ಬಾಗಲಕೋಟೆ: ನಗರದ ಹರಣಶಿಕಾರಿ ಕಾಲನಿಯಲ್ಲಿನ ದಂಡಿನ ದುರುಗಮ್ಮ ದೇವಿ ದೇವಸ್ಥಾನದ ಜಾತ್ರೆ ಮಂಗಳವಾರ ಅದ್ಧೂರಿಯಾಗಿ ಜರುಗಿತು.
ದಂಡಿನ ದುರ್ಗಾದೇವಿಗೆ ಬೆಳಗ್ಗೆ ಕ್ಷೀರಾಭಿಷೇಕ, ಅಭಿಷೇಕ ಸೇರಿದಂತೆ ವಿಶೇಷ ಪೂಜೆ, ಪಲ್ಲಕ್ಕಿ ಉತ್ಸವ ಜರುಗಿತು. ಬಾಗಲಕೋಟೆ ನಗರ ಸೇರಿದಂತೆ ವಿಜಯಪುರ,ಗದಗ ಜಿಲ್ಲೆಗಳಿಂದ ಹಾಗೂ ನೆರಯ ಮಹಾರಾಷ್ಟç, ಗೋವಾ, ಆಂಧ್ರಪ್ರದೇಶ ಸೇರಿದಂತೆ ವಿವಿಧೆಡೆ ನೆಲೆಸಿರುವ ಹರಣಶಿಕಾರಿ ಸಮುದಾಯದ ಭಕ್ತರು ಆಗಮಿಸಿ ಇಷ್ಟಾರ್ಥ ಸಿದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕೋವಿಡ್ ಹಿನ್ನಲೆಯಲ್ಲಿ ಸಪ್ಪೆಯಾಗಿದ್ದ ಜಾತ್ರೆ ಈ ವರ್ಷ ಅದ್ದೂರಿಯಾಗಿ ಜರುಗಿದ್ದು ಗಮನ ಸೆಳೆಯಿತು.
ತಲೆಗೊಂದೇ ಹೊಡೆತ ಕಾಯಿ ಚೂರು.. ಚೂರು…
ವಿವಿಧೆಡೆ ಹಲವು ವೈಶಿಷ್ಟತೆಯೊಂದಿಗೆ ಜಾತ್ರೆ, ಹಬ್ಬ ಹರಿದಿನಗಳು ಜರುಗುತ್ತವೆ. ಹಾಗೆಯೇ ಇಲ್ಲಿಯು ಕೂಡಾ ವಿಶಿಷ್ಟ ಆಚರಣೆ ಚಾಲ್ತಿಯಲ್ಲಿದೆ. ಜಾತ್ರೆ ದಿನ ದೇವಸ್ಥಾನದ ಪೂಜಾರಿ ತೆಲೆಗೆ ತೆಂಗಿನಕಾಯಿ ಒಡೆದುಕೊಳ್ಳುವುದು ವಿಶೇಷವಾಗಿದೆ.
ದೇವಸ್ಥಾನದ ಹಿರಿಯ ಪೂಜಾರಿಗಳು 21 ಕ್ಕೂ ಹೆಚ್ಚು ಟೆಂಗಿನ ಕಾಯಿಗಳನ್ನು ಒಂದರ ಹಿಂದೆ ಒಂದು ಒಡೆದುಕೊಂಡರು. ಪ್ರತಿ ಕಾಯಿಯು ತಲೆಗೊಂದೇ ಒಡೆತಕ್ಕೆ ಚೂರು ಚೂರಾಗಿ ಹೋಯಿತು. ತಲೆಗೆ ತೆಂಗಿನಕಾಯಿಗಳನ್ನು ಒಡೆದು ಬೀಸಾಕುತ್ತಿದ್ದ ದೃಶ್ಯ ನಿಜಕ್ಕೂ ಮೈಜುಮ್ಮೆನ್ನುವಂತೆ ಮಾಡಿತು. ಅಷ್ಟೊಂದು ಕಾಯಿಗಳನ್ನು ತಲೆಗೆ ಒಡೆದುಕೊಂಡರೂ ಒಂದೇ ಒಂದು ಸಣ್ಣ ಗಾಯ ಕೂಡ ಆಗಲಿಲ್ಲ.
ಇದೆಲ್ಲ ಅಮ್ಮನ ದಯೆ. ಹೀಗೆ ಮಾಡುವದರಿಂದ ಮಳೆ, ಬೆಳೆ ಚನ್ನಾಗಿ ಆಗುತ್ತೆ. ಸಮುದಾಯದ ಜನರು ಆರೋಗ್ಯವಾಗಿ ಇರ್ತಾರೆ ಅನ್ನೋವ ನಂಬಿಕೆ ಹರಣಶಿಕಾರಿ ಸಮುದಾಯದಲ್ಲಿ ಮನೆ ಮಾಡಿದೆ. ಕಳೆದ ಮೂರು ದಶಕಗಳಿಂದ ಪ್ರತಿ ವರ್ಷ ದುರುಗಮ್ಮನ ಜಾತ್ರೆಯಂದು ತೆಲೆಗೆ ಕಾಯಿ ಒಡೆದುಕೊಳ್ಳುವ ಸಂಪ್ರದಾಯ ನಡೆದುಕೊಂಡು ಬಂದಿದೆ.