ಕರ್ನಾಟಕ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ಬ್ಯೂಸಿಯಾಗಿದ್ದ ನಟರು ಚಿಂತ್ರರಂಗದತ್ತ ಮುಖ ಮಾಡಿದ್ದು ಚಂದನವನ ಮತ್ತೆ ಸಕ್ರಿಯಗೊಂಡಿದೆ. ಇಂದು ಪೂರ್ಣಚಂದ್ರ ತೇಜಸ್ವಿ ಕಥೆಯಾಧರಿತ ಡೇರ್ ಡೆವಿಲ್ ಮುಸ್ತಫಾ ಮತ್ತು ಖ್ಯಾತ ನಟ ಸೋನ್ ಸೂದ್ ಅಭಿನಯಿಸಿರುವ ಶ್ರೀಮಂತ ಸಿನಿಮಾಗಳು ತೆರೆಕಂಡಿವೆ.
ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಕಥೆಯಾಧರಿತ ಸಿನಿಮಾ ಡೇರ್ ಡೇವಿಲ್ ಮುಸ್ತಫಾ ಸಿನಿಮಾ ಇಂದು ತೆರಕಂಡಿದ್ದು, ಶಶಾಂಕ್ ಸೋಗಲ್ ನಿರ್ದೇಶನವನ್ನು ಮಾಡಿದ್ದಾರೆ. ಈ ಹಿಂದೆ ಫಟಿಂಗ ಎಂಬ ಕಿರುಚಿತ್ರ ನಿರ್ದೇಶಿಸಿದ್ದ ಶಶಾಂಕ್ ಸೋಗಾಲ್ ಚಿತ್ರಕಥೆ ಬರೆದು ಮೊದಲ ಬಾರಿಗೆ ಸಿನಿಮಾ ನಿರ್ದೇಶನವನ್ನು ಮಾಡಿದ್ದಾರೆ.
ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳಿಂದಲೇ ತಯಾರಾಗಿರುವ ಸಿನಿಮಾಗೆ ರಾಹುಲ್ ರಾಯ್ ಛಾಯಾಗ್ರಹಣ ಮಾಡಿದ್ದು, ನವನೀತ್ ಶ್ಯಾಮ್ ಸಂಗೀತವಿದೆ. ಇನ್ನೂ ಎಂಎಸ್ ಉಮೇಶ್, ಮಂಡ್ಯ ರಮೇಶ್, ಮೈಸೂರು ಆನಂದ್, ನಾಗಭೂಷಣ್, ಪೂರ್ಣಚಂದ್ರ ಮೈಸೂರು ಸೇರಿ ಅನೇಕ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನೂ ಕೆ ಆರ್ ಜಿ ಸ್ಟುಡಿಯೊಸ್ ರಾಜ್ಯದೆಲ್ಲೆಡೆ ವಿತರಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಬಾಲಿವುಡ್ ನಟ ಸೋನು ಸೂದ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶ್ರೀಮಂತ ಸಿನಿಮಾ ಇಂದು ಬಿಡುಗಡೆಯಾಗಿದ್ದು ಗೋಲ್ಡನ್ ರೈನ್ ಮೂವೀಸ್ ಮತ್ತು ಅಣ್ಣ ಟಾಕೀಸ್ ಬ್ಯಾನರಿನಲ್ಲಿ ನಿರ್ಮಾಣವಾಗಿದೆ.
ಶ್ರೀಮಂತ ಸಿನಿಮಾದಲ್ಲಿ ಸೋನು ಸೂದ್ ಅವರೊಂದಿಗೆ ಯುವನಟ ಕ್ರಾಂತಿ, ವೈಷ್ಣವಿ ಪಟುವರ್ಧನ್, ವೈಷ್ಣವಿ ಚಂದ್ರನ್ ಮೆನನ್, ಗಿರೀಶ್ ಶಿವಣ್ಣ, ಕುರಿರಂಗ, ಮಂಜುನಾಥ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಶ್ರೀಮಂತ ಸಿನಿಮಾವನ್ನು ಹಾಸನ್ ರಮೇಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಎಂಟು ಹಾಡುಗಳಿದ್ದು, ಹಂಸಲೇಖ ಸಂಗೀತ ಸಂಯೋಜನೆಯಿದೆ.
ರೈತರ ಜೀವನದ ಏಳು ಬೀಳುಗಳನ್ನು ಸಿನಿಮಾದಲ್ಲಿ ತೆರೆಮೇಲೆ ತರಲಾಗಿದ್ದು, ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ, ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ, ಹಿರಿಯ ರಾಜಕಾರಣಿ ಬಸವರಾಜ ಹೊರಟ್ಟಿ ಹೀಗೆ ಬೇರೆ ಬೇರೆ ಪಕ್ಷಗಳ ಅನೇಕ ರಾಜಕಾರಣಿಗಳ ಪಾತ್ರಗಳು ಸಿನಿಮಾದಲ್ಲಿದೆ.
’
ರಾಜ್ಯಮಟ್ಟದ ಹಾಕಿ ಆಟಗಾರ ಆದ್ಯಾ ತಿಮ್ಮಯ್ಯ ನಟಿಸಿ ನಿರ್ದೇಶಿಸಿರುವ “ಜೆರ್ಸಿ 1” ಸಿನಿಮಾ ಹಾಗೂ ಧರ್ಮ ಕೀರ್ತಿರಾಜ್ ನಟನೆಯ ”ಸುಮನ್” ಸಿನಿಮಾ ಕೂಡ ಇಂದು ತೆರಕಂಡಿದೆ.