ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ
ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ)
ಭಾರತೀಯ ಚುನಾವಣಾ ಆಯೋಗದಿಂದ ರಾಷ್ಟ್ರೀಯ
ಪಕ್ಷದ ಮಾನ್ಯತೆ ದೊರಕಿದೆ. ಇದೇ ವೇಳೆ, ತೃಣಮೂಲ
ಕಾಂಗ್ರೆಸ್ (ಟಿಎಂಸಿ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ),
ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಪಕ್ಷಗಳು
ತಮ್ಮ ರಾಷ್ಟ್ರೀಯ ಪಕ್ಷದ ಸ್ಥಾನವನ್ನು
ಕಳೆದುಕೊಂಡಿವೆ. ಹಾಗಾದರೆ ರಾಷ್ಟ್ರೀಯ ಪಕ್ಷ ಎಂದು
ಘೋಷಿಸಲು ಅಥವಾ ಆ ಸ್ಥಾನ ಕಳೆದುಕೊಳ್ಳುವುದು
ಹೇಗೆ?
ಚುನಾವಣಾ ಆಯೋಗವು ಪ್ರತಿ ರಾಜ್ಯ ವಿಧಾನಸಭೆ
ಚುನಾವಣೆ ಹಾಗೂ ಲೋಕಸಭಾ ಚುನಾವಣೆಯ ನಂತರ
ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಚುನಾವಣಾ
ಕಾರ್ಯಕ್ಷಮತೆಯನ್ನು ಪರಿಶೀಲಿಸುತ್ತದೆ. ರಾಷ್ಟ್ರೀಯ
ಪಕ್ಷವೆಂದು ಗುರುತಿಸುವ ನಿಯಮಗಳನ್ನು
ಆಯೋಗವು ಚುನಾವಣಾ ಚಿಹ್ನೆಗಳ (ಮೀಸಲಾತಿ ಮತ್ತು
ಹಂಚಿಕೆ) ಆದೇಶ, 1968 ರ ಪ್ಯಾರಾ 6ಬಿ ನಲ್ಲಿ ನಿರ್ದಿಷ್ಟಪಡಿಸಿದೆ.
ಒಂದು ಪಕ್ಷವು ಈ ಕೆಳಗಿನ ಷರತ್ತುಗಳಲ್ಲಿ ಒಂದನ್ನು
ಪೂರೈಸಿದರೆ ರಾಷ್ಟ್ರೀಯ ಸ್ಥಾನಮಾನವನ್ನು ಪಡೆಯಲು
ಅರ್ಹವಾಗುತ್ತದೆ:
(ಎ) ಕನಿಷ್ಠ ನಾಲ್ಕು ರಾಜ್ಯಗಳಲ್ಲಿ ರಾಜ್ಯ ಪಕ್ಷವೆಂದು
ಗುರುತಿಸಲ್ಪಟ್ಟರೆ,
(ಬಿ) ನಾಲ್ಕು ರಾಜ್ಯಗಳಲ್ಲಿ ಕಳೆದ ಲೋಕಸಭೆ ಅಥವಾ
ವಿಧಾನಸಭಾ ಚುನಾವಣೆಗಳಲ್ಲಿ ಚಲಾವಣೆಯಾದ ಒಟ್ಟು
ಮತಗಳ ಪೈಕಿ ಕನಿಷ್ಠ 6% ಮತಗಳನ್ನು ಪಡೆದರೆ
ಮತ್ತು ಹೆಚ್ಚುವರಿಯಾಗಿ, ಲೋಕಸಭೆಗೆ ಕನಿಷ್ಠ ನಾಲ್ಕು
ಸಂಸದರು ಚುನಾಯಿತರಾದರೆ
(ಸಿ) ಲೋಕಸಭೆಗೆ ಕನಿಷ್ಠ ಮೂರು ರಾಜ್ಯಗಳಿಂದ ಶೇ.2
ರಷ್ಟು ಸ್ಥಾನಗಳನ್ನು ಗೆದ್ದರೆ
ಇದಲ್ಲದೆ, 1968ರ ಚಿಹ್ನೆಗಳ ಆದೇಶವನ್ನು 2016ರಲ್ಲಿ
ತಿದ್ದುಪಡಿ ಮಾಡಲಾಯಿತು. ಇದರ ಪ್ರಕಾರ, ಪಕ್ಷಗಳಿಗೆ
ಒಂದು ಹೆಚ್ಚುವರಿ &quoಣ;ಪಾಸ್ ಓವರ್&quoಣ; ನೀಡಲು ಅನುಮತಿಸಲಾಯಿತು.
ಇದರನ್ವಯ, ಮುಂದಿನ ಸಾರ್ವತ್ರಿಕ ಚುನಾವಣೆಗಳಲ್ಲಿ
ಅಥವಾ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಅಥವಾ ರಾಜ್ಯ
ಪಕ್ಷವು ಯಾವುದೇ ಅರ್ಹತಾ ಮಾನದಂಡಗಳನ್ನು
ಪೂರೈಸಲು ವಿಫಲವಾದರೂ ಒಂದು ಹೆಚ್ಚುವರಿ
ಅವಕಾಶವನ್ನು ನೀಡಲಾಗುತ್ತದೆ. ಹಾಗಾಗಿ ಮುಂದಿನ
ಚುನಾವಣೆಯಲ್ಲೂ ಅದರ ಮಾನ್ಯತೆ ಹಾಗೆಯೇ
ಉಳಿಯುತ್ತದೆ. ಆದರೆ ಸತತ ಎರಡು ಚುನಾವಣೆಗಳಲ್ಲೂ
ಅರ್ಹತೆ ಗಿಟ್ಟಿಸಲು ವಿಫಲರಾದರೆ, ರಾಷ್ಟ್ರೀಯ ಅಥವಾ ರಾಜ್ಯ
ಪಕ್ಷದ ಸ್ಥಾನಮಾನವನ್ನು ಆ ಪಕ್ಷ
ಕಳೆದುಕೊಳ್ಳುತ್ತದೆ.
ಆಮ್ ಆದ್ಮಿ ಪಕ್ಷಕ್ಕೆ ನಾಲ್ಕು ರಾಜ್ಯಗಳಲ್ಲಿ ರಾಜ್ಯ ಪಕ್ಷದ
ಸ್ಥಾನಮಾನ
ದೆಹಲಿ, ಪಂಜಾಬ್, ಗೋವಾ ಮತ್ತು ಗುಜರಾತ್ ರಾಜ್ಯಗಳಲ್ಲಿ ಆಮ್
ಆದ್ಮಿ ಪಕ್ಷವು ರಾಜ್ಯ ಪಕ್ಷವಾಗಿ ಗುರುತಿಸಲ್ಪಟ್ಟ ಕಾರಣ
ಚುನಾವಣಾ ಆಯೋಗವು ಆ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ
ಮಾನ್ಯತೆ ನೀಡಿದೆ.
ರಾಜ್ಯ ಪಕ್ಷವೆಂದು ಗುರುತಿಸಲು
ಮಾನದಂಡಗಳೇನು?
ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ರಾಜ್ಯ ಪಕ್ಷವಾಗಿ
ಗುರುತಿಸಿಕೊಳ್ಳಲು, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ
ಚಲಾವಣೆಯಾದ ಒಟ್ಟು ಮತಗಳಲ್ಲಿ ಕನಿಷ್ಠ 6%
ಮತಗಳನ್ನು ಪಡೆದಿರಬೇಕು ಮತ್ತು ವಿಧಾನಸಭೆ
ಚುನಾವಣೆಯಲ್ಲಿ ಕನಿಷ್ಠ ಎರಡು ಸ್ಥಾನಗಳನ್ನು ಅಥವಾ
ಲೋಕಸಭೆ ಚುನಾವಣೆಯಲ್ಲಿ ಒಂದು ಸ್ಥಾನವನ್ನು
ಪಡೆಯಬೇಕು. ಇದಲ್ಲದೇ ಅರ್ಹತೆ ಪಡೆಯಲು ಇನ್ನೂ
ಮೂರು ಪರ್ಯಾಯ ಮಾರ್ಗಗಳಿವೆ
(ಎ) ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಗಳಲ್ಲಿ, ಆ
ಪಕ್ಷವು ರಾಜ್ಯದ ಶಾಸಕಾಂಗ ಸಭೆಯಲ್ಲಿ 3%
ಸ್ಥಾನಗಳನ್ನು ಗೆಲ್ಲಬೇಕು (ಕನಿಷ್ಠ 3 ಸ್ಥಾನಗಳು
ಇರಬೇಕು)
(ಬಿ) ಲೋಕಸಭಾ ಚುನಾವಣೆಯಲ್ಲಿ ಒಂದು ರಾಜ್ಯದ ಪ್ರತಿ 25
ಲೋಕಸಭಾ ಸ್ಥಾನಗಳಲ್ಲಿ 1 ಸ್ಥಾನವನ್ನು ಗೆಲ್ಲಬೇಕು
ಅಥವಾ
(ಸಿ) ಲೋಕಸಭೆ ಅಥವಾ ವಿಧಾನಸಭೆಗೆ ನಡೆಯುವ
ಚುನಾವಣೆಯಲ್ಲಿ ಪಕ್ಷವು ಶೇ.8 ಮತಗಳನ್ನು
ಪಡೆಯಬೇಕು.
ರಾಷ್ಟ್ರೀಯ ಮತ್ತು ರಾಜ್ಯ ಪಕ್ಷಗಳ ಮಾನ್ಯತೆಯ
ಪ್ರಯೋಜನಗಳೇನು?
ಮಾನ್ಯತೆ ಪಡೆದ ರಾಜಕೀಯ ಪಕ್ಷವು ದೇಶಾದ್ಯಂತ
ಅಥವಾ ರಾಜ್ಯಾದ್ಯಂತ ಬಳಸಲು ಒಂದು ಅಧಿಕೃತ ಚಿಹ್ನೆ
ಪಡೆಯಲಿದೆ. ಅದು ಮಾನ್ಯತೆ ಪಡೆದ ಪಕ್ಷಕ್ಕೇ
ಮೀಸಲಾಗಿರಲಿದ್ದು, ಇತರೆ ಯಾವ ಪಕ್ಷವೂ ಎಲ್ಲೂ
ಬಳಸುವ ಹಾಗೆ ಇರುವುದಿಲ್ಲ.
ಮಾನ್ಯತೆ ಪಡೆದ ರಾಜ್ಯದಲ್ಲಿ ರಾಜ್ಯ ದೂರದರ್ಶನ
ಮತ್ತು ರೇಡಿಯೊದಲ್ಲಿ ಕಾರ್ಯಕ್ರಮ ನಡೆಸಲು ಉಚಿತ
ಪ್ರಸಾರ ಸಮಯ ಸಿಗುತ್ತದೆ.
ಚುನಾವಣಾ ದಿನಾಂಕಗಳನ್ನು ಪ್ರಕಟಿಸುವ ಮುನ್ನ
ಯಾವುದೇ ಸಮಾಲೋಚನೆ ಮತ್ತು ಚುನಾವಣಾ
ನಿಯಮಗಳು, ನಿಬಂಧನೆಗಳನ್ನು
ಅಂತಿಮಗೊಳಿಸುವಲ್ಲಿ ಹೊಂದಿಸುವಲ್ಲಿ ತಮ್ಮ
ಸಲಹೆಗಳನ್ನು ನೀಡಲು ಸಹ ರಾಜ್ಯ, ರಾಷ್ಟ್ರ ಮಾನ್ಯತೆ
ಪಡೆದ ಪಕ್ಷಗಳಿಗೆ ಅವಕಾಶ ಸಿಗುತ್ತದೆ.
ಸರ್ಕಾರ ನೀಡುವ ಜಾಗದಲ್ಲಿ ಪಕ್ಷದ ಕಚೇರಿಯನ್ನು
ಸ್ಥಾಪಿಸಬಹುದು.
ಆ ಪಕ್ಷವು ಒಟ್ಟು 40 ಸ್ಟಾರ್ ಪ್ರಚಾರಕರನ್ನು
ಬಳಸಿಕೊಳ್ಳಬಹುದು ಹಾಗೂ ಅವರಿಗಾಗಿ ಮಾಡುವ
ವೆಚ್ಚವನ್ನು ಚುನಾವಣಾ ವೆಚ್ಚದಲ್ಲಿ ಸೇರಿಸಿಕೊಳ್ಳುವ
ಅಗತ್ಯ ಇರುವುದಿಲ್ಲ.
ಒಟ್ಟಿನಲ್ಲಿ ರಾಷ್ಟ್ರೀಯ ಮಾನ್ಯತೆ ಪಡೆದ ಪಕ್ಷವು
ದೇಶದಲ್ಲಿ ಎಲ್ಲಿ ಬೇಕಾದರೂ ಚುನಾವಣೆಗೆ ಸ್ಪರ್ಧಿಸಬಹುದು
ಹಾಗೂ ಯಾವುದೇ ರಾಜ್ಯದಲ್ಲಿ ತನ್ನ ಅಭ್ಯರ್ಥಿಗಳನ್ನು
ಕಣಕ್ಕಿಳಿಸಬಹುದು.
ಭಾರತದಲ್ಲಿರುವ ರಾಷ್ಟ್ರೀಯ ಪಕ್ಷಗಳು
ಆಮ್ ಆದ್ಮಿ ಪಕ್ಷ
ಬಹುಜನ ಸಮಾಜ ಪಕ್ಷ
ಭಾರತೀಯ ಜನತಾ ಪಕ್ಷ
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾಕ್ರ್ಸಿಸ್ಟ್)
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ನ್ಯಾಷನಲ್ಸ್ ಪೀಪಲ್ಸ್ ಪಾರ್ಟಿ