ಮೂರನೇ ಆವೃತ್ತಿಯ ಚಂದ್ರಯಾನ-3 ಪರೀಕ್ಷೆಗಳು ಯೋಜಿಸಿದಂತೆ ನಡೆದರೆ ಜುಲೈ 12 ಮತ್ತು 19ರ ನಡುವೆ ಉಡಾವಣೆ ಮಾಡಲಾಗುವುದು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮುಖ್ಯಸ್ಥ ಎಸ್ ಸೋಮನಾಥ್ ಹೇಳಿದ್ದಾರೆ.
ಕೊಟ್ಟಾಯಂ ಜಿಲ್ಲೆಯ ವೈಕಂನ ಕೊತ್ತವಾರ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಇಸ್ರೋ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಮತ್ತು ಬಾಹ್ಯಾಕಾಶ ಪ್ರದರ್ಶನವನ್ನು ಆಯೋಜಿಸಿತ್ತು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಇಸ್ರೋ ಮುಖ್ಯಸ್ಥ ಸೋಮನಾಥ್, ಚಂದ್ರಯಾನ ಈಗಾಗಲೇ ಯುಆರ್ ರಾವ್ ಉಪಗ್ರಹ ಕೇಂದ್ರದಿಂದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಉಡಾವಣಾ ಕೇಂದ್ರವನ್ನು ತಲುಪಿದೆ. ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ. ಈ ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದರು.
ಈ ಉಡಾವಣೆಗೆ ಎಲ್ವಿಎಂ-3 ರಾಕೆಟ್ ಬಳಸಲಾಗುತ್ತಿದೆ. ಅದರ ಜೋಡಣೆ ನಡೆಯುತ್ತಿದೆ. ಇದಕ್ಕಾಗಿ ಎಲ್ಲ ಭಾಗಗಳು ಶ್ರೀಹರಿಕೋಟಾ ತಲುಪಿವೆ. ಜೂನ್ ಕೊನೆಯ ವಾರದಲ್ಲಿ ಚಂದ್ರಯಾನ-3ನ್ನು ರಾಕೆಟ್ಗೆ ಜೋಡಿಸುವ ಪ್ರಕ್ರಿಯೆ ಆರಂಭವಾಗಲಿದ್ದು, ಹಲವು ಪರೀಕ್ಷೆಗಳು ನಡೆಯಲಿವೆ ಎಂದು ಸೋಮನಾಥ್ ಹೇಳಿದ್ದಾರೆ.
ಚಂದ್ರಯಾನ-3 ಅನ್ನು ಉಡಾವಣೆ ಮಾಡಲು ಜುಲೈ 12 ಮತ್ತು 19 ರ ನಡುವೆ ನಮಗೆ ಅವಕಾಶವಿದೆ. ಬೇರೆಯ ಸಮಯದಲ್ಲೂ ಉಡಾವಣೆ ಮಾಡಬಹುದು ಆದರೆ ಆ ಸಂದರ್ಭದಲ್ಲಿ ಬಹಳಷ್ಟು ಇಂಧನ ವ್ಯರ್ಥವಾಗುತ್ತದೆ ಆದರಿಂದ ಈ ಸಮಯ ಉತ್ತಮವಾಗಿದೆ. ಎಲ್ಲಾ ಪರೀಕ್ಷೆಗಳು ಯಶಸ್ವಿಯಾಗಿ ನಡೆದರೆ ಮಾತ್ರ ಉಡಾವಣೆ ಮಾಡಲಾಗುವುದು ಎಂದಿದ್ದಾರೆ.
ಉಡಾವಣೆಯಲ್ಲಿ ತೊಂದರೆಯಾಗದಂತೆ ಚಂದ್ರಯಾನ-3 ಸುಧಾರಿತ ಸಾಧನಗಳನ್ನು ಬಳಸಲಾಗಿದೆ (ಇಸ್ರೋ) ಮುಖ್ಯಸ್ಥ ಎಸ್ ಸೋಮನಾಥ್ ಹೇಳಿದ್ದಾರೆ.
ಚಂದ್ರಯಾನ-3 ಸುಧಾರಿತ ಸಾಧನಗಳ ಬಳಕೆ:
*ಉಡಾವಣೆಯಲ್ಲಿ ತೊಂದರೆಯಾಗದಂತೆ ಚಂದ್ರಯಾನ-3 ರ ಹಾರ್ಡ್ವೇರ್, ರಚನೆ, ಕಂಪ್ಯೂಟರ್, ಸಾಫ್ಟ್ವೇರ್ ಮತ್ತು ಸಂವೇದಕಗಳನ್ನು ಸುಧಾರಿಸಲಾಗಿದೆ.
*ಹೊಸ ಸಾಫ್ಟ್ವೇರ್ ಬಳಸಲಾಗಿದೆ.
*ವಾಹನಕ್ಕೆ ಹೆಚ್ಚಿನ ಇಂಧನವನ್ನು ಸೇರಿಸಲಾಗಿದೆ.
*ಲ್ಯಾಂಡಿಂಗ್ ಕಾಲುಗಳನ್ನು ಬಲಪಡಿಸಲಾಗಿದೆ.
*ಹೆಚ್ಚಿನ ಶಕ್ತಿ ಉತ್ಪಾದನೆಗಾಗಿ ದೊಡ್ಡ ಸೌರ ಫಲಕಗಳನ್ನು ಅಳವಡಿಸಲಾಗಿದೆ.
* ವೇಗವನ್ನು ಅಳೆಯಲು, ಕಳೆದ ವರ್ಷ ಅಭಿವೃದ್ಧಿಪಡಿಸಲಾದ ಲೇಸರ್ ಡಾಪ್ಲರ್ ವೆಲೋಸಿಮೀಟರ್ ಉಪಕರಣವನ್ನು ಸೇರಿಸಲಾಗಿದೆ.
*ಚಂದ್ರಯಾನವನ್ನು ಮತ್ತೊಂದು ಪ್ರದೇಶದಲ್ಲಿ ಇಳಿಸಲು ಸಹಾಯ ಮಾಡಲು ಅಲ್ಗಾರಿದಮ್ ಅನ್ನು ಬದಲಾಯಿಸಲಾಗಿದೆ.