ಕುಮಾರ ಪರ್ವತವು ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿದೆ. ಕುಕ್ಕೆ ಸುಬ್ರಮಣ್ಯ ಎಂಬ ಪ್ರಾಚೀನ ಮತ್ತು ಪ್ರಸಿದ್ಧ ದೇವಾಲಯವು ಬೆಟ್ಟದ ತಪ್ಪಲಿನಲ್ಲಿದೆ. ಕುಕ್ಕೆ ಸುಬ್ರಮಣ್ಯ ದೇವಾಲಯದ ಹಿಂಭಾಗದಲ್ಲಿ, ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯದ ಹಚ್ಚ ಹಸುರಿನ ಕಾಡಿನ ದಟ್ಟವಾದ ಹೊದಿಕೆಯೊಂದಿಗೆ ಶೇಷ ಪರ್ವತವು ಎತ್ತರವಾಗಿ ನಿಂತಿದೆ.
ಕುಮಾರ ಪರ್ವತ ಅಥವಾ ಪುಷ್ಪಗಿರಿ ಎಂಬುದು ಶಿಖರದ ಹೆಸರು. ಆದರೆ ಇದು ಮರೆಮಾಚಿದಂತಿದ್ದು ಶೇಷ ಪರ್ವತವನ್ನು ದಾಟಿದ ನಂತರವೇ ಗೋಚರಿಸುತ್ತದೆ, ಆದರೆ ಇಡೀ ಹಾದಿಯನ್ನು ಕುಮಾರ ಪರ್ವತ ಚಾರಣ ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ.
ಕುಮಾರ ಪರ್ವತವು ಕೊಡಗು ಜಿಲ್ಲೆಯ ಎರಡನೇ ಅತಿ ಎತ್ತರದ ಶಿಖರವಾಗಿದ್ದು, ಕರ್ನಾಟಕದ ನಾಲ್ಕನೇ ಅತಿ ಎತ್ತರದ ಶಿಖರವಾಗಿದೆ. ಬೆಳಗಾಗುತ್ತಿದ್ದಂತೆ, ಶೇಷ ಪರ್ವತದ ಮೊದಲ ನೋಟವು ಚಾರಣರು ಮಾಡಲಿರುವ ಸಾಹಸದ ಕಲ್ಪನೆಯನ್ನು ನೀಡುತ್ತದೆ ಮತ್ತು ಅದು ಚಾರಣ ಪ್ರಿಯರ ಹೃದಯವನ್ನು ಬಡಿದುಕೊಳ್ಳುವಂತೆ ಮಾಡುತ್ತದೆ.
1,700 ಮೀಟರ್ (ಸುಮಾರು 5,600 ಅಡಿ) ಗಿಂತ ಸ್ವಲ್ಪ ಹೆಚ್ಚು ಎತ್ತರಕ್ಕೆ ಏರುವ ಕುಮಾರ ಪರ್ವತವು ಕರ್ನಾಟಕದ ಅತ್ಯಂತ ಸವಾಲಿನ ಚಾರಣವಾಗಿದೆ.
ಕುಮಾರ ಪರ್ವತ ಚಾರಣವು 22 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ ಮತ್ತು ಇದನ್ನು ಸಾಮಾನ್ಯವಾಗಿ 2 ದಿನಗಳಲ್ಲಿ ಚಾರಣವನ್ನು ಮಾಡಬಹುದಾಗಿದೆ.
ಕುಮಾರ ಪರ್ವತ ಚಾರಣವು ದಟ್ಟ ಕಾಡುಗಳಿಂದ ಹಿಡಿದು ವಿಶಾಲವಾದ ಹುಲ್ಲುಗಾವಲುಗಳು ಮತ್ತು ಜಲಪಾತಗಳು ಚಾರಣಿಗರ ಮನಸೂರೆಗೊಳ್ಳುತ್ತದೆ.ಕುಮಾರ ಪರ್ವತ ಚಾರಣವನ್ನು ಅನುಭವಿ ಚಾರಣಿಗರಿಗೆ ಉತ್ತಮವಾದದ್ದು .
ಮೊದಲ ಬಾರಿ ಚಾರಣ ಮಾಡುವವರು ಮೊದಲು ಫಿಟ್ನೆಸ್ ದಿನಚರಿಯನ್ನು ಅನುಸರಿಸುವುದು ಒಳ್ಳೆಯದು. ಚಾರಣದ ಆರಂಭದಲ್ಲಿ ದಟ್ಟವಾದ ಅರಣ್ಯ ಹಾದಿಯು ಕುಮಾರ ಪರ್ವತದ ಚಾರಣವು ದಟ್ಟವಾದ ಕಾಡಿನಿಂದ ಪ್ರಾರಂಭವಾಗುತ್ತದೆ, ಮರಗಳು ಸೂರ್ಯನ ಬೆಳಕನ್ನು ನೆಲಕ್ಕೆ ಪ್ರವೇಶಿಸದಂತೆ ತಡೆಯುತ್ತಿರುತ್ತವೆ. ಮರಗಳ ಮೂಲಕ ಭೇದಿಸುವ ಸೂರ್ಯನ ಬೆಳಕು ಬಹಳ ಕಡಿಮೆ ಪ್ರಮಾಣದಲ್ಲಿ ಭೂಮಿಯನ್ನು ಸ್ಷರ್ಶಿಸುತ್ತವೆ.
ಪಶ್ಚಿಮ ಘಟ್ಟಗಳ ಮನಮೋಹಕ ನೋಟಗಳು ಪಶ್ಚಿಮ ಘಟ್ಟಗಳು ಪ್ರಕೃತಿಯ ಅತ್ಯುತ್ತಮ ಸಂರಕ್ಷಿತ ರಹಸ್ಯವಾಗಿದೆ. ಕುಮಾರ ಪರ್ವತ ಹಾದಿಯುದ್ಧಕ್ಕೂ ಬೆರುಗುಗೊಳಿಸುವ ರಮಣೀಯ ದೃಶ್ಯಗಳು ಕಾಣಸಿಗುತ್ತದೆ.
ಹುಲ್ಲುಗಾವಲುಗಳ ವಿಶಾಲ ವಿಸ್ತಾರ ಅರಣ್ಯ ವಿಭಾಗದ ನಂತರದ ಹುಲ್ಲುಗಾವಲುಗಳು ಕಣ್ಣಿಗೆ ರಸದೌತಣ ನೀಡುತ್ತವೆ. ಮಾನ್ಸೂನ್ ನಂತರದ ತಿಂಗಳುಗಳಲ್ಲಿ ಅಥವಾ ಚಳಿಗಾಲದ ತಿಂಗಳುಗಳಲ್ಲಿ ಚಾರಣ ಮಾಡಿದರೂ-ಹುಲ್ಲುಗಾವಲುಗಳು ಸೊಂಪಾದ ಹಸಿರು ಅಥವಾ ಚಿನ್ನದ ಕಂದು ಬಣ್ಣದಲ್ಲಿರುತ್ತವೆ – ಪ್ರತಿ ಸೀಸನ್ಲ್ಲಿ ಸಂಪೂರ್ಣವಾಗಿ ವಿಭಿನ್ನ ದೃಶ್ಯಾವಳಿಗಳನ್ನು ನೀಡುತ್ತವೆ.
ಶೇಷ ಪರ್ವತದ ನಂತರದ ಅರಣ್ಯ ಭಾಗವು ಚಾರಣದ ಮತ್ತೊಂದು ಪ್ರಮುಖ ಅಂಶವಾಗಿದೆ. ಕಾಡನ್ನು ಪ್ರವೇಶಿಸಿದ ಕೂಡಲೇ ಅನೇಕ ಪಕ್ಷಿಗಳು ತಮ್ಮ ಚಿಲಿಪಿಲಿ ನಾದದೊಂದಿಗೆ ಚಾರಣರನ್ನು ಸ್ವಾಗತಿಸುತ್ತವೆ. ಇಲ್ಲಿ ವಿವಿಧ ಬಣ್ಣದ ಚಿಟ್ಟೆಗಳನ್ನು ಸಹ ಕಾಣಬಹುದು.