ಸಿದ್ದರಾಮಯ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕಸರತ್ತು 24 ಜನ ಶಾಸಕರನ್ನು ಮಂತ್ರಿಯಾಗಿ ಆಯ್ಕೆ ಮಾಡುವುದರ ಮೂಲಕ ಅಂತ್ಯವಾಗಿದೆ. ಕಾಂಗ್ರೆಸ್ ಬಹುಮತದಿಂದ ಗೆದ್ದು ಎರಡುವಾರಗಳ ಬಳಿಕ ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ 34 ಸದಸ್ಯರ ಪೂರ್ಣ ಪ್ರಮಾಣದ ಸಂಪುಟ ಅಸ್ತಿತ್ವಕ್ಕೆ ಬಂದಿದೆ. ಹೊಸದಾಗಿ ಸಂಪುಟ ಸೇರಿರುವ 24 ಸಚಿವರು ಇಂದು ಪ್ರಮಾಣವಚನವನ್ನು ರಾಜಭವನದ ಗಾಜಿನ ಮನೆಯಲ್ಲಿ ಸ್ವೀಕರಿಸಿದ್ದಾರೆ.
ಮಂತ್ರಿಪಟ್ಟಕ್ಕೆ ಕಸರತ್ತು:
ಸಚಿವ ಸ್ಥಾನಕ್ಕಾಗಿ ನಡೆದ ಕಸರತ್ತು ಅಂತ್ಯವಾಗಿದ್ದು, ಇನ್ನು ಮಂತ್ರಿ ಪಟ್ಟಕ್ಕಾಗಿ ಹಗ್ಗಜಗ್ಗಾಟ ನಡೆಯಲಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಬಣಗಳು ಮಹತ್ವದ ಖಾತೆ ಬೇಕು ಎಂದು ಪಟ್ಟು ಹಿಡಿಯೋದು ಅಂತೂ ಖಚಿತ. ಅದರಲ್ಲೂ ಜಲ ಸಂಪನ್ಮೂಲ, ಬೆಂಗಳೂರು ನಗರಾಭಿವೃದ್ದಿ, ಇಂಧನ, ಲೋಕೋಪಯೋಗಿ, ಕಂದಾಯ, ಗೃಹ, ಕೈಗಾರಿಕೆ ಸೇರಿದಂತೆ ಪ್ರಮುಖ ಖಾತೆಗಳಿಗೆ ಸಿದ್ದು ಹಾಗೂ ಡಿಕೆಶಿ ಬಣಗಳು ಪೈಪೋಟಿ ನಡೆಸಲಿದೆ.
ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುವವರು:
ಶಿವಾನಂದ ಪಾಟೀಲ್
ಎಸ್ಎಸ್ ಮಲ್ಲಿಕಾರ್ಜುನ್
ಹೆಚ್.ಕೆ.ಪಾಟೀಲ್
ದಿನೇಶ್ ಗುಂಡೂರಾವ್
ಕೃಷ್ಣ ಬೈರೇಗೌಡ
ಚಲುವರಾಯ ಸ್ವಾಮಿ
ಕೆ. ವೆಂಕಟೇಶ್
ಎಚ್.ಸಿ ಮಹದೇವಪ್ಪ
ಈಶ್ವರ್ ಖಂಡ್ರೆ
ಕೆ.ಎನ್ ರಾಜಣ್ಣ
ಶರಣ ಬಸಪ್ಪ ದರ್ಶನಾಪೂರ್
ಆರ್. ಬಿ ತಿಮ್ಮಾಪೂರ್
ಶಿವರಾಜ್ ತಂಗಡಗಿ
ಶರಣ ಪ್ರಕಾಶ್ ಪಾಟೀಲ್
ಮಂಕಾಳ ವೈದ್ಯ
ಲಕ್ಷ್ಮಿ ಹೆಬ್ಬಾಳ್ಕರ್
ರಹೀಂ ಖಾನ್
ಎಂ.ಸಿ ಸುಧಾಕರ್
ಡಿ ಸುಧಾಕರ್
ಸಂತೋಷ್ ಲಾಡ್
ಬೋಸರಾಜು
ಬೈರತಿ ಸುರೇಶ್
ಮಧು ಬಂಗಾರಪ್ಪ