ಎರಡು 2 ವಾರಗಳ ಹಿಂದೆ ತೆರೆಗೆ ಬಂದಿದ್ದ ಆದಿಪುರುಷ್ ಸಿನಿಮಾ ಕುರಿತಾಗಿ ಪರ ಮತ್ತು ವಿರೋಧ ಚರ್ಚೆಗಳು ನಡೆಯುತ್ತಿವೆ. ಹಿಂದೂಗಳ ಭಾವನೆಗೆ ಧಕ್ಕೆ ತರುವಂತೆ ಕಥೆಯನ್ನು ಸಂಪೂರ್ಣವಾಗಿ ತಿರುಚಲಾಗಿದೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಸಿನಿಮಾ ಬ್ಯಾನ್ ಮಾಡುವ ಜನರ ಅಪೇಕ್ಷೆಗೆ ಸ್ಪಷ್ಟನೆ ನೀಡುವಂತೆ ಕೋರ್ಟ್ ಸಿಬಿಎಫ್ಸಿಗೆ ನಿರ್ದೇಶಿಸಿದೆ. ಸಿನಿಮಾದಲ್ಲಿ ರಾಮಾಯಣದ ಕಥೆ ಇಷ್ಟಬಂದಂತೆ ತೋರಿಸಿರುವ ಚಿತ್ರತಂಡ ವ್ಯಾಪಕ ಟೀಕೆ ಎದುರಿಸುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಆದಿಪುರುಷ್ ಸಿನಿಮಾ ಕುರಿತಾಗಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಪರಿಗಣಿಸಿರುವ ಕೋರ್ಟ್ ಒಂದು ಮಹತ್ತರವಾದ ಹೇಳಿಕೆಯನ್ನು ಬಿಡುಗಡೆ ಮಾಡುವ ಮೂಲಕವಾಗಿ ಸುದ್ದಿಯಲ್ಲಿದೆ.
ಸಿನಿಮಾವನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ನ ಲಕ್ನೋ ಪೀಠವು, ರಾಮಾಯಣದ ಪಾತ್ರಗಳನ್ನು ಚಿತ್ರಿಸಿರುವ ಆದಿಪುರುಷ್ ಚಿತ್ರದ ನಿರ್ಮಾಪಕರನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠವು ಬುಧವಾರದಂದು ನ್ಯಾಯಾಲಯವು, ಯಾವುದೇ ಒಂದು ಧರ್ಮದ ಬಗ್ಗೆ ಹಾಗೂ ಎಲ್ಲಾ ಧರ್ಮಗಳ ಭಾವನೆಗಳಿಗೆ ಸಮಾನವಾಗಿ ಕಾಳಜಿಯನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟಿದೆ.
ಮತ್ತೊಂದೆಡೆ ರಾಮಾಯಣ ಹಾಗೂ ಮಹಾಭಾರತದ ಕಥೆಗಳನ್ನು ಇಂದು ಸಿನಿಮಾ ಮಾಡಿ ಪರದೆ ಮೇಲೆ ತರುವ ಸಾಹಸಗಳನ್ನು ಇಂದಿನ ಸಿನಿಮಾ ಮಂದಿ ಮಾಡುತ್ತಿದ್ದಾರೆ. ಆದರೆ ಮೂಲಕ ಕಥೆಯನ್ನು ತಿರುಚುವ ಕೆಲಸ ನಡೆಯುತ್ತಿದೆ ಎಂದು ಹಲವರು ಬೇಸರ ಹೊರಹಾಕುತ್ತಲಿದ್ದಾರೆ.
ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ರಾಮಾಯಣ, ಕುರಾನ್ ಅಥವಾ ಬೈಬಲ್ನಲ್ಲಿ ಇಂತಹ ಸಿನಿಮಾಗಳನ್ನು ಏಕೆ ನಿರ್ಮಿಸಲಾಗುತ್ತದೆ. ‘ನಾವು ಇದನ್ನು (ಆದಿಪುರುಷ) ಇಂದು ನಿರ್ಲಕ್ಷಿಸಿದರೆ, ಮುಂದೆ ಏನಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಈ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಭಗವಾನ್ ರಾಮನನ್ನು ತಮಾಷೆಯಾಗಿ ತೋರಿಸಿರುವ ಚಿತ್ರವನ್ನು ನೋಡಿದೆ. ಇದು ತಮಾಷೆಯೇ?’ ಎಂದು ಪ್ರಶ್ನಿಸಿದೆ.
ಆದಿ ಪುರುಷ ಸಿನಿಮಾದಲ್ಲಿ ರಾಮಾಯಣದ ಕಥೆಯನ್ನೇ ತಿರುಚಿದೆ ಎನ್ನುವ ವಾದ-ವಿವಾದಗಳ ಮಧ್ಯೆಯೇ ಇದೀಗ ಆದಿಪುರುಷ್ ಸಿನಿಮಾಗೆ ಮತ್ತೋಂದು ಸಂಕಷ್ಟ ಎದುರಾಗಿದೆ. ಅದೇನೆಂದರೆ 90 ರ ದಶಕದ ಸುಪ್ರಸಿದ್ಧ ಧಾರಾವಾಹಿ ರಾಮಾನಂದ ಸಾಗರ ನಿರ್ದೇಶನದ ರಾಮಾಯಣ ದೂರದರ್ಶನದಲ್ಲಿ ಮತ್ತೋಮ್ಮೆ ಪ್ರಸಾರ ಮಾಡಲು ನಿರ್ಧರಿಸಲಾಗಿದೆ.
ಈ ಹಿಂದೆ ಕೊರೋನಾದ ಲಾಕ್ ಡೌನ್ ಸಂಧರ್ಭದಲ್ಲಿ ಇದನ್ನು ಮರುಪ್ರಸಾರ ಮಾಡಲಾಗಿತ್ತು.
ಜುಲೈ 3ರಿಂದ ಪೈರಾಣಿಕ ಧಾರಾವಾಹಿ ಮತ್ತೆ ಪ್ರೇಕ್ಷಕರ ಮುಂದೆ ಬರಲಿದೆ. ಆದಿಪುರುಷ್ ತೆರೆಕಂಡಾಗಿನಿಂದಲೂ ರಮಾನಂದ್ ಸಾಗರ್ ಅವರ ರಾಮಾಯಣದ ಬಗ್ಗೆ ಚರ್ಚೆ ಜೋರಾಗಿತ್ತು ಮತ್ತು ಅವರು ಇವೆರಡನ್ನು ತೂಲನಾತ್ಮಕವಾಗಿಯೂ ವಿಶ್ಲೇಷಿಸುತ್ತಿದ್ದರು.
ರಾಮ ಹಾಗೂ ಸೀತೆ ಹೇಗಿರಬೇಕೆಂದು ರಾಮಾಯಣ ನೋಡಿ ಕಲಿಯಬೇಕಿತ್ತು ಎಂದು ಆಕ್ರೋಶ ಹೊರಹಾಕಿದ್ದರು. ನಿರ್ದೇಶಕ ಓಂ ರಾವುತ್ ರಾಮಾಯಣವನ್ನು ಓದಬೇಕು ಇಲ್ಲವೇ ರಾಮಾನಂದ ಸಾಗರರ ರಾಮಾಯಣ ಧಾರಾವಾಹಿಯಲ್ಲಿ ನಟಿಸಿದ್ದ ಕೆಲವು ಕಲಾವಿದರೂ ಕೂಡ ಆದಿಪುರುಷ್ ಬಗ್ಗೆ ಬೇಸರ ಹೊರಹಾಕಿದ್ದರು.
ಆದಿಪುರುಷ್ ವಿವಾದದ ಬೆನ್ನಲ್ಲೇ ರಾಮಾಯಣ ಮುಂದಿನ ಸೋಮವಾರದಿಂದಲೇ (ಜುಲೈ 3) ಮತ್ತೆ 80ರ ದಶಕದ ಸೂಪರ್ ಹಿಟ್ ಪೌರಾಣಿಕ ಟಿವಿ ಶೋ ಮೂಡಿ ಬರಲಿದೆ. ‘ವಿಶ್ವವಿಖ್ಯಾತ ಪೌರಾಣಿಕ ಧಾರಾವಾಹಿ ರಾಮಾಯಣವು ಮತ್ತೆ ವೀಕ್ಷಕರ ಮುಂದೆ ಬರ್ತಿದೆ ‘ ಎಂದು ಈಗಾಗಲೇ ಪ್ರೋಮೊ ರಿಲೀಸ್ ಮಾಡಲಾಗಿದೆ. ಅಂದಹಾಗೆ ಶೆಮರೂ ಟಿವಿ (Shemaroo TV) ವಾಹಿನಿಯಲ್ಲಿ ಹಿಂದಿ ಭಾಷೆಯಲ್ಲಿ ರಾಮಾಯಣ ಮರುಪ್ರಸಾರವಾಗಲಿದೆ.