ದಕ್ಷಿಣ ಕನ್ನಡದಲ್ಲಿ ಜಡಿ ಮಳೆ ಸುರಿಯುತ್ತಲೇ ಇದೆ. ಐತಿಹಾಸಿಕ ಪೆಂಪ್ವಲ್ ಕೆಸರಿನ ಸರೋವದಂತೆ ಕಂಡಿತ್ತು. ಕೊಟ್ಟರ ಚೌಕಿ ಈಜು ಕೊಳವಾಯಿತ್ತು. ಹೀಗೆ ನಿತ್ಯವು ಮಂಗಳೂರಿನಲ್ಲಿ ನರಕ ದರ್ಶನವಾಗುತ್ತಿದೆ.
ಅಲ್ಲಲ್ಲಿ ಕಾಮಗಾರಿ ಕೆಲಸಗಳು ಪೂರ್ಣವಾಗದೆ ರಸ್ತೆಗಳು ಅಗೆದ ಸ್ಥಿತಿಯಲ್ಲಿವೆ. ಹಾಕಿರುವ ಡಾಮರು/ಟಾರು ಕಿತ್ತು ಜಲ್ಲಿ ಕಲ್ಲುಗಳು ವಾಹನ ಸವಾರರಿಗೆ ಸುಗಮವಾಗಿ ಚಲಿಸಲು ಅಡ್ಡಿಯನ್ನು ಪಡಿಸುತ್ತಿದೆ. ಅಲ್ಲಲ್ಲಿ ರಸ್ತೆಯಲ್ಲಿ ಗುಳಿ ಗುಂಡಿಗಳು, ನಿಂತಿರುವ ನೀರು, ಹೇಳಲಾಗದು ಜನರ ಗೋಳು.
ನಿತ್ಯವು ಟ್ರಾಫಿಕ್ ಸಮಸ್ಯೆ. ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಳ್ಳುವ ಪರಿಸ್ಥಿತಿ. ಆಫೀಸ್ ಹೋಗುವವರು ಗೊಣಾಗಾಡುತ್ತಿರುತ್ತಾರೆ. ಜೋತೆಗೆ ಆಟೋರಿಕ್ಷದವರು ದಿನಕ್ಕೆ ಕಮ್ಮಿ ಪ್ರಮಾಣದಲ್ಲಿ ಗ್ರಾಹಕರನ್ನು ಪಡೆಯುವುದರ ಜೊತಗೆ ಕಡಿಮೆ ಆದಾಯ ಗಳಿಸುವಂತಾಗಿದೆ.
ಈ ಎಲ್ಲದರ ಮಧ್ಯೆ ಡ್ರೈನೇಜು ಹೊರಬರುತ್ತಿರುವ ಗಲೀಜು ನೀರು ಮಳೆ ನೀರಿನೊಂದಿಗೆ ಸೇರಿ ಪದಾಚಾರಿಗಳಿಗೆ ನಿತ್ಯ ಅಭಿಷೇಕ ಮಾಡುತ್ತಿದೆ. ಅಡ್ಡ ದಿಡ್ಡಿ ಒಡಾಡುವ ವಾಹನಗಳು ಈ ಕೆಲಸವನ್ನು ಮಾಮುಲು ಎಂಬಂತೆ ಮಾಡುತ್ತಿದೆ. ಬೆಳಿಗ್ಗಿನ ಸಮಯದಲ್ಲಿ ಕೆಲಸಕ್ಕೆ ಹೋಗುವ ಜನರು ಹೆಚ್ಚು ತೊಂದರೆಯನ್ನು ಅನುಭವಿಸುವಂತಾಗಿದೆ. ಇದನ್ನೆಲ್ಲ ನೋಡುತ್ತಿರುವಾಗ ಸುಮಾರು 25-30 ವರ್ಷದ ಹಿಂದಿನ ಮಂಗಳೂರು ನೆನಪಾಗುತ್ತಿದೆ.
ಅಲ್ಲಲ್ಲಿ ಕುಸಿಯುತ್ತಿರುವ ತಡೆಗೋಡೆ, ಜರಿಯುತ್ತಿರುವ ಗುಡ್ಡಗಳು, ಹಾನಿಗೊಳಗಾಗುತ್ತಿರುವ ಮನೆಗಳು, ಉರುಳುತ್ತಿರುವ ಮರಗಳು ಇವೆಲ್ಲ ಸಾಮಾನ್ಯವಾಗಿದೆ.ಇತ್ತ ಕಡಲು ಬೋರ್ಗರೆಯುತ್ತಾ ಜನರಿಗೆ ಬೆದರಿಕೆ ಒಡ್ಡಿದಂತೆ ಭಾಸವಾಗುತ್ತಿದೆ. ಜೋತಗೆ ತನ್ನ ಅಜಾನುಬಾಹುಗಳಿಂದ ದಡವನ್ನು ಕೊಂಚ ಕೊಂಚವಾಗಿ ಕಬಳಿಸುತ್ತಿದೆ. ಸಮುದ್ರ ತಟದಲ್ಲಿ ವಾಸಮಾಡುವವರ ಮನದಲ್ಲಿ ಭೀತಿಯನ್ನು ಉಂಟುಮಾಡಿದೆ.
ಅವೈಜ್ಞಾನಿಕ ಕಾಮಗಾರಿಗೆ ಅಲ್ಲಲ್ಲಿ ನಿಂತ ನೀರೆ ಸಾಕ್ಷಿ. ಕಳಪೆ ಕಾಮಗಾರಿಗೆ ಕಿತ್ತು ಬಂದಿರುವ ರಸ್ತೆಯ ಜಲ್ಲಿಕಲ್ಲುಗಳೇ ಸಾಕ್ಷಿ, ನಿರ್ಲಕ್ಷ್ಯಕ್ಕೆ ಗಲೀಜು ನೀರನ್ನು ಹೋರ ಹಾಕುತ್ತಿರುವ ಡ್ರೈನೇಜು ಸಾಕ್ಷಿ, ಪ್ರತಿ ಸರ್ಕಾರದ ಭರವಸೆ ಇಡೇರದಿರುವುದಕ್ಕೆ ಸಮುದ್ರ ಕೊರೆತಗಳಿಗೆ ಒಳಗಾದ ಪ್ರದೇಶಗಳು ಸಾಕ್ಷಿ ಹೇಳುತ್ತಿವೆ.