ಉತ್ತರ ವೇದಿಕ ಕಾಲದರಾಜಕೀಯ ಬದಲಾವಣೆಗಳು :
ಉತ್ತರ ವೇದ ಕಾಲದಲ್ಲಿ ರಾಜನು ಬಲಿಷ್ಠನಾದನು. ವಿಧಾತ ಸಂಪೂರ್ಣವಾಗಿ ಕಣ್ಮರೆಯಾದರೆ ಸಭಾ ಮತ್ತು ಸಮಿತಿಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಂಡವು. ರಾಜನು ತನ್ನ ರಾಜ್ಯದ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲಾರಂಭಿಸಿದನು. ರಾಜತ್ವವು ವಂಶಪಾರಂಪರ್ಯವಾಯಿತು. ರಾಜನು ರಾಜ್ಯ ವಿಸ್ತರಣೆಗಾಗಿ ಅಶ್ವಮೇಧ, ರಾಜಸೂಯ ಮೊದಲಾದಯಾಗಗಳನ್ನು ಮಾಡಲಾರಂಭಿಸಿದನು. ಸೋಮನನ್ನು ತಮ್ಮ ರಾಜನೆಂದು ನಂಬಿದ್ದ ಬ್ರಾಹ್ಮಣರನ್ನು ಬಿಟ್ಟು ಉಳಿದೆಲ್ಲರೂ ಸ್ವತಂತ್ರವಾಗಿ ತಾವೇ ರಾಜರು ಎಂದು ಕರೆದುಕೊಳ್ಳಲಾರಂಭಿಸಿದರು. ದೊಡ್ಡ ರಾಜ್ಯಗಳ ಬೆಳವಣಿಗೆಯೊಡನೆ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ಆರ್ಯರ ರಾಜಕೀಯ ಮತ್ತು ಸಾಂಸ್ಕ್ರತಿಕ ಪ್ರಭಾವ ಹೆಚ್ಚಾಗಿದ್ದು ಕಂಡು ಬರುತ್ತದೆ.
ರಾಜನ ಪ್ರಮುಖ ಕಾರ್ಯಗಳು ಸೈನ್ಯ ಮತ್ತು ನ್ಯಾಯತೀರ್ಮಾನ ಸಂಬಂಧವಾದ ಕಾರ್ಯಗಳಾ ಗಿದ್ದವು. ರಾಜನು ಪ್ರಜಾಪಾಲಕನಾಗಿದ್ದುದಲ್ಲದೆ ಕಾನೂನುಗಳ ರಕ್ಷಕನೂ ಮತ್ತು ಶತ್ರುಗಳನ್ನು ನಿರ್ಮೂಲಮಾಡುವವನೂ ಆಗಿದ್ದನು. ಶಿಕ್ಷೆಯೆಂಬುದೇನೆಂಬುದನ್ನೇ ಅರಿಯದ ಅವನು ಶಿಕ್ಷಾದಂಡ ವನ್ನು ಪ್ರಯೋಗಿಸುತ್ತಿದ್ದನು.
ಜಯಶಾಲಿಗಳಾದ ರಾಜರು ವಿಶ್ವರಾಜ (ರಾಜಾ ವಿಶ್ವಜನೀನ), ಸಕಲ ಭೂಮಂಡಲದ (ಸರ್ವ ಭೂಮಿ) ರಾಜ ಅಥವಾ ಸಮುದ್ರಗಳವರೆಗಿನ ಎಲ್ಲ ಪ್ರದೇಶಗಳ ರಾಜ (ಏಕರಾಟ್) ಎಂದು ಕರೆದು ಕೊಳ್ಳುತ್ತಿದ್ದರು. ಹಾಗೂ ರಾಜಸೂಯ (ರಾಜ ಪ್ರತಿಷ್ಠಾಪನ), ವಾಜಪೇಯ (ಶಕ್ತಿಗಾಗಿ ಪಾನ) ಹಾಗೂ ಅಶ್ವಮೇಧ ಮುಂತಾದ ಯಾಗಗಳನ್ನು ತಮ್ಮ ಸ್ಥಾನಮಾನಗಳಿಗೆ ಒಪ್ಪುವಂತೆ ನಡೆಸುತ್ತಿದ್ದರು.
ಸಾಮಾಜಿಕ ಬದಲಾವಣೆಗಳು :
ಉತ್ತರ ವೇದಗಳ ಕಾಲದಲ್ಲಿ ಗೋತ್ರ ಪದ್ದತಿ ಆರಂಭವಾಯಿತು. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ ಎಂಬ ನಾಲ್ಕು ಆಶ್ರಮಗಳ ವ್ಯವಸ್ಥೆಆರಂಭವಾಯಿತು. ಸ್ತ್ರೀಯರ ಸ್ಥಾನಮಾನದಲ್ಲಿ ಬಾರಿ ಕುಸಿತ ಉಂಟಾಯಿತು.ಸ್ತ್ರೀಯರು ಶಿಕ್ಷಣದಿಂದ ವಂಚಿತರಾದರು. ರಾಜಕೀಯ ಸಂಸ್ಥೆಗಳಿಂದ ದೂರವಾದರು. ಬ್ರಾಹ್ಮಣ, ಕ್ಷತ್ರೀಯ, ವೈಶ್ಯ ಮತ್ತು ಶೂದ್ರ ಎಂಬ ನಾಲ್ಕು ವರ್ಣ ವ್ಯವಸ್ಥೆ ಸಮಾಜದಲ್ಲಿ ತಲೆ ಎತ್ತಿತು.ಸತಿಸಹಗಮನ ಪದ್ದತಿ, ಬಾಲ್ಯವಿವಾಹಗಳು ಆರಂಭವಾದವು. ರಾಜಶಾಹಿಯೇ ಮೊದಲಾದವು. ರಾಜಶಾಹಿಯೇ ಮೊದಲಾದ ಉನ್ನತ ವರ್ಗದಲ್ಲಿ ಬಹುಪತ್ನಿತ್ವ ರೂಢಿಯಲ್ಲಿತ್ತು.
ಗ್ರಹನಿರ್ಮಾಣ ಮತ್ತು ಉಡುಪಿನ ಪದ್ಧತಿಗಳಲ್ಲಿ ಹೆಚ್ಚು ವ್ಯತ್ಯಾಸಗಳಾಗಲಿಲ್ಲ. ಆಹಾರದ ಬಗ್ಗೆ ಹೇಳುವುದಾದರೆ ಮಾಂಸಭಕ್ಷಣೆಗೆ ಅಸಮ್ಮತಿಯನ್ನು ವ್ಯಕ್ತಪಡಿಸುತ್ತಿದ್ದರು. ಹೊಸ ರೀತಿಯ ಸಾಮಾ ಜಿಕ ಮನರಂಜನೆಯ ವಿಧಾನಗಳು ಅಸ್ತಿತ್ವಕ್ಕೆ ಬಂದವು. ಶೈಲೂಷ ಅಥವಾ ನಟ ಎಂಬುದರ ಬಗ್ಗೆ ಮತ್ತು ಶತತಂತುಗಳಿಂದ ಕೂಡಿದ ವಾದ್ಯಗಳೊಡನೆ ದೊಡ್ಡ ದೊಡ್ಡ ಸಮಾರಂಭಗಳಲ್ಲಿ ಗಾಥಾಗಳನ್ನು ಅಥವಾ ಗೀತೆಗಳನ್ನು :ವೈಣಿಕರು (ವೀಣಾಗಾಥಿನ್) ನುಡಿಸುತ್ತಿದ್ದರು ಎಂಬ ಬಗ್ಗೆ ವಿವರಗಳು ದೊರಕಿವೆ. ಈ ರೀತಿಯ ಗಾಥಾಗಳು, ಅನಂತರದ ಪುರಾಣಕಾಲದ ‘ವಿಜಯಗೀತೆ’ಗಳ ಮೂಲವೆನ್ನಬಹುದು.
ಸ್ತ್ರೀಯರ ಸ್ಥಾನಮಾನದ ಬಗ್ಗೆ ಯಾವುದೇ ರೀತಿಯ ಮಾರ್ಪಾಟುಗಳು ಕಂಡುಬರುವುದಿಲ್ಲ. ಪುತ್ರಿಯರನ್ನು ದುಃಖದ ಮೂಲವೆಂದು ಭಾವಿಸುತ್ತಿದ್ದರು. ಸ್ತ್ರೀಯರು ಬಣದ ಸಭೆಗಳಲ್ಲಿ ಪಾಲ್ಗೊಳ್ಳುವ ಹಾಗಿರಲಿಲ್ಲ ಮತ್ತು ಆಸ್ತಿಗೆ ಉತ್ತರಾಧಿಕಾರಿಣಿಗಳಾಗುವಂತಿರಲಿಲ್ಲ. ಶ್ರೀಮಂತ ವರ್ಗದ ವಿವಾಹಿತ ಸ್ತ್ರೀಯರು ಅನೇಕ ವೇಳೆ ಸವತಿಯರೊಂದಿಗೆ ಜೀವಿಸಬೇಕಾಗಿತ್ತು. ಇಂಥ ಜೀವನ ನನ್ನ ರಾಣಿಯರು ವಿಶೇಷವಾಗಿ ಅಪೇಕ್ಷಿಪಿಸುವಂತಿರಲಿಲ್ಲ. ಅವರು ಮಹಿಷಿ ಅಥವಾ ಮುಖ್ಯರಾಣಿ ಮತ್ತು ಪ್ರೇಯಸಿ ಅಥವ ವಾವಾತಾ ಮುಂತಾದವರನ್ನು ಪ್ರೀತಿಸಿ ಗೌರವಿಸುತ್ತಿದ್ದರೆ ಹೊರತು ಪರವೃಕ್ತಿಯರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುತ್ತಿದ್ದರು. ಸ್ತ್ರೀಯರು ಮತಸಂಸ್ಕಾರಗಳಲ್ಲಿ ತಮ್ಮ ಪಾತ್ರವನ್ನು ಹೊಂದಿರುತ್ತಿದ್ದರು. ಅವರಲ್ಲಿ ಕೆಲವರು ಉನ್ನತಮಟ್ಟದ ವಿದ್ಯಾಭ್ಯಾಸವನ್ನು ಹೊಂದಿದ್ದವರಾಗಿದ್ದು ರಾಜರ ಆಸ್ಥಾನಗಳಲ್ಲಿ ವೇದಾಂತದ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರು. ವಿವಾಹದ ಬಗ್ಗೆ ಇದ್ದ ಕಟ್ಟುನಿಟ್ಟಿನ ನಿಯಮಗಳು ಬದಲಾವಣೆಗೊಂಡವು. (ಬಾಲ್ಯವಿವಾಹ ಪದ್ಧತಿ ಇದ್ದಿತೆಂಬುದಕ್ಕೆ ನಮಗೆ ಸಾಕ್ಷ್ಯಗಳು ದೊರಕಿವೆ.)
ಆರ್ಥಿಕ ಪರಿಸ್ಥಿತಿ
ಐಶ್ವರ್ಯವಂತರೂ ಸೇರಿದಂತೆ ಈ ಯುಗದ ಜನ ಗ್ರಾಮಗಳಲ್ಲಿ ವಾಸಿಸುತ್ತಿದ್ದರು ಸಹ ನಗರ ಜೀವನದ ಸೌಕರ್ಯಗಳನ್ನು ಅವರು ಹೊಂದದೆ ಇರಲಿಲ್ಲ. ಹಲವು ಗ್ರಾಮಗಳಲ್ಲಿ, ತಮ್ಮ ಜಮೀನುಗಳಲ್ಲಿಯೇ ವ್ಯವಸಾಯ ಮಾಡಿಕೊಳ್ಳುತ್ತಿದ್ದ ರೈತರು ಇಡಿ: ಗ್ರಾಮವನ್ನು ತಮ್ಮದಾಗಿ ಮಾಡಿಕೊಂಡ ಜಮೀನ್ದಾರರ ಅಧೀನರಾಗಿದ್ದರು. ಈ ಕಾಲದಲ್ಲಿ ಬಣದ ಒಪ್ಪಿಗೆಯಿಲ್ಲದೆ ಜಮೀನು ಪರಭಾರೆಯಾಗುತ್ತಿರಲಿಲ್ಲ.
ವ್ಯವಸಾಯವು ಜನರ ಮುಖ್ಯ ಕಸಬಾಗಿ ಮುಂದುವರಿಯಿತು. ವ್ಯವಸಾಯದ ಉಪಕರಣಗಳಲ್ಲಿ ಸಾಕಷ್ಟು ಮಾರ್ಪಾಟುಗಳಾದುವು ಮತ್ತು ಜಮೀನುಗಳಲ್ಲಿ ಹೊಸ ಬಗೆಯ ಧಾನ್ಯಗಳನ್ನು ಮತ್ತು ಹಣ್ಣಿನ ಗಿಡಗಳನ್ನು ಬೆಳೆಯತೊಡಗಿದರು. ಆದರೆ ವ್ಯವಸಾಯಗಾರರು ಕಷ್ಟಕಾರ್ಪಣ್ಯಗಳಿಂದ ವಿಮುಕ್ತರಾಗಿರಲಿಲ್ಲ. ಕುರು ಜನಾಂಗದವರ ಜಮೀನುಗಳಿಗೆ ಬಿರುಗಾಳಿ ಮಳೆಯಿಂದ ಅಥವಾ ಮಿಡತೆ ಗಳ ತಂಡದಿಂದ ನಷ್ಟವುಂಟಾಗಿ ಅನೇಕರು ತಮ್ಮ ನೆಲೆಗಳನ್ನು ಬಿಡಬೇಕಾಯಿತು ಎಂದು ಉಪನಿಷತ್ತಿನ ಒಂದು ಭಾಗದಲ್ಲಿ ಹೇಳಲಾಗಿದೆ.
ವಾಣಿಜ್ಯ ಮತ್ತು ಉದ್ಯಮ ಅಭಿವೃದ್ಧಿಗೊಂಡಿತ್ತು. ‘ವಣಿಕರು’ ಎಂಬ ವರ್ತಕರ ಪಂಗಡ ಅಸ್ತಿತ್ವಕ್ಕೆ ಬಂದಿತು. ಪರ್ವತಗಳಲ್ಲಿ ವಾಸಿಸುತ್ತಿದ್ದ ಕಿರಾತ ಜನ ರೊಡನೆ ಈ ವರ್ತಕರು ಅಂತರ್ದೇಶೀಯ ವ್ಯಾಪಾರ ಸಂಬಂಧವನ್ನು ಹೊಂದಿದ್ದರು. ಕಿರಾತರು, ತಾವು ಪರ್ವತ ಪಂಕ್ತಿಗಳಿಂದ ಶೇಖರಿಸುತ್ತಿದ್ದ ಮೂಲಿಕೆಗಳನ್ನು ಬಟ್ಟೆ, ಮೆತ್ತನೆ ಹಾಸಿಗೆ ಹಾಗೂ ಚರ್ಮ-ಇವುಗಳಿಗೆ ವಿನಿಮಯಮಾಡಿಕೊಳ್ಳುತ್ತಿದ್ದರು. ಸಮುದ್ರವು ಅವರಿಗೆ ಸಮಿಪವಾಗಿತ್ತು ಮತ್ತು ಶತಪಥ ಬ್ರಾಹ್ಮಣದಲ್ಲಿ ಬರುವ ಪ್ರವಾಹದ ಕಥೆಯನ್ನು ಹಲವು ತಜ್ಞರು ಭಾರತ ಬ್ಯಾಬಿಲೋನಿಯಾ ದೇಶದೊಡನೆ ವ್ಯಾಪಾರ ಸಂಬಂಧವನ್ನು ಹೊಂದಿದ್ದಿತೆಂಬ ಬಗ್ಗೆ ಆಧಾರವಾಗಿ ತೋರಿಸುತ್ತಾರೆ. ‘ನಿಷ್ಕಾ’ “ಶತಮಾನ’ ಮತ್ತು ‘ಕೃಷ್ಣಲಾ’ ಮುಂತಾದ ಮೌಲ್ಯಮೂಲಮಾನಗಳಿಂದ ವ್ಯಾಪಾರ ಸುಗಮವಾಗಿ ಸಾಗುತ್ತಿತ್ತು. ಆದರೆ ಇಂದಿನ ನಾಣ್ಯಗಳ ಲಕ್ಷಣಗಳನ್ನು ಅವು ಹೊಂದಿದ್ದುವೆ ಎನ್ನುವುದು ಅನುಮಾನಾಸ್ಪದವಾದ ವಿಷಯವಾಗಿದೆ. ಮೊದಲು ಒಂದು ಲೋಹದ ತುಂಡಾಗಿದ್ದ ನಿಶ್ಯಾವು ಆ ವೇಳೆಗೆ ಸುಮಾರು ಮುನ್ನೂರ ಇಪ್ಪತ್ತು ರತಿಗಳಷ್ಟು (೧ ರತಿ=೧೮ ಗ್ರಾಂಗಳು) ತೂಕದ ಚಿನ್ನದ ತುಂಡಾಗಿರಬಹುದು. ಇದು ಶತಮಾನ ತೂಕವೂ ಆಗಿದ್ದಿತು. ಒಂದು ಕೃಷ್ಣಲಾವು ಒಂದು ರತಿ ಅಂದರೆ ೧.೮ ಡ್ರೈನ್ಗಳಷ್ಟು ತೂಗುತ್ತಿದ್ದಿತು. ವರ್ತಕರು ತಮ್ಮಲ್ಲಿಯೇ ವೃತ್ತಿ ಸಂಘಗಳನ್ನು ಮಾಡಿಕೊಂಡಿದ್ದಂತೆ ಕಾಣುತ್ತದೆ. ಈ ವಿಷಯವು ಗಣಗಳು ಅಥವಾ ಸಂಸ್ಥೆಗಳು ಮತ್ತು ಶ್ರೇಪ್ಟಿನ್ ಅಥವಾ ಶ್ರೇಷ್ಠ ಎಂಬ ಉಲ್ಲೇಖದಿಂದ ತಿಳಿಯುತ್ತದೆ.
ಧಾರ್ಮಿಕ ಜೀವನ :
ಜನರ ಧಾರ್ಮಿಕ ಜೀವನದಲ್ಲಿ ಅಪಾರ ಬದಲಾವಣೆಗಳು ಉಂಟಾದವು ಹಳೆಯ ದೇವತೆಗಳ ಪ್ರಾಮುಖ್ಯತೆ ಕ್ರಮೇಣ ಕಳೆಗುಂದುತ್ತಾ ಬಂದಿತು. ಅಮರನೆಂದು ಕರೆಯಲ್ಪಡುವವಿಶ್ವ ಚೇತನ ವಿಷ್ಣುವನ್ನು ಪೂಜಿಸಲು ಪ್ರಾರಂಭಿಸಿದರು.
ಧಾರ್ಮಿಕ ಆಚರಣೆಗಳು ಸಂಕೀರ್ಣವೂ, ಕಠಿಣವೂ ಆದವು. ಯಾಗಯಜ್ಞಗಳ ಆಚರಣೆ ತೀವ್ರವಾಯಿತು. ಹವಿಸ್ಸಿನ ಹೆಸರಿನಲ್ಲಿ ಹಾಲು, ತುಪ್ಪ, ಧಾನ್ಯಗಳನ್ನು ಬೆಂಕಿಗೆ ಅರ್ಪಿಸುವುದು ಹೆಚ್ಚಾದಂತೆ ಆಹಾರದ ಬಿಕ್ಕಟ್ಟು ಉಲ್ಬಣಿಸಿತು. ಬ್ರಹ್ಮ, ವಿಷ್ಣು ಮತ್ತು ಶಿವ ಪ್ರಭಾವಿ ದೇವರುಗಳಾದರು. ಜೊತೆಗೆ ಲಕ್ಷ್ಮೀ, ಸರಸ್ವತಿ, ಪಾರ್ವತಿ, ಗಣೇಶ, ಸ್ಕಂದ ಮೊದಲಾದ ಪರಿವಾರ ದೇವ ದೇವತೆಗಳು ಪ್ರಾಮುಖ್ಯತೆಗೆ ಬಂದವು.
ಸಾಹಿತ್ಯ ,ಮತ್ತು ವಿಜ್ಞಾನ
ವೇದವೆಂಬ ಪದವು ಅದರ ಮೂಲವಾದ ‘ವಿದ್’ ಎಂದರೆ ತಿಳಿ ಎಂಬ ಪದದಿಂದ ನಿಷ್ಪನ್ನವಾಗಿದೆ. ವೇದವೆಂದರೆ ಸಾಮಾನ್ಯವಾಗಿ ಜ್ಞಾನವೆಂದರ್ಥ : ಅದರಲ್ಲಿಯೂ ವಿಶೇಷವಾಗಿ ಅನಾದಿಕಾಲದಿಂದ ನಾಕ್ ಮೂಲಕ ಪ್ರವಹಿಸಿಕೊಂಡು ಬಂದಿರುವ ಸಾಹಿತ್ಯವೇ ವೇದ ; ಇದನ್ನು ಪವಿತ್ರಜ್ಞಾನ ಅಥವಾ ‘ಶ್ರುತಿ’ ಎಂದು ಸಾರಲಾಗಿದೆ.
ವೇದಗಳು ನಾಲ್ಕು ವಿವಿಧ ರೀತಿಯ ಸಾಹಿತ್ಯರಚನೆಗಳನ್ನೊಳಗೊಂಡಿವೆ. (೧) ವೇದ ಸಾಹಿತ್ಯದ ಅತ್ಯಂತ ಪುರಾತನ ಭಾಗವೆಂದರೆ ಮಂತ್ರ (ನುಡಿಯುವುದು, ಹಾಡುವುದು, ಸೂತ್ರ): ಇದು ನಾಲ್ಕು ಸಂಹಿತೆಗಳಲ್ಲಿ ಹರಡಿಕೊಂಡಿದೆ. ಋಕ್, ಸಾಮ, ಯಜುಸ್ ಮತ್ತು ಅಥರ್ವ ಸಂಹಿತೆಗಳೆಂಬುದೇ ಆ ನಾಲ್ಕು ಸಂಹಿತೆಗಳು ಅಥವಾ ಸಂಗ್ರಹಗಳು, ಮೊದಲ ಮೂರನ್ನು ಕೆಲವು ವೇಳೆ ತ್ರಯಾ ಅಥವಾ ತ್ರಿರೂಪಜ್ಞಾನವೆನ್ನುವರು ಮತ್ತು ಅವುಗಳನ್ನು ಮೊದಲ ಸಪ್ರಮಾಣ ಗ್ರಂಥ ಗಳೆಂದು ಪರಿಗಣಿಸಿದ್ದಾರೆ.
ಋಕ್ ಸಂಹಿತೆಯು ವಿವಿಧ ದೇವರುಗಳನ್ನು ಸ್ತುತಿಸಿರುವ ಗೀತೆಗಳ ಸಂಗ್ರಹ. ಇವುಗಳನ್ನು ವಿಶೇಷವಾಗಿ ‘ಹೋತ್ರಿ’ ಎಂದು ಕರೆಯಲಾಗುತ್ತಿದ್ದ ಪುರೋಹಿತನು ಪಠಿಸುತ್ತಿದ್ದನು. ಈ ಗೀತೆ ಗಳಲ್ಲಿ ಹೆಚ್ಚಿನವು ನಾವು ವೇದಗಳ ತರುವಾಯದ ಕೆಲವೆಂದು ಕರೆದಿರುವ ಯುಗಕ್ಕೂ ಆನಂತರದವು. ಆದರೆ ಸಮಗ್ರವಾಗಿ ಸಂಗ್ರಹಗಳು ಅಷ್ಟು ಹಳೆಯವಲ್ಲ. ಸಾಮವೇದ ಸಂಹಿತೆ ಅಥವಾ ಮಂತ್ರ ಗ್ರಂಥವು ಸ್ವತಂತ್ರ ವಿಷಯವನ್ನೇನೂ ಹೊಂದಿರದೆ, ಅವುಗಳಲ್ಲಿ ಎಪ್ಪತ್ತೈದು ಶ್ಲೋಕಗಳನ್ನು ಬಿಟ್ಟು ಮಿಕ್ಕುವೆಲ್ಲವೂ ಋಗ್ವದದಿಂದ ನೇರವಾಗಿ ತೆಗೆದುಕೊಂಡಿರುವವು. ಅದರ ಗೀತೆಗಳನ್ನು ಸೋಮ – ಯಾಗಗಳಲ್ಲಿ `ಉದ್ಯಾತ್ಮ’ ಎಂಬ ವಿಶೇಷ ದರ್ಜೆಯ ಪುರೋಹಿತರು ಹಾಡುತ್ತಿದ್ದರೂ ಯಜುರ್ವೇದ ಸಂಹಿತೆ ಅಥವಾ ಯಾಗ ಪ್ರಾರ್ಥನೆಗಳ ಗ್ರಂಥವು, ಋಗ್ವದಗಳಿಂದ ಆರಿಸಿಕೊಂಡ ಶ್ಲೋಕಗಳನ್ನೇ ಅಲ್ಲದೆ ಸ್ವತಂತ್ರ ಗ್ರಂಥ (ಗದ್ಯ) ಸೂತ್ರಗಳನ್ನೂ ಹೊಂದಿದ್ದು ಇವುಗಳನ್ನು ಯಜ್ಞಯಾಗಗಳಲ್ಲಿ ದೈಹಿಕ ಕಾರ್ಯಗಳನ್ನು ನಿರ್ವಹಿಸುತ್ತಿದ್ದ ಅಧ್ವರ್ಯು ಎಂಬ ಪುರೋಹಿತನು ಪಠಿಸುತ್ತಿದ್ದನು. ಈ ಸಂಗ್ರಹಗಳು ಎರಡು ಗ್ರಂಥಗಳಾಗಿವೆ. ಅವಾವುವೆಂದರೆ (ಅ) ಕೃಷ್ಣಯಜುರ್ವೇದದ ಸಂಹಿತೆಗಳು, ತೈತ್ತಿರೀಯ, ಮೈತ್ರಾಯನಿ ಹಾಗೂ ಕಾರುಕ ಎಂಬ ಪರಿಷ್ಕೃತ ಗ್ರಂಥಗಳಲ್ಲಿ ರಕ್ಷಿಸಲ್ಪಟ್ಟಿವೆ ಮತ್ತು (ಆ) ಶುಕ್ಲ ಯಜುರ್ವೇದದ ಸಂಹಿತೆಗಳು ವಾಜಸನೇಯಿ ಎಂಬ ಪರಿಷ್ಕೃತ ಗ್ರಂಥಗಳಲ್ಲಿ ರಕ್ಷಿತವಾಗಿವೆ.
ಮೇಲೆ ವಿವರಿಸಲಾಗಿರುವ ಸಂಹಿತೆಗಳ ಯುಗದ ತರುವಾಯ, ಬಹುಕಾಲದ ಅನಂತರ, ಅಥರ್ವವೇದ ಅಥವಾ ಮಾಯಾ ಸೂತ್ರಗಳ ಗ್ರಂಥವೆಂಬ ನಾಲ್ಕನೆಯ ವೇದವು ಅಂಗೀಕೃತವಾಯಿತು. ಇದಕ್ಕೆ ಮನ್ನಣೆ ಬಹು ದಿನಗಳ ಅನಂತರ ದೊರೆತರೂ, ಸಂಗ್ರಹಿತ ವಿಷಯ ಪುರಾತನವಾದುದು. ಅಥರ್ವದ ಶ್ಲೋಕಗಳಲ್ಲಿ ಹಲವು ಆಚಾರ್ಯ ಮೂಲಕ್ಕಿಂತ ಹೆಚ್ಚು ಜನಪ್ರಿಯವಾಗಿದ್ದವು ಮತ್ತು ಇವ್ರ ಋಗ್ರೇದಗಳ ಮೊದಲ ಭಾಗಗಳಷ್ಟೇ ಪ್ರಾಚೀನವಾಗಿರಬಹುದು. ಅಥರ್ವಸಂಹಿತೆಯ ಶ್ಲೋಕ ಗಳು ಪ್ರಧಾನವಾಗಿ ರೋಗಗಳನ್ನು ವಾಸಿಮಾಡುವ, ಏಕತೆಯನ್ನು ಪುನಃ ಸ್ಥಾಪಿಸುವ, ದುಷ್ಟ ಶಕ್ತಿಗಳನ್ನು ಮಂತ್ರದಿಂದ ಓಡಿಸುವ ಹಾಡುಗಳು ಹಾಗೂ ವಶೀಕರಣಗಳ ಮತ್ತು ಅಭಿ ಚಾರಗಳ ಮೇಲಿನ ಶ್ಲೋಕಗಳಾಗಿವೆ. ಅವುಗಳಲ್ಲಿ ಭವ್ಯ ಮೂರ್ತಿಯಾದ ಭಗವಂತನ ಸರ್ವಶಕ್ತಿಯನ್ನು ಮತ್ತು ಭೂಮಾತೆಯ ಉಪಕೃತಿಯನ್ನು ವಿವರಿಸುವ ಸುಂದರ ಶ್ಲೋಕಗಳೂ ಇವೆ.
ಮಹಾಕಾವ್ಯಗಳು :
ಭಾರತೀಯರಲ್ಲಿ ಅತ್ಯಂತ ಜನಪ್ರಿಯವಾದ ಎರಡು ಮಹಾಕಾವ್ಯಗಳೆಂದರೆ ವಾಲ್ಮೀಕಿಯ ರಾಮಾಯಣ ಮತ್ತು ವ್ಯಾಸನ ಮಹಾಭಾರತ. ಈ ಮಹಾಕಾವ್ಯಗಳು ಸಾವಿರಾರು ವರ್ಷಗಳ ಕಾಲ ಭಾರತೀಯ ಜನಜೀವನ, ಸಾಹಿತ್ಯ ಮತ್ತು ಕಲೆಗಳನ್ನು ರೂಪಿಸಿವೆ.
ಮುಂದುವರೆಯುತ್ತದೆ…