ಭಾರತದ ಕರ್ನಾಟಕ ರಾಜ್ಯದಲ್ಲಿ ಉಪಯೋಗಿಸಲ್ಪಡುವ ಕನ್ನಡ ಭಾಷೆಯ ಸಾಹಿತ್ಯ, ಕನ್ನಡ ಭಾಷೆ ದ್ರಾವಿಡ ಭಾಷಾ ವರ್ಗಕ್ಕೆ ಸೇರುತ್ತದೆ. ಅಧುನಿಕ ಭಾರತಲ್ಲಿ ಪ್ರಚಲಿತವಾಗಿರುವ ಭಾಷೆಗಳಲ್ಲಿ 2ನೇ ಅತೀ ಹಳೆಯ ಭಾಷೆಯಾಗಿದೆ. ಕನ್ನಡ ಸಾಹಿತ್ಯ ಭಾರತದಲ್ಲಿ 3ನೇ ಅತೀ ಹಳೆಯ ಸಾಹಿತ್ಯಕ ಸಂಪ್ರದಾಯ ಸಂಸ್ಕೃತ ಸಾಹಿತ್ಯವಾಗಿದೆ.
ಕನ್ನಡ ಬರವಣಿಗೆಯ ಪ್ರಥಮ ಉದಾಹರಣೆ ದೊರಕಿರುವುದು. ಹಲ್ಲಿಡಿ ಶಾಸನದಲ್ಲಿ (ಸಾ.ಕ್ರಿ.ಶ 450) ಪ್ರಸಿದ್ಧವಾದ ಬಾದಾಮಿ ಶಾಸನಗಳು ಪುರಾತನ ಕನ್ನಡ ಬರವಣಿಗೆಯ ಮತ್ತಷ್ಟು ಉದಾಹರಣೆಗಳನ್ನು ನೀಡುತ್ತವೆ. ಉಪಲಬ್ದವಾಗಿರುವ ಪ್ರಥಮ ಕನ್ನಡ ಪುಸ್ತಕವೆಂದರೆ 9ನೇ ಶತಮಾನದ ಅಮೋಘವರ್ಷ ನೃಪತುಂಗನ ಆಸ್ಥಾನದ ಕವಿಯಾದ ಶ್ರೀ.ವಿಜಯನ ಕವಿರಾಜಮಾರ್ಗ, ಈ ಪುಸ್ತಕ ಕನ್ನಡ ಕಾವ್ಯ, ಕನ್ನಡ ಹಾಡು ಮತ್ತು ಕನ್ನಡಿಗರ ಬಗ್ಗೆ ಬರೆಯಲ್ಪಟ್ಟ ಒಟ್ಟಾರೆ ಸಾರಾಂಶವೆನ್ನಬಹುದು. ಇದಕ್ಕೆ ಹಿಂದೆ ಬರೆಯಲ್ಪಟ್ಟ ಕೆಲವು ಪುಸ್ತಕಗಳಲ್ಲಿ ಬಂದಿರುವ ಆಧಾರದ ಮೇಲೆ ಕನ್ನಡ ಸಾಹಿತ್ಯದ ಉಗಮ ಸುಮಾರು 6-7 ನೇ ಶತಮಾನದಲ್ಲಿ ಆಗಿರಬಹುದು. ಆದರೆ ಕವಿರಾಜಮಾರ್ಗದ ಹಿಂದಿನ ಯಾವ ಕೃತಿಗಳೂ ಇದುವರೆಗೆ ದೊರೆತಿಲ್ಲ.
ಕನ್ನಡ ಸಾಹಿತ್ಯದ ಚಿಂತಣೆಯನ್ನು ಮೂರು ಘಟಕಗಳಾಗಿ ವಿಂಗಡಿಸಬಹುದು.
1) ಹಳೆಗನ್ನಡ
2) ನಡುಗನ್ನಡ
3) ಆಧುನಿಕ ಕನ್ನಡ
- ಹಳೆಗನ್ನಡ :-
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ 10ನೇ ಶತಮಾನದಿಂದ ಸುಮಾರು 12ನೇ ಶತಮಾನದವರೆಗಿನ ಕಾಲಘಟಕವನ್ನು ಹಳೆಗನ್ನಡ ಎಂದು ಗುರುತಿಸಲಾಗಿದೆ.ಈ ಕಾಲದ ಸಾಹಿತ್ಯ ಮುಖ್ಯವಾಗಿ ಜೈನ ಧರ್ಮವನ್ನು ಅವಲಂಬಿಸಿದೆ. ಕನ್ನಡ ಚರಿತ್ರೆಯ ಈ ಘಟ್ಟಕ್ಕೆ ಆದಿಕಾವ್ಯ ಎಂದು ಸಹ ಕರೆಯಬಹುದು. ಈ ಕಾಲದ ಸುಪ್ರಸಿದ್ಧ ಕವಿಗಳೆಂದರೆ ಪಂಪ (ಕ್ರಿ.ಶ.902-975) ಪಂಪನ . ಕನ್ನಡ ವಿಕ್ರಮಾರ್ಜುನವಿಜಯ ಅಥವಾ ಪಂಪ ಭಾರತ ಇಂದಿಗೂ ಅಧುನಿಕ ಮೇರು ಕೃತಿಯೆಂದು ಪರಿಗಣಿತವಾಗಿದೆ,
ಇದೇ ಕಾಲದ ಇನ್ನೊಬ್ಬ ಪ್ರಮುಖ ಲೇಖಕನೆಂದರೆ 3ನೇ ಶಾಂತಿನಾಥ ಪುರಾಣ ರಚಿಸಿದ ಪೊನ್ನ (929-966) ಈ ಸಂಸತ ಕಾಲದ ಮತ್ತೊಬ್ಬ ಹೆಸರಾಂತ ಕವಿ ರನ್ನ (949)ನ ಪ್ರಮುಖ ಕೃತಿಗಳು ಜೈನ ಧರ್ಮಿಯವಾದವು. ಅಜಿತ ತೀರ್ಥಂಕರ ಪುರಾಣ ಮತ್ತು ಗದಾಯುದ್ದ ಸಾಹಸ ಭೀಮವಿಜಯ. ಛಂದಸ್ಸಿನ ದೃಷ್ಟಿಯಿಂದ ಈ ಕಾಲದ ಕಾವ್ಯ ಚಂಪೂ ಶೈಲಿಯಲ್ಲಿದೆ. (ಒಂದು ರೀತಿ ಗದ್ಯ ಮಿಶ್ರಿತ ಪದ್ಯ)
ಹಳೆಗನ್ನಡ ಗದ್ಯಗಳು :-
1) ಕವಿರಾಜ ಮಾರ್ಗ- ಶ್ರೀ. ವಿಜಯ
2) ಛಂದೋಬುದಿ -ನಾಗವರ್ಮ-2
3) ಕವೀಜೀಹ್ವಾಬಂಧನ- ಈಶ್ವರ ಕವಿ
4) ಛಂದಸ್ಸಾರ- ಗುಣವರ್ಮ
5) ನಂದಿ ಛಂದಸ್ಸು- ವೀರಭದ್ರ
6) ವಡ್ಡಾರಾಧನೆ – ಶಿವಕೋಟ್ಯಾಚಾರ್ಯ
ಹಳೆಗನ್ನಡದ ಕಾವ್ಯಗಳು :-
1) ಕಾವ್ಯಾವಲೋಖನ – ನಾಗವರ್ಮ-2
2) ಉದಯಾದಿತ್ಯಾಲಂಕಾರ – ಉದಯಾದಿತ್ಯ
3) ಶೃಂಗಾರ ರತ್ನಾಕರ ಕಾಮದೇವ
4) ಮಾಧವಾಲಂಕಾರ – ಮಾಧವ
5) ನರಪತಿ ಚರಿತೆ ಲಿಂಗರಾಜ
6) ರಸರತ್ನಾಕರ- ಸಾಳ್ವ
7) ಅಪ್ರತಿಮ ವೀರ ಚರಿತ್ರೆ- ತಿರುಮಲಾರ್ಯ
8) ಶಬ್ದಮಣಿ ದರ್ಪಣ- ಕೇಶಿರಾಜ
2) ನಡುಗನ್ನಡ :- ಈ ಕಾಲದಲ್ಲಿ ಪ್ರಮುಖವಾಗಿ ಸಾಹಿತ್ಯಗಳಲ್ಲಿ ಪ್ರಕಾರಗಳು. ಅವು ಎರಡು
1) ವಚನ ಸಾಹಿತ್ಯ
2) ದಾಸ ಸಾಹಿತ್ಯ
1)ವಚನ ಸಾಹಿತ್ಯ : ವಚನಗಳು ಎಂದು ಸಾಮಾನ್ಯವಾಗಿ ಕರೆಯಲಾಗುವ ವೀರಶೈವ ಶರಣರ ವಚನಗಳು ಮುಕ್ತ ಛಂದಸ್ಸಿನಲ್ಲಿವೆ.
ಬಸವೇಶ್ವರ, ಅಕ್ಕಮಹಾದೇವಿ ಮೊದಲಾದವರು ವಚನಗಳನ್ನು ಶಾಸ್ತ್ರೀಯ ಸಂಗೀತದಲ್ಲಿ ಅಳವಡಿಸಿ ಮಲ್ಲಿಕಾರ್ಜುನ ಮನಸೂರ ಮೊದಲಾದ ಹಿಂದೂಸ್ತಾನಿ ಹುಟ ಸಂಗೀತಗಾರರು ಹಾಡಿದ್ದಾರೆ. ಶರಣರ ನಂತರ ಸರ್ವಜ್ಞರ ಕಾರ ವಚನಗಳು ಮಾತ್ರ ತ್ರಿಪದಿಯಲ್ಲಿವೆ. ಸಾಮಾನ್ಯವಾಗಿ ಬೇಂಕ ವಚನಗಳು ಅಂದಿನ ಕಾಲದ ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಪರಿಸ್ಥಿತಿಗಳ ಬಗೆಗಿನ ಯೋಜನೆ ಧಾರೆಗಳಾಗಿವೆ. ವಚನ ಸಾಹಿತ್ಯದ ಪ್ರಮುಖ ಹರಿಕಾರರೆಂದರೆ ಬಸವೇಶ್ವರರು. (1124-1196) ಅಲ್ಲಮಪ್ರಭು, ಅಕ್ಕ ಮಹಾದೇವಿ (12ನೇ ಬೆಳವ ಶತಮಾನ) ಮುಂತಾದವರು.
2) ದಾಸ ಸಾಹಿತ್ಯ : (ಭಕ್ತಿ ಸಾಹಿತ್ಯ) 15ನೇ ಶತಮಾನದಲ್ಲಿ ಆರಂಭಗೊಂಡ ಭಕ್ತಿ ಪ೦ಥದ ಹರಿದಾಸರಿಂದ ವಿರಚಿತವಾದದ್ದು ಈ ಪದ್ಯಗಳಿಗೆ ಸಾಮಾನ್ಯವಾಗಿ ಟಿಫಱದು ಗಳೆಂದು ಹೆಸರು. ಇವು ಭಗವಂತನಲ್ಲಿ ಒಂದಾಗಬಯಸುವ ಭಕ್ತನ ಭಾವವನ್ನು ಪ್ರತಿಬಿಂಬಿಸುತ್ತವೆ. ಈ ಸಾಹಿತ್ಯ ಇಂದಿಗೂ ನಿಲುಕಿದೆ. ದಾಸ ಸಾಹಿತ್ಯ ಭಾರತದ ಶಾಸ್ತ್ರೀಯ ಸಂಗೀತ ಪದ್ಧತಿಗಳಲ್ಲೊಂದಾದ ಕರ್ನಾಟಕ ಸಂಗೀತಕ್ಕೆ ಬುನಾದಿಯಾಗಿದೆ.ದಾಸರ ಪದಗಳಿಗೆ ದೇವರನಾಮಗಳೆಂದೂ ಹೆಸರು. ಈ ಪ್ರಕಾರದ ಮುಖ್ಯ ಕನ್ನಡ ದಾಸರೆಂದರೆ ಪುರಂದರದಾಸ (1494-1564) ಮತ್ತು ಕನಕದಾಸರು ಇವರನ್ನು ದಾಸಸಾಹಿತ್ಯದ ಅಶ್ವಿನಿ ದೇವತೆಗಳೆಂದು ಕರೆಯಲಾಗುತ್ತದೆ.
ನಡುಗನ್ನಡ ಸಾಹಿತ್ಯದಲ್ಲಿ ಅನೇಕ ಹೊಸ ಸಾಹಿತ್ಯ ಪ್ರಕಾರಗಳು ಬೆಳಕಿಗೆ ಬ೦ದವು. ಅವುಗಳಲ್ಲಿ ಮುಖ್ಯವಾದವುಗಳೆಂದರೆ ರಗಳೆ, ಸಾಂಗತ್ಯ ಮತ್ತು ದೇಸಿ, ಈ ಕಾಲದ ಸಾಹಿತ್ಯ ಜೈನ ಮತ್ತು ಹಿಂದೂ ಹಾಗೂ ಜಾತ್ಯಾತೀತ ಬೋಧನೆಗಳ ಮೇಲೆ ಆಧಾರಿತವಾಗಿವೆ.
ಈ ಘಟಕದ ಪ್ರಮುಖ ಲೇಖಕರಲ್ಲಿ ಇಬ್ಬರೆಂದರೆ ಪ್ರೇ ಹರಿಹರ ಮತ್ತು ರಾಘವಾಂಕ, ಇದೇ ಕಾಲದ ಪ್ರಸಿದ್ಧ ಜೈನ ಕಾವ ಕವಿ ಜನ್ನ ತನ್ನ ಕೃತಿಗಳಾದ ಯಶೋಧರ ಚರಿತೆ ಮತ್ತು ಭಾಷೆ ಅನಂತನಾಥ ಪುರಾಣಗಳ ಮೂಲಕ ಜೈನ ಸಂಪ್ರದಾಯಗಳ ಜನ ಬಗ್ಗೆ ಬರೆದನು. ಇದೇ ಕಾಲದ ಕನ್ನಡ ವ್ಯಾಕರಣದ ಬಗ್ಗೆ ಕನ್ನಡ ಪ್ರಮುಖ ಕೃತಿ ಎಂದರೆ ಕೇಶಿರಾಜನ ಶಬ್ದಮಣಿ ದರ್ಪಣ.
3) ಆಧುನಿಕ ಕನ್ನಡ :-
ಕನ್ನಡದ ನವೋದಯ : ನವೋದಯ ಎಂದರೆ, ಹೊಸ ಹುಟ್ಟು ಬ್ರಿಟಿಷರ ಆಳ್ವಿಕೆಯ ಪ್ರಾರಂಭಿಕ ಹಂತದಲ್ಲಿ ಹೆಚ್ಚು ಬೆಳಕು ಕಾಣದೇ ಇದ್ದ ಕನ್ನಡ ಸಾಹಿತ್ಯ 19ನೇ ಶತಮಾನದ ಕೊನೆಗೆ ಹಾಗೂ 10ನೇ ಶತಮಾನದ ಆರಂಭದಲ್ಲಿ ಹೊಸ ಹುಟ್ಟು ಪಡೆಯಿತು. ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಗೆ ಕಾರಣವಾಯಿತು. ಈ ಹಂತದಲ್ಲಿ ಬಿ.ಎಂ.ಶ್ರೀ, ಕುವೆಂಪು, ಬೇಂದ್ರೆ, ಶಿವರಾಮ ಕಾರಂತ ಮೊದಲಾದ ಶ್ರೇಷ್ಠ ಲೇಖಕರು ಬೆಳಕಿಗೆ ಬಂದರು. ಈ ಕಾಲದ ಸಾಹಿತ್ಯದ ಪ್ರಕಾರಗಳು ರೊಮ್ಯಾಂಟಿಕ್ ಇಂಗ್ಲೀಷ್ ಕಾವ್ಯ ಮತ್ತು ಗ್ರೀಕ್ ರುದ್ರನಾಟಕಗಳಿಂದ ಪ್ರಭಾವಿತವಾಯಿತು. ಈ ಘಟಕದ ಬೆಳವಣಿಗೆ ತಂದವರು ಬಿ.ಎಂ.ಶ್ರೀಕಂಠಯ್ಯ,
ಈ ಕಾಲದ ಪ್ರಸಿದ್ಧಕವಿಗಳು: ನರಸಿಂಹಸ್ವಾಮಿ, ಎಂ. ಗೋಪಾಲಕೃಷ್ಣ ಅಡಿಗ, ಪ್ರೊ. ನಿಸಾರ ಅಹಮದ, ಚೆನ್ನವೀರ ಕಣವಿ ಮೊದಲಾದವರು. ಈ ಕಾಲದ ಪ್ರಸಿದ್ಧ ಕಾದಂಬರಿಕಾರರು : ಕುವೆಂಪು, ಶಿವರಾಮ ಕಾರಂತರು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಸಾಹಿತ್ಯ ಭಾರತದ ಅ.ನ.ಕೃ, ಯು.ಆರ್.ಅನಂತಮೂರ್ತಿ, ಡಾ.ಚಂದ್ರಶೇಖರ ಕಂಬಾರ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ.
1947 ರ ಭಾರತದ ಸ್ವಾತಂತ್ರ್ಯಾ ನಂತರ ಕನ್ನಡ ಸಾಹಿತ್ಯದಲ್ಲಿ ನವ್ಯ ಎನ್ನುವ ಹೊಸ ಸಾಹಿತ್ಯದ ಪ್ರಕಾರದ ಉಗಮವಾಯಿತು. ನವ್ಯ ಈ ಪ್ರಕಾರದ ಪಿತನೆಂದರೆ ಗೋಪಾಲಕೃಷ್ಣ ಅಡಿಗರ ನವ್ಯ ಕವಿಗಳು ಬುದ್ದಿ ಜೀವಿಗಳಂತೆ ಕಾವ್ಯ ರಚಿಸಿದರು. ಭಾಷಾ ಪ್ರಯೋಗದ ಚಮತ್ಕಾರ ಹಾಗೂ ಕ ಹೊಸ ಸಾಹಿತ್ಯ ಕಾವ್ಯತಂತ್ರ ಹೊಸ ಎತ್ತರವನ್ನು ಈ ಪ್ರಕಾರದಲ್ಲಿ ಕಂಡಿತು.
ಇತರೆ ಪ್ರಕಾರಗಳು :-
ಕಳೆದ ಐದು ಶತಕಗಳಲ್ಲಿ ಕನ್ನಡ ಸಾಹಿತ್ಯದ ದಾರಿ ಹಾಗೂ ಜಾತ್ಯಾತೀತ ಸಾಮಾಜಿಕ ವಿಷಯಗಳನ್ನು ಕುರಿತದ್ದಾಗಿದೆ. ಜಾತಿ ಪದ್ಧತಿಯ ತಾರತಮ್ಯಗಳಿಂದ ಬಂಡಾಯ ಮತ್ತು ದಲಿತ ಕಾವ್ಯ ಕರಲ್ಲಿ ಇಬ್ಬರೆಂದರೆ ಪ್ರೇರಿತವಾಗಿದೆ. ‘ಸ್ತ್ರೀ’ ವಿಮೋಚನಾ ಚಳುವಳಿಗಳು ‘ಸ್ತ್ರೀ’ ಕಾವ್ಯಕ್ಕೆ ಪ್ರೇರಣೆ ಮಾಡಿಕೊಟ್ಟಿದೆ. ಸಣ್ಣ ಕಥೆಗಳು ಮತ್ತು ಭಾವಗೀತೆಗಳು ಸಹ 20ನೇ ಶತಮಾನದಲ್ಲಿ ಜನಪ್ರೀಯವಾದ ಸಾಹಿತ್ಯ ಪ್ರಕಾರಗಳು ಈ ರೀತಿಯಾಗಿ ಕನ್ನಡ ವ್ಯಾಕರಣದ ಬಗ್ಗೆ ಕನ್ನಡ ಸಾಹಿತ್ಯ ಮೈದೋರುತ್ತಾ ತನ್ನ ಸಾಹಿತ್ಯ ಸಂಪತ್ತನ್ನು ಹೆಚ್ಚಿಸುತ್ತಾ ಮುಂದೆ ಸಾಗಿದೆ…
ಮುಂದುವರೆಯುತ್ತದೆ….