ಬೆಂಗಳೂರು: ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ಕಾರ್ಕಳ ಕ್ಷೇತ್ರವು ಒಂದು. ಬಿಜೆಪಿಯಿಂದ ಸುನಿಲ್ ಕುಮಾರ್, ಕಾಂಗ್ರೆಸ್ ನಿಂದ ಮುನಿಯಾಲು ಉದಯಕುಮಾರ್ ಶೆಟ್ಟಿ, ಪಕ್ಷೇತರಾಗಿ ಪ್ರಮೋದ್ ಮುತಾಲಿಕ್ ಅವರು ಮುಖಾಮುಖಿಯಾಗಿ ಸ್ಫರ್ಧಿಸುದರಿಂದ ತೀವ್ರವಾದ ಪೈಪೋಟಿ ನಡೆಯಲಿದೆ.
ಜೆಡಿಎಸ್ ನಿಂದ ಶ್ರೀಕಾಂತ್ ಪೂಜಾರಿ ಸ್ಪರ್ಧೆಸುತ್ತಿದ್ದ, ಇನ್ನು ಹಲವು ಪಕ್ಷೇತರ ಅಭ್ಯರ್ಥಿಗಳು ಪ್ರತಿದಂತೆ ಈ ಬಾರಿಯು ಕಣದಲ್ಲಿದ್ದಾರೆ. ಕಾರ್ಕಳದಲ್ಲಿ ಪ್ರತಿವರ್ಷ ಬಿಜೆಪಿ ಮತ್ತು ಕಾಂಗ್ರೇಸ್ ನಡುವೆ ಹಣಾಹಣಿ ನಡೆಯುತ್ತಿತ್ತು ಆದರೆ ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಪ್ರಮೋದ್ ಮುತಾಲಿಕ್ ಕಣದಲ್ಲಿರುವುದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಈ ಬಾರಿಯ ಕಾರ್ಕಳ ಕ್ಷೇತ್ರದ ಚುನಾವಣೆಯ ಕದನ ಬಹಳ ಕುತೂಹಲಕಾರಿಯಾಗಿದೆ. ಹಿಂದು ಸಂಘಟನೆಯ ಮುತಾಲಿಕ್ ಸ್ವರ್ಧೆಯಲ್ಲಿರುವುದರಿಂದ ಬಿಜೆಪಿ ಹಿಂದು ಮತದಾರರ ಮತ ಮುತಾಲಿಕ್ ಕಡೆ ಹೋಗುವ ಸಾಧ್ಯೆತೆಗಳಿವೆ. ಹಿಂದುತ್ವ ಮತ್ತು ಬಿಜೆಪಿ ಪಕ್ಷ ಎಂದು ಹಿಂದು ಮತದಾರರ ಮತ ಮುತಾಲಿಕ್ ಮತ್ತು ಸುನೀಲ್ ಕುಮಾರ್ಗೆ ಹಂಚಿಹೋಗುವ ಸಾಧ್ಯತೆಗಳಿವೆ.
ಕಾರ್ಕಳ ಕ್ಷೇತ್ರದಲ್ಲಿ ಸುನೀಲ್ ಕುಮಾರ್ ಸಾಕಷ್ಟು ಅಭಿವೃದ್ಧಿಯ ಕೆಲಸಗಳನ್ನು ಮಾಡಿ ಕ್ಷೇತ್ರದ ಜನರ ವಿಶ್ವಾಸವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡಿದರೆ ಸುನೀಲ್ ಕುಮಾರ್ಗೆ ಗೆಲುವು ಸಿಗುವ ಸಾಧ್ಯತೆಗಳಿವೆ. ಹತ್ತು ಹಲವು ಯೋಜನೆಗಳಿಗಾಗಿ ಕೋಟಿ ಕೋಟಿ ಅನುದಾನವನ್ನು ಸುನೀಲ್ ಕುಮಾರ್ ಕಾರ್ಕಳ ಕ್ಷೇತ್ರಕ್ಕೆ ಮಂಜೂರು ಮಾಡಿಸಿಕೊಂಡಿದ್ದಾರೆ. ಹಾಗೆಯೇ ಸುನೀಲ್ ಕುಮಾರ್ ಸದಾ ಜನರೊಂದಿಗೆ ಬೆರೆತು ಅವರ ಕಷ್ಟಗಳಿಗೆ ಸ್ಪಂದಿಸುದರಿಂದ ಕ್ಷೇತ್ರದ ಜನತೆ ಅವರನ್ನು ಕೈ ಬಿಡಲು ಸಾಧ್ಯವಿಲ್ಲ.
ಇನ್ನೂ ಕಾಂಗ್ರೇಸ್ ಅಭ್ಯರ್ಥಿ ಉದಯ್ ಕುಮಾರ್ ಶೆಟ್ಟಿ ಅವರು ಅನೇಕ ವರ್ಷಗಳಿಂದ ಸಾರ್ವಜನಿಕರಂಗದಲ್ಲಿ ಇರುವವರು, ಸಾಕಷ್ಟು ಸುಸ್ಥಿತಿವಂತರು, ದಾನ ಧರ್ಮದಲ್ಲಿ ಎತ್ತಿದ ಕೈ , ಬಡಬಗ್ಗರಿಗೆ ಕೈಲಾದ ಸಹಾಯವನ್ನು ಮಾಡುವ ಮನಸುಳ್ಳವರು. ಹಾಗೆಯೇ ಪಕ್ಷದ ಮತಗಳು ಮಾತ್ರವಲ್ಲದೆ ವೈಯಕ್ತಿಕ ವರ್ಚಸ್ಸಿನ ಮತಗಳು ಅವರಿಗೆ ದೊರೆಯಲಿದೆ ಎನ್ನುವ ಮಾತು ಕೂಡ ಕೇಳಿಬರುತ್ತಿದೆ.
ಹೀಗಾಗಿ ಯಾರ ಮತ ಯಾವ ಕಡೆಗೆ ಎನ್ನುವುದನ್ನು ಈಗಲೇ ನಿರ್ಧರಿಸಲು ಸಾಧ್ಯವಿಲ್ಲ. ಒಟ್ಟಿನಲ್ಲಿ ಕಾರ್ಕಳ ಕ್ಷೇತ್ರ ತ್ರಿಕೋನ ಸ್ಪರ್ಧೆಯಲ್ಲಿದ್ದು, ಗೆಲುವಿನ ಕಿರೀಟವನ್ನು ಯಾರು ಮೂಡಿಗೇರಲಿದೆ ಎಂಬುದೇ ಕುತೂಹಲಕಾರಿಯಾಗಿದೆ.