ರವೀಂದ್ರನಾಥ ಟಾಗೋರ್ ಕವಿ, ಬರಹಗಾರ, ನಾಟಕಕಾರ, ಸಂಯೋಜಕ, ತತ್ವಜ್ಞಾನಿ, ಸಮಾಜ ಸುಧಾರಕ ಮತ್ತು ವರ್ಣಚಿತ್ರಕಾರ. ಅವರು 19 ನೇ ಶತಮಾನದ ಕೊನೆಯಲ್ಲಿ ಮತ್ತು 20 ನೇ ಶತಮಾನದ ಆರಂಭದಲ್ಲಿ ಸಂದರ್ಭೋಚಿತ ಆಧುನಿಕತೆಯೊಂದಿಗೆ ಬಂಗಾಳಿ ಸಾಹಿತ್ಯ ಮತ್ತು ಸಂಗೀತ ಮತ್ತು ಭಾರತೀಯ ಕಲೆಯನ್ನು ಮರುರೂಪಿಸಿದರು. ಗೀತಾಂಜಲಿಯ “ಆಳವಾದ ಸೂಕ್ಷ್ಮ, ತಾಜಾ ಮತ್ತು ಸುಂದರ” ಕವಿತೆಯ ಲೇಖಕ ಅವರು 1913 ರಲ್ಲಿ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ಗೆದ್ದ ಮೊದಲ ಯುರೋಪಿಯನ್ ಮತ್ತು ಮೊದಲ ಗೀತರಚನೆಕಾರರಾಗಿದ್ದಾರೆ. ಠಾಕೂರರ ಕಾವ್ಯಾತ್ಮಕ ಗೀತೆಗಳನ್ನು ಆಧ್ಯಾತ್ಮಿಕ ಮತ್ತು ಆಕರ್ಷಣೀಯವೆಂದು ಪರಿಗಣಿಸಲಾಯಿತು. “ಬಂಗಾಳದ ಬಾರ್ಡ್” ಎಂದು ಕರೆಯಲ್ಪಡುವ ಠಾಕೂರರನ್ನು ಗುರುದೇಬ್, ಕೋಬಿಗುರು, ಬಿಸ್ವೊಕೊಬಿ ಎಂದು ಕರೆಯಲಾಗುತ್ತಿತ್ತು.
ಅವರ ರಚನೆಗಳನ್ನು ಎರಡು ರಾಷ್ಟ್ರಗಳು ರಾಷ್ಟ್ರಗೀತೆಗಳಾಗಿ ಪರಿಗಣಿಸಿದವು ಭಾರತದ “ಜನ ಗಣ ಮನ” ಮತ್ತು ಬಾಂಗ್ಲಾದೇಶದ “ಅಮರ್ ಶೋನಾರ್ ಬಾಂಗ್ಲಾ”. ಇಂತಹ ರಾಷ್ಟç ಕವಿ ಮಂಗಳೂರಿಗೆ ಭೇಟಿ ನೀಡಿದ್ದಾರೆ ಎಂಬುದು ಹೆಮ್ಮೆಯ ವಿಷಯ. ನೂರು ವರ್ಷಗಳ ಹಿಂದೆ ಅಂದರೆ 1922 ರಲ್ಲಿ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿಗೆ ಭೇಟಿ ನೀಡಿದ್ದರು. ಅಂದಿನ ಪ್ರಾಶುಂಪಾಲ ಗೋವಿಂದ್ ಕೃಷ್ಣ ಚೆತೂರುರವರ ಅಹ್ವಾನ ಮೇರೆಗೆ ಭೇಟಿ ನೀಡಿದ್ದರು. 1996ರಲ್ಲಿ 125 ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಕಾಲೇಜಿನ ಅಕೆಡಾಮಿ ಹಾಲ್ ನ್ನು ರವೀಂದ್ರ ಕಲಾ ಭವನ ಎಂದು ನಾಮಕರಿಸಲಾಯಿತ್ತು. ವಿಶ್ವವಿದ್ಯಾನಿಲಯ ಕಾಲೇಜು 150 ವರ್ಷಗಳ ಇತಿಹಾಸ ಹೊಂದಿದ ಕಾಲೇಜು ಆಗಿದೆ. ರವೀಂದ್ರ ಕಲಾ ಭವನದ ಗೋಡೆಯಲ್ಲಿ ಬಿಳಿಯ ಮಾರ್ಬಲ್ ನಲ್ಲಿ ಇವರ ಭೇಟಿಯ ಕುರಿತಾದ ಅಧಿಕೃತ ಮಾಹಿತಿಯನ್ನು ಇಂದಿಗೂ ಕಾಣಬಹದು.
ಮಂಗಳೂರಿನ ಹೆಸರಂತ ಪಾರ್ಕ್ ಟಾಗೋರ್ ಪಾರ್ಕ್ ನಲ್ಲಿ ವಿಶ್ರಾಂತಿಯನ್ನು ಪಡೆಯತ್ತಾ ಪ್ರಕೃತಿ ಸೌಂದರ್ಯವನ್ನು ಸವಿದಿದ್ದರು. ಇಲ್ಲಿಂದಲೇ ಸಮುದ್ರವನ್ನು ಕಂಡು ಸಂಪೂರ್ಣವಾಗಿ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇಂದಿಗೂ ಇವರ ನೆನಪಿನಾರ್ಥವಾಗಿ ಪಾರ್ಕ್ನಲ್ಲಿ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಇಲ್ಲಿ ಸಮುದ್ರ ಕಾಣಲೆಂದು ವೀವ್ ಗ್ಯಾಲರಿಯನ್ನು ನಿರ್ಮಿಸಲಾಗಿದೆ. ಹಾಗೂ ಪಾರ್ಕ್ನ್ನು ಉತ್ತಮವಾಗಿ ನಿರ್ವಹಿಸಲಾಗುತ್ತಿದೆ. ಸಂಜೆಯ ಸಮಯ ಕಳೆಯಲು ಸಾಕಷ್ಟು ಮಂದಿ ವಿವಿಧ ವಯಸ್ಸಿನ ವರ್ಗದ ಜನರು ಬರುತ್ತಾರೆಠಿಂದು
ಇAದು ಟಾಗೋರರ ಜನುಮ ದಿನ (7 ಮೇ 1861). ಟಾಗೋರರ ಸಾಹಿತ್ಯ ದೇಶ ವಿದೇಶಗಳಲ್ಲಿ ಪಸರಿಸಿದರೆ ಅವರು ಸ್ವಯಂ ಮಂಗಳೂರಿಗೆ ಬೇಟಿ ನೀಡಿ ತಮ್ಮ ಹೆಜ್ಜೆ ಗುರತು ಒಂದನ್ನು ಅಳಿಯದಂತೆ ನೀಡಿದ್ದಾರೆ.