ನಮ್ಮ ದೇಶದಲ್ಲಿ ನಿರಂತರವಾಗಿ ನಡೆಯುತ್ತಲೇ ಹಬ್ಬವೆಂದರೆ ಅದು ಪ್ರಜಾಪ್ರಭುತ್ವದ ಹಬ್ಬ. ಈ ಹಬ್ಬಕ್ಕೆ ನೀವು ಉಪವಾಸನ್ನಾಗಲಿ ಅಥವಾ ಹೊಸ ಉಡುಪುಗಳನ್ನಾಗಲಿ ವಿಶೇಷ ಖಾದ್ಯಗಳನ್ನಾಗಲಿ ಮಾಡುವ ಹಾಗೂ ಖರೀದಿಸುವ ಅಗತ್ಯವಿಲ್ಲ. ಈ ಹಬ್ಬವನ್ನು ಜಾತಿ ಮತಾತೀತವಾಗಿ ನೀವು ಆಚರಿಸಬಹುದು ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೆ ನಿಮ್ಮ ಹೆಸರಿರುವ ಮತಗಟ್ಟೆಗೆ ತೆರಳಿ ಸೂಕ್ತವಾದ ಗುರುತಿನ ಚೀಟಿಯನ್ನು ತೋರಿಸಿ ಮತ ಹಾಕುವುದು; ಆದರೆ ಈ ಹಬ್ಬವನ್ನು ಕೇವಲ ೧೮ ವರ್ಷ ಮೇಲ್ಪಟ್ಟವರು ಮಾತ್ರ ಆಚರಿಸಬೇಕೆಂಬ ನಿಯಮವಿದೆ. ಮತ್ತೋಂದು ನಿಯಮವೆಂದರೆ ನಿಮಗೆ ಪರಿಚಯವಿರುವ ಜನರನ್ನು ಈ ಹಬ್ಬದ ಆಚರಣೆಯಲ್ಲಿ ಪಾಲ್ಗೋಳ್ಳುವಂತೆ ಮಾಡುವುದು.
ಇದು ತಮಾಷೆಯ ಮಾತಲ್ಲ ಜಗತ್ತಿನ ಅತಿದೊಡ್ಡ ಪ್ರಜಾತಂತ್ರ ದೇಶವಾದ ಭಾರತದಲ್ಲಿ ಇತರ ದೇಶಗಳಿಗೆ ಹೊಲಿಸಿದರೆ ಮತದಾನದ ಬಗ್ಗೆ ಅಭಿಮಾನವಾಗಲಿ ಆ ಪ್ರಮಾಣದಲ್ಲಿಲ್ಲ ಎಂಬುದು ವಿಪರ್ಯಾಸ. ಭಾರತದ ಪ್ರತಿ ಚುನಾವಣೆಯ ಪಟ್ಟಿಯಲ್ಲಿ ಹೊಸ ಮತದಾರರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬುದು ಸಂತಸದ ಸಂಗತಿಯಾದರೂ ಯುವ ಮತದಾರರಲ್ಲಿ ಮತದಾನ ಅಥವಾ ರಾಜಕೀಯದ ಬಗ್ಗೆ ಎಷ್ಟರಮಟ್ಟಿಗೆ ಅರಿವಿದೆ ಎಂಬ ಅಂಶವು ಸಹ ಅಷ್ಟೇ ಪ್ರಮುಖವಾದದ್ದು.ಹೊಸ ಮತದಾರಲ್ಲಿ ಮತದಾನದ ಕುರಿತು ಮಾಹಿತಿ ನೀಡುವುದು. ಮತ್ತು ಮತಯಂತ್ರದ ಬಳಿ ಬಂದಾಗ ತಮ್ಮ ಕಾರ್ಯವನ್ನು ತಿಳಿಸುವುದು ಸಹ ಅಷ್ಟೇ ಮುಖ್ಯವಾದದ್ದು ಉದಾಹರಣೆಗೆ ಇಂದು ನಾನು ಮತದಾನ ಮಾಡುತ್ತಿದ್ದಾಗ ನನ್ನ ಮುಂದಿನ ವ್ಯಕ್ತಿಗೆ ಮತಯಂತ್ರದಲ್ಲಿ ಮತ ಚಲಾಯಿಸುವ ಕ್ರಮವೇ ತಿಳಿದಿರಲಿಲ್ಲ. ಆತನ ಸಹಾಯಕ್ಕೆ ಮತಗಟ್ಟೆಯ ಅಧಿಕಾರಗಳು ಬರಬೇಕಾಯಿತು.
ಕೇವಲ ನನ್ನ ಒಂದು ಮತದಿಂದ ದೇಶವೇನು ಬದಲಾಗುವುದಿಲ್ಲ ಎಂದು ತಿರಸ್ಕಾರ ಮಾಡುವವರಿಗೆ ಇಲ್ಲಿದೆ ಒಂದು ಚುರು ಇತಿಹಾಸ
ಒಂದು ವೋಟಿನಿಂದ ಸೋತ ವಾಜಪೇಯಿ ಸರ್ಕಾರ ೧೯೯೯ರಲ್ಲಿ ಈ ಘಟನೆಗೆ ದೇಶ ಸಾಕ್ಷಿಯಾಯಿತು. ಕೇವಲ ಒಂದು ವೋಟಿನಿಂದ ೧೩ ತಿಂಗಳ ಎನ್ಡಿಎ ಸರ್ಕಾರ ಜಯಲಲಿತಾ ಅವರ ನಿಲುವಿನಿಂದ ಮತ್ತು ಆ ಒಂದು ಮತದ ಕೊರತೆಯಿಂದ ಕೇಂದ್ರದಲ್ಲಿ ಅಧಿಕಾರ ಕಳೆದುಕೊಳ್ಳುವಂತಾಯಿತು.
೨೦೦೪ರಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಇವಿಎಂ ಯಂತ್ರದ ಮೂಲಕ ಮತದಾನ ಪ್ರಾರಂಭವಾಯಿತು. ಚಾಮರಾಜನಗರದಲ್ಲಿ ಜೆಡಿಎಸ್ನಿಂದ ಎ.ಆರ್. ಕೃಷ್ಣಮೂರ್ತಿಯ ವಿರುದ್ಧ ಕಾಂಗ್ರೇಸ ಪಕ್ಷದ ಆರ್. ಧ್ರುವನಾರಾಯಣ ಕೇವಲ ಒಂದು ಮತದ ಅಂತರದಿಂದ ಜಯಗಳಿಸಿದ್ದರು ವಿಪರ್ಯಾಸವೆಂದರೆ ಎ.ಆರ್. ಕೃಷ್ಣಮೂರ್ತಿಯವರ ವಾಹನ ಚಾಲನೆ ಅಂದು ಮತದಾನ ಮಾಡಿರಲಿಲ್ಲ.
೨೦೦೮ರಲ್ಲಿ ರಾಜಸ್ಥಾನ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೇಸ್ನ ಮುಖ್ಯಮಂತ್ರಿ ಅಭ್ಯರ್ಥಿ ಸಿ.ಪಿ.ಜೋಶಿ ಒಂದು ಮತದ ಅಂತರದಿಂದ ಬಿಜೆಪಿಯ ಕಲ್ಯಾಣಸಿಂಗ್ ಚೌಹಾಣ್ ಎದುರಿನಲ್ಲಿ ಸೋತಿದ್ದರು.
ಮತಾದಾನದಿಂದ ದೇಶದ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ, ಸೂಕ್ತವ್ಯಕ್ತಿಗಳ ಆಯ್ಕೆಯಿಂದ ಅಭಿವೃದ್ದಿಗೆ ಇನ್ನಷ್ಟು ಬಲ ತುಂಬಿದಂತಾಗುತ್ತದೆ. ಆದ್ದರಿಂದ ಎಲ್ಲರೂ ಇಂದು ಈ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಿ ಮತ್ತು ನಿಮ್ಮ ಹರಕೆಯ ಮತವನ್ನು ಸಲ್ಲಿಸಉವುದಷ್ಟೇ ಅಲ್ಲದೆ ಇತರರಿಂದಲೂ ಅವರ ಪಾಲಿನ ಹರಕೆಯನ್ನು ಸಲ್ಲಿಸಲು ಪ್ರಚೋದಿಸಿ .