ಜೀ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ಜೊತೆಜೊತೆಯಲಿ ಧಾರವಾಹಿ ಕಿರುತೆರೆಯಲ್ಲಿ ಟಾಪ್ ಒನ್ ಸೀರಿಯಲ್ ಆಗಿ ಗುರುತಿಸಿಕೊಂಡಿತ್ತು. ಆದರೆ ಈ ಸೀರಿಯಲ್ ಇದೇ ಶುಕ್ರವಾರ ಮುಕ್ತಾಯಗೊಳ್ಳುತ್ತಿದ್ದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಮೊದಲು ಟೈಟಲ್ ಸಾಂಗ್ನಿಂದಲೇ ವೀಕ್ಷರ ಮನಸ್ಸನ್ನು ಗೆದ್ದಿದ್ದ ಸಿರೀಯಲ್ ನಂತರ ವಿಭಿನ್ನ ಕಥೆ. ಅದ್ದೂರಿ ಮೇಕಿಂಗ್ ಇಂದ ಕರುನಾಡ ಮನೆ ಮಾತಾಗಿತ್ತು. ಅನು ಸಿರಿಮನೆ ಮತ್ತು ಆರ್ಯವರ್ಧನ್ ಜೋಡಿ ಕಿರುತೆರೆಯಲ್ಲಿ ಮೋಡಿ ಮಾಡಿತ್ತು.
ನಾಲ್ಕು ವರ್ಷಗಳ ಈ ಮಹಾ ಕಥೆಗೆ ಈ ಶುಕ್ರವಾರ ಕೊನೆಯ ತೆರೆ ಬೀಳಲಿದೆ. ಶುಕ್ರವಾರವೇ ಕೊನೆಯ ಸಂಚಿಕೆ ಪ್ರಸಾರ ಆಗಲಿದೆ. ಎರಡು ದಿನಗಳ ಹಿಂದೆಯೇ ಶೂಟಿಂಗ್ ಕಂಪ್ಲೀಟ್ ಆಗಿದೆ. ಅನು ಸಿರಿಮನೆ ಹಾಗೂ ಆರ್ಯವರ್ಧನ್ ಮತ್ತೆ ಪ್ರೇಮದಲ್ಲಿ ಒಂದಾಗುವುದರೊಂದಿಗೆ ಈ ಕಥೆ ಮುಕ್ತಾಯಗೊಳ್ಳಲಿದೆ.
ಅನು ಸಿರಿಮನೆ ಪಾತ್ರದಲ್ಲಿ ಮೇಘಾ ಶೆಟ್ಟಿ ಹಾಗೂ ಆರ್ಯವರ್ಧನ್ ಪಾತ್ರ ಅನಿರುದ್ಧ್ ಕಾಣಿಸಿಕೊಂಡಿದ್ದರು. ನಿರ್ದೇಶಕ ಆರೂರು ಜಗದೀಶ್ ಜೊತೆ ಅನಿರುದ್ಧ್ ವಿವಾದ ಬಳಿಕ ಅನಿರುದ್ದ್ ಸೀರಿಯಲ್ನಿಂದ ಹೊರ ನಡೆದಿದ್ದರು. ಅನಿರುದ್ದ್ ಹೊರನಡೆದಿದ್ದು, ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿತ್ತು. ಆದಾದ ಬಳಿಕ ಸೀರಿಯಲ್ ಟಿ ಆರ್ ಪಿ ಬಿದ್ದು ಹೋಗಿದೆ ಎಂಬ ಮಾತು ಕೇಳಿ ಬಂದಿತ್ತು.
ಅನಿರುದ್ಧ ಅವರು ಈ ಧಾರಾವಾಹಿಯಿಂದ ಹೊರ ನಡೆದ ನಂತರದಲ್ಲಿ 2022ರಿಂದ ಹರೀಶ್ ರಾಜ್ ಅವರು ಈ ಸೀರಿಯಲ್ನಲ್ಲಿ ಆರ್ಯವರ್ಧನ ಪಾತ್ರಕ್ಕೆ ನಟಿಸಿದ್ದರು. ಸೋನು ಗೌಡ, ಪೃಥ್ವಿ ಅಂಬಾರ ಈ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಬಿಎಂ ವೆಂಕಟೇಶ್, ಮಾನಸಾ ಮನೋಹರ, ಜೈ ಜಗದೀಶ್, ವಿಜಯಲಕ್ಷ್ಮೀ ಸಿಂಗ್, ಪದ್ಮಜಾ ರಾವ್, ಶ್ರೀನಿವಾಸ್ ಪ್ರಭು ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ.