ಬಾಗಲಕೋಟೆ: ವಿಧಾನಸಭೆ ಸಾರ್ವತ್ರಿಕ ಚುನಾವಣೆ ದಿನಾಂಕ ಚುನಾವಣೆ ಆಯೋಗ ಘೋಷಣೆ ಮಾಡುತ್ತಿದ್ದಂತೆ ಕರುನಾಡಿನಲ್ಲಿ ಜನತಂತ್ರದ ಹಬ್ಬ ಮನೆ ಮಾಡಿದೆ. ಆಡಳಿತ ರೂಢ ಬಿಜೆಪಿ ಮತ್ತೊಮ್ಮೆ ಅಧಿಕಾರ ಗದ್ದುಗೆ ಏರಲು ಹವಣಿಸುತ್ತಿದೆ. ಇದಕ್ಕೆ ಚಕ್ ಮೇಟ್ ನೀಡಿ ಸ್ವತಂತ್ರ ಬಲದಿಂದ ಅಧಿಕಾರ ಹಿಡಿಯುವ ತವಕದಲ್ಲಿ ಕಾಂಗ್ರೆಸ್. ಸರ್ಕಾರ ರಚನೆಯಲ್ಲಿ ತಮ್ಮದು ಪಾತ್ರ ಇರಲಿ ಎನ್ನುವ ಉದ್ದೇಶದಿಂದ ಜೆಡಿಎಸ್ ಶತಗತಾಯ ಕಸರತ್ತು ನಡೆಸುತ್ತಿದೆ.
ಈಗಾಗಲೇ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ರಾಜ್ಯದೆಲ್ಲೆಡೆ ಒಂದು ಸುತ್ತಿನ ಪ್ರಚಾರ ನಡೆಸಿ ಜನರನ್ನು ಸೆಳೆಯುವ ಕೆಲಸ ಮಾಡಿವೆ. ಕೈ ಹಾಗೂ ಜೆಡಿಎಸ್ ಪಕ್ಷಗಳು ತನ್ನ ಮೊದಲ ಹಂತದ ಪಟ್ಟಿ ಬಿಡುಗಡೆ ಮಾಡಿ ಚುನಾವಣಾ ಕಣಕ್ಕೆ ಧುಮುಕಿವೆ. ಆದರೇ ಬಿಜೆಪಿ ಪ್ರತಿ ಹೆಜ್ಜೆಗೂ ಜಾಗೃತಿ ವಹಿಸಿ ಜಾಣ್ಮೆಯ ನಡೆ ಅನುಸರಿಸುತ್ತಿದೆ. ಈವರೆಗೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡದೇ ಹಾಲಿ, ಮಾಜಿ ಶಾಸಕರು, ಟಿಕೆಟ್ ಆಕಾಂಕ್ಷಿಗಳ ಎದೆಯಲ್ಲಿ ಢವಢವ ಹುಟ್ಟಿಸಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಏರುತ್ತಿರುವ ಈ ಮೂರು ಪಕ್ಷಗಳ ಕೆಲವು ಕ್ಷೇತ್ರಗಳಲ್ಲಿ ಎಎಪಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹಾಗೂ ಇತರೆ ಪಕ್ಷಗಳು ನಿದ್ದೆಗೆಡಿಸುವಂತೆ ಮಾಡಿದಂತು ಸುಳ್ಳಲ್ಲ.
೨೦೧೩ ರಿಂದ ೨೦೧೮ ವರೆಗೆ ಐದು ವರ್ಷಗಳ ಆಡಳಿತ ನಡೆಸಿದ್ದ ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದುಕೊಳ್ಳದೇ ಜೆಡಿಎಸ್ ಜೊತೆಗೆ ಸಮ್ಮಿಶ್ರ ಸರ್ಕಾರ ರಚಿಸಿತು. ಆದರೇ ಆಪರೇಷನ್ ಕಮಲದ ಮೂಲಕ ಬಿ.ಎಸ್.ಯಡಿಯೂರಪ್ಪ ಸತತ ಒಂದು ವರ್ಷ ೩ ತಿಂಗಳು ಪ್ರಯತ್ನದ ಬಳಿಕ ಸರ್ಕಾರ ರಚಿಸುವಲ್ಲಿ ಸಫಲರಾಗಿದ್ದರು.
ಆದರೇ ಪಕ್ಷದ ನಿಯಮವಾಳಿಗಳ ಅನುಸಾರ ಅವರನ್ನು ಅರ್ಧಕ್ಕೆ ರಾಜೀನಾಮೆ ಪಡೆದು ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರದ ಚುಕ್ಕಾಣಿ ಹಿಡಿದರು.
ಆದರೇ ರಾಜ್ಯದಲ್ಲಿ ಈ ಸಾರಿ ವಾತಾವರಣ ಯಾವ ಪಕ್ಷಕ್ಕೂ ಸಲೀಸಾಗಿ ಇಲ್ಲ. ಮೇಲ್ನೋಟಕ್ಕೆ ಅಧಿಕಾರ ಹಿಡಿಯುವ ಕನಸು ಕಾಣುತ್ತಿದ್ದರು ಅದು ಸಕಾರಗೊಳ್ಳುವ ನಿಶ್ಚಿತತೆ ಇಲ್ಲ.
ದಂಡ ನಾಯಕರ ಕೊರತೆ:
ರಾಜ್ಯದಲ್ಲಿ ಅಧಿಕಾರಕ್ಕೆ ಏರುವ ದಂಡ ನಾಯಕರು ಇಲ್ಲ. ಮುಖ್ಯವಾಗಿ ಬಿಜೆಪಿ ಪಕ್ಷದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮುಖ್ಯಮಂತ್ರಿ ಸ್ಥಾನ ಕೆಳಗಿಸಿರುವುದು ಲಿಂಗಾಯತರಲ್ಲಿ ಸಾಕಷ್ಟು ನೋವು ಉಂಟು ಮಾಡಿದೆ. ಬಸವರಾಜ ಬೊಮ್ಮಾಯಿ ಅವರನ್ನು ತಮ್ಮ ನಾಯಕರು ಅಂತ ಒಪ್ಪಿಕೊಳ್ಳಲು ಆ ಸಮುದಾಯ ಸಿದ್ದರಿಲ್ಲ. ಇನ್ನು ೨೦೧೩ ರಲ್ಲಿ ಹಿಂದುಳಿದ ನಾಯಕರಾಗಿ ಬಿಂಬಿಸಿಕೊಂಡಿದ್ದ ಕಾಂಗ್ರೆಸ್ನ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಕನಸಿನಲ್ಲಿ ಇದ್ದಾರೆ. ಆದರೇ ಬಹಿರಂಗ ಕಾಂಗ್ರೆಸ್ ಘೋಷನೆ ಮಾಡದಿರುವುದು ಹಿಂದುಳಿದ ವರ್ಗಗಳ ಮತ ಕ್ರೂಢೀಕರಣ ಅಸಾಧ್ಯವಾದ ಮಾತು. ಜೆಡಿಎಸ್ನ ವರಿಷ್ಠ, ಮಾಜಿ ಸಿಎಂ ಕುಮಾರಸ್ವಾಮಿ ಯಾತ್ರೆ ರಾಜ್ಯದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಆದರೇ ಮತವಾಗಿ ಪರಿವರ್ತನೆಯಾಗುವ ಸಂಭವ ಕ್ಷಿಣ. ಇದಕ್ಕೆ ಪ್ರಮುಖ ಕಾರಣ ಒಕ್ಕಲಿಗರ ಪಕ್ಷ ಎನ್ನುವ ಹಣೆ ಪಟ್ಟಿ ಕಟ್ಟಿಕೊಂಡಿದೆ. ಹೀಗಾಗಿ ಉತ್ತರ ಕರ್ನಾಟಕ, ಕರಾವಳಿ, ಮಧ್ಯ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವುದು ಗ್ಯಾರಂಟಿ ಇಲ್ಲ. ಈ ಭಾಗದ ಬಿಜೆಪಿ, ಕಾಂಗ್ರೆಸ್ ಟಿಕೆಟ್ ವಂಚಿತರು ಜೆಡಿಎಸ್ಗೆ ಜಿಗಿದು ಗೆದ್ದರೇ ಮಾತ್ರ ತೆನೆ ಹೊತ್ತ ಮಹಿಳೆ ಲೆಕ್ಕಚಾರಕ್ಕೆ ಪುಷ್ಠಿ ದೊರೆಯಬಹುದು.
ಜಾತಿ ಲೆಕ್ಕಚಾರದಲ್ಲಿ ಹೊಸದು:
ಚುನಾವಣೆ ಎಂದಾಕ್ಷಣ ಜಾತಿ ಪ್ರಮುಖ ಅಂಶವಾಗಿ ಗುರುತಿಸಲ್ಪಡುತ್ತದೆ. ಕಳೆದ ನಾಲ್ಕು ವರ್ಷದಲ್ಲಿ ಮೀಸಲಾತಿ ಹೋರಾಟಕ್ಕೆ ಮಣಿದು ಹೊಸ ಬಗೆಯ ಮೀಸಲಾತಿ ನಿರ್ಣಯ ಪ್ರಕಟಿಸಿರುವ ಬಿಜೆಪಿ ಹೊಸ ದಾಳ ಉರುಳಿಸಿದೆ. ಸಾಂಪ್ರದಾಯಕವಾಗಿ ಬರುತ್ತಿದ್ದ ಲಿಂಗಾಯತ ಸಮಾಜದ ಪಂಚಮಸಾಲಿ, ಇತರೆ ಒಳ ಪಂಗಡಿಗಳ ಮತಬ್ಯಾಂಕ್ ಭದ್ರಗೊಳಿಸಲು ತಂತ್ರಗಾರಿಕೆ ಹೆಣೆದಿದೆ. ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯ ಮೀಸಲಾತಿ ಪ್ರಮಾಣ ಹೆಚ್ಚಿಸಿ ಜೆಡಿಎಸ್ ಮತಬುಟ್ಟಿಗೆ ಕೈ ಹಾಕಿದೆ. ಈ ನಡುವೆ ಬಹುದಿನಗಳಿಂದ ಬೇಡಿಕೆಯಿದ್ದ ಪರಿಶಿಷ್ಟ ಜಾತಿ, ಪಂಗಡಗಳ ಮೀಸಲಾತಿ ಹೆಚ್ಚಳ, ಒಳ ಮೀಸಲಾತಿ ನಾನಾ ಲೆಕ್ಕಚಾರಗಳನ್ನು ಬುಡಮೇಲು ಮಾಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಸಹಜವಾಗಿ ಒಂದು ಕಾಂಗ್ರೆಸ್ ಪಕ್ಷದ ವೋಟ್ ಬ್ಯಾಂಕ್ ಆಗಿದ್ದ ಎಸ್ಸಿ, ಎಸ್ಟಿ ಮತಗಳು ೨೦ ವರ್ಷಗಳಲ್ಲಿ ಛಿದ್ರಗೊಂಡಿದ್ದವು. ಮುಖ್ಯವಾಗಿ ಬಂಜಾರ ಸಮುದಾಯ ಬಿಜೆಪಿಗೆ ಸಪೋರ್ಟ ಮಾಡಿದ್ದರಿಂದ ಕಲಬುರ್ಗಿಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಲಿಗೆ ಕಾರಣವಾಗಿದ್ದವು. ಅದರಲ್ಲೂ ಕೂಲಿ ಅಥವಾ ಅಂಬಿಗ ಸಮಾಜವು ಬಿಜೆಪಿ ಕಡೆ ವಾಲಿತ್ತು. ಆ ಸಮುದಾಯಕ್ಕೆ ನೀಡಿದ್ದ ಎಸ್ಟಿ ಮೀಸಲಾತಿ ಅಭಯ ಈಡೇರಿಲ್ಲ. ಹೀಗಾಗಿ ಬಾಬುರಾವ ಚಿಂಚನಸೂರ ಮತ್ತೆ ತವರು ಪಕ್ಷ ಕಾಂಗ್ರೆಸ್ ಗೆ ಮರಳಿದ್ದಾರೆ.
ಆದರೇ ಒಳಮೀಸಲಾತಿ ನಿರ್ಣಯ ರಾಜ್ಯದ ಹಲವು ಕ್ಷೇತ್ರದಲ್ಲಿ ಗಾಢ ಪರಿಣಾಮ ಬೀರಲಿದೆ. ಮಾದರ, ಮಾಂಗ ಸೇರಿದಂತೆ ದಲಿತ ಬಲಗೈ ಸಮುದಾಯ ಕಾಂಗ್ರೆಸ್ನ ಮತ ಬ್ಯಾಂಕ್. ಇದೀಗ ಬಹು ವರ್ಷಗಳ ಹೋರಾಟಕ್ಕೆ ಬಿಜೆಪಿ ಸರ್ಕಾರ ಮಣಿದು ಒಳ ಮೀಸಲಾತಿ ಪ್ರಕಟಿಸಿದೆ. ಇದು ಕಾಂಗ್ರೆಸ್ ತಲ್ಲಣಗೊಳಿಸಿದ್ರೇ, ಒಳ ಮೀಸಲಾತಿಗೆ ವಿರೋಽಸಿದ್ದ ಬಂಜಾರ, ಭೋವಿ, ಕೊರಮ, ಕೊರಚ ಇತರೆ ಸಮುದಾಯ ಮತಗಳು ಬಿಜೆಪಿ ಕೈ ಬೀಡುವ ಸೂಚನೆ ಇದೆ. ಇನ್ನು ಒಳ ಮೀಸಲಾತಿಗೆ ತೆಲೆ ಬಾಗಿ ಸಂಪೂರ್ಣವಾಗಿ ದಲಿತ ಬಲಗೈ ಸಮುದಾಯ ಬಿಜೆಪಿಯನ್ನು ಸಂಪೂರ್ಣ ಬೆಂಬಲಿಸದೆಯಾ ಎನ್ನುವುದು ಯಕ್ಷ ಪ್ರಶ್ನೆ. ಹಿರಿಯರು ಕಾಂಗ್ರೆಸ್ ಮೈಂಡಸೆಟ್ ಹೊರಬರುವುದು ಕಷ್ಟ. ಯುವ ಸಮೂಹ ಮಾತ್ರ ಪ್ಲಸ್ ಪಾಯಿಂಟ್. ಈ ವರ್ಗದ ಮತದಾರದಲ್ಲಿ ಶೇ. ೧೦ ರಷ್ಟು ವೊಟ್ ಬಿಜೆಪಿಗೆ ಬಂದಲ್ಲಿ ಅನುಕೂಲವಾಗಲಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಆದರೇ ಕಲಬುರ್ಗಿ, ಚಿತ್ರದುರ್ಗ, ತುಮಕೂರು, ಬಾಗಲಕೋಟೆ, ವಿಜಯಪುರ ಸೇರಿದಂತೆ ಬಲಾಢ್ಯ ಮತಬ್ಯಾಂಕ್ ಹೊಂದಿರುವ ಬಂಜಾರ, ಭೋವಿ, ವಡ್ಡರ, ಕೊರಮ ಕೊರಚ ಸಮುದಾಯ ಎಷ್ಟರ ಮಟ್ಟಿಗೆ ಬಿಜೆಪಿಗೆ ಟಕ್ಕರ್ ಕೊಡಲಿದೆ ಎನ್ನುವುದು ಕೂತುಹಲಕ್ಕೆ ಕಾರಣವಾಗಿದೆ. ಮತಬ್ಯಾಂಕ್ ಅದಬದಲು ಆಟ ಅಽಕಾರ ಏಣಿಯಾಟಕ್ಕೆ ಸಾಕ್ಷಿಗುವಂತು ಗ್ಯಾರಂಟಿ.
ಇನ್ನು ರಾಜ್ಯದಲ್ಲಿ ಬಿಜೆಪಿ ಆಡಳಿತ ವಿರೋಧದ ಅಲೆ ಎದುರಿಸುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಹಳೇ ಮುಖಗಳಿಗೆ ಮಣೆ ಹಾಕುತ್ತಿರುವುದು ಮತದಾರರಲ್ಲಿ ಹುರುಪು ಪಡೆಯುತ್ತಿಲ್ಲ. ದಕ್ಷಿಣ-ಉತ್ತರ ಭಾರತದ ರಾಜ್ಯಗಳಂತೆ ಕರ್ನಾಟಕ ರಾಜಕಾರಣ ಅರಿತುಕೊಳ್ಳುವುದು ಸುಲಭವಲ್ಲ. ಶೂನ್ಯ ಸ್ಥಾನಕ್ಕೆ ತಲುಪಿದ್ದ ಪಕ್ಷಗಳು ಮ್ಯಾಜೀಕ್ ನಂಬರ್ ದಾಟಿ ಸರ್ಕಾರ ರಚನೆ ಮಾಡಿದ್ದು ಉಂಟು. ಅಧಿಕಾರ ಅನುಭವಿಸಿದ್ದ ಪಕ್ಷಗಳು ಮತ್ತೆ ಅಧಿಕಾರ ಹಿಡಿಯಲಾಗದೇ ವಿರೋಧ ಪಕ್ಷ ಸ್ಥಾನಕ್ಕೂ ಕುತ್ತು ತಂದುಕೊಟ್ಟ ಉದಾಹರಣೆ ಇದೆ. ಹೀಗಾಗಿ ಅಷ್ಟು ಸಲಿಸಾಗಿ ಕರ್ನಾಟಕ ರಾಜಕಾರಣ ಅರ್ಥವಾಗುತ್ತಿಲ್ಲ. ಫಲಿತಾಂಶವೇ ಇದಕ್ಕೆ ಉತ್ತರ ನೀಡಲಿದೆ.