ವಾರಣಾಸಿಯ ಗಂಗಾ ನದಿಯಲ್ಲಿ ಜೂನ್ 15 ರಿಂದ ವಾಟರ್ ಟ್ಯಾಕ್ಸಿ ಸೇವೆ ಲಭ್ಯವಾಗಲಿದೆ ಎಂದು ವಿಭಾಗೀಯ ಆಯುಕ್ತ ಕೌಶಲ್ ರಾಜ್ ಶರ್ಮಾ ತಿಳಿಸಿದ್ದಾರೆ.
ಗಂಗಾ ನದಿಯಲ್ಲಿ ಎರಡು ಮೋಟಾರ್ ಬೋಟ್ಗಳನ್ನು ಆಳವಡಿಸಿ ವಾಡರ್ ಟ್ಯಾಕ್ಸಿ ಸೇವೆ ಆರಂಭಿಸಲಾಗುವುದು. ವಾಟರ್ ಟ್ಯಾಕ್ಸಿಗಳ ಕಾರ್ಯಾಚರಣೆಯ ತರಬೇತಿಗಾಗಿ ಇಬ್ಬರು ಅಧಿಕಾರಿಗಳ ತಂಡವನ್ನು ಕೊಚ್ಚಿನ್ಗೆ ಕಳುಹಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಎರಡು ವಾಟರ್ ಟ್ಯಾಕ್ಸಿಗಳು ರಾಮನಗರ ಮತ್ತು ನಮೋ ಘಾಟ್ ನಡುವೆ ಕಾರ್ಯನಿರ್ವಹಿಸಲಿವೆ ಇನ್ನೂ ಸೆಪ್ಟೆಂಬರ್ ನಂತರ, ಇಂತಹ ಇನ್ನೂ ನಾಲ್ಕು ಟ್ಯಾಕ್ಸಿಗಳನ್ನು ಪರಿಚಯಿಸಲಾಗುತ್ತದೆ ಎಂದು ಆಯುಕ್ತ ಕೌಶಲ್ ರಾಜ್ ಶರ್ಮಾ ಹೇಳಿದರು.
ವಾಟರ್ ಟ್ಯಾಕ್ಸಿಯಲ್ಲಿ ಗರಿಷ್ಠ 86 ಪ್ರಯಾಣಿಕರು ಸಂಚಾರಿಸಬಹುದು. ಗಂಗಾ ನದಿಯಲ್ಲಿ ಚಲಿಸುವ ದೋಣಿಗಳಿಗೆ ನಿಗದಿಪಡಿಸಿದ ದರಕ್ಕೆ ಟ್ಯಾಕ್ಸಿ ದರ ಸಮನಾಗಿರುತ್ತದೆ.
ಅಸ್ಸಿ,ದಶಾಶ್ವಮೇಧ್ ಮತ್ತು ರಾಜ್ಘಾಟ್ನಲ್ಲಿ ವಾಟರ್ ಟ್ಯಾಕ್ಸಿ ನಿಲುಗಡೆ ನೀಡಲಿವೆ. ಹಾಗೆಯೇ ನಮೋ ಘಾಟ್, ಲಲಿತಾ ಘಾಟ್, ಶೀತಲ ಘಾಟ್ ಮತ್ತು ರವಿದಾಸ್ ಘಾಟ್ ಎಂಬ ನಾಲ್ಕು ಪಾಯಿಂಟ್ಗಳನ್ನು ಚಾರ್ಜಿಂಗ್ ಪಾಯಿಂಟ್ಗಳನ್ನು ಸ್ಥಾಪಿಸಲಾಗಿದೆ.
ಒಟ್ಟು ಆರು ಹೈಡ್ರೋಜನ್ ವಾಟರ್ ಟ್ಯಾಕ್ಸಿಗಳನ್ನು ಪ್ರಸ್ತಾಪಿಸಲಾಗಿದೆ. ವಾರಣಾಸಿ, ಮಥುರಾ ಮತ್ತು ಆಗ್ರಾದಲ್ಲಿ ತಲಾ ಎರಡು ಟ್ಯಾಕ್ಸಿಗಳು ಕಾರ್ಯ ನಿರ್ವಹಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರು ವಾಟರ್ ಟ್ಯಾಕ್ಸಿಹೊರತಾಗಿಯೂ ಅದೇ ಮಾದರಿಯಲ್ಲಿ ಇನ್ನೂ ನಾಲ್ಕು ದೋಣಿಗಳನ್ನು ಸಹ ಸಿದ್ದಪಡಿಸಲಾಗುವುದು. ಇವುಗಳನ್ನು ಆಂಬ್ಯುಲೆನ್ಸ್ಗಳಾಗಿ ಅಥವಾ ಶವ ಸಂಸ್ಕಾರ ಸ್ಥಳಗಳಿಗೆ ಸಾಗಿಸಲು ಬಳಸಲಾಗುವುದು ಎಂದು ಆಯುಕ್ತ ಕೌಶಲ್ ರಾಜ್ ಶರ್ಮಾ ಹೇಳಿದ್ದಾರೆ.