ಬಹಳ ಕುತೂಹಲ ಕೆರಳಿಸಿದ ಕರ್ನಾಟಕ ವಿಧಾನಸಭಾ ಚುನಾವಣೆ2023 ಕಡೆಗೂ ಎಲ್ಲರ ಲೆಕ್ಕಚಾರವನ್ನು ತಲೆಕೆಳಾಗಿಸಿದೆ. ಅಭ್ಯರ್ಥಿಗಳ ನಿರೀಕ್ಷೆಗೂ ಮಿಗಿಲಾದ ರೀತಿಯಲ್ಲಿ ಮತದಾರ ಉತ್ತರವನ್ನು ನೀಡಿದ್ದಾನೆ.
ಬಿಜೆಪಿ ಪಾಲಿಗಂತು ನುಂಗಲಾರದ ತುತ್ತು, ಅರಗಿಸಿಕೊಳ್ಳಲಾಗದಂತಹ ಸತ್ಯ. 224 ಕ್ಷೇತ್ರಗಳಿಗಾಗಿ ನಡೆದ ಚುನಾವಣೆಯಲ್ಲಿ ಬಿಜೆಪಿ 65 ಕ್ಷೇತ್ರದಲ್ಲಿ ಸ್ಥಾನವನ್ನು ಭದ್ರ ಪಡಿಸುವಲ್ಲಿ ಯಶಸ್ವಿಯಾಗಿದೆ. ಇತ್ತ ಕಾಂಗ್ರೇಸ್ 136 ಕ್ಷೇತ್ರಗಳಲ್ಲಿ ಗೆದ್ದು ಬಿಗುತ್ತಿದೆ.
ಬಿಜೆಪಿ ದಕ್ಷಿಣ ಭಾರತದಲ್ಲಿ ತಮ್ಮ ಸಾಮ್ರಜ್ಯವನ್ನು ವಿಸ್ತಾರಿಸುವ ಕನಸ್ಸು ನನಾಸಗಾದೆ ಉಳಿಯಿತ್ತು. ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಸಾಮ್ರಜ್ಯ ಸ್ಥಾಪಿಸಲು ಕರ್ನಾಟಕವೇ ಹೆಬ್ಬಾಗಿಲು. ಈ ಮೂಲಕ ಭದ್ರ ಮುನಾದಿಯನ್ನು ಹಾಕಿ ತಮ್ಮ ಪತಾಕೆಯನ್ನು ದಕ್ಷಿಣದ ಇತರ ರಾಜ್ಯಗಳಲ್ಲಿಯು ರಾರಜಿಸುವ ಕನಸ್ಸೊಂದು ಭಗ್ನವಾಗಿದೆ.
ಕಾಂಗ್ರೇಸಿಗೆ ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ಈ ಭಾರಿಯ ಚುನಾವಣೆ ಮಹತ್ವದ ಚುನಾವಣೆಯಾಗಿತ್ತು. ಹಾಗೆ ಬಿಜೆಪಿಗೆ ಪಕ್ಕದ ರಾಜ್ಯದಲ್ಲಿ ಪಸರಿಸಲು ಅಗತ್ಯವಾದ ಮಾರ್ಗವಾಗಿತ್ತು.
ಬೆಲೆಯೇರಿಕೆಯಿಂದ ತತ್ತರಿಸಿದ ಜನತೆಗೆ ಗ್ಯಾರಂಟಿ ಕಾರ್ಡ್ನ ಮೇಲಿನ ನಂಬಿಕೆ ಗೆದ್ದಿತ್ತು. ರಸ್ತೆ, ಗುಂಡಿ ವಿಷಗಳನ್ನು ಬಿಡಿ ಧರ್ಮದ ಬಗ್ಗೆ ಮಾತ್ತಾನಾಡಿ ಎಂದವರಿಗೆ ಜನ ಕೊಟ್ಟಂತಹ ಉತ್ತರ ನಿದ್ದೆಕೆಡಿಸುವಂತ್ತದ್ದು.
ಸುಳ್ಳು ಭರವಸೆಗಳನ್ನು ನಂಬುವAತಹ ಜನರ ಸಂಖ್ಯೆ ಕಮ್ಮಿಯಾಗಿದೆ. ಆಮೀಷಗಳಿಗೆ ಬಲಿಯಾಗಿ ಮತ ನೀಡುವವ ಸಂಖ್ಯೆ ಕಡಿಮೆಯಾಗಿದೆ. ತಮ್ಮಗೆ ಬದುಕಲು ಬೇಕಾಗಿರುವ ಮೂಲಭೂತ ಸೌಕರ್ಯಗಳು ಬೇಕೆ ಬೇಕು ಎಂದು ಹಠಕ್ಕೆ ಬಿದ್ದಾಗಿದೆ.
ನಮ್ಮ ಜನ ಪ್ರಜ್ಞಾವಂತರಾಗುತ್ತಿದ್ದಾರೆ.ಬರೇಯ ಧರ್ಮ, ಜಾತಿ ಆಧಾರದಲ್ಲಿ ರಾಜಕೀಯ ಮಾಡುವುದಕ್ಕಿಂತಲೂ ಜನರ ಒಳಿತಿಗಾಗಿ ಒಂದಿಷ್ಟು ಜನಪರ ಕೆಲಸವನ್ನು ಮಾಡುವುದು ಅಗತ್ಯ. ಈ ಭಾರಿ ಚುನಾವಣೆ ಎಲ್ಲ ಪಕ್ಷಕ್ಕೂ ಒಂದು ಪಾಠ ತಮ್ಮ ತಪ್ಪುಗಳನ್ನು ಸರಿಪಡಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಇಂತಹದೊAದು ಪಕ್ಷ ಇತ್ತು ಎಂದು ಹೇಳುವ ಸನ್ನಿವೇಶವನ್ನು ಮತದಾರ ಸೃಷ್ಟಿಸಬಹದು.
ಯಾಕೆಂದರೆ ಜನ ಯೋಚನೆ ಮಾಡಲು ಆರಂಭಿಸಿದ್ದಾರೆ.ಒಳ್ಳೆದು ಕೆಟ್ಟದು ಯಾವುದು ಎಂದು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಸರಿ ತಪ್ಪುಗಳ ನಡುವಿನ ವ್ಯತ್ಯಾಸ ತಿಳಿದಿದೆ.ಸತ್ತ ಪ್ರಜೆಗಳಿಂದ ಪ್ರಜ್ಞಾವಂತ ಪ್ರಜೆಗಳಾಗುತ್ತಿದ್ದಾರೆ.