ಜಾರ್ಖಂಡದ ರಾಂಚಿ ಎಂಬ ನಗರದಲ್ಲಿ ಜುಲೈ7 ರಂದು ಜನಿಸಿದ ಒಬ್ಬ ಸಾಮಾನ್ಯ ಬಾಲಕ ಮುಂದೆ ಜಗತ್ತಿನ ಕ್ರಿಕೆಟ್ ಪ್ರೇಮಿಗಳೆಲ್ಲ ಇವನ ಬ್ಯಾಟಿಂಗ್, ಫಿಟ್ನೆನ್ಸ ಮತ್ತು ಮೈದಾನದಲ್ಲಿ ಈತ ತೋರಿಸುವ ಚಾಣಕ್ಯತನಕ್ಕೆ ಮಾರುಹೋಗುತ್ತಾರೆ ಎಂದರೆ ಯಾರಿಂದರೂ ನಂಬಲು ಸಾಧ್ಯವಿತ್ತೆ? ಆದರೆ ಅಸಾಧ್ಯಗಳನ್ನು ಸಾಧ್ಯ ಮಾಡುವವನಲ್ಲವೆ ಈ ಮಹೇಂದ್ರ ಸಿಂಗ್ ಧೋನಿ.
ಉಳಿದೆಲ್ಲ ಆಟಗಾರರಿಗೆ ಈತನಿಗೆ ಇರುವ ವ್ಯತ್ಯಾಸಗಳನ್ನು ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯನ್ನೇ ತಯಾರಿಸ ಬಹುದು. ಮೊದಲು ಆಡಲು ಕಲಿತ್ತಿದ್ದು ಹಾಕಿ. ಅನಂತರದಲ್ಲಿ ಶಾಲೆಯಲ್ಲಿ ಪುಟ್ಬಾಲ ತಂಡದಲ್ಲಿ ಗೋಲ್ ಕೀಪರ್ ! ಆದರೆ ಶಾಲೆಯ ಕ್ರಿಕೆಟ್ ತಂಡದಲ್ಲಿ ಸೂಕ್ತ ವಿಕೇಟ್ ಕೀಪರ್ ಇಲ್ಲದ ಕಾರಣ ಶಾಲೆಯ ದೈಹಿಕ ಶಿಕ್ಷಕ ಈತನ್ನು ವಿಕೇಟ್ ಕಿಪಿಂಗ್ ಮಾಡಿದರೆ ನಿನಗೆ ತಂಡದಲ್ಲಿ ಬ್ಯಾಟಿಂಗ್ ಕೊಡುತ್ತೆನೆ ಎಂದು ಆಮಿಷ ಒಡ್ಡುತ್ತಾರೆ; ಆಮಿಷಕ್ಕೆ ಒಳಗಾದ ಬಾಲಕ ಮುಂದೆ ಸಂಪೂರ್ಣ ಭಾರತದ ಆಮಿಷವಾಗಿದ್ದ ʼವಿಶ್ವಕಪ್ʼಅನ್ನು ಭಾರತಕ್ಕೆ 28 ವರ್ಷಗಳ ನಂತರ ತಂದು ಕೊಡುತ್ತಾನೆ ಅಂದರೆ ಯಾರಾದರು ನಂಬಲು ಸಾಧ್ಯವೆ ?
ಪಂದ್ಯ ಎಂತಹ ಕಠಿಣ ಘಟ್ಟದಲ್ಲಿ ಇರಲಿ ಎಲ್ಲರೂ ಭಾರತ ಸೋಲಲಿದೆ ಎಂದು ಆಸೆಗಳನ್ನು ಕೈಚಲ್ಲಿ ಕುಳಿತಾಗ ಅದನ್ನು ಸೋಲಿನ ಬಾಯಿಂದ ಎಳೆದು, ಪಂದ್ಯದ ದಿಕ್ಕನ್ನೇ ಬದಲಾಯಿಸಿ ತಂಡವನ್ನು ಏಕಾಂಗಿಯಾಗಿ ಗೆಲ್ಲಿಸಿದ ಪಂದ್ಯಗಳು ಲೆಕ್ಕಕ್ಕಿಲ್ಲ. ಕೇವಲ ಬ್ಯಾಟಿನಿಂದ ಮಾತ್ರವಲ್ಲ ಸಂಪೂರ್ಣ ತಂಡದ ಜವಾಬ್ದಾರಿಯನ್ನು ತನ್ನ ಮೇಲೆ ತೆಗೆದುಕೊಂಡು ತಂಡವನ್ನು ಮುನ್ನಡಿಸಿದ ಪರಿ ನಿಜಕ್ಕೂ ಅದ್ಭುತ. ಕೇವಲ ಉತ್ತಮ ಬ್ಯಾಟಿಂಗ್ ಅಥವಾ ಬಾಲಿಂಗ್ ನಿಂದ ಮಾತ್ರವೇ ಒಂದು ಪಂದ್ಯವನ್ನು ಗೆಲ್ಲಬಹುದು ಎಂಬ ಕಾಲದಲ್ಲಿ ಸ್ಟಂಪ್ ಹಿಂದೆ ನಿಂತು ಸಹ ಪಂದ್ಯವನ್ನು ಗೆಲ್ಲಿಸ ಬಹುದು ಎಂದು ಹೊಸ ಕಲ್ಪನೆಯನ್ನು ತಂದು ಕೊಟ್ಟವನೆ ಧೋನಿ.
ಅವೆಷ್ಟು ಪಂದ್ಯಗಳನ್ನು ಧೋನಿ ಭಾರತಕ್ಕೆ ಜಯಗಳಿಸಿ ಕೊಟ್ಟಿಲ್ಲ. ತಂಡ ಯಾವುದೇ ಇರಲಿ. ಬೌಲರ್ ಯಾರೇ ಆಗಿರಲಿ. ಯಾವುದೇ ದೇಶದಲ್ಲಿರಲಿ. ಯಾವುದೇ ಪಿಚ್ ಇರಲಿ, ಯಾವ ಪಂದ್ಯಾವಳಿ ಬೇಕಾದರೂ ಇರಲಿ ಆತ ಬ್ಯಾಟ್ ಬೀಸುತ್ತಾನೆ. ಎಂದರೆ ಮ್ಯಾಚ್ ಗೆಲ್ಲುತ್ತೆವೆ ಎಂದು ಅರ್ಥ. ಧೋನಿ ಇದ್ದಾನೆಂದರೆ ನಮಗೆಲ್ಲ ಏನೋ ಧೈರ್ಯ. ಕೊನೆಯ ಒಂದೆರಡು ಓವರ್ ನಲ್ಲಿ ಅವೆಷ್ಟೇ ರನ್ ಬೇಕಿರಲಿ. ಧೋನಿ ಕ್ರಿಸ್ ನಲ್ಲಿದ್ಧಾನೆ ಎಂದರೆ ಅದೇನೋ ಒಂದು ನಂಬಿಕೆ.
ಬೌಲರ್ ಗಳ ಪ್ರಮುಖ ಅಸ್ತ್ರ ಎಂದೇ ಭಾವಿಸಲಾಗಿದ್ದ ಯಾರ್ಕರ್ ಬೌಲಿಗೆ ಬೋಲ್ಡ್ ಅಥವಾ ಡಿಫೇಂಡ್ ಮಾಡುವ ಎರಡೇ ಆಯ್ಕೆಯಿದ್ದ ಕಾಲದಲ್ಲಿ ಹೆಲಿಕಾಪ್ಟರ್ ಶಾಟ್ ಎಂಬ ಹೆಸರೇ ಇರದ ಕ್ರೀಡಾ ಜಗತ್ತಿನಲ್ಲಿ ಯಾರ್ಕರ್ ಬಾಲನ್ನೂ ಸಹ ಸಿಕ್ಸರ್ ಬಾರಿಸುವುದು ಹೇಗೆ ಎಂಬ ಕಲೆಯನ್ನು ತೋರಿಸಿದ್ದು ಇದೇ ಮಹೇಂದ್ರ ಸಿಂಗ್ ಧೋನಿ.
ವಿಕೆಟ್ ಕೀಪಿಂಗ್ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದವರ ಪಟ್ಟಿಯಲ್ಲಿ ಧೋನಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ನಾಯಕನಾಗಿ ಅವರು 15 ಪಂದ್ಯಗಳಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಇನ್ನೊಂದು ವಿಷಯದಲ್ಲಿ ನಂ.1. ಅದೇನೆಂದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಟವಾಡಿದ ಸಮಯದ ಬಹುತೇಕ ಅವರು ನಾಯಕನಾಗಿಯೇ ಆಡಿದ್ದಾರೆ. ಅವರು 199 ಪಂದ್ಯಗಳಲ್ಲಿ ನಾಯಕ ನಾಗಿ ಆಡಿದ್ದರೆ, ಆಟಗಾರನಾಗಿ 84 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಇದರರ್ಥ ನಾಯಕನ ಮೇಲಿರುವ ಒತ್ತಡವನ್ನು ಧೋನಿ ಅತ್ಯಂತ ಚೆನ್ನಾಗಿ ನಿಭಾಯಿಸಿದ್ದಾರೆ. ನಾಯಕನಾಗಿ ಅತಿಹೆಚ್ಚು ಅರ್ಧ ಶತಕ ಗಳಿಸಿದವರ ಪಟ್ಟಿಯಲ್ಲಿ ಧೋನಿಯನ್ನು ವಿಶಿಷ್ಠ ವಾಗಿ ಗುರುತಿಸಲಾಗುತ್ತದೆ. ಟಿ೨೦ ಪಂದ್ಯಗಳಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ನಾಯಕನೂ ಹೌದು.
ನಾಯಕನಾಗಿ ಧೋನಿಯ ರನ್ಗಳಿಕೆಯ ಸರಾಸರಿ 53.93. ಈ ಪಟ್ಟಿಯಲ್ಲಿ ಧೋನಿಗಿಂತ ಮೇಲಿರುವವರು ದಕ್ಷಿಣ ಆಫ್ರಿಕಾದ ಡಿ.ವಿಲಿಯರ್ಸ್ (ಸರಾಸರಿ 65.92) ಮಾತ್ರ.
ಒಳ್ಳೆಯ ಬ್ಯಾಟಿಂಗ್ ಪಿಚ್ನಲ್ಲಿ ಮೇಲಿನ ಕ್ರಮಾಂಕದ ಆಟಗಾರರು ಭರ್ಜರಿ ಆಟ ಆಡಿ ಉತ್ತಮ ಸರಾಸರಿಯಲ್ಲಿ ರನ್ ಗಳಿಸಿರುತ್ತಾರೆ. ಆದರೆ ಕೆಳ ಕ್ರಮಾಂಕದಲ್ಲಿ ಆಡು ವವರಿಗೆ ಹೆಚ್ಚಿನ ಅವಕಾಶಗಳು ಸಿಗುವುದಿಲ್ಲ. ಸಿಕ್ಕರೂ ಕೊನೆಯ ಐದಾರು ಓವರ್ ಗಳು ಮಾತ್ರ. ಹೆಚ್ಚು ಬ್ಯಾಟಿಂಗ್ ಮಾಡುವ ಅವಕಾಶ ಸಿಗುವುದೇ ಅತ್ಯಂತ ಕಡಿಮೆ ರನ್ಗಳಿಗೆ ಹೆಚ್ಚು ವಿಕೆಟ್ ಕಳೆದುಕೊಂಡ ಒತ್ತಡದ ಸಮಯದಲ್ಲಿ. ಹೀಗಿರುವಾಗಲೂ ಹೆಚ್ಚು ರನ್ ಗಳಿಸುವುದರ ಜತೆಗೆ ಉತ್ತಮ ನಾಯಕತ್ವವನ್ನೂ ತೋರಿರುವುದು ಧೋನಿಯ ಹೆಗ್ಗಳಿಕೆ.
ಧೋನಿಗೂ ಉಳಿದ ಕ್ರಿಕೆಟ್ ಆಟಗಾರರಿಗೂ ಇದ್ದ ವ್ಯತ್ಯಾಸವೆಂದರೆ ಲೆಕ್ಕಾಚಾರ. ಕೊನೇ ಕ್ಷಣದಲ್ಲಿ ಯಾವ ಯಾವ ಬೌಲರ್ಗಳಿದ್ದಾರೆ ? ಎಷ್ಟು ಬಾಲ್ಗಳಿವೆ? ಎಷ್ಟು ರನ್ ಬೇಕು? ಯಾವ ಬೌಲರ್ ಗೆ ಕೊನೆಯ ಓವರ್ ನೀಡಬಹುದು? ಯಾವ ಬೌಲರ್ ನನ್ನು ಟಾರ್ಗೆಟ್ ಮಾಡಬೇಕು? ಎಂಬ ಇತ್ಯಾದಿ ಅಂಶಗಳನ್ನು ಪಂದ್ಯ ನಡೆಯುತ್ತಿರುವಾಗಲೇ ತಲೆಯಲ್ಲಿ ಓಡುತ್ತಿತ್ತೆಂದರೆ ಆತನ ಜಾಣ್ಮೆ ಮತ್ತು ತಾಳ್ಮೆಯನ್ನು ನಿಜಕ್ಕೂ ಮೆಚ್ಚಲೇ ಬೇಕು. ಒತ್ತಡವಿದ್ದರೂ ಅದನ್ನು ಎಂದು ಧೋನಿ ತೋರಿಸಿಕೊಂಡಿದ್ದೇ ಇಲ್ಲ. ಕೊನೆಯ ಓವರ್ ನಲ್ಲಿ 20 ರನ್ ಬೇಕಿದ್ದರೂ ಅತ್ಯಂತ ಸಾಮಾನ್ಯವಾಗಿ ಬ್ಯಾಟಿಂಗ್ ನಿಲ್ಲುತ್ತಿದ್ದ. ಈತನ ಈ ಕಲೆಯೇ ಎದರಾಳಿ ತಂಡದ ಸ್ಥೈರ್ಯವನ್ನು ಕುಗ್ಗಿಸುತ್ತಿತ್ತು.
ಭಾರತಕ್ಕೆ ಏಕದಿನ ಹಾಗೂ ಟ್ವೆಂಟಿ- ಟ್ವೆಂಟಿ ಎರಡೂ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಹಾಗೂ ಏಷ್ಯಾಕಪ್ನಲ್ಲಿ ಇಷ್ಟೂ ಪ್ರಶಸ್ತಿಗಳನ್ನು ಗೆದ್ದುಕೊಟ್ಟ ಏಕೈಕ ನಾಯಕ. ಇನ್ನು ಐಪಿಎಲ್ ಹಾಗೂ ಚಾಂಪಿಯನ್ಸ್ ಲೀಗ್ ಎರಡನ್ನೂ ಗೆದ್ದ ನಾಯಕನೂ ಹೌದು. ಧೋನಿ ಕೇವಲ ಭಾರತ ಕಂಡ ಶ್ರೇಷ್ಠ ನಾಯಕನಲ್ಲ, ವಿಶ್ವವೇ ಕಂಡ ಶೇಷ್ಠ ನಾಯಕ ಎಂದರೆ ತಪ್ಪಾಗಲಾರದು.
ಇಷ್ಟು ಮಾತ್ರವಲ್ಲದೆ ಧೋನಿ ಭಾರತದ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ನೀಡಿ ಗೌರವಿಸಿದೆ.
ಐದು ಐ ಪಿ ಎಲ್ ಪಂದ್ಯ ಜಯಿಸಿರುವ ಮಹೇಂದ್ರ ಸಿಂಗ್ ಧೋನಿ ಸೋಲು ಗೆಲುವನ್ನು ಸಾಮನವಾಗಿ ಸ್ವೀಕರಿಸುವ ಗುಣ ಮಾಹಿಯಲ್ಲಿ ರಕ್ತಗತವಾಗಿದೆ. ಅವನ ಬ್ಯಾಟಿಂಗ್ ಎಷ್ಟು ಅಗ್ರೆಸ್ಸೀವ್ ಆಗಿತ್ತೋ ಅವರು ಅಷ್ಟೇ ಕೂಲ್ ಕ್ಯಾಪ್ಟನ್ ಆಗಿರುತ್ತಿದ್ದ. ಅದಕ್ಕೇ ಅವರಿಗೆ ಕ್ಯಾಪ್ಟನ್ ಕೂಲ್ ಎಂಬ ಹೆಸರು.
ತಂಡದಲ್ಲಿರುವ ನಿಯಮಿತ ಸಂಪನ್ಮೂಲಗಳನ್ನು ಯೋಗ್ಯ ರೀತಿಯಲ್ಲಿ ಬಳಿಸಿಕೊಳ್ಳುವ ಕಲೆ ಧೋನಿಗಿಂತ ಹೆಚ್ಚು ಮತ್ತೊಬ್ಬರಿಗೆ ಗೊತ್ತಿಲ್ಲ. ಈ ಬಾರಿಯ ಸಿಎಸ್ಕೆ ತಂಡದಲ್ಲಿದ್ದ 18 ಆಟಗಾರನ್ನು ಸಮರ್ಥವಾಗಿ ಬಳಿಸಿಕೊಂಡು ಪ್ರಶಸ್ತಿ ಗೆದ್ದಿರಯವುದೇ ಇದಕ್ಕೆ ಸಾಕ್ಷಿಯಾಗಿದೆ. ಮತ್ತು ಆಟಗಾರರ ಪ್ರತಿಭೆಯನ್ನು ಹುಡುಕಿ ಅವರನ್ನು ಯೋಗ್ಯ ರೀತಿಯಲ್ಲಿ ಬಳಿಸಿಕೊಳ್ಳುವ ಸಾಮರ್ಥ್ಯ ಧೋನಿಯನ್ನು ಹೊರತು ಪಡಿಸಿ ಮತ್ತೊಬ್ಬರಲಿಲ್ಲ.
ಅಸಾಧ್ಯಗಳನ್ನು ಸಾಧ್ಯ ಮಾಡುವ ಎಂ.ಎಸ್.ಡಿ ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು …..