ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭ್ಯರ್ಥಿ ಸಿ.ಟಿ. ರವಿ ತಡರಾತ್ರಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಅವರನ್ನು ನಗರದ ಆಶ್ರಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅನಾರೋಗ್ಯದ ನಡುವೆಯೂ ಚಿಕ್ಕಮಗಳೂರು ಅಷ್ಟೇ ಅಲ್ಲದೆ, ಬೇರೆ ಬೇರೆ ಕ್ಷೇತ್ರಗಳಿಗೆ ಹೋಗಿ ಸಿಟಿ ರವಿ ಚುನಾವಣಾ ಪ್ರಚಾರ ನಡೆಸುತ್ತಿದ್ದರು. ಏಪ್ರಿಲ್ 16 ರಂದು ಅವರಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದರು.
ಆ ಹಿನ್ನೆಲೆಯಲ್ಲಿ ಅವರ ಪತ್ನಿ ಪಲ್ಲವಿ ರವಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು. ಪ್ರಚಾರದ ವೇಳೆಯಲ್ಲಿ ರವಿ ಅವರ ಬಗ್ಗೆ ಮಾತನಾಡುತ್ತಾ ನಿಮ್ಮ ಪ್ರೀತಿ ಮಗನಿಗೆ ಮತ ಹಾಕಿ ಗೆಲ್ಲಿಸಿ, ಅವರ ದಿನಚರಿ ಮುಂಜಾನೆ 4:30ಕ್ಕೆ ಆರಂಭವಾಗಿದ್ದರೆ ರಾತ್ರಿ 12 ಗಂಟೆಗೆ ಮಲಗುತ್ತಾರೆ. ನಾನು ಅವರನ್ನು ನೋಡುವುದು ತಿಂಗಳಿಗೆ ಎರಡು ಮೂರು ಬಾರಿ ಎಂದು ಪಲ್ಲವಿ ರವಿ ಅವರು ಭಾವುಕರಾಗಿ ಚಿಕ್ಕಮಂಗಳೂರು ಜನರ ಎದುರು ಭಾಷಣ ಮಾಡಿದರು.