ರೈತಮಿತ್ರ ಎರೆಹುಳ ಗೊಬ್ಬರವು ಲಾಭದಾಯಕ ಕೃಷಿಯಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಎರೆಹುಳು ಗೊಬ್ಬರವು ಫಲವತ್ತೆಯಿಂದ ಕೂಡಿದ್ದು, ಇದರಿಂದಾಗಿ ಗುಣ್ಣಮಟ್ಟದ ಆರೋಗ್ಯಕರವಾದ ಬೆಳೆಯನ್ನು ರೈತ ಪಡೆಯುತ್ತಾನೆ. ಸಾವಯವ ಗೊಬ್ಬರವಾದ ಎರೆಹುಳಗೊಬ್ಬರನ್ನು ತಯಾರಿಸಿ ಕೃಷಿಯಲ್ಲಿ ಲಾಭವನ್ನು ಪಡೆಯಬಹುದು ಅದಕ್ಕೆ ಇಲ್ಲಿದೆ ಸಲಹೆ.
ಎರೆಹುಳಗೊಬ್ಬರ ತಯಾರಿಯ ಹಂತಗಳು:
ಎರೆಹುಳು ತೊಟ್ಟಿ ನಿರ್ಮಾಣ:
ಎರೆಹುಳು ತೊಟ್ಟಿಯನ್ನು ಮಣ್ಣು, ಸಿಮೆಂಟ್, ಕೆಂಪುಕಲ್ಲು ಅಥವಾ ಪ್ಲಾಸ್ಟಿಕ್ ಚೀಲಗಳನ್ನು ಬಳಸಿ ನಿರ್ಮಾಣ ಮಾಡುವುದು ಉತ್ತಮ.
ಎರೆಹುಳುಗಳ ಆಯ್ಕೆ:
ಭಾರತದಲ್ಲಿ ಸುಮಾರು ೩೫೦ ಪ್ರಭೇದದ ಎರೆಹುಳುಗಳಿದ್ದು, ಗೊಬ್ಬರ ತಯಾರಿಕೆಗೆ ಯೂಡ್ರಿಲಸ್, ಯುಜೇನಿಯಾ, ಐಸಿನೀಯಾ ಫೇಟಿಡಾ, ಪೆರಿಯಾನಿಕ್ಸ್ ಎಕ್ಸ್ವೇಟಸ್ ಈ ಮೂರು ಪ್ರಭೇದದ ಎರೆಹುಳುಗಳು ಉತ್ತಮ ಆಯ್ಕೆಯಾಗಿದೆ.
ಎರೆಹುಳು ಸಂರಕ್ಷಣೆ:
ಗೆದ್ದಲು, ಇರುವೆ ಮತ್ತು ಇಲಿಗಳ ಬಾಧೆಯನ್ನು ತಪ್ಪಿಸಲು ತೊಟ್ಟಿ ಯಾವಾಗಲೂ ಶೇ.೪೦-೫೦ರಷ್ಟು ತೇವಾಂಶವನ್ನು ಕಾಪಾಡಿಕೊಳ್ಳಬೇಕು.
ತೊಟ್ಟಿಗೆ ತ್ಯಾಜ್ಯ ವಸ್ತಗಳನ್ನು ಹಾಕುವುದಕ್ಕಿಂತ ಮೊದಲು ಕ್ಲೋರೋಫೈರಿಫಾಸ್ ೨೦ ಇಸಿ ಕೀಟನಾಶಕವನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಹಾಗೆಯೇ ತೊಟ್ಟಿಯ ಸುತ್ತಲೂ ಅರಿಶಿಣ ಗಿಡವನ್ನು ನೆಡುವುದರಿಂದ ಇರುವೆ ಹಾವಳಿಯನ್ನು ತಪ್ಪಿಸಬಹುದು.
ಎರೆಹುಳ ಗೊಬ್ಬರ:
ಮೊದಲು ತೊಟ್ಟಿಯ ತಳಭಾಗಕ್ಕೆ ತೆಂಗಿನಕಾಯಿ ಸಿಪ್ಪೆ ಅಥವಾ ಅಡಿಕೆಯ ಸಿಪ್ಪೆಯನ್ನು ಹಾಕಬೇಕು. ನಂತರ ಸೆಗಣಿ ಅಥವಾ ಕುರಿಯ ಹಿಕ್ಕೆಯನ್ನು ಹಾಕಬೇಕು. ಬಳಿಕ ಕೃಷಿ ತ್ಯಾಜ್ಯ ವಸ್ತುಗಳು, ಕಸಕಡ್ಡಿಗಳನ್ನು ಹಾಕಿ ಅದರ ಮೇಲೆ ಸೆಗಣಿ ಅಥವಾ ಪ್ರಾಣಿಯ ಹಿಕ್ಕೆಯನ್ನು ಹಾಕಬೇಕು.
ಕೃಷಿತ್ಯಾಜ ಮತ್ತು ಮಣ್ಣನ್ನು ಹೊರತು ಪಡಿಸಿ ಉಳಿದ ಎಲ್ಲ ವಸ್ತುಗಳು ೬ ರಿಂದ ೧೦ ಸೆ.ಮೀ ನಲ್ಲಿ ತುಂಬಬೇಕು. ಕೃಷಿತ್ಯಾಜ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ತುಂಬಬೇಕು. ಎರೆಮಣ್ಣನ್ನು ೩ ರಿಂದ ೫ ಸೆ.ಮೀ ದಪ್ಪದಲ್ಲಿ ಹಾಕಬೇಕು.
೧೬ದಿಗಳ ವರೆಗೆ ಪ್ರತಿನಿತ್ಯ ೩೦ರಿಂದ ೬೦ ಲೋಟರ್ ನೀರನ್ನು ಸಿಂಪಡಿಸಬೇಕು. ಹೀಗೆ ಮಾಡುವುದರಿಂದ ತೊಟ್ಟಿಯಲ್ಲಿ ತ್ಯಾಜ್ಯಗಳು ಕೊಳೆಯಲು ಪ್ರಾರಂಭಿಸುತ್ತದೆ. ತ್ಯಾಜ್ಯಗಳು ಕೊಳೆತ ಮೇಲೆ ಒಂದರಿಂದ ಎರಡು ಸಾವಿರ ಎರೆಹುಳುಗಳನ್ನು ೧೦ ಸೆ.ಮೀ ಆಳದಲ್ಲಿ ಬಿಡಬೇಕು. ನಂತರ ಅದರ ಮೇಲೆ ಜೋಳದ ದಂಟು ಅಥವಾ ಭತ್ತದ ಹುಲ್ಲುಗಳನ್ನು ಹರಡಬೇಕು.
ಎರೆಹುಳುಗಳನ್ನು ತೊಟ್ಟಿಗೆ ಬಿಟ್ಟ೪೫ ದಿನಗಳಲ್ಲಿ ತೊಟ್ಟಿಯ ಮೇಲ್ಭಾಗದಲ್ಲಿ ಎರೆಗೊಬ್ಬರ ಶೇಖರಣೆ ಪ್ರಾರಂಭವಾಗುತ್ತದೆ. ಒಟ್ಟು ೮೦ ರಿಂದ ೯೦ ದಿನಗಳಲ್ಲಿ ಗೊಬ್ಬರ ತಯಾರಾಗುತ್ತದೆ.