ಅರಬ್ ಸಂಯುಕ್ತ ಸಂಸ್ಥಾನದ ಅಬುಧಾಬಿಯಲ್ಲಿ ನಿರ್ಮಾಣ ಹಂತದಲ್ಲಿ ಇರುವ ಬಿ.ಎ.ಪಿ.ಎಸ್. ಹಿಂದೂ ಮಂದಿರ ಕ್ಕೆ 2023 ಮೇ 25 ರಂದು ವಿಶ್ವದ ಮೂವತ್ತು ವಿವಿಧ ದೇಶಗಳ ರಾಯಭಾರಿಗಳು ಭೇಟಿ ನೀಡಿದ್ದಾರೆ. ಇನ್ನು ಒಂದು ವರ್ಷದಲ್ಲಿ ಪೂರ್ಣ ಗೊಳ್ಳಲಿರುವ ಶಿಲ್ಪಾಕಲಾ ವೈಭವದ ಹಿಂದೂ ಮಂದಿರವನ್ನು ವೀಕ್ಷಿಸಿದರು.
ಬಿ.ಎ.ಪಿ.ಎಸ್. ಹಿಂದೂ ಮಂದಿರ್ ಸೆಲೆಬ್ರೆಟ್ಸ್ ಟಾಲರೆಂಸ್ ಅಂಡ್ ಹಾರ್ಮನಿ ಧೇಯವಾಕ್ಯದಂತೆ ಸಹನೆ, ತಾಳ್ಮೆ, ಸಾಮರಸ್ಯದ ಸಂದೇಶವನ್ನು ಜಗತ್ತಿಗೆ ಸಾರುತ್ತಿದೆ. ಭಾರತ ಮತ್ತು ಅರಬ್ ಸಂಯುಕ್ತ ಸಂಸ್ಥಾನದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಭಾವೈಕ್ಯತೆಗೆ ಸಾಕ್ಷಿಯಾಗಿ, ವಿಶ್ವಕ್ಕೆ ಸಹನೆ, ತಾಳ್ಮೆ, ಸಾಮರಸ್ಯದ ಸಂದೇಶವನ್ನು ಸಾರುವ ಹಿಂದೂ ಸನಾತನ ಧರ್ಮದ ಶಾಸ್ತ್ರೀಯ ಶಿಲ್ಪಕಲಾ ವೈಭವಕ್ಕೆ ಸಾಕ್ಷಿಯಾಗಲಿರುವ ಅತೀ ದೊಡ್ಡ ಮಂದಿರ ಇನ್ನು ಒಂದು ವರ್ಷದಲ್ಲಿ ಪೂರ್ಣ ಗೊಳ್ಳಲಿದೆ.
ಈಗಾಗಲೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ತಮ್ಮ ಹಸ್ತದಿಂದ ಭಕ್ತಿಪೂರ್ವಕವಾಗಿ ದೇವಾಲಯ ನಿರ್ಮಾಣಕ್ಕೆ ಶಿಲೆಯನ್ನು ಸಮರ್ಪಿಸಿದ್ದಾರೆ. ಯಾವುದೆ ಕಬ್ಬಿಣವನ್ನು ಬಳಸದೆ ಶಿಲ್ಪಾಕೃತಿಗಳನ್ನು ಜಿಗ್ಸಾ ಪಝಲ್ ತಂತ್ರಜ್ಞಾನದಲ್ಲಿ ಜೋಡಿಸಿಕೊಂಡು ನಿರ್ಮಿಸಲಾಗಿದೆ. ಐವತೈದು ಚದರ ಮೀಟರ್ನಲ್ಲಿ ಅಬುಧಾಬಿ ಹಿಂದೂ ಮಂದಿರ ನಿರ್ಮಾಣವಾದರೆ, ಐವತ್ತಮೂರು ಚದರ ಮೀಟರ್ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಸ್ಥಳಾವಕಾಶವಿದ್ದು ಒಂದು ಸಾವಿರದ ಇನ್ನೂರು ಕಾರ್ಗಳು ಮೂವತ್ತು ಬಸ್ಸುಗಳು ಎರಡು ಹೆಲಿಕಾಪ್ಟರ್ ನಿಲುಗಡೆ ಹೆಲಿಪ್ಯಾಡ್ ನಿರ್ಮಾಣವಾಗುತ್ತಿದೆ.
ಈ ಭವ್ಯ ನಿರ್ಮಾಣದ ಹಿಂದೂ ಮಂದಿರ ವೀಕ್ಷಿಸಲು ಮೂವತ್ತು ದೇಶಗಳ ರಾಯಭಾರಿಗಳು ತಮ್ಮ ಪತ್ನಿಯರು ಹಾಗೂ ರಾಜತಾಂತ್ರಿಕ ಮುಖ್ಯಸ್ಥರು ಒಟ್ಟು ಎಂಬತೈದು ಗಣ್ಯರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಯು.ಎ.ಇ.ಗೆ. ಭಾರತೀಯ ರಾಯಭಾರಿ ಗೌರವಾನ್ವಿತ ಶ್ರೀ ಸಂಜಯ್ ಸುಧೀರ್ ತಮ್ಮ ಮಾತಿನಲ್ಲಿ ಯು.ಎ.ಇ. ಮತ್ತು ಭಾರತದ
ಭಾಂದವ್ಯದ ಬಗ್ಗೆ ಹಾಗೂ ಬಾರತೀಯ ಇತುಹಾಸ ಮತ್ತು ಸಂಸ್ಕೃತಿ ಹಾಗೂ ವಾಣಿಜ್ಯ ವ್ಯವಹಾರದ ಬಗ್ಗೆ ಅತಿಥಿಗಳಿಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. ಅಬುಧಾಬಿಯ ಹಿಂದೂ ಮಂದಿರ ಯು.ಎ.ಇ.ಯಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗೆ ಅತ್ಯಂತ ಪವಿತ್ರ ಮಂದಿರವಾಗಿದ್ದು ಸಹನೆ, ತಾಳ್ಮೆ, ಮತ್ತು ಸಾಮರಸ್ಯದ ಸಂದೇಶವನ್ನು ವಿಶ್ವಕ್ಕೆ ಮುಟ್ಟಿಸುವ ಕೇಂದ್ರವಾಗಲಿದೆ.
ಭಾರತೀಯ ವಿದೇಶಾಂಗ ಸಚಿವರು ಮಾನ್ಯ ಡಾ. ಸುಬ್ರಹ್ಮಣ್ಯಂ ಜೈಶಂಕರವರ ಸಂದೇಶದ ವೀಡಿಯೊ ಪ್ರದರ್ಶನದ ಮೂಲಕ ಅತಿಥಿಗಳಿಗೆ ಹೆಚ್ಚಿನ ಸಂದೇಶವನ್ನು ಮುಟ್ಟಿಸಲಾಯಿತು. ಅಬುಧಾಬಿ ಹಿಂದೂ ಮಂದಿರದ ಮುಖ್ಯಸ್ಥರು ಪೂಜ್ಯ ಸ್ವಾಮಿ ಬ್ರಹ್ಮವಿಹಾರಿದಾಸ್ ಸರ್ವರನ್ನು ಸ್ವಾಗತಿಸುತ್ತಾ ನಿರ್ಮಾಣದ ನಂತರ ದೊರೆಯಲಿರುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ವಿವರಿಸಿದ ನಂತರ ಎಲ್ಲಾ ಅತಿಥಿಗಳನ್ನು ಮಂದಿರ ನಿರ್ಮಾಣದ ಸ್ಥಳಕ್ಕೆ ಕರೆದು ಕೊಂಡು ಹೋಗಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಯಿತು.
ಭಾರತದ ರಾಜಸ್ಥಾನದಲ್ಲಿ ಎರಡು ಸಾವಿರ ಶಿಲ್ಪಿಗಳು ಕೆತ್ತನೆಮಾಡಿ ಹಡಗಿನ ಮೂಲಕ ಅಬುಧಾಬಿಗೆ ತಂದು ಜೋಡಿಸಿರುವ ಭವ್ಯ ಹಿಂದೂ ಮಂದಿರದ ಶಿಲ್ಪಾಕಲಾ ವೈಭವವನ್ನು ವೀಕ್ಷಿಸಿದ ವಿವಿಧ ದೇಶಗಳ ರಾಯಭಾರಿಗಳು ಭಾರತೀಯ ಸನಾತನ ಧರ್ಮ , ಸಂಸ್ಕೃತಿಯ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಭಾರತದ ಪ್ರಧಾನಿ ಮಾನ್ಯ ಶ್ರೀ ನರೇಂದ್ರ ಮೋದಿಯವರ ಭೇಟಿಯ ಸಂದರ್ಭದಲ್ಲಿ ಯು.ಎ.ಇ. ಸರ್ಕಾರ ಉಡುಗೊರೆಯಾಗಿ ನೀಡಿರುವ ಇಪ್ಪತೇಳು ಏಕರೆ ಪ್ರದೇಶದಲ್ಲಿ 2018ರಲ್ಲಿ ಅಬುಧಾಬಿ ಹಿಂದೂ ಮಂದಿರ ನಿರ್ಮಾಣಕ್ಕೆ ಶಿಲನ್ಯಾಸ ಮಾಡಲಾಗಿತ್ತು. ಅಬುಧಾಬಿ ಹಿಂದೂ ಮಂದಿರಕ್ಕೆ ಭೇಟಿ ನೀಡಿರುವ ಪ್ರಮುಖ ರಾಯಭಾರಿಗಳು ಆಫ್ಗಾನಿಸ್ಥಾನ, ಬಾಂಗ್ಲಾದೇಶ್, ಬೆಲ್ಜಿಯಂ, ಬ್ರೇಜಿಲ್, ಕೆನಡಾ, ಸೈಪ್ರಸ್, ಡೆನ್ಮಾರ್ಕ್, ಎಸ್ಟೋನಿಯಾ, ಜರ್ಮನಿ, ಇಂಡೊನೇಶ್ಯಾ, ಇಸ್ರೇಲ್, ಜಪಾನ್, ಲಾಟ್ವಿಯಾ, ಮಾಲ್ಡೀವ್ಸ್, ನೇಪಾಳ್, ನ್ಯೂಜಿಲ್ಯಾಂಡ್, ನೈಜೀರಿಯಾ, ನಾರ್ವೇ, ಒಮಾನ್, ಪಿಲಿಪೈನ್ಸ್, ರೊಮಾನೀಯಾ, ಸೆರ್ಬಿಯಾ, ಶ್ರೀಲಂಕಾ, ಸಿರಿಯಾ, ಥೈಲ್ಯಾಂಡ್, ಉಕ್ರೇನ್ ಮತ್ತು ಇನ್ನಿತರ ದೇಶದ ಗಣ್ಯರು ಭಾಗವಹಿಸಿದ್ದರು. ಅಬುಧಾಬಿ ಹಿಂದೂ ಮಂದಿರ ಜವಬ್ಧಾರಿಯನ್ನು ವಹಿಸಿಕೊಂಡಿರುವ ಶ್ರೀಯುತರುಗಳಾದ ಅಶೋಕ್ ಕೊಟೆಚಾ, ಯೋಗೇಶ್ ಮೆಹ್ತಾ, ಚಿರಾಗ್ ಪಟೇಲ್ ಮತ್ತು ಪ್ರಣವ್ ದೇಸಾಯಿ ಅತಿಥಿಗಳನ್ನು
ಹೂವಿನಹಾರ ಹಾಕಿ ಬರಮಾಡಿಕೊಂಡು ಕೊನೆಯಲ್ಲಿ ಹಾರ್ದಿಕವಾಗಿ ಬೀಳ್ಕೊಟ್ಟರು. ವಿವಿಧ ದೇಶಗಳ ರಾಯಬಾರಿಗಳ ಭೇಟಿಯು ಅಬುಧಾಬಿ ಹಿಂದೂ ಮಂದಿರದ ಶಾಂತಿ ಸೌಹಾರ್ಧತೆಯ ಸಾಮರಸ್ಯಕ್ಕೆ ಸಾಕ್ಷಿಯಾಗಿತ್ತು. ಭಾರತದ ಭಾಂದವ್ಯಕ್ಕೆ ಅರಬ್ ಸಂಯುಕ್ತ ಸಂಸ್ಥಾನದ ಆಡಳಿತ ಸರ್ಕಾರದ ದೊರೆಗಳು ಅಬುಧಾಬಿ ಹಿಂದೂ ಮಂದಿರ ನಿರ್ಮಾಣಕ್ಕೆ ಸ್ಥಳ ನೀಡಿ ವ್ಯವಸ್ಥೆ ಮಾಡಿರುವುದು ಸಾರ್ವಕಾಲಿಕ ಮಾನ್ಯರಾಗಿದ್ದಾರೆ.
By
ಬಿ. ಕೆ. ಗಣೇಶ್ ರೈ
ದುಬಾಯಿ.