ಗ್ರಂಥಾಲಯಕ್ಕೆ ಭೇಟಿ ಕೊಡುವ ನಾವು ಮೊದಲು ಹುಡುಕುವುದು ಗ್ರಂಥಪಾಲಕರು ಯಾರೆಂದು. ನಮ್ಮ ಹೆಸರು ಸೂಚಿಸಿ, ನೋಂದಣಿ ಮಾಡಿಸಿ ಗ್ರಂಥಾಲಯದಲ್ಲಿ ಕುಳಿತು ಓದುವುದರ ಸುಖವೇ ಬೇರೆ. ಓದುಗರು ಗ್ರಂಥಾಲಯಕ್ಕೆ ಬಂದು ಪುಸ್ತಕದೊಂದಿಗೆ ಒಳ್ಳೆಯ ಒಡನಾಟ ಬೆಳೆಸಬೇಕಿದ್ದರೆ, ಆಯಾ ಗ್ರಂಥಾಲಯದ ಗ್ರಂಥಪಾಲಕರ ಸೇವೆಯು ಅಪಾರವಾದದ್ದು. ಹಾಗಿದ್ದರೆ, ಭಾರತಕ್ಕೆ ಪ್ರದರ್ಶಿಸಲ್ಪಟ್ಟ ಮೊಟ್ಟ ಮೊದಲ ಗ್ರಂಥಪಾಲಕ ಯಾರು? ಭಾರತೀಯ ಗ್ರಂಥಾಲಯಕ್ಕೆ ಅವರ ಕೊಡುಗೆ ಏನು? ಎಂಬುದನ್ನು ತಿಳಿಯೋಣ.
ಅದಾಗ ಭಾರತದಲ್ಲಿ ಬ್ರಿಟಿಷ್ ಆಡಳಿತವಿದ್ದ ಕಾಲ, ಗಣಿತಜ್ಞ, ಅರೆಕಾಲಿಕ ಉಪನ್ಯಾಸಕರಾಗಿದ್ದ ಎಸ್. ಆರ್. ರಂಗನಾಥ್ ರವರನ್ನು ಡoಕನ್ ರವರು ತರಬೇತಿಗೆಂದು ಇಂಗ್ಲ್ಯಾಂಡ್ ಗೆ ಕಳುಹಿಸಿದರು. ಭಾರತಕ್ಕೆ ಹಿಂದಿರುಗಿದ ರಂಗನಾಥರು ಅದಾಗಲೇ, ಭಾರತದಲ್ಲಿನ ಗ್ರಂಥಾಲಯಕ್ಕೆ ರೂಪು ರೇಷೆಯನ್ನು ಹಾಕಿಯಾಗಿತ್ತು. ಭಾರತದಲ್ಲಿ ಇಂದಿಗೂ ತಲೆ ಎತ್ತಿರುವ ಸಾರ್ವಜನಿಕ ಗ್ರಂಥಾಲಯಗಳು ಎ. ಆರ್. ರಂಗನಾಥರ ಕೊಡುಗೆ. ಆಧುನಿಕ ಯುಗದಲ್ಲೂ, ಅತ್ಯಂತ ಕ್ರಮಬದ್ಧವಾಗಿ ಪುಸ್ತಕಗಳ ಜೋಡಣೆ, ಅವುಗಳಿಗೆ ನೀಡುವ ಕ್ರಮ ಸಂಖ್ಯೆ, ಮುಂತಾದ ವೈಜ್ಞಾನಿಕ ಮಾರ್ಗಗಳ ರೂಪುರೇಷೆ ಭಾರತಕ್ಕೆ ಪರಿಚಯಿಸಿದವರು,
‘ಗ್ರಂಥಾಲಾಯ ಪಿತಾಮಹಾ’ ಎಂದು ಬಣ್ಣಸಲ್ಪಡುವ ಎಸ್. ಆರ್. ರಂಗನಾಥರು.
ಆಗಸ್ಟ್ ತಿಂಗಳಲ್ಲಿ ಜನಿಸಿರುವ ರಂಗನಾಥರು, ದಕ್ಷಿಣ ಭಾರತದವರು ಎನ್ನುವುದು ನಮ್ಮೆಲ್ಲರ ಹೆಮ್ಮೆ. ಆಗಸ್ಟ್ ತಿಂಗಳ 12ನೇ ತಾರೀಖು ಪ್ರತೀ ವರ್ಷ, ಎಸ್. ಆರ್. ರಂಗನಾಥರ ಹುಟ್ಟು ಹಬ್ಬವನ್ನು ಗ್ರಂಥಪಾಲಕರ ದಿನವನ್ನಾಗಿ ಆಚರಿಸಲಾಗುತ್ತದೆ. ಒಬ್ಬ ಗಣಿತಜ್ಞನಾಗಿ, ತನಗೆ ಬೇಸರ ತರಿಸಿದ್ದ ಗ್ರಂಥಪಾಲಕ ಹುದ್ದೆಯನ್ನು, ತರಬೇತಿಯ ಮೂಲಕ ಇಷ್ಟಪಟ್ಟು, ತನ್ನ ಜೀವನದ ನಾಲ್ಕು ದಶಕಗಳನ್ನು ಭಾರತದ ಗ್ರಂಥಾಲಯಕ್ಕೆ ಮುಡಿಪಾಗಿಟ್ಟ ಎಸ್. ಆರ್. ರಂಗನಾಥರ ಸೇವಾ ಮನೋಭಾವಕ್ಕೊಂದು ದೊಡ್ಡ ಸಲಾಂ.