ಇಂದು ಕರ್ನಾಟಕದಲ್ಲಿ ಕಾಂಗ್ರೆಸ್ ಮುಂಗಾರಿನ ಮೊದಲ ಮಳೆಯ ಆನಂದವನ್ನು ಅನುಭವಿಸುತ್ತಿದೆ. ಮೊದಲ ಮಳೆಯ ತಾಜಾತನವನ್ನು ಕಾಂಗ್ರೆಸ್ ಉಸಿರಾಡುತ್ತಿದೆ. ಕಾಂಗ್ರೆಸ್ ನ ಆಂತರಿಕ ವಿವಾದಗಳು, ಅಧಿಕಾರವಿಲ್ಲದೆ ಕಂಡುಬಂದ ಸಮಸ್ಯೆಗಳು ಇಷ್ಟು ದಿನ ರಾಷ್ಟ್ರದ ಹಳೆಯ ಪಕ್ಷಕ್ಕೆ ತೊಡಕುಂಟು ಮಾಡಿತ್ತು.
ಉತ್ತರ ಭಾರತದಲ್ಲಿ ಕಾಂಗ್ರೆಸ್ ಕಾರ್ಯತಂತ್ರ ವಿಫಲಗೊಂಡಾಗ ದಕ್ಷಿಣ ಭಾರತ ಅದಕ್ಕೆ ಉಸಿರುಕೊಟ್ಟಿದೆ. ಆದರೆ ಇದೆಲ್ಲ ಹೇಗೆ ಸಾಧ್ಯ ಆಯ್ತು, ಹೇಗೆ ಚಾಣಕ್ಯನ ತಂತ್ರಗಾರಿಕೆ ವಿಫಲವಾಯಿತು ಎಂಬುದನ್ನು ನಾವು ಅರಿಯಬೇಕಿದೆ.
ಇನ್ನು ಈ ಎರಡು ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯುವುದು ಮುಖ್ಯವಾಗಿದೆ ಹಾಗೆಯೇ 2024ರ ಸಾರ್ವತ್ರಿಕ ಚುನಾವಣೆಯನ್ನು ಪರಿಗಣಿಸಿ ಆಲೋಚನೆ ಮಾಡಬೇಕಿದೆ.
ಹಾಗಿದ್ದರೆ ಕರ್ನಾಟಕ ಚುನಾವಣಾ ತಂತ್ರಗಾರಿಕೆ ಕಾಂಗ್ರೆಸ್ ಗೆ ಮಾದರಿಯಾಗಲಿದೆಯೇ? ಅನೇಕ ವರ್ಷಗಳ ನಂತರ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿರುವುದು ಒಳ್ಳೆಯ ಸೂಚನೆ. ಇದರ ಖುಷಿಯೇ ಎಲ್ಲಾ ಕಾಂಗ್ರೆಸ್ ನಾಯಕರ ಮುಖದಲ್ಲಿ ಕಂಡುಬರುತ್ತಿರುವುದು.
ಹಾಗಂತ ಬಿಜೆಪಿ ʼಜಿ ಹುಜೂರ್ʼ ಸಂಸ್ಕೃತಿಯೊಂದಿಗೆ ಹಳೆಯ ಕಾಂಗ್ರೆಸ್ ನಂತೆ ಆಗುತ್ತಿದೆ. ಆದರೆ ಕಾಂಗ್ರೆಸ್ ಗೆ ಅಧಿಕಾರದ ಕೊರತೆಯಿಂದ ತನ್ನನ್ನು ತಾನು ಮರುವ್ಯಾಖ್ಯಾನಿಸುತ್ತಿದೆ. ಅವರ ಪ್ರಣಾಳಿಕೆ, ಪ್ರಸ್ತಾವನೆ ಗಳು ಏನೇ ಇರಲಿ, ಜನರು ಅದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಇನ್ನು ಮುಂದೆ ಈ ಎಲ್ಲಾ ಭರವಸೆಗಳನ್ನು ಪೂರೈಸುವತ್ತ ಕಾಂಗ್ರೆಸ್ ನ ಗುರಿ ಇರಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್ ಸಾಯಲಿಲ್ಲ ಬದಲಿಗೆ ಮರುಹುಟ್ಟು ಪಡೆದುಕೊಂಡಿದೆ.
ಇದರ ನಡುವೆ ಮತದಾರರನ್ನು ಲಘುವಾಗಿ ಪರಿಗಣಿಸಿದ್ದ ಬಿಜೆಪಿ ಈಗ ಒಳಗೊಳಗೆ ಕುದಿಯುತ್ತಿದೆ. ಜನರ ಮಾತನ್ನು ನಿರಾಕರಿಸಿದಕ್ಕೆ ವರಿಷ್ಠರಿಗೂ ಕೂಡ ಮುಖ ತೋರಿಸಲು ಸಾಧ್ಯವಾಗುತ್ತಿಲ್ಲ. ಬಿಜೆಪಿ ನಂಬಿಕೆ ಮತ್ತು ಅಭಿವೃದ್ಧಿಯ ಮೂಲಕ ಕಟ್ಟಲಾಗಿದೆ. ಆದರೆ ಈ ಬಾರಿ ಇವೆರಡೂ ಪ್ರಚಾರದಲ್ಲಿ ಕಾಣೆಯಾಗಿದ್ದವು. ಸ್ಟಾರ್ ಪ್ರಚಾರಕರು ದಣಿವರಿಯದೆ ಚುನಾವಣೆಗಾಗಿ ಪ್ರಚಾರ ಮಾಡಿದ್ದಾರೆ. ಆದರೂ ರಾಷ್ಟ್ರೀಯ ಪಕ್ಷ ಸೋಲಿನ ಮೂಲಕ ಪಾಠ ಕಲಿಯುವಂತಾಯಿತು. ಈ ಮೂಲಕ ಪ್ರಾದೇಶಿಕ ನಾಯಕರು ದೀರ್ಘಾವಧಿಯಲ್ಲಿ ಪಕ್ಷಕ್ಕೆ ದುಡಿಯುವಂತವರ ಅಗತ್ಯವಿದೆ ಎಂದು ಅರಿಯಬೇಕಿದೆ.
ಜೆಡಿಎಸ್ ಅನ್ನು ಕರ್ನಾಟಕದ ಜನತೆ ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ. 20 ವರ್ಷಗಳಿಂತ ಚುನಾವಣಾ ಫಲಿತಾಂಶದ ನಂತರ ನಡೆಯುವ ಕುಟುಂಬ ರಾಜಕಾರಣ ಕಂಡು ಜನರು ಬೇಸತ್ತಿದ್ದಾರೆ. ಇದನ್ನು ಕಾಂಗ್ರೆಸ್ ಕೂಡ ಮುಂದಿನ ಲೋಕಸಭಾ ಚುನಾವಣೆಗೆ ಎಚ್ಚರಿಕೆಯಂತೆ ಸ್ವೀಕರಿಸಬೇಕು.
ಇನ್ನು ಬಿಜೆಪಿಯ 15 ಘಟಾನುಘಟಿ ಅಭ್ಯರ್ಥಿಗಳು ತಮ್ಮನ್ನು ತಾವು ಮುಖ್ಯಮಂತ್ರಿ ಅಭ್ಯರ್ಥಿಗಳೆಂದು ಬಿಂಬಿಸಿಕೊಂಡ ಬಹುತೇಕರನ್ನು ಜನ ನಿರಾಕರಿಸಿದ್ದಾರೆ. ಆದರೆ ಅರುಣ್ ಪುತ್ತಿಲ ರಂತಹ ನಾಯಕರಿಗೆ ಕಾರ್ಯಕರ್ತರೇ ಭವಿಷ್ಯವನ್ನು ನಿರ್ಧರಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಶೇ.60ರಷ್ಟು ಜನ ಕಾಂಗ್ರೆಸ್ ಗೆ ಅಧಿಕಾರ ನೀಡಿದ್ದಾರೆ, ಅಂದರೆ ಕಾಂಗ್ರೆಸ್ ಏನಾದರೂ ಉತ್ತಮವಾದುದ್ದನ್ನು ನೀಡಬಹುದು ಎಂಬ ನಂಬಿಕೆ. ಜನರು ಬದಲಾವಣೆ ಬಯಸುತ್ತಿರುವುದು ಸ್ಪಷ್ಟವಾಗಿದೆ. ಕರಾವಳಿ ಕರ್ನಾಟಕ ಭಾಗ ಮಾತ್ರವೇ ಬಿಜೆಪಿಯಲ್ಲಿ ವಿಶ್ವಾಸ ಸೂಚಿಸಿದ್ದು, ಇತರೆ ಎಲ್ಲಾ ಪ್ರದೇಶಗಳಲ್ಲಿಯೂ ಈ ಬಾರಿ ಸಂಪೂರ್ಣ ಬದಲಾವಣೆಯನ್ನು ಬಯಸಿವೆ.
ಕಿತ್ತೂರು ಕರ್ನಾಟಕದ 50 ಸ್ಥಾನಗಳಲ್ಲಿ 32 ಸ್ಥಾನ ಕಾಂಗ್ರೆಸ್ ಪಾಲಾದರೆ, ಕಲ್ಯಾಣ ಕರ್ನಾಟಕದಲ್ಲಿ 41 ಸ್ಥಾನಗಳಲ್ಲಿ 25 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ.
ಮಧ್ಯ ಕರ್ನಾಟಕದ 25 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ತೆಕ್ಕೆಗೆ ಬಂದಿದೆ, ಹಳೇ ಮೈಸೂರು ಭಾಗದ 57 ಸ್ಥಾನಗಳಲ್ಲಿ 37 ರಲ್ಲಿ ಕಾಂಗ್ರೆಸ್ ಅನ್ನು ಜನ ಆಯ್ಕೆ ಮಾಡಿದ್ದಾರೆ. ಬೆಂಗಳೂರು ಪ್ರದೇಶದ 32 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಿಜೆಪಿಯೊಂದಿಗೆ ಸಮಾನ ಪಾಲನ್ನು ಪಡೆದುಕೊಂಡಿದೆ.
ಈ ಮೂಲಕ ಜನತೆ ಒಂದು ಸ್ಥಿರ ಸರ್ಕಾರಕ್ಕಾಗಿ ಮತ ಹಾಕಿದ್ದಾರೆ. ಇತ್ತೀಚೆಗೆ ಬಿಜೆಪಿ ಜನರ ದೈನಂದಿನ ಜೀವನದ ಅಗತ್ಯತೆಗಳ ಬಗ್ಗೆ ಗಮನ ಹರಿಸದೆ ಇರುವುದನ್ನು ಕಾಂಗ್ರೆಸ್ ಅಸ್ತ್ರವಾಗಿ ಬಳಸಿದೆ. ಇನ್ನು ಮುಂದೆ ಯಾವುದೇ ತಾರತಮ್ಯವಿಲ್ಲದೆ ಕೋಟ್ಯಾಂತರ ಜನರ ಕನಸನ್ನು ಕಾಂಗ್ರೆಸ್ ಈಡೇರಿಸುತ್ತದೆ ಎಂದು ಭಾವಿಸಿದ್ದೇವೆ.