ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ವಿಪಕ್ಷಗಳ ಮೈತ್ರಿಕೂಟವು ಇಂಡಿಯ ಎಂಬ ಹೆಸರಿನೊಂದಿಗೆ ತಮ್ಮ ಶಕ್ತಿ ತೋರಿಸಲು ಮುಂದಾಗಿದೆ.ವಿಪಕ್ಷಗಳ ಈ ಒಕ್ಕೂಟದಲ್ಲಿ ಒಟ್ಟು 26 ಪಕ್ಷಗಳು ಒಟ್ಟು ಸೇರಿ ತಮ್ಮ ಬಲ ಪ್ರದರ್ಶನಕ್ಕೆ ತೊಡೆಗಟ್ಟಿ ನಿಂತಿದೆ.
ಬೆಂಗಳೂರಿನಲ್ಲಿ ನಡೆದ ಮಹಾಘಟ್ಬಂಧನ್ ಒಕ್ಕೂಟಕ್ಕೆ ಇಂಡಿಯಾನ್ ನ್ಯಾಷನಲ್ ಡೆವಲಪ್ ಮೆಂಟಲ್ ಇನ್ಕ್ಲೂಸಿವ್ ಅಲೈನ್ಸ್ (ಇಂಡಿಯಾ) ಎಂದು ನಾಮಕರಣ ಮಾಡಿ ಅಧಿಕೃತವಾಗಿ ಹೊಸ ಬಣವನ್ನು ಹುಟ್ಟುಹಾಕಿದೆ.
ಈ ಮೂಲಕ ಬಿಜೆಪಿಯನ್ನು ಮಣಿಸಲು “ಇಂಡಿಯಾ” ಪಕ್ಷಗಳು ಕಾರ್ಯಪ್ರವೃತ್ತರಾಗಿದ್ದಾರೆ. ಈಗಾಗಲೇ ಒಬ್ಬರಾದ ಮೇಲೆ ಒಬ್ಬರು ತಮ್ಮ ಟೀಕಾಪ್ರಹಾರಗಳನ್ನು ಬಿಜೆಪಿ ಮತ್ತು ಎನ್ಡಿಎ ಒಕ್ಕೂಟದ ವಿರುದ್ಧ ಹರಿಹಾಯ ಬಿಟ್ಟಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ರೈತರಿಗಾಗಿ, ಯುವಕರಿಗಾಗಿ,ದಲಿತರಿಗಾಗಿ, ದೇಶಕ್ಕಾಗಿ, ಆರ್ಥಿಕತೆಗಾಗಿ ನಾವು ಒಂದಾಗಿದ್ದೇವೆ. ನೀವು ಇಂಡಿಯಾಗೆ ಸವಾಲು ಹಾಕುತ್ತೀರಾ ? ಎಂದು ಮಾತಿನ ವರಸೆಯಿಂದ ತಿವಿದಿದ್ದಾರೆ.
ಎಎಪಿಯ ರಾಜ್ಯಸಭಾ ಸದಸ್ಯ ಮತ್ತು ರಾಷ್ಟ್ರೀಯ ವಕ್ತಾರ ರಾಘವ್ ಚಡ್ಡಾ ಇಡಿ ದಾಳಿಯ ಭಯಕ್ಕೆ ಹಲವು ಪಕ್ಷಗಳು ಎನ್ಡಿಎ ಕೂಟವನ್ನು ಸೇರಿದೆ ಎಂದು ಟ್ವೀಟ್ ಮೂಲಕ ಟೀಕಿಸಿದ್ದಾರೆ.
ಎಎಪಿ ಢೋಂಗಿ ಬಾಬಾ ಮತ್ತು 38 ಕಳ್ಳರು ಎಂದು ಎನ್ಡಿಎ ಕೂಟವನ್ನು ಟ್ವೀಟರ್ ಖಾತೆಯಲ್ಲಿ ಪ್ರಧಾನಿ ಮೋದಿಯವರ ಧ್ಯಾನ ಭಂಗಿಯ ಪೋಟೋ ಒಂದನ್ನು ಹಾಕಿ ಟ್ವೀಟ್ ಮಾಡಲಾಗಿದೆ.
ಇದೇ ಮೋದಲ ಭಾರಿಗೇ ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಭ್ರಷ್ಟರೆಲ್ಲಾ ಒಂದೇ ಕಡೆ ಸೇರಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ ವಿಪಕ್ಷಗಳ ಮೈತ್ರಿ ಸಭೆಯ ಬೆನ್ನಲ್ಲೇ ಎನ್ಡಿಎ ಮೈತ್ರಿ ಕೂಟದ ಸಭೆಯನ್ನು ನಡೆಸಲಾಗಿದೆ.
38 ಪಕ್ಷಗಳನ್ನು ಒಳಗೊಂಡ ಎನ್ಡಿಎ ಮೈತ್ರಿ ಕೂಟದ ಸಭೆಯು ಈಗಾಗಲೇ ಇಂಡಿಯಾ ಮೈತ್ರಿ ಕೂಟಕ್ಕೆ ತಮ್ಮ ಬಲ ಪ್ರದರ್ಶನ ಮಾಡುವುದರ ಮೂಲಕ ಸೆಡ್ಡು ಹೋಡೆದು ನಿಂತಿದೆ.
ಲೋಕಸಭಾ ಚುನಾವಣೆ 2024 ರ ಚುನಾವಣೆಗೆ ಎರಡು ಬಣಗಳು ತಮ್ಮ ಪೈಪೋಟಿಯನ್ನು ಆರಂಭಿಸಿದೆ. ಪರ ವಿರುದ್ಧ ಟೀಕೆ, ವ್ಯಂಗ್ಯ ಗಳು ಈಗಲೇ ಸಖತ್ ಸದ್ದು ಮಾಡತೊಡಗಿದೆ. ಎನೇ ಆದರೂ ಬಿಜೆಪಿಯನ್ನು ಆಡಳಿತದಿಂದ ಕಿತ್ತೆಸೆಯ ಬೇಕೆಂದು ಇಂಡಿಯಾ ಪಣ ತೊಟ್ಟಿದ್ದರೆ. ನಾವು ಬಿಡೆವು ಎಂದು ಎನ್ಡಿಎ ಕೂಡ ಸವಾಲನ್ನು ಹಾಕಿದೆ.
ಈ ಬಾರಿ ಟಾರ್ಗೆಟ್ 273 ಬಿಜೆಪಿಗೆ ಒಲಿಯುವೋದೋ ಇಲ್ಲವೇ ಎಂದು ಕಾಲ ನಿರ್ಣಾಯ ಮಾಡಲಿದೆ. ಯಾಕೆಂದರೆ ಚುನಾವಣೆಗೆ ಮುನ್ನ ಇನ್ನು ಒಂದಿಷ್ಟು ನಾಟಕೀಯ ಬೆಳವಣಿಗೆಗಳು ಸರ್ವೇ ಸಾಮಾನ್ಯವಾಗಿ ನಡೆಯಲಿದೆ. ಇದು ರಾಜಕೀಯ ಬೆಳವಣಿಗೆಯಲ್ಲಿ, ಪಕ್ಷ ಮತ್ತು ಮೈತಿ ಕೂಟದ ಮೇಲೆ ನೇರ ಪರಿಣಾಮ ಬೀಳಲಿದೆ.
ಇತ್ತ ಜೆಡಿಎಸ್ ಮತ್ತು ಬಿಎಸ್ಪಿ ಈ ಎರಡು ಪಕ್ಷಗಳು ಮೈತ್ರಿ ಕೂಟದಿಂದ ದೂರ ಉಳಿದಿರುವುದು ಕುತೂಹಲ ಮೂಡಿಸಿದೆ. ಜೆಡಿಎಸ್ನ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜೋತೆ ಒಂದು ರೌಂಡ್ ಮೀಟಿಂಗ್ ಮುಗಿಸಿ ಬಂದಿರುತ್ತದೆ. ಮುಂದಿನ ದಿನಗಳಲ್ಲಿ ಹೊಸ ಟ್ವೀಸ್ಟ್ ಜೆಡಿಎಸ್ ಕಡೆಯಿಂದ ಖಂಡಿತ್ತ ಅನಿಸುತ್ತಿದೆ.