ಕರ್ನಾಟಕವು ದಕ್ಷಿಣಭಾರತದಲ್ಲಿರುವ ಸುಂದರ ರಾಜ್ಯಗಳಲ್ಲಿ ಒಂದು ಇಲ್ಲಿ ವಿವಿಧ ರೀತಿಯ ಪ್ರಾಕೃತಿಕ ಸೊಗಡಿನ ತಾಣಗಳಿವೆ. ಪಶ್ಚಿಮಘಟ್ಟದ ಸೌಂದರ್ಯಕ್ಕೆ ಮನಸೋಲದವರಿಲ್ಲ. ಚಾರಣ ಪ್ರಿಯರಿಗೆ ಇಲ್ಲಿ ಹಲವಾರು ಮಂತ್ರಮುಗ್ದಗೊಳಿಸುವ ಸ್ಥಳಗಳಿವೆ. ಚಾರಣ ಹೋಗಬಯಸುವವರಿಗಾಗಿ ಇಲ್ಲಿದೆ ನೋಡಿ ಕೆಲವು ಆಕರ್ಷಿಣಿಯ ಸ್ಥಳಗಳು.
ಝಡ್ ಪಾಯಿಂಟ್, ಕೆಮ್ಮಣ್ಣುಗುಂಡಿ:
ಕೆಮ್ಮಣ್ಣುಗುಂಡಿಯ ರಾಜಭವನದಿಂದ ಮೂರು ಕಿ.ಮೀ ಟ್ರೆಕ್ ಮಾಡಿದ ನಂತರ ಸಿಗುವ ತಾಣವೇ ಝಡ್ಪಾಯಿಂಟ್. ಇಲ್ಲಿಂದ ಪಶ್ಚಿಮಘಟ್ಟದ ಭವ್ಯ ಸೌಂದರ್ಯವನ್ನು ಸವಿಯಬಹುದು. ಇಲ್ಲಿಗೆ ಬರಬೇಕಾದರೆ ದಟ್ಟ ಕಾಡಿನ ನಡುವೆ ನಡೆಯುತ್ತಾ ಶಾಂತಿ ಜಲಪಾತವನ್ನು ದಾಟಿ ಬರಬೇಕಾಗುತ್ತದೆ. ಶಾಂತಿ ಜಲಪಾತದವರೆಗಿನ ಹಾದಿಯು ಸುಲಭವಾಗಿದ್ದು, ಇಲ್ಲಿಂದ ಮುಂದೆ ದಾರಿ ಕಡಿದಾಗಿದ್ದು, ಸ್ವಲ್ಪ ತ್ರಾಸವೆನಿಸಬಹುದು.
ಕುದುರೆಮುಖ:
ಚಿಕ್ಕಮಕ್ಕಳೂರಿನಲ್ಲಿರುವ ಕುದುರೆಮುಖ ಪ್ರದೇಶವು ವಿಶೇಷವಾದ ಸಸ್ಯ ಸಂಪತ್ತಿನಿಂದ ಕೂಡಿದ್ದು, ಪ್ರಕೃತಿ ಪ್ರಿಯರಿಗೆ ಮನಸ್ಸಿಗೆ ಉಲ್ಲಾಸ ನೀಡಬಲ್ಲದು. ಚಾರಣದ ಸಮಯದಲ್ಲಿ ನವಿಲು ಜಿಂಕೆಗಳಂತಹ ವನ್ಯಮೃಗಗಳು, ಪಕ್ಷಿಗಳು ನಿಮ್ಮ ಕಣ್ಣಿಗೆ ಕಾಣಿಸಬಹುದು.
ಹಂಪಿ:
ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾಗಿರುವ ಐತಿಹಾಸಿಕ ಮಹತ್ವದ ಪ್ರವಾಸಿ ತಾಣ ಹಂಪಿ. ಇದು ತಾರಣಕ್ಕೂ ಹೆಸರುವಾಸಿಯಾಗಿದೆ. ಇಲ್ಲಿನ ಹೇಮಕೂಟ, ಮಾತಂಗ, ಅಂಜನೇಯಬೆಟ್ಟಗಳು ಚಾರಣ ಪ್ರಿಯರಿಗೆ ಪ್ರಿಯವಾದ ಪ್ರದೇಶಗಳು.
ಕೊಡಚಾದ್ರಿ:
ಶಿವಮೊಗ್ಗಜಿಲ್ಲೆಯಲ್ಲಿರುವ ಕೊಡಚಾದ್ರಿ ಬೆಟ್ಟವು ಪ್ರಮುಖ ಚಾರಣ ತಾಣಗಳಲ್ಲಿ ಒಂದು. ಇಲ್ಲಿಂದ ಕೊಲ್ಲೂರಿನ ತನಕ ಚಾರಣ ಮಾಡಬಹುದು. ಅಪರೂಪದ ಕೆಲವು ಪ್ರಾಣಿ ಪಕ್ಷಿಗಳನ್ನು ನೋಡಬಹುದು. ಕಾಳಿಂಗ ಸರ್ಪ ಈ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುವುದು ಇಲ್ಲಿನ ವಿಶೇಷ.
ಮುಳ್ಳಯ್ಯನಗಿರಿ:
ಕರ್ನಾಟಕದ ಅತಿ ಎತ್ತರದ ಬೆಟ್ಟ ಮುಳ್ಳಯ್ಯನಗಿರಿ. ಅತ್ಯಂತ ದುರ್ಗಮ ಹಾದಿಯನ್ನು ಹೊಂದಿದ್ದು, ಚಾರಣಿಗರಿಗೆ ಸವಾಲೆನಿಸುವುದರಿಂದ ಇದನ್ನು ಮಿನಿ ಹಿಮಾಲಯ ಎಂದೂ ಹೇಳುತ್ತಾರೆ. ಬೆಟ್ಟವನ್ನು ಹತ್ತಿದ ನಂತರ ಕಾಣಸಿಗುವ ಪ್ರಕೃತಿಯ ಸೊಬಗು ನಡೆದುಬಂದ ಹಾದಿಯ ದಣಿವನ್ನು ತಣಿಸುತ್ತದೆ