ಜೀ ಕನ್ನಡ ಜನರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂಚೂಣಿಯಲ್ಲಿದ್ದು,ವಾರದ ದಿನಗಳಲ್ಲಿ ಹಿಟ್ ಧಾರಾವಾಹಿಗಳನ್ನು ನೀಡುತ್ತಿದೆ. ವಾರಾಂತ್ಯದಲ್ಲಿ ರಿಯಾಲಿಟಿ ಶೋಗಳ ಮೂಲಕ ಜನರನ್ನು ರಂಜಿಸುತ್ತಿದೆ. ಹಿಟ್ ಸೀರಿಯಲ್ಗಳನ್ನು ನೀಡುತ್ತಿರುವ ಜೀ ಕನ್ನಡದಲ್ಲಿ ವಿನೂತನ ಕಥೆಯನ್ನು ಹೊತ್ತು ಅಮೃತಧಾರೆ ಸೀರಿಯಲ್ ಮೇ 29 ರಿಂದ ಪ್ರಸಾರವಾಗುತ್ತಿದೆ.
ಅಮೃತಧಾರೆ ಧಾರಾವಾಹಿಗೆ ಗೌತಮ್ ದಿವಾನ್ ಪಾತ್ರದಲ್ಲಿ ರಾಜೇಶ್ ನಟರಂಗ್ ಹಾಗೂ ಭೂಮಿಕಾ ಸದಾಶಿವ್ ಪಾತ್ರದಲ್ಲಿ ಛಾಯಾ ಸಿಂಗ್ ಕಾಣಿಸಿಕೊಳ್ಳುತ್ತಿದ್ದಾರೆ. ಸೋಮವಾರದಿಂದ ಶುಕ್ರವಾರವರೆಗೆ ಸಂಜೆ 7 ಗಂಟೆಗೆ ಅಮೃತಧಾರೆ ಪ್ರಸಾರವಾಗಲಿದೆ.
ಗೌತಮ್ ಮತ್ತು ಭೂಮಿಕಾ ಇಬ್ಬರೂ ಮನೆಯ ಹಿರಿಯಮಕ್ಕಳೂ. ಮನೆಯ ಹಿರಿಮಕ್ಕಳಾಗಿ ಹುಟ್ಟೋದು ಶಾಪವೋ? ವರವೋ? ಎನ್ನುವ ಪ್ರಶ್ನೆಯೊಂದಿಗೆ ಧಾರಾವಾಹಿ ಪ್ರಾರಂಭವಾಗಿದೆ.
ಗೌತಮ್ ಹಾಗೂ ಭೂಮಿಕಾ ಬದುಕು ಬೇರೆಬೇರೆ. ಗೌತಮ್ನದ್ದು ಐಷಾರಾಮಿ ಜೀವನ. ಭೂಮಿಕಾ ಮಧ್ಯಮ ವರ್ಗದ ಹುಡುಗಿ. ಗೌತಮ್ ಮತ್ತು ಭೂಮಿಕಾ ಬದುಕು ಬೇರೆ ಆದ್ರೂ. ಭಾವ ಒಂದೇ ಎನ್ನುವ ಕ್ಯಾಪ್ಶನ್ನೊಂದಿಗೆ ಮೊದಲ ಎಪಿಸೋಡ್ ಪ್ರೋಮೋ ಹಂಚಿಕೊಳ್ಳಲಾಗಿದೆ. ಎರಡು ದಿನದ ಅಮೃತಧಾರೆ ಎಪಿಸೋಡ್ನ ಎಲ್ಲರೂ ಇಷ್ಟಪಟ್ಟಿದ್ದಾರೆ. ಧಾರಾವಾಹಿ ನೋಡಿದ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ