ಒಡಿಶಾದ ಬಾಲಸೋರ್ನ ಬಹನಾಗಾ ರೈಲು ನಿಲ್ದಾಣದ ಬಳಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ಸರಣಿ ರೈಲು ಅಪಘಾತದಿಂದಾಗಿ ರೈಲು ಸಂಚಾರಕ್ಕೆ ಅಡ್ಡಿಯಾಗಿದೆ. ದುರಂತ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಅಪಘಾತವಾಗಿರುವ ರೈಲು ಬೋಗಿಗಳನ್ನು ತೆರವುಗೊಳಿಸಿ ಹಳಿಗಳನ್ನು ಸರಿಪಡಿಸುವರೆಗೂ ರೈಲ್ವೆ ಸಂಚಾರದಲ್ಲಿ ವ್ಯತ್ಯಯವಾಗಲಿದೆ.
ಅಪಘಾತದ ಬಳಿಕ ಸುಮಾರು 49 ರೈಲುಗಳ ಸಂಚಾರ ರದ್ದಾಗಿದೆ. 38 ರೈಲುಗಳ ಸಂಚಾರ ಮಾರ್ಗ ಬದಲಿಸಲಾಗಿದೆ. ಅವುಗಳಲ್ಲಿ ಯಾವ ಮಾರ್ಗದಲ್ಲಿ ರೈಲು ರದ್ದಾಗಿದೆ? ಯಾವ ರೈಲು ಸಂಚಾರ ಬದಲಿಸಿದೆ ಎಂಬ ಮಾಹಿತಿ ಇಲ್ಲಿದೆ.
ರದ್ದುಗೊಂಡ ರೈಲುಗಳು:
*ಪುರಿಯಿಂದ ಹೊರಡುವ ಪುರಿ- ಹೌರಾ ಶತಾಬ್ದಿ ಎಕ್ಸ್ಪ್ರೆಸ್ ರೈಲು (ಎರಡೂ ಮಾರ್ಗ)
*ಪುರಿಯಿಂದ ಹೊರಡುವ ಪುರಿ- ಶಾಲಿಮರ್ ಶ್ರೀ ಜಗನ್ನಾಥ್ ಎಕ್ಸ್ಪ್ರೆಸ್
*ಪುರಿಯಿಂದ ಹೊರಡುವ ಪುರಿ- ಭಂಜಾಪುರ್ ಸ್ಪೆಷಲ್
*ಖಾರಗ್ಪುರ- ಖುರ್ದಾ ರೋಡ್ ಎಕ್ಸ್ಪ್ರೆಸ್
*ಹೌರಾ- ಎಸ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಎಕ್ಸ್ಪ್ರೆಸ್
*ಹೌರಾ- ಚೆನ್ನೈ ಮೇಲ್
*ಶಾಲಿಮರ್- ಪುರಿ ಸುಪರ್ ಫಾಸ್ಟ್
*ಶಾಲಿಮರ್- ಸಂಬಾಲ್ಪುರ ಎಕ್ಸ್ಪ್ರೆಸ್
*ಸಂತ್ರಾಗಚಿ- ಪುರಿ ಸ್ಪೆಷಲ್
*ಸೀಲ್ಡಾಹ್- ಪುರಿ ದುರಂತೋ ಎಕ್ಸ್ಪ್ರೆಸ್
*ಹೌರಾ- ಭುವನೇಶ್ವರ್ ಜನ್ ಶತಾಬ್ದಿ ಎಕ್ಸ್ಪ್ರೆಸ್ (ಎರಡೂ ಮಾರ್ಗ)
*ಪುರಿ- ಶಾಲಿಮರ್ ಧೌಲಿ ಎಕ್ಸ್ಪ್ರೆಸ್
*ಸೀಲ್ಡಾಹ್- ಪುರಿ
*ಬಾಲಸೋರ್- ಭುವನೇಶ್ವರ್
*ಹೌರಾ- ಕನ್ಯಾಕುಮಾರಿ
*ಹೌರಾ- ಭುವನೇಶ್ವರ- ಹೌರಾ- ಪುರಿ
ಮಾರ್ಗ ಬದಲಾವಣೆ ಮಾಡಲಾದ ರೈಲುಗಳು:
ವಾಸ್ಕೋದಿಂದ ಹೊರಡುವ ವಾಸ್ಕೋ ಡ ಗಾಮಾ- ಹೌರಾ ಅಮರಾವತಿ ಎಕ್ಸ್ಪ್ರೆಸ್ ರೈಲು ಜಖಾಪುರ- ಜರೋಲಿ ಮಾರ್ಗದಿಂದ ತೆರಳಲಿದೆ.
ಸಿಕಂದರಾಬಾದ್- ಶಾಲಿಮರ್ ಎಕ್ಸ್ಪ್ರೆಸ್ ರೈಲು ಜಖಾಪುರ ಮತ್ತು ಜರೋಲಿ ಮೂಲಕ ತೆರಳಲಿದೆ.
ಪುರಿ- ಹೊಸದಿಲ್ಲಿ ಪುರುಷೋತ್ತಮ್ ಎಕ್ಸ್ಪ್ರೆಸ್ ರೈಲು ಜಖಾಪುರ ಮತ್ತು ಜರೋಲಿ ಮೂಲಕ ಪ್ರಯಾಣಿಸಲಿದೆ.
ಪುರಿ- ರಿಷಿಕೇಶ್ ಕಳಿಂಗ ಉತ್ಕಲ್ ಎಕ್ಸ್ಪ್ರೆಸ್ ರೈಲು ಅಂಗುಲ್- ಸಂಬಾಲ್ಪುರ ನಗರ- ಝಾರ್ಸುಗುಡ ರೋಡ್- ಐಬಿ ಮಾರ್ಗದಲ್ಲಿ ತೆರಳಲಿದೆ.
ಸಂಬಾಲ್ಪುರ- ಶಾಲಿಮರ್ ಎಕ್ಸ್ಪ್ರೆಸ್ ರೈಲು ಸಂಬಾಲ್ಪುರ ಸಿಟಿ- ಝಾರ್ಸುಗುಡ ಮಾರ್ಗದಲ್ಲಿ ಸಂಚರಿಸಲಿದೆ.
ಬೆಂಗಳೂರಿನಿಂದ ಹೊರಡುವ ಬೆಂಗಳೂರು- ಗುವಾಹಟಿ ಎಕ್ಸ್ಪ್ರೆಸ್ ರೈಲು ವಿಜಿಯಾನಗರಂ- ಟಿಟಿಲಾಗಡ- ಝಾರ್ಸುಗುಡ- ಟಾಟಾ ಮಾರ್ಗದಲ್ಲಿ ತೆರಳಲಿದೆ.
ತಂಬರಂ- ನ್ಯೂ ಟಿನ್ಸುಕಿಯಾ ಎಕ್ಸ್ಪ್ರೆಸ್ ರೈಲು ರಾಣಿತಾಲ್- ಜರೋಲಿ ಮಾರ್ಗದಲ್ಲಿ ಸಂಚರಿಸಲಿದೆ.
ಸಂತ್ರಗಚಿ- ಚೆನ್ನೈ ಎಕ್ಸ್ಪ್ರೆಸ್ (ಟಾಟಾ ನಗರ ಮಾರ್ಗ)
ಡಿಘಾ- ವಿಶಾಖಪಟ್ಟಣಂ ಎಕ್ಸ್ಪ್ರೆಸ್
ಹೌರಾ- ಮೈಸೂರು ಎಕ್ಸ್ಪ್ರೆಸ್
ಪುರಿ- ಆನಂದ ವಿಹಾರ (ಹೊಸದಿಲ್ಲಿ) ನಂದನಕಣನ್ ಎಕ್ಸ್ಪ್ರೆಸ್
ರಾಜ್ಯದ ಐದಾರು ರೈಲುಗಳ ಪ್ರಯಾಣ ಕ್ಯಾನ್ಸಲ್, ಪ್ರಯಾಣಿಕರಿಗೆ ರೀಫಂಡ್:
ಒಡಿಶಾ ರೈಲು ದುರಂತದಿಂದ ರಾಜ್ಯಕ್ಕೆ ಸಂಬಂಧಿಸಿದ 5-6 ರೈಲು ಕ್ಯಾನ್ಸಲ್ ಆಗಿದ್ದರಿಂದ ಜನರ ಪ್ರಯಾಣಕ್ಕೆ ಸಮಸ್ಯೆ ಆಗಿತ್ತು. ಎಲ್ಲರಿಗೂ ರಿಫಂಡ್ ಮಾಡಲಾಗಿದೆ ಎಂದು ರೈಲ್ವೆ ಡಿಜಿಪಿ ಶಶಿಕುಮಾರ್ ಹೇಳಿದ್ದಾರೆ.