿದ್ದೇವೆ. ಮುಖ್ಯವಾಗಿ ಆಮ್ಲಜನಕ ಹೆಚ್ಚು ಕೊಡುವ ಗಿಡ-ಮರಗಳ ಜೊತೆಗೆ ಹಣ್ಣುಗಳನ್ನು ಕೊಡುವ ಗಿಡಗಳನ್ನು ಬೆಳೆಸಿz್ದÁರೆ. ಇದೊಂದು ಶ್ಲಾಘನೀಯ ಕಾರ್ಯವಾಗಿದ್ದು, ಇದಕ್ಕಾಗಿ ನಮ್ಮ ಸಿಬ್ಬಂದಿಯನ್ನು ಅಭಿನಂದಿಸುತ್ತೇವೆ ಎಂದು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಜಯಪ್ರಕಾಶ ಹೇಳಿದರು.