ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶಗಳು ಪ್ರಕಟವಾದಾಗ ಪರೀಕ್ಷೆಯಲ್ಲಿ ಫೇಲಾಗಿ ಅಥವಾ ಕಡಿಮೆ ಅಂಕ ಪಡದು ಜೀವ ಕಳೆದು ಕೊಳ್ಳುವ ಮಕ್ಕಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ನೋವಿನ ಸಂಗತಿ. ಪರೀಕ್ಷೆಯಲ್ಲಿ ಫೇಲಾದರೆ ಅಥವಾ ಕಡಿಮೆ ಅಂಕ ಬಂದರೆ ಸಮಾಜದಲ್ಲಿ ಅವಮಾನ ಎದುರಿಸ ಬೇಕಾಗುತ್ತೆ ಅನ್ನೋ ಕಾರಣಕ್ಕೂ ಹೆತ್ತವರು ಬೈಯುತ್ತಾರೆ ಅನ್ನುವ ಭಯಕ್ಕೊ ಅಥವಾ ಭವಿಷ್ಯದ ಕುರಿತ ಆತಂಕದಿAದಾಗಿ ಮಕ್ಕಳು ಜೀವ ಕಳೆದುಕೊಳ್ಳುವ ದುಡುಕಿನ ನಿರ್ಧಾರಕ್ಕೆ ಬಂದು ಬಿಡುತ್ತಾರೆ.
ಪ್ರತಿ ವರುಷ ಪರೀಕ್ಷೆಯ ಫಲಿತಾಂಶ ಪ್ರಕಟವಾದಾಗ ದೇಶದಾದ್ಯಂತ ಇದೇ ಸಮಸ್ಯೆ ಮರುಕಳಿಸುತ್ತಿದೆ. ದೇಶದ ಭವಿಷ್ಯವಾದ ಯುವಶಕ್ತಿ, ಪರೀಕ್ಷೆಯ ಸೋಲಿಗೆ ಹೆದರಿ ಜೀವವನ್ನು ಕಳೆದುಕೊಳ್ಳುವುದಾದರೆ ಭವಿಷ್ಯದಲ್ಲಿ ದೇಶದ ಗತಿಯೇನು? ಸೋಲು ಛಲವನ್ನು ತರಬೇಕೇ ಹೊರತು ಸಾವನಲ್ಲ. ಮಕ್ಕಳ ಈ ಸ್ಥಿತಿಗೆ ಕಾರಣ ಮಕ್ಕಳ ಹೆತ್ತವರು ಮತ್ತು ಸಮಾಜ.
ತಮ್ಮ ಮಕ್ಕಳು ಎಲ್ಲಾ ಮಕ್ಕಳಿಗಿಂತ ಚೆನ್ನಾಗಿ ಓದಿ ಡಾಕ್ಟರ್, ಇಂಜೀನಿಯರ್ ಆಗಬೇಕು ಎಂದು ಬಯಸುವ ಹೆತ್ತವರು ಒಂದು ಕಡೆಯಾದರೆ ಚೆನ್ನಾಗಿ ಓದದೇ ಉತ್ತಮ ಅಂಕಗಳಿಸದೇ ಸಾಧಾರಣವಾಗಿ ಇರುವ ಮಕ್ಕಳನ್ನು ಕೀಳಾಗಿ ಕಾಣುವ ಸಮಾಜ ಇನ್ನೊಂದು ಕಡೆ ಈ ಎರಡು ಕಾರಣಗಳು ಮಕ್ಕಳನ್ನು ಮಾನಸಿಕವಾಗಿ ಕುಗ್ಗಿಸಿ ಜೀವ ಕಳೆದುಕೊಳ್ಳುವ ನಿರ್ಧಾರಕ್ಕೆ ಬರುವಂತೆ ಮಾಡುತ್ತವೆ.
ಹೆತ್ತವರು ಮಕ್ಕಳನ್ನು ಬಾಲ್ಯದಿಂದಲೇ ಬೇರೆ ಮಕ್ಕಳ ಜೊತೆ ಹೋಲಿಕೆ ಮಾಡದೇ ಪ್ರತಿಯೊಂದು ಮಗು ಕೂಡ ವಿಭಿನ್ನ ವೆಂದು ತಿಳಿಯಬೇಕು. ಮಕ್ಕಳಿಗೆ ಸೋಲುವುದನ್ನು ಹೇಳಿಕೊಡಬೇಕು ಮಕ್ಕಳಿಗೆ ಜೀವನದ ಮೌಲ್ಯವನ್ನು ಹೇಳಿಕೊಡಬೇಕು. ಮಕ್ಕಳಿಗೆ ಉತ್ತಮ ಅಂಕ ತೆಗೆಯಬೇಕು ಎಂಬ ಹೊರೆಯನ್ನು ಹಾಕದೇ ಉತ್ತಮ ರೀತಿಯಲ್ಲಿ ಓದುವುದಕ್ಕೆ ಪ್ರೋತ್ಸಾಹವನ್ನು ನೀಡಬೇಕು. ಎಲ್ಲರೂ ಇಂಜಿನಿಯರ್ ಅಥವಾ ಡಾಕ್ಟರ್ ಗಳಾದರೆ ಬಾಕಿ ಉಳಿದಿರುವ ಕ್ಷೇತ್ರಗಳಲ್ಲಿ ಸಾಧನೆ ಮಾಡುವವರು ಯಾರು? ಆದರಿಂದ ಮಕ್ಕಳಿಗೆ ಅವರ ಇಷ್ಟದ ಕ್ರೇತ್ರಗಳಲ್ಲಿ ಅವರಿಗೆ ಸಾಧನೆ ಮಾಡಲು ಪೋಷಕರು ಬಿಡಬೇಕು.
ಶೈಕ್ಷಣಿಕವಾಗಿ ವಿಫಲರಾಗಿದ್ದರೂ ಕೂಡ ಬದುಕಿನಲ್ಲಿ ಜಗತ್ತೇ ಹುಬ್ಬೇರಿಸುವಂತೆ ಸಾಧನೆ ಮಾಡಿದ ಅನೇಕರು ನಮ್ಮ ಮುಂದೆಯೇ ಇದ್ದಾರೆ.
ಸಚಿನ್ ತೆಂಡ್ಕೂರ್:
ಭಾರತದಲ್ಲಿ ಕ್ರಿಕೆಟ್ ದೇವರು ಎಂದು ಕರೆಸಿಕೊಳ್ಳುವ ಸಚಿನ್ ಕೂಡ ತಮ್ಮ ಶೈಕ್ಷಣಿಕ ಜೀವನದಲ್ಲಿ ವಿಫಲರಾಗಿದ್ದಾರೆ ಅಂದರೆ ನಿಮಗೆ ಅಚ್ಚರಿ ಆಗಬಹುದು. ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಸಚಿನ್ ಹತ್ತನೇ ತರಗತಿಯಲ್ಲಿ ಮೂರು ಬಾರಿ ಫೇಲ್ ಆಗಿ ನಂತರ ತಮ್ಮ ನೆಚ್ಚಿನ ಕ್ಷೇತ್ರವಾದ ಕ್ರಿಕೆಟ್ನಲ್ಲಿ ತೊಡಗಿಸಿಕೊಂಡು ಸಾಧನೆಯನ್ನು ಮಾಡಿದ್ದಾರೆ.
ಅಕ್ಷಯ್ ಕುಮಾರ್:
ಖ್ಯಾತ ಬಾಲಿವುಡ್ ತಾರೆ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಅಕ್ಷಯ ಕುಮಾರ್ ಕೂಡ ತಮ್ಮ ಶಿಕ್ಷಣದಲ್ಲಿ ಸೋಲನ್ನು ಅನುಭವಿಸಿದ್ದಾರೆ. ನಂತರ ಸೋಲನ್ನೆ ಮೆಟ್ಟಿ ನಿಂತು ಇಂದು ಪ್ರಪಂಚವೇ ಮೆಚ್ಚುವಂತ ಶ್ರೇಷ್ಠ ನಟರಾಗಿ ಸಾಧನೆಯನ್ನು ಮಾಡಿದ್ದಾರೆ.
ವೀರ್ದಾಸ್:
ಭಾರತದ ಪ್ರಸಿದ್ದ ಹಾಸ್ಯಗಾರ ವೀರ್ ದಾಸ್ ಕೂಡ ಹತ್ತನೇ ತರಗತಿಯಲ್ಲಿ ಅತೀ ಕಡಿಮೆ ಅಂಕಗಳಿಸಿದ್ದರು ಆದರೆ ಅದರಿಂದ ಕುಗ್ಗಲಿಲ್ಲ ತಮ್ಮ ನೆಚ್ಚಿನ ಕ್ಷೇತ್ರದತ್ತ ಗಮನ ಹರಿಸಿ ಹಾಸ್ಯ ನಟನಾಗಿ ಗುರುತಿಸಿಕೊಂಡು ಸಾಧನೆಯನ್ನು ಮಾಡಿದ್ದಾರೆ.
ಬಿಲ್ಗೆಟ್ಸ್:
ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ಗೇಟ್ಸ್ ಕೂಡ ತಮ್ಮ ನೆಚ್ಚಿನ ಕ್ಷೇತ್ರದಲ್ಲಿ ಸಾಧನೆ ಮಾಡಲು ಹಾರ್ವರ್ಡ್ನ್ನು ಅರ್ಧಕ್ಕೆ ಬಿಟ್ಟುಹೋಗಿದ್ದರು. ನಂತರ ಮೈಕ್ರೋಸಾಫ್ಟ್ನ್ನು ಹುಟ್ಟು ಹಾಕಿದರು.
ಮಾರ್ಕ್ ಜುಕರ್ಬರ್ಗ್:
ಫೇಸ್ಬುಕ್ ಪಿತಾಮಹ ಮಾರ್ಕ್ ಜುಕರ್ಬರ್ಗ್ ಕೂಡ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿಲ್ಲ. ತಮ್ಮ ಗುರಿಯನ್ನು ಸಾಧಿಸಲು ಶಿಕ್ಷಣವನ್ನು ಅರ್ಧದಲ್ಲೇ ಬಿಟ್ಟಿದ್ದರು.
ಹೀಗೆ ಸಾಧನೆಗಳನ್ನು ಮಾಡಿ ತಮ್ಮದೇ ಹಾದಿಯಲ್ಲಿ ತಮ್ಮದೇ ಕ್ಷೇತ್ರದಲ್ಲಿ ಹೆಸರು ಮಾಡಿರುವವರೊಮ್ಮೆ ಕೇಳಿ ಅವರ ತಂದೆ ತಾಯಿಗಳು ಅವರನ್ನು ನೀನು ಇಂಜಿನಿಯರ್ ಅಥವಾ ಡಾಕ್ಟರ್ ಆಗಬೇಕೆಂದು ಎಂದಿಗೂ ಪೀಡಿಸಿರುವುದಿಲ್ಲ. ಹೆತ್ತವರು ತಮ್ಮ ಮಕ್ಕಳ ಆಸೆಯೇ ನಮ್ಮ ಆಸೆ ಎಂದು ನಿರ್ಧರಿಸಿದರೆ, ಒಬ್ಬ ವಿದ್ಯಾರ್ಥಿ ಎಲ್ಲಕ್ಕಿಂತಲೂ ಬದುಕು ದೊಡ್ಡದು ಎಂಬ ಸತ್ಯವನ್ನು ಅರ್ಥ ಮಾಡಿಕೊಂಡು ಎಂತಹ ಪರಿಸ್ಥಿತಿ ಬಂದರೂ ಆತ್ಮಹತ್ಯೆಯಂತಹ ಹೀನ ಕೃತ್ಯಕ್ಕೆ ಕೈ ಹಾಕುವುದಿಲ್ಲ.