ಪ್ರಸ್ತುತ ಜೀವನ ಶೈಲಿಯ ಒತ್ತಡದಿಂದಾಗಿ ಹೃದಯದ ಮೇಲೆ ಅತಿಯಾದ ಒತ್ತಡವನ್ನು ಹೇರುತ್ತದೆ ಅಲ್ಲದೆ ನಮ್ಮ ದೈನಂದಿನ ಕೆಲಸದ ಒತ್ತಡ ಮತ್ತು ಆಹಾರ ಕ್ರಮದಿಂದಾಗಿ ಹೃದಯ ಸಂಬಂಧಿ ಸಮಸ್ಯೆಗಳು ಎಲ್ಲಾ ವಯಸ್ಸಿನವರೆಗೂ ಕಾಣಿಸಿಕೊಳ್ಳುತ್ತಿದೆ. ಹೃದಯ ತನ್ನ ಕೆಲಸವನ್ನು ಒಮ್ಮೆಲೇ ನಿಲ್ಲಿಸುವುದಕ್ಕೆ ಹೃದಯಘಾತ ಎಂದು ಕರೆಯುತ್ತೇವೆ.
ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಹೃದಯಾಘಾತ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದೆ, ಅದರಲ್ಲೂ ಸಣ್ಣ ವಯಸ್ಸಿನಲ್ಲಿ ಇದು ಆಗುವ ಸಾಧ್ಯತೆ ಕೂಡ ಹೆಚ್ಚಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯ ಪ್ರಕಾರ ಪ್ರತಿ ವರ್ಷ ವಿಶ್ವದಾದ್ಯಂತ 30% ರಷ್ಟು ಜನರು ಹೃದಯ ಸಂಬಂಧಿ ಕಾಯಿಲೆಯಿಂದ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಮನುಷ್ಯನ ದೇಹದ ಹೃದಯದಲ್ಲಿ ಒಟ್ಟು ಮೂರು ಕೊರೋನರಿ ಆರ್ಟರೀಸ್ ಇರುತ್ತದೆ ಈ ರಕ್ತನಾಳ ಗಳಿಂದ ಹೃದಯಕ್ಕೆ ರಕ್ತದ ಚಲನೆ ಆಗುತ್ತದೆ. ಬೇರೆ ಬೇರೆ ಕಾಯಿಲೆಗಳಾದ ಸಕ್ಕರೆ ಕಾಯಿಲೆ ಹೈ ಕೊಲೆಸ್ಟ್ರಾಲ್ ಅಥವಾ ಹೆಚ್ಚು ರಕ್ತದೊತ್ತಡ ಅಥವಾ ಇನ್ನಿತರ ಕಾರಣಗಳಿಂದ ರಕ್ತನಾಳಗಳ ಒಳಗೆ ಬೊಜ್ಜು ಹಾಗೂ ಕ್ಯಾಲ್ಸಿಯಂ ಸೇರಿಕೊಂಡು ಕಾಲ ಕಳೆದಂತೆ ರಕ್ತನಾಳ ಕುಗ್ಗುತ್ತ ರಕ್ತ ಚಲನೆಗೆ ಅಡ್ಡಿ ಉಂಟು ಮಾಡುತ್ತದೆ. ಈ ಅಡಚಣೆಯಾದ ಜಾಗದಲ್ಲಿ ರಕ್ತ ಹೆಪ್ಪುಗಟ್ಟಿ ರಕ್ತ ಚಲನೆ ನಿಂತು ಹೋಗುತ್ತದೆ. ಈ ಸ್ಥಿತಿಯನ್ನು ಹೃದಯಾಘಾತ ಎಂದು ಕರೆಯುತ್ತೇವೆ.
ಹೃದಯಾಘಾತವು ಮಾನಸಿಕ ಒತ್ತಡ ಅಥವಾ ದೈಹಿಕವಾಗಿ ಅತಿಯಾದ ಪರಿಶ್ರಮ ನಿರ್ವಹಿಸುವುದರಿಂದ ಸಂಭವಿಸುತ್ತದೆ. ಹೃದಯ ಒಂದು ಪಂಪಿನ ಹಾಗೆ ಕಾರ್ಯನಿರ್ವಹಿಸುತ್ತದೆ ಇದು ರಕ್ತವನ್ನು ದೇಹದ ಇತರ ಭಾಗಗಳಿಗೆ ಸರಬರಾಜು ಮಾಡುತ್ತದೆ ಇದು ಶ್ವಾಸಕೋಶದಿಂದ ಆಮ್ಲಜನಕ ಪಡೆದುಕೊಂಡು ತದನಂತರ ಹೃದಯದಿಂದ ಒಳ್ಳೆ ರಕ್ತವು ಪಂಪ್ ಆಗಲ್ಪಡುತ್ತದೆ. ಹೃದಯದ ಬಡಿತ ನಿಯಂತ್ರಣ ತಪ್ಪಿದ ಕೂಡಲೇ ಹೃದಯ ತನ್ನ ಕೆಲಸವನ್ನು ನಿಲ್ಲಿಸುತ್ತದೆ ಇದೇ ಕಾರಣಕ್ಕಾಗಿ ಕೆಲವರು ಅಕಸ್ಮಾತಾಗಿ ಸಾವನ್ನಪ್ಪುತ್ತಾರೆ. ಹೃದಯಘಾತ ಆಗುವಾಗ ಎದೆ ನೋವು, ಎದೆ ಹಿಸುಕುವಿಕೆ ಅಥವಾ ಎದೆ ಮೇಲೆ ಅತಿ ಭಾರವಾದ ವಸ್ತು ಆವರಿಸಿದ ಹಾಗೆ ಭಾಸವಾಗುತ್ತದೆ. ಈ ನೋವು 15 ನಿಮಿಷಗಳ ತನಕ ಕಾಣಿಸಿಕೊಳ್ಳುತ್ತದೆ.
ಆದರೆ ಕೊರೋನ ಬಂದ ಬಳಿಕ ಹೃದಯಾಘಾತಕ್ಕೆ ಸಂಬಂಧಪಟ್ಟ ಕಾಯಿಲೆಗಳು ಹೆಚ್ಚುತ್ತಿವೆ. ಇತ್ತೀಚಿನ ದಿನಗಳಲ್ಲಿ ಸಂಭವಿಸುತ್ತಿರುವ ಕೆಲವು ದಿಢೀರ್ ಸಾವುಗಳನ್ನು ಗಮನದಲ್ಲಿಟ್ಟುಕೊಂಡು ವರದಿಯನ್ನು ನೀಡಿರುವ ಪ್ರಖ್ಯಾತ ಹೃದ್ರೋಗ ತಜ್ಞರು ಇದಕ್ಕೆ ಕೋವಿಡ್ ಸೋಂಕಿನ ಸಂಪರ್ಕ ಕಾರಣವಿರಬಹುದು ಎಂದು ಅಭಿಪ್ರಾಯ ಪಟ್ಟಿರುತ್ತಾರೆ. ಕೋವಿಡ್ ಗೆ ಕಾರಣವಾದ ವೈರಸ್ ಸಾಮಾನ್ಯವಾಗಿ ಶ್ವಾಸಕೋಶದ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ ನೇರವಾಗಿ ಇದು ಆಮ್ಲಜನಕವನ್ನು ಹೃದಯದ ಸ್ನಾಯುವನ್ನು ತಲುಪದಂತೆ ತಡೆಯುತ್ತದೆ ಅದರಿಂದಾಗಿ ಹೃದಯದ ಅಂಗಾಂಗವು ಹಾನಿಗೊಳಕಾಗುತ್ತದೆ ಆದುದರಿಂದ ಕೋವಿಡ್ ಲಸಿಕೆ ಪಡೆದುಕೊಂಡ ಮೇಲೆ ಈ ಹೃದಯಘಾತವು ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸುತ್ತಿರಬಹುದು ಎಂದು ಕೆಲವು ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇದೇ ಸತ್ಯವೆಂದು ಉಲ್ಲೇಖಿಸಲು ಸಾಧ್ಯವಿಲ್ಲ ಇದರ ಕುರಿತು ನುರಿತ ವೈದ್ಯಾಧಿಕಾರಿಗಳ ಸಂಶೋಧನಾ ಕಾರ್ಯ ಜಾರಿಯಲ್ಲಿದ್ದು, ವೈದ್ಯಾಧಿಕಾರಿಗಳ ಖಚಿತ ವರದಿ ಬರುವವರೆಗೆ ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಆದರೂ ನಮ್ಮ ಎಚ್ಚರಿಕೆಯಲ್ಲಿ ನಾವು ಇರಬೇಕು.
ಹೃದಯಾಘಾತ ಸಂಭವಿಸುವ ಮುನ್ನ ನಮ್ಮ ಆರೋಗ್ಯವನ್ನು ಉತ್ತಮವಾಗಿಸ್ಕೊಳ್ಳಲು ಯೋಗ, ವ್ಯಾಯಾಮ, ಉತ್ತಮ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡು ಆದಷ್ಟು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವಲ್ಲಿ ನಿರತರಾಗಿರಬೇಕು.