ರಾಷ್ಟ್ರೀಯ ಸುದ್ದಿ
ಆನ್ ಲೈನ್ ಗೇಮಿಂಗ್, ಕ್ಯಾಸಿನೋ ಆಟಗಾರರಿಗೆ ತೆರಿಗೆ ಬಿಸಿ
ಕೇಂದ್ರ ಸರ್ಕಾರ ಆನ್ಲೈನ್ ಗೇಮಿಂಗ್, ಕ್ಯಾಸಿನೊಗಳು ಮತ್ತು ಕುದುರೆ ರೇಸ್ ಕ್ಲಬ್ಗಳ ಮೇಲೆ ಶೇಕಡಾ 28 ರಷ್ಟು ತೆರಿಗೆ ವಿಧಿಸಲು ಕೇಂದ್ರಿಯ ಮತ್ತು ಸಮಗ್ರ ಜಿಎಸ್ಟಿ ಕಾನೂನು ತಿದ್ದುಪಡಿ ಮಸೂದೆಯನ್ನು ಶುಕ್ರವಾರ ಲೋಕಸಭೆ ಅಂಗೀಕರಿಸಿದೆ.
ಕ್ಯಾಸಿನೊಗಳು, ಕುದುರೆ ರೇಸಿಂಗ್ ಮತ್ತು ಆನ್ಲೈನ್ ಗೇಮಿಂಗ್ ಮೇಲಿನ ತೆರಿಗೆ ಕುರಿತು ಸ್ಪಷ್ಟತೆ ನೀಡಲು, 2017 ರ CGST ಕಾಯಿದೆಯ ಶೆಡ್ಯೂಲ್ III ರಲ್ಲಿನ ನಿಬಂಧನೆಗಳಿಗೆ ತಿದ್ದುಪಡಿ ತರಲಾಗಿದೆ. ಗೇಮಿಂಗ್ ಘಟಕಗಳು ಭಾರತದಲ್ಲಿ GST ನೋಂದಣಿ ಮಾಡಿಸುವುದು ಅಗತ್ಯವಾಗಿದೆ.
ಇನ್ನು ವಿದೇಶಿ ಆನ್ಲೈನ್ ಗೇಮಿಂಗ್ ಪ್ಲಾಟ್ಫಾರ್ಮ್ಗಳು ನೋಂದಣಿ ಮತ್ತು ತೆರಿಗೆ ಪಾವತಿಯ ನಿಬಂಧನೆಗಳನ್ನು ಅನುಸರಿಸದಿದ್ದಲ್ಲಿ ಭಾರತದೊಳಗೆ ಈ ಗೇಮಿಂಗ್ಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗುವುದು ಎಂಬುದನ್ನು ಈ ತಿದ್ದುಪಡಿಯಲ್ಲಿ ತಿಳಿಸಲಾಗಿದೆ.
ನಿಜಾರ್ ನಲ್ಲಿನ ಭಾರತೀಯರನ್ನು ಸ್ವದೇಶಕ್ಕೆ ಮರಳಿ ಬರಲು ಸರ್ಕಾರ ಸೂಚನೆ
ರಿಪಬ್ಲಿಕ್ ಆಫ್ ನಿಜರ್ ನಲ್ಲಿ ಉಂಟಾಗುತ್ತಿರುವ ರಾಜಕೀಯ ದಂಗೆಯಿಂದ ಪರಿಸ್ಥಿತಿ ಹದಗೆಟ್ಟಿದ್ದು, ಅಲ್ಲಿರುವ ಭಾರತೀಯರನ್ನು ಆದಷ್ಟು ಬೇಗ ದೇಶ ತೊರೆಯುವಂತೆ ಭಾರತೀಯ ವಿದೇಶಾಂಗ ಸಚಿವಾಲಯ ಸಲಹೆ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿದ ಸಚಿವ ಅರಿಂಧಮ್ ಬಾಗ್ಚಿ, ನಿಜೆರ್ ಪರಿಸ್ಥಿತಿಯನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ರಾಜಧಾನಿ ನಿಯಾಮಿಗೆ ಹೋಗಲು ಯೋಜಿಸಿರುವ ಭಾರತೀಯರು ಅಲ್ಲಿಗೆ ಹೋಗದಿರುವುದು ಉತ್ತಮ. ಈಗಾಗಲೇ ವಾಯು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ನೆನಪಿನಲ್ಲಿಟ್ಟುಕೊಳ್ಳಬೇಕು. ಭೂ ಗಡಿಯ ಮೂಲಕ ತೆರಳುವಾಗ ಸುರಕ್ಷತೆ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಿ ಎಂದು ತಿಳಿಸಿದರು.
ರಾಜ್ಯ ಸುದ್ದಿಗಳು
ಅಡಿಕೆ ಬೆಳೆಗಾರರಲ್ಲಿ ಹರ್ಷ, ಏರುಗತಿಯಲ್ಲಿ ಅಡಕೆ ಬೆಲೆ ಕಿಲೋಗೆ 500 ರೂ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ ಬೆಲೆ ಕಳೆದ ಮೂರು ತಿಂಗಳಿನಿಂದ ಏರುಗತಿಯಲ್ಲಿದ್ದು, ಕಿಲೋಗೆ 500 ರೂ. ಆಗಿದೆ ಎಂದು ವರದಿ ತಿಳಿಸಿದೆ.
ಪ್ರಸ್ತುತ ಮಂಗಳೂರಿನಲ್ಲಿ ಹೊಸ ಅಡಕೆ ಬೆಲೆ 447 ರೂ., ಹಳೆಯದು 485 ರೂ., ಕಳೆದ ವರ್ಷ 370 ರೂ. ಕ್ಯಾಂಪ್ಕೋದಲ್ಲಿ, ಹಳೆ ಅಡಕೆ ಪ್ರಸ್ತುತ 43500 ರಿಂದ 47000 ರೂ ವರೆಗೆ ಮಾರಾಟವಾಗುತ್ತಿದೆ ಮತ್ತು ಹೊಸ ದಾಸ್ತಾನು ರೂ 30000 ರಿಂದ 45000 ವರೆಗೆ ನಮೂದಿಸಲಾಗಿದೆ. ಉತ್ತಮ ಗುಣಮಟ್ಟದ ಸಂಸ್ಕರಿತ ಅಡಕೆ ಅಲ್ಲಿ ದೊರೆಯುವುದರಿಂದ ನಗರದ ಅಡಿಕೆ ವ್ಯಾಪಾರಿಗಳು ಗ್ರಾಮಸ್ಥರಿಂದ ಉತ್ಪನ್ನ ಖರೀದಿಸುತ್ತಿದ್ದಾರೆ.
10 ತಿಂಗಳ ಮಗುವಿನ ಮೇಲೆ ಅಂಗನವಾಡಿಯ ಛಾವಣಿ ಕುಸಿತ
ಅಂಗನವಾಡಿಯ ಛಾವಣಿ ಕುಸಿದು ಬಿದ್ದು, 10 ತಿಂಗಳ ಮಗುವಿಗೆ ಗಾಯವಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮರಕಲ್ ನಲ್ಲಿ ನಡೆದಿದೆ.
ಕೀರ್ತಿ ಎಂಬ 10 ತಿಂಗಳ ಮಗುವಿಗೆ ಇಂದ್ರಧನುಷ್ ಲಸಿಕೆ ಹಾಕುತ್ತಿದ್ದ ಸಂದರ್ಭ ಅಂಗನವಾಡಿ ಕೇಂದ್ರದ ಮೇಲ್ಛಾವಣಿ ಕುಸಿದು ಬಿದ್ದಿದೆ. ಈ ವೇಳೆ ಅಲ್ಲೇ ಕೆಳಗಿದ್ದ ಮಗುವಿನ ತಲೆ ಮೇಲೇ ಬಿದ್ದಿದ್ದು, ಇದರಿಂದ ಮಗುವಿನ ತಲೆಗೆ ಗಾಯವಾಗಿದೆ. ಗಾಯವಾದ ಸ್ಥಳಕ್ಕೆ ಮದ್ದನ್ನು ಹಚ್ಚಿ ಬ್ಯಾಂಡೇಜ್ ಹಾಕಲಾಗಿದೆ. ಬಳಿಕ ಗಾಯಾಳು ಮಗುವನ್ನು ಶಹಾಪುರ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ನೋವಿನಲ್ಲೂ ಮಗುವಿನ ಮುಗ್ಧತೆ ಕಂಡು ಬಂದಿದೆ.
ಸೌಜನ್ಯ ಪ್ರಕರಣ ಮರು ತನಿಖೆಗೆ ಆಗ್ರಹ: ಸಚಿವ ದಿನೇಶ್ ಗುಂಡೂರಾವ್
ಧರ್ಮಸ್ಥಳದ ಸೌಜನ್ಯ ಪ್ರಕರಣ ಮರು ತನಿಖೆಗೆ ಸಿಬಿಐ ವರದಿಗೆ ಆಗ್ರಹ ಮಾಡಲಾಗಿದೆ. ಮಂಗಳೂರಿನಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.
ಆದರೆ ಈಗ ಸಾಕಷ್ಟು ಜನ ಇದರ ಮರು ತನಿಖೆಗೆ ಒತ್ತಾಯಿಸ್ತಾ ಇದ್ದಾರೆ, ಇದು ಸರ್ಕಾರದ ಮಟ್ಟದಲ್ಲಿದ್ದು, ಸರ್ಕಾರ ಮಾಹಿತಿ ತರಿಸುತ್ತಿದೆ. ಸಿಎಂ ಮತ್ತು ಗೃಹ ಇಲಾಖೆ ಕೇಸ್ ಡಿಟೈಲ್ಸ್ ಬರಲಿ ಎಂದು ಹೇಳಿದ್ದಾರೆ